ವಾತಾವರಣದಲ್ಲಿ ಏರುಪೇರು : ಆಯೋಮಯ ಸ್ಥಿತಿಯಲ್ಲಿ ಜಿಲ್ಲೆ
ಮಡಿಕೇರಿ, ಮೇ. ೨೬: ಕೊಡಗು ಜಿಲ್ಲೆಯ ಜನರು ಈ ಬಾರಿ ಅನಿರೀಕ್ಷಿತವಾದ ಪರಿಸ್ಥಿತಿಯನ್ನು ಪ್ರಸ್ತುತ ಎದುರಿಸುತ್ತಿದ್ದಾರೆ. ಇನ್ನೂ ಮೇ ತಿಂಗಳ ಮುಕ್ತಾಯಕ್ಕೆ ಐದು ದಿನ ಬಾಕಿ ಉಳಿದಿದೆ. ಆದರೆ ಒಂದೆಡೆ ವಾಯುಭಾರ ಕುಸಿತದ ಪರಿಣಾಮ, ಮತ್ತೊಂದೆಡೆ ವಾಡಿಕೆಗಿಂತ ಮುನ್ನವೇ ಮುಂಗಾರು ಪ್ರವೇಶಿಸಿರುವುದು ಜಿಲ್ಲೆಯ ಜನತೆಗೆ ಮರ್ಮಾಘಾತ ನೀಡಿದಂತಾಗಿದೆ.
ವಾತಾವರಣದಲ್ಲಿನ ಈ ಬದಲಾವಣೆಯಿಂದಾಗಿ ಜಿಲ್ಲೆಯಲ್ಲಿ ಜನರು ಪರಿತಪಿಸುವಂತಾಗಿದೆ. ಭಾರೀ ಮಳೆಯೊಂದಿಗೆ ರಭಸದ ಗಾಳಿ ನಿರಂತರವಾಗಿ ಕಳೆದ ಎರಡು ಮೂರು ದಿನಗಳಿಂದ ಕಂಡು ಬರುತ್ತಿದೆ. ಈ ಸಮಯದಲ್ಲಿ ಜನರು ಇಂತಹ ಪರಿಸ್ಥಿತಿ ಎದುರಾಗುವುದನ್ನು ನಿರೀಕ್ಷಿಸಿರಲಿಲ್ಲ. ಮುಂಗಾರು ಮಳೆಗೆ ಪೂರ್ವ ತಯಾರಿಯೂ ಇನ್ನಷ್ಟೆ ಆರಂಭಗೊಳ್ಳಬೇಕಿತ್ತು. ಆದರೆ ಏಕಾಏಕಿ ಗಾಳಿ - ಮಳೆ ಹೆಚ್ಚಾದ ಕಾರಣ ಬಹುತೇಕ ಜಿಲ್ಲೆಯಾದ್ಯಂತ ಜನರು ಪರದಾಡುವಂತಾಗಿದೆ. ಸೋಮವಾರ ಬೆಳಿಗ್ಗೆ ೮ ಗಂಟೆಯ ತನಕ ಕಳೆದ ೨೪ ಗಂಟೆಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ಸರಾಸರಿ ೫.೦೭ ಇಂಚಿನಷ್ಟು ಭಾರೀ ಮಳೆಯಾಗಿದೆ.
ಮಳೆಯೊಂದಿಗೆ ಬೀಸುತ್ತಿರುವ ರಭಸದ ಗಾಳಿಯೂ ಹಲವಷ್ಟು ಆತಂಕಕ್ಕೆ ಕಾರಣವಾಗಿದೆ. ಮಾತ್ರವಲ್ಲದೆ ಈಗಾಗಲೇ ಹಲವೆಡೆಗಳಲ್ಲಿ ಹಲವಷ್ಟು ಅನಾಹುತಗಳೂ ಸಂಭವಿಸಿವೆ. ಶುಕ್ರವಾರದಿಂದ ಮಳೆ - ಗಾಳಿಯ ತೀವ್ರತೆ ಜಿಲ್ಲೆಯಲ್ಲಿ ಹೆಚ್ಚಾಗಿದೆ. ಸೋಮವಾರ ಮಳೆ ಒಂದಷ್ಟು ಕಡಿಮೆಯಾದರೂ ಗಾಳಿ ಮುಂದುವರಿದಿದೆ.
ಮೂರು ದಿನಗಳ ವಾತಾವರಣದ ಏರು- ಪೇರಿನಿಂದಾಗಿ ಜಿಲ್ಲೆಯಲ್ಲಿ ಅಲ್ಲಲ್ಲಿ ಮರ, ವಿದ್ಯುತ್ಕಂಬಗಳು ಧರೆಗುರುಳಿದ್ದು, ಜಿಲ್ಲೆ ಬಹುತೇಕ ಕಾರ್ಗತ್ತಲಿನಲ್ಲಿ ಮುಳುಗಿದೆ. ವಿದ್ಯುತ್ ಸಮಸ್ಯೆಯೊಂದಿಗೆ ಮೊಬೈಲ್ ನೆಟ್ವರ್ಕ್ನ ತೊಂದರೆ ಎದುರಾಗಿದ್ದು, ಪರಸ್ಪರ ಸಂಪರ್ಕಕ್ಕೂ ಅಡಚಣೆಯಾಗಿದೆ. ಅದರಲ್ಲೂ ಗ್ರಾಮೀಣ ಪ್ರದೇಶಗಳಲ್ಲಿನ ಜನರು ವಿದ್ಯುತ್ ಹಾಗೂ ದೂರವಾಣಿ ಸಂಪರ್ಕದಿAದ ಸಂಪೂರ್ಣವಾಗಿ ವಂಚಿತರಾಗಿದ್ದು, ಪರಿತಪಿಸುವಂತಾಗಿದೆ.
ಸೆಸ್ಕ್ ಹಾಗೂ ದೂರವಾಣಿ ಇಲಾಖೆಗಳ ನಡುವೆ ಸಮನ್ವಯತೆಯೂ ಇಲ್ಲದಿರುವುದು ಮಳೆಗಾಲದ ಆರಂಭದ ಸಂದರ್ಭದಲ್ಲೇ ಜಿಲ್ಲೆಯಲ್ಲಿ ಭಾರೀ ಸಮಸ್ಯೆ ತಂದೊಡ್ಡಿದAತಾಗಿದೆ ಎಂದು ಜನತೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯಲ್ಲಿ ಸರಾಸರಿ ೫.೦೭ ಇಂಚು ಮಳೆ
ಜಿಲ್ಲೆಯಲ್ಲಿ ಕಳೆದ ೨೪ ಗಂಟೆಗಳಲ್ಲಿ ೫.೦೭ ಇಂಚುಗಳಷ್ಟು ಭಾರೀ ಮಳೆಯಾಗಿದೆ. ಇದು ಜಿಲ್ಲಾ ಸರಾಸರಿಯಾಗಿದ್ದರೆ, ಹಲವು ಗ್ರಾಮೀಣ ಭಾಗಗಳಲ್ಲಿ ೭ ರಿಂದ ೮ ಇಂಚುಗಳಷ್ಟು ಧಾರಾಕಾರ ಮಳೆಯಾಗಿರುವ ಕುರಿತು ವರದಿಯಾಗಿದೆ. ಜಿಲ್ಲಾ ಕೇಂದ್ರ ಮಡಿಕೇರಿಯಲ್ಲೂ ಸುಮಾರು ೬.೫೦ ಇಂಚು ಮಳೆ ಕಳೆದ ೨೪ ಗಂಟೆಗಳಲ್ಲಿ ದಾಖಲಾಗಿದೆ.
ಭಾಗಮಂಡಲಕ್ಕೆ ೯ ಇಂಚು
ಕಳೆದ ೨೪ ಗಂಟೆಗಳ ಅವಧಿಯಲ್ಲಿ ಭಾಗಮಂಡಲ ಹೋಬಳಿಯಲ್ಲಿ ೯ ಇಂಚಿನಷ್ಟು ಭಾರೀ ಮಳೆಯಾಗಿದೆ. ಮಡಿಕೇರಿ ತಾಲೂಕಿನಲ್ಲಿ ೫.೭೩ ಇಂಚು, ವೀರಾಜಪೇಟೆ ೬.೨೧, ಸೋಮವಾರಪೇಟೆ ೪.೫೦ ಹಾಗೂ ಕುಶಾಲನಗರ ತಾಲೂಕಿನಲ್ಲಿ ೪.೦೯ ಇಂಚುಗಳಷ್ಟು ಸರಾಸರಿ ಮಳೆ ೨೪ ಗಂಟೆಗಳ ಅವಧಿಯಲ್ಲಿ ಸುರಿದಿದೆ.
ಹೋಬಳಿವಾರು ವಿವರ (೨೪ ಗಂಟೆಗಳಲ್ಲಿ)
ಮಡಿಕೇರಿ ಕಸಬಾದಲ್ಲಿ ೬.೭೬ ಇಂಚು, ನಾಪೋಕ್ಲು ೬.೪೮, ಭಾಗಮಂಡಲ ೯, ಸಂಪಾಜೆ ೦.೬೮, ವೀರಾಜಪೇಟೆ ಕಸಬಾ ೬.೩೦, ಅಮ್ಮತ್ತಿ ೬.೧೨, ಸೋಮವಾರಪೇಟೆ ಕಸಬಾ ೪.೬೪, ಶನಿವಾರಸಂತೆ ೪, ಶಾಂತಳ್ಳಿ ೬.೧೬, ಕೊಡ್ಲಿಪೇಟೆ ೩.೨೨ ಇಂಚು ಮಳೆಯಾಗಿದೆ. ಪೊನ್ನಂಪೇಟೆ ತಾಲೂಕಿನ ಪೊನ್ನಂಪೇಟೆ ಹೋಬಳಿಯಲ್ಲಿ ೪.೬೪, ಹುದಿಕೇರಿ ೫.೫೨, ಶ್ರೀಮಂಗಲ ೬.೧೨, ಬಾಳಲೆ ಹೋಬಳಿಯಲ್ಲಿ ೩.೧೬ ಇಂಚು ಮಳೆಯಾಗಿದೆ. ಕುಶಾಲನಗರ ೩.೦೬, ಸುಂಟಿಕೊಪ್ಪ ಹೋಬಳಿಯಲ್ಲಿ ೫.೧೨ ಇಂಚು ಮಳೆ ದಾಖಲಾಗಿದೆ.
ಚೆಯ್ಯಂಡಾಣೆ: ಭಾರಿ ಗಾಳಿ - ಮಳೆಯಿಂದ ಸೋಮವಾರ ಮುಂಜಾನೆ ರಸ್ತೆಗೆ ಅಡ್ಡಲಾಗಿ ಬೃಹತ್ ಮರ ಉರುಳಿ ಬಿದ್ದಿದೆ.
ನಾಪೋಕ್ಲು, ಕೈಕಾಡು, ಪಾರಾಣೆ ಮಾರ್ಗವಾಗಿ ವೀರಾಜಪೇಟೆಗೆ ತೆರಳುವ ಮುಖ್ಯ ರಸ್ತೆಯ ಬೆಳ್ಳುಮಾಡುವಿನ ವಲ್ಲಂಡಕೊಟ್ಟ್ ಎಂಬಲ್ಲಿ ರಸ್ತೆಗೆ ಅಡ್ಡಲಾಗಿ ಮರ ಬಿದ್ದ ಪರಿಣಾಮ ವಾಹನ ಸಂಚಾರಕ್ಕೆ ತೊಡಕು ಉಂಟಾಯಿತು. ನಂತರ ಮರ ತೆರವುಗೊಳಿಸಿ ಸಂಚಾರಕ್ಕೆ ಮುಕ್ತಗೊಳಿಸಲಾಯಿತು.
ಮಡಿಕೇರಿ: ಗಾಳಿ ಸಹಿತ ಭಾರಿ ಮಳೆ ಪರಿಣಾಮ ಕೊಟ್ಟಿಗೆ ಮೇಲೆ ಮರ ಬಿದ್ದ ಘಟನೆ ಸುಂಟಿಕೊಪ್ಪ ಹೋಬಳಿ ಹೊರೂರು ಗ್ರಾಮದಲ್ಲಿ ನಡೆದಿದೆ.
ಅಲ್ಲಿನ ನಿವಾಸಿ ದೇವಿಪ್ರಸಾದ್ ಅವರಿಗೆ ಸೇರಿದ ಕೊಟ್ಟಿಗೆಗೆ ಭಾಗಶಃ ಹಾನಿಯಾಗಿದ್ದು, ಕಂದಾಯ ಅಧಿಕಾರಿಗಳು ಸ್ಥಳ ಪರಿಶೀಲಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ. ಹೆದ್ದಾರಿಯಲ್ಲಿ ಗುಡ್ಡ ಕುಸಿಯುವ ಆತಂಕ
ಮಡಿಕೇರಿ: ಮಳೆಗಾಲದಲ್ಲಿ ಗುಡ್ಡ, ಬರೆ, ಭೂಕುಸಿತ ಸಂಭವಿಸುವ ಪ್ರದೇಶಗಳಲ್ಲಿ ಒಂದಾದ ಮಡಿಕೇರಿ-ಮಂಗಳೂರು ರಾಷ್ಟಿçÃಯ ಹೆದ್ದಾರಿ-೭೫ರ ನಡುವಿನಲ್ಲಿ ಈ ಬಾರಿಯೂ ಗುಡ್ಡದ ಭೂತದ ಭಯ ಆವರಿಸಿದೆ.
ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆ ಅಲ್ಲಲ್ಲಿ ಬರೆ ಜರಿತ ಘಟನೆಗಳು ಸಂಭವಿಸುತ್ತಿವೆ. ಅದೇ ರೀತಿ ಸೂಕ್ಷö್ಮ ಪ್ರದೇಶವಾಗಿರುವ ಈ ಹೆದ್ದಾರಿಯ ಕೆಲವೆಡೆಯಲ್ಲಿಯೂ ಆತಂಕ ಉಂಟಾಗಿದ್ದು, ಹೆದ್ದಾರಿ ಪ್ರಾಧಿಕಾರ ಸವಾಲು ಎದುರಿಸಲು ಸನ್ನದ್ಧವಾಗಿದೆ.
ಹೆದ್ದಾರಿ ಕರ್ತೋಜಿಯ ೨ ಪ್ರದೇಶಗಳಲ್ಲಿ ಹೆಚ್ಚಿನ ಅನಾಹುತ ಸಂಭವಿಸಬಹುದು ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ. ೨೦೧೮ರಿಂದಲೂ ಕರ್ತೋಜಿಯಲ್ಲಿ ಬರೆ ಕುಸಿದು ರಸ್ತೆಗೆ ಆವರಿಸಿ ಸಂಚಾರದ ಮೇಲೆ ಪರಿಣಾಮ ಬೀರಿತ್ತು. ಈ ನಿಟ್ಟಿನಲ್ಲಿ ಹೆದ್ದಾರಿ ಪ್ರಾಧಿಕಾರ ಜೆಸಿಬಿ, ಹಿಟಾಚಿ, ಟಿಪ್ಪರ್ ವಾಹನಗಳನ್ನು ಮುಂಜಾಗ್ರತಾ ಕ್ರಮವಾಗಿ ನಿಯೋಜಿಸಿದೆ. ಜೊತೆಗೆ ಬ್ಯಾರಿಕೇಡ್ ಅಳವಡಿಕೆಗೆ, ನಾಮಫಲಕ ಅಳವಡಿಸಿ ಜಾಗೃತಿ ಮೂಡಿಸುವ ಕೆಲಸಕ್ಕೂ ಕೈ ಹಾಕಿದೆ.
ಮಂಗಳೂರು ಸಂಪರ್ಕಿಸುವ ಈ ಹೆದ್ದಾರಿಯಲ್ಲಿ ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ಸರಕು, ಸಾಗಾಣಿಕೆ ವಾಹನಗಳು ಇದೇ ರಸ್ತೆ ಅವಲಂಭಿಸಿರುವ ಕಾರಣ ಹೆದ್ದಾರಿ ಅವಶ್ಯಕವಾಗಿದೆ. ಈ ನಿಟ್ಟಿನಲ್ಲಿ ರಸ್ತೆ ಸಂಚಾರಕ್ಕೆ ಸಮಸ್ಯೆ ಉಂಟಾಗದAತೆ ಮುನ್ನೆಚ್ಚರಿಕೆಯನ್ನು ಪ್ರಾಧಿಕಾರ ಕೈಗೊಂಡಿದೆ.
ಕಣಿವೆ: ಕುಶಾಲನಗರ ತಾಲೂಕಿನ ರಂಗಸಮುದ್ರದ ಬಳಿ ಇರುವ ಚಿಕ್ಲಿಹೊಳೆ ಜಲಾಶಯ ಭರ್ತಿಯಾಗಿದೆ.
ಕಳೆದ ಎರಡು ದಿನಗಳಿಂದ ರೋಹಿಣಿ ಮಳೆ ಜಿಲ್ಲೆಯಾದ್ಯಂತ ತನ್ನ ರೌದ್ರಾವತಾರ ತಾಳಿರುವ ಹಿನ್ನೆಲೆ ಜಲಾಶಯ ಕೇವಲ ಎರಡೇ ದಿನದಲ್ಲಿ ಭರ್ತಿಯಾಗಿದೆ.
ಕೇವಲ ೦.೧೮ ಟಿಎಂಸಿ ಕನಿಷ್ಟ ಪ್ರಮಾಣದ ನೀರು ಸಂಗ್ರಹಣಾ ಸಾಮರ್ಥ್ಯ ಹೊಂದಿರುವ ಜಲಾಶಯ ಕಳೆದ ವರ್ಷದ ಇದೇ ಮೇ ಮಾಸಾಂತ್ಯದಲ್ಲಿ ನೀರು ಸಂಪೂರ್ಣ ಖಾಲಿಯಾಗಿ ಒಣಗುವ ಹಂತ ತಲುಪಿತ್ತು. ಹನ್ನೆರಡು ಗ್ರಾಮಗಳ ೨೧೩೭ ಹೆಕ್ಟೇರ್ ಭೂಮಿಗೆ ಭತ್ತ ಬೆಳೆಯಲು ನೀರು ಪೂರೈಸಬೇಕಿದ್ದ ಈ ಜಲಾಶಯ ಸರ್ಕಾರದ ಅವಕೃಪೆಗೆ ಸಿಲುಕಿದ್ದು, ಜಲಾಶಯದ ಯಾವ ನಾಲೆಗಳೂ ಕೂಡ ಸಮರ್ಪಕವಾಗಿಲ್ಲ. ಹಾಗಾಗಿ
ಜಲಾಶಯದ ಅಚ್ಚುಕಟ್ಟು ವ್ಯಾಪ್ತಿಯ ಕೃಷಿಕರು ನೀರಾವರಿ ಇಲಾಖೆಯ ಅಧಿಕಾರಿಗಳ ಬೇಜವಾಬ್ದಾರಿ ಆಡಳಿತ ಧೋರಣೆಯಿಂದ ಬೇಸತ್ತು ಭತ್ತ ಬೆಳೆಯುವ ಭೂಮಿಯಲ್ಲಿ ಅಡಿಕೆ ಬೆಳೆಯುತ್ತಿದ್ದಾರೆ. ಇನ್ನೂ ಕೆಲವು ಕೃಷಿಕರು ತಮ್ಮ ಭೂಮಿಯನ್ನು ಬಡಾವಣೆಗಳಾಗಿ ಪರಿವರ್ತಿಸಿ ಮಾರಾಟ ಮಾಡುತ್ತಿದ್ದಾರೆ.
ಪ್ರವಾಸಿಗರ ಲಗ್ಗೆ
ಸ್ವಾಭಾವಿಕವಾದ ವನ್ಯ ಸಂಪತ್ತಿನ ಹಸಿರ ಸಿರಿಯೊಳಗೆ ಮೈತಳೆದು ನಿಂತಿರುವ ಈ ಜಲಾಶಯ ಭರ್ತಿಯಾಗಿ ಅರ್ಧ ಚಂದ್ರಾಕೃತಿಯ ಸುರುಳಿಯಲ್ಲಿ ಹಾಲ್ನೊರೆ ಸೂಸಿ ಧುಮ್ಮಿಕ್ಕಿ ಹರಿಯುವ ನಯನ ಮನೋಹರ ದೃಶ್ಯ ನೋಡುಗರ ಮನಸೂರೆಗೊಳಿಸುತ್ತಿದೆ. ಹಾಗಾಗಿ ಚಿಕ್ಲಿಹೊಳೆ ಜಲಾಶಯದ ಸೊಬಗು ಕಣ್ತುಂಬಿಕೊಳ್ಳಲು ಪ್ರವಾಸಿಗರು ಸುರಿವ ಮಳೆಯನ್ನು ಲೆಕ್ಕಿಸದೇ ಹೆಚ್ಚಿನ ಸಂಖ್ಯೆಯಲ್ಲಿ ಲಗ್ಗೆ ಇಡುತ್ತಿರುವುದು ಕಂಡು ಬಂತು. ಕೂಡಿಗೆ: ಜಿಲ್ಲೆಯಲ್ಲಿ ಎಡೆಬಿಡದೆ ಸುರಿಯುತ್ತಿರುವ ಭಾರಿ ಮಳೆಯಿಂದ ಕಾವೇರಿ ನದಿ ನೀರಿನ ಮಟ್ಟದಲ್ಲಿ ಗಣನೀಯ ಪ್ರಮಾಣದ ಏರಿಕೆಯಾಗಿದೆ.
ಕುಶಾಲನಗರ ತಾಲೂಕು ವ್ಯಾಪ್ತಿಯ ಕಾವೇರಿ ನದಿಯ ದಂಡೆಯ ವ್ಯಾಪ್ತಿಗೆ ಒಳಪಡುವ ಗ್ರಾಮಗಳಿಗೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ತಹಶೀಲ್ದಾರ್ ಕಿರಣ್ ಗೌರಯ್ಯ ಸೂಚನೆ ನೀಡಿದ್ದಾರೆ.
ಕಿರಣ್ ಗೌರಯ್ಯ ಸೇರಿದಂತೆ ಸಿಬ್ಬಂದಿ ವರ್ಗದವರು ತಾಲೂಕಿನ ಗಡಿ ಭಾಗವಾದ ಶಿರಂಗಾಲದವರೆಗಿನ ಕಾವೇರಿ ನದಿಯ ಅಂಚಿನಲ್ಲಿರುವ ಗ್ರಾಮಗಳಿಗೆ ಭೇಟಿ ನೀಡಿ, ತಗ್ಗುಪ್ರದೇಶಗಳಿಗೆ ನೀರು ನುಗ್ಗುವ ಸ್ಥಳಗಳನ್ನು ವೀಕ್ಷಿಸಿ ಟಾಸ್ಕ್ಫೋರ್ಸ್ ಸಿದ್ಧವಿರುವಂತೆ ಸೂಚಿಸಿದ್ದಾರೆ. ಗೋಣಿಕೊಪ್ಪಲು: ದಕ್ಷಿಣ ಕೊಡಗಿನ ಹಲವೆಡೆ ಮಳೆರಾಯನ ಅಬ್ಬರ ಮುಂದುವರೆದಿದ್ದು, ಕಿರುಗೂರು ಬಳಿ ವಿದ್ಯುತ್ ತಂತಿ ಮೇಲೆ ಮರ ಬಿದ್ದು ಸಮಸ್ಯೆ ಉಂಟಾಯಿತು.
ಘಟನೆಯಿಂದ ಗ್ರಾಮದಲ್ಲಿ ವಿದ್ಯುತ್ ಕಡಿತಗೊಂಡಿದ್ದು, ಚೆಸ್ಕಾಂ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ ಮರ ತೆರವು ಮಾಡಿದರು. ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ಮರ, ವಿದ್ಯುತ್ ಕಂಬ ಧರಾಶಾಯಿ ಸಾಮಾನ್ಯ ಎಂಬ ಪರಿಸ್ಥಿತಿ ತಲೆದೋರಿದೆ.
ಸಿದ್ದಾಪುರ: ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆ ಹಾಗೂ ಗಾಳಿಯಿಂದ ಮನೆ ಕುಸಿದಿರುವ ಘಟನೆ ಮಾಲ್ದಾರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾಡಗ - ಬಾಣಂಗಾಲ ಗ್ರಾಮದ ಗಿರಿಜನ ಕಾಲೋನಿಯಲ್ಲಿ ಭಾನುವಾರ ರಾತ್ರಿ ನಡೆದಿದೆ.
ಕಾಲೋನಿಯ ನಿವಾಸಿ ವಿಶೇಷಚೇತನ ಅನಿಲ್ ಎಂಬವರ ಮನೆ ಗಾಳಿ - ಮಳೆಗೆ ಸಿಲುಕಿ ಕುಸಿದಿದ್ದು, ಅದೃಷ್ಟವಶಾತ್ ಮನೆಯಲ್ಲಿದ್ದ ಮೂರು ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಗ್ರಾಮ ಪಂಚಾಯಿತಿ ಸದಸ್ಯ ಹನೀಫ್ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.ಸಿದ್ದಾಪುರ: ಪಾಲಿಬೆಟ್ಟದ ಇತಿಹಾಸ ಪ್ರಸಿದ್ಧ ಪಟ್ಟಣ್ ಬಾಬಾ ಶಾವಲಿ ದರ್ಗಾದ ತಡೆಗೋಡೆ ಭಾರಿ ಮಳೆಯಿಂದ ಕುಸಿತಗೊಂಡಿದೆ.
ಅಮ್ಮತ್ತಿ ಹೋಬಳಿ ಕಂದಾಯ ಪರಿವೀಕ್ಷಕ ಅನಿಲ್ ಕುಮಾರ್ ಹಾಗೂ ಗ್ರಾಮ ಆಡಳಿತ ಅಧಿಕಾರಿ ಮೋನಿಷ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸಿದ್ದಾಪುರ: ವಾಯು-ವರುಣನ ಅಬ್ಬರದಿಂದ ಜಿಲ್ಲೆಯಲ್ಲಿ ಹಾನಿ ಘಟನೆಗಳು ಮುಂದುವರೆದಿದ್ದು, ಬಾಡಗ - ಬಾಣಂಗಾಲದಲ್ಲಿ ಮನೆ ಮೇಲೆ ಮರ ಬಿದ್ದು, ಅದೃಷ್ಟವಶಾತ್ ಮನೆಯವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಗ್ರಾಮದ ಜನತಾ ಕಾಲೋನಿ ನಿವಾಸಿ ಸೀನಪ್ಪ ಎಂಬವರ ಮನೆಯ ಮೇಲೆ ಮರ ಬಿದ್ದ ಪರಿಣಾಮ ನಷ್ಟ ಸಂಭವಿಸಿದೆ. ಮನೆಯಲ್ಲಿದ್ದ ನಾಲ್ಕು ಮಂದಿ ಪ್ರಾಣಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯಿತಿ ಸದಸ್ಯ ಹನೀಫ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಚೆಯ್ಯಂಡಾಣೆ: ಮರ ಬಿದ್ದ ಪರಿಣಾಮ ಮನೆ ಮೇಲ್ಛಾವಣಿಗೆ ಹಾನಿ ಸಂಭವಿಸಿದ ಘಟನೆ ಕರಡ ಗ್ರಾಮದಲ್ಲಿ ನಡೆದಿದೆ. ಗ್ರಾಮಡ ತೆಕ್ಕಡಮ್ಮಂಡ ದೇವಯ್ಯ ಅವರ ಮನೆ ಮೇಲೆ ಮರ ಬಿದ್ದು, ಶೀಟ್ಗೆ ಹಾನಿಯಾಗಿದೆ. ಸ್ಥಳಕ್ಕೆ ನಾಪೋಕ್ಲು ಕಂದಾಯ ಪರಿವೀಕ್ಷಕ ರವಿ ಕುಮಾರ್, ಗ್ರಾಮ ಸಹಾಯಕ ಸಂಜಯ್, ಗ್ರಾಮ ಪಂಚಾಯಿತಿ ಸದಸ್ಯ ವಿಲಿನ್ ಭೇಟಿ ನೀಡಿ ಪರಿಶೀಲಿಸಿದರು. ಗೋಣಿಕೊಪ್ಪಲು: ವೀರಾಜಪೇಟೆ-ಗೋಣಿಕೊಪ್ಪ ಹೆದ್ದಾರಿ ನಡುವಿನ ಕೈಕೇರಿಯಲ್ಲಿ ಕಳೆದ ತಡರಾತ್ರಿ ಮರ ಬಿದ್ದ ಪರಿಣಾಮ ಕೆಲಕಾಲ ಸಂಚಾರಕ್ಕೆ ತೊಡಕು ಉಂಟಾಯಿತು. ಮರ ಬಿದ್ದ ಪರಿಣಾಮ ರಸ್ತೆಯ ಬದಿಯಲ್ಲಿದ್ದ ಕೆಲವು ವಿದ್ಯುತ್ ಕಂಬಗಳು ಕೂಡ ಮುರಿದು ಬಿದ್ದವು. ಗೋಣಿಕೊಪ್ಪ ಚೆಸ್ಕಾಂ ಸಿಬ್ಬಂದಿಗಳು ತಡರಾತ್ರಿಯಲ್ಲಿ ಘಟನಾ ಸ್ಥಳಕ್ಕೆ ತೆರಳಿ ಮರ ತೆರವು ಮಾಡಿದರು. ಒಂದೇ ಸಮನೆ ಗಾಳಿ ಬೀಸುತ್ತಿರುವ ಹಿನ್ನೆಲೆಯಲ್ಲಿ ರಸ್ತೆಯ ಬದಿಯಲ್ಲಿರುವ ಮರಗಳು ಬೀಳಲಾರಂಭಿಸಿದೆ.ಮುಳ್ಳೂರು: ಕಳೆದೆರೆಡು ದಿನಗಳಿಂದ ಶನಿವಾರಸಂತೆ ಸುತ್ತಮುತ್ತ ಬಿಡುವು ನೀಡದೆ ವರುಣ ಆರ್ಭಟಿಸುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.
ಶನಿವಾರಸಂತೆ ಮತ್ತು ಕೊಡ್ಲಿಪೇಟೆ ವ್ಯಾಪ್ತಿಯಲ್ಲಿ ಭಾನುವಾರ ಹಗಲು ತುಂತುರು ಮಳೆಯಾಗುತಿತ್ತು. ಆದರೆ ಸಂಜೆಯಿAದ ಸೋಮವಾರ ಬೆಳಿಗ್ಗೆ ತನಕ ಗಾಳಿ ಸಹಿತ ಧಾರಾಕಾರ ಮಳೆಯಾಗಿದೆ. ಶನಿವಾರಸಂತೆ ವ್ಯಾಪ್ತಿಯಲ್ಲಿ ಭಾನುವಾರ ಸಂಜೆಯಿAದ ಸೋಮವಾರ ಬೆಳಿಗ್ಗೆ ತನಕ ಸರಾಸರಿ ೩ ಇಂಚು ಮಳೆ ದಾಖಲಾಗಿದೆ. ಭಾರಿ ಮಳೆ - ಗಾಳಿಗೆ ಮಾಲಂಬಿ - ಕಣಿವೆ, ಬಸವನಹಳ್ಳಿ ಮುಖ್ಯ ರಸ್ತೆ ಬದಿಯಲ್ಲಿ ಭಾರಿ ಗಾತ್ರದ ಮರವೊಂದು ಧರೆಗುರುಳಿ ವಾಹನ ಸಂಚಾರಕ್ಕೆ ಅಡಚಣೆಯಾಯಿತು. ಲೋಕೋಪಯೋಗಿ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಬಂದು ರಸ್ತೆಗೆ ಅಡ್ಡಲಾಗಿ ಬಿದ್ದಿದ್ದ ಮರವನ್ನು ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.ವೀರಾಜಪೇಟೆ: ಗಾಳಿ ಸಹಿತ ಮಳೆಯ ಆರ್ಭಟಕ್ಕೆ ಮರ ಧರೆಗುರುಳಿ ವಿದ್ಯುತ್ ತಂತಿ ಹಾನಿಗೀಡಾದ ಘಟನೆ ಪಟ್ಟಣದ ನೆಹರು ನಗರದಲ್ಲಿ ನಡೆದಿದೆ.
ನೆಹರು ನಗರದ ನಿವಾಸಿ ಮೂಸ ಎಂಬವರ ಮನೆಗೆ ತೆರಳುವ ಮಾರ್ಗದಲ್ಲಿ ಬೃಹತ್ ಗಾತ್ರದ ಮರ ಅಡ್ಡಲಾಗಿ ಬಿದ್ದು ಪಕ್ಕದ ವಿದ್ಯುತ್ ಲೈನ್ಗೆ ಹಾನಿಯಾಗಿ ಸಂಪರ್ಕ ಕಡಿತಗೊಂಡಿತು. ರಕ್ಷಣಾ ತಂಡ ದೌಡಾಯಿಸಿ ಬಿದ್ದ ಮರ ತೆರವುಗೊಳಿಸಿ ಕ್ರಮಕೈಗೊಂಡಿದ್ದಾರೆ.
ನಾಪೋಕ್ಲು : ಸಮೀಪದ ಕೊಳಕೇರಿ ಗ್ರಾಮದ ಹ್ಯಾರಿಸ್ ಎಂಬುವವರ ಮನೆಯ ಕಾಂಪೌAಡ್ ತಡೆ ಗೋಡೆ ಅಧಿಕ ಮಳೆ ಗಾಳಿಯಿಂದ ಧರಾಶಾಹಿಯಾಗಿ ನಷ್ಟವಾಗಿದೆ.
ನಾಪೋಕ್ಲು : ಸಮೀಪದ ಕೊಳಕೇರಿ ಗ್ರಾಮದ ಹ್ಯಾರಿಸ್ ಎಂಬುವವರ ಮನೆಯ ಕಾಂಪೌAಡ್ ತಡೆ ಗೋಡೆ ಅಧಿಕ ಮಳೆ ಗಾಳಿಯಿಂದ ಧರಾಶಾಹಿಯಾಗಿ ನಷ್ಟವಾಗಿದೆ.
ಐಗೂರು: ಐಗೂರು, ಮಾದಾಪುರ ವ್ಯಾಪ್ತಿಯಲ್ಲಿ ಇದುವರೆಗೆ ೧೩ ಇಂಚು ಮಳೆಯಾಗಿದೆ. ಚೋರನ ಹೊಳೆಯಲ್ಲಿ ನೀರಿನ ಒಳಹರಿವು ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ. ಗಾಳಿ ಸಹಿತ ಮಳೆಯಿಂದಾಗಿ ವಿದ್ಯುತ್ ಕಂಬ, ತಂತಿಗಳು ಹಾನಿಗೀಡಾಗಿ ಕಳೆದೆರಡು ದಿನಗಳಿಂದ ವಿದ್ಯುತ್ ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ. ಗರಗಂದೂರು ಭಾಗದಲ್ಲೂ ಕಳೆದ ಮೂರು ದಿನಗಳಿಂದ ವಿದ್ಯುತ್ ಇಲ್ಲದೆ ಜನರು ಪರದಾಡುತ್ತಿದ್ದಾರೆ. ವಿದ್ಯುತ್ ಇಲ್ಲದ ಪರಿಣಾಮ ನೀರಿನ ಪೂರೈಕೆ ಹಾಗೂ ನೆಟ್ವರ್ಕ್ ಸಮಸ್ಯೆ ಉಂಟಾಗಿ ಜನಜೀವನದ ಮೇಲೆ ಪರಿಣಾಮ ಬೀರಿದೆ.
ಮಡಿಕೇರಿ: ಮಳೆ ಹಾನಿ ಪ್ರದೇಶಗಳಿಗೆ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಭೇಟಿ ನೀಡಿ ಪರಿಶೀಲಿಸಿ, ನೊಂದವರಿಗೆ ಸಾಂತ್ವನ ಹೇಳಿದರು.
ಸೋಮವಾರಪೇಟೆ, ೭ನೇ ಹೊಸಕೋಟೆ, ವಾಲ್ನೂರು-ತ್ಯಾಗತ್ತೂರು, ಅತ್ತಿಮಂಗಲ ಸೇರಿದಂತೆ ಇನ್ನಿತರ ಕಡೆಗಳಿಗೆ ಭೇಟಿ ನೀಡಿದ ಶಾಸಕರು, ಜನರ ಸಮಸ್ಯೆ ಆಲಿಸಿದರು. ಸಮಸ್ಯೆಯ ಕುರಿತು ಮಾಹಿತಿ ಪಡೆದುಕೊಂಡರು.
ಮರ ಬಿದ್ದ ಘಟನೆಗೆ ಅಧಿಕಾರಿಗಳು ತಕ್ಷಣ ಸ್ಪಂದಿಸಬೇಕು. ವಿದ್ಯುತ್ ಮಾರ್ಗ ದುರಸ್ತಿಗೆ ಕ್ರಮವಹಿಸಬೇಕು. ಸಮಸ್ಯೆಗಳ ಬಗ್ಗೆ ನಿರ್ಲಕ್ಷö್ಯ ತೋರದೆ ತ್ವರಿತವಾಗಿ ಪರಿಹಾರೋಪಾಯಕ್ಕೆ ಮುಂದಾಗಬೇಕೆAದು ಅಧಿಕಾರಿಗಳಿಗೆ ಸೂಚಿಸಿದರು.
ಡಿಸಿ ಸಾಥ್: ಮಳೆಹಾನಿ ಪ್ರದೇಶ ಭೇಟಿ ಸಂದರ್ಭ ಮಂತರ್ ಗೌಡ ಅವರೊಂದಿಗೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಕೂಡ ಸಾಥ್ ನೀಡಿದರು. ಅತ್ತಿಮಂಗಲ ಸೇರಿದಂತೆ ವಿವಿಧ ಮಳೆ ಹಾನಿ ಪ್ರದೇಶಕ್ಕೆ ಇಬ್ಬರು ಒಂದಾಗಿ ತೆರಳಿ ವಾಸ್ತವ ಚಿತ್ರಣ ಅರಿತುಕೊಂಡರು.
ವೀರಾಜಪೇಟೆ: ಪಟ್ಟಣ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಮಳೆ ಆರ್ಭಟ ಮುಂದುವರೆದಿದೆ.
ಭಾನುವಾರ ರಾತ್ರಿಯಿಡಿ ಸುರಿದ ಭಾರಿ ಗಾಳಿ ಮಳೆಯು ಸೋಮವಾರ ಮುಂಜಾನೆಯಿAದ ನಿರಂತರವಾಗಿ ಸುರಿಯಿತು. ನಿರಂತರವಾಗಿ ಸುರಿದ ಗಾಳಿ - ಮಳೆಗೆ ಹಲವೆಡೆಗಳಲ್ಲಿ ರಸ್ತೆಗೆ ಅಡ್ಡಲಾಗಿ ಮರ ಬಿದ್ದು ವಾಹನ ಸಂಚಾರಕ್ಕೆ ಅಡ್ಡಿಯಾಯಿತು. ಗಾಳಿ - ಮಳೆಗೆ ವಿದ್ಯುತ್ ಕಂಬಗಳು ಧರೆಗುರುಳಿದ ಪರಿಣಾಮ ಪಟ್ಟಣ ಹಾಗೂ ಗ್ರಾಮ ವ್ಯಾಪ್ತಿಯಲ್ಲಿ ದಿನವಿಡಿ ವಿದ್ಯುತ್ ಕಣ್ಣಮುಚ್ಚಾಲೆ ಆಡುತ್ತಿತ್ತು. ಗ್ರಾಮೀಣ ಪ್ರದೇಶದಲ್ಲಿ ಹಲವೆಡೆ ವಿದ್ಯುತ್ ಸಂಪರ್ಕ ಕಡಿತಗೊಂಡು ಸಾರ್ವಜನಿಕರು ಸಮಸ್ಯೆ ಅನುಭವಿಸುವಂತಾಯಿತು.
ಕಳೆದ ಕೆಲ ದಿನಗಳಿಂದ ಬಿರುಸಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕೃಷಿ ಭೂಮಿ ಜಲಾವೃತಗೊಂಡಿದೆ. ಇನ್ನೂ ಕೂಡ ಭತ್ತದ ಕೃಷಿ ಆರಂಭಗೊಳ್ಳದಿರುವುದರಿAದ ರೈತರು ನಿಟ್ಟುಸಿರುಬಿಡುವಂತಾಗಿದೆ. ಸುತ್ತಮುತ್ತಲಿನ ಹಳ್ಳಕೊಳ್ಳ ಉಕ್ಕಿ ಹರಿಯುತ್ತಿತ್ತು. ಸಮೀಪದ ಬೋಯಿಕೇರಿ, ಬೇತ್ರಿಯಲ್ಲಿ ಕಾವೇರಿ ನದಿ ಹಾಗೂ ಕದನೂರು, ಕೊಂಡAಗೇರಿ, ಚಾಮಿಯಾಲ ಹೊಳೆಯಲ್ಲಿ ನೀರಿನ ಹರಿವು ಗಣನೀಯವಾಗಿ ಹೆಚ್ಚಳಗೊಂಡಿದೆ. ವೀರಾಜಪೇಟೆ : ಅರಮೇರಿ ಗ್ರಾಮ ನಿವಾಸಿ ಹೆಚ್.ಆರ್. ರಾಮು ಇವರ ಮನೆ ಮಳೆಗೆ ಹಾನಿಯಾಗಿದೆ.
ಅರ್ಜಿ ಗ್ರಾಮದ ಕಲ್ಲುಬಾಣೆಯ ಮನೆಗೆ ಮರ ಬಿದ್ದು ಹಾನಿ ಯಾಗಿದ್ದ ಮಜೀದ್ ಎಂಬವರ ಮನೆಗೆ ಜಿಲ್ಲಾಧಿಕಾರಿ ವೆಂಕಟ್ರಾಜ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭ ತಹಶೀಲ್ದಾರ್ ಅನಂತ ಶೇಖರ್, ಗ್ರಾಮ ಪಂಚಾಯತ್ ಅಧ್ಯಕ್ಷೆ ಫಾತಿಮಾ ಮತ್ತು ಪಂಚಾಯತ್ ಅಧಿಕಾರಿ ಪ್ರಮೋದ್, ಕಂದಾಯ ನಿರೀಕ್ಷಕÀ ಹರೀಶ್, ಗ್ರಾಮ ಲೆಕ್ಕಿಗರಾದ ಕಸ್ತೂರಿ ಹಾಜರಿದ್ದರು.
ವೀರಾಜಪೇಟೆ: ವೀರಾಜಪೇಟೆ ತಾಲೂಕಿನಲ್ಲಿ ಬಿಡದೆ ಸುರಿಯುತ್ತಿರುವ ವರುಣನ ಆರ್ಭಟಕ್ಕೆ ಮೈತಾಡಿ ಗ್ರಾಮದ ನಿವಾಸಿ ಎಂ.ಡಿ ಕುಶಾಲಪ್ಪ ಅವರ ವಾಸದ ಮನೆ ಮೇಲೆ ಮರ ಬಿದ್ದಿದೆ .
ಮರ ಬಿದ್ದ ರಭಸಕ್ಕೆ ಮನೆಯ ಭಾಗಶಃ ಹಾನಿಯಾಗಿರುತ್ತದೆ. ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ವೀರಾಜಪೇಟೆ: ವೀರಾಜಪೇಟೆ ಹೋಬಳಿ ನಾಲ್ಕೇರಿ ಗ್ರಾಮದಲ್ಲಿ ಮನೆಯ ಮೇಲೆ ಮರವೊಂದು ಬಿದ್ದು ಹಾನಿಯಾದ ಬಗ್ಗೆ ವರದಿಯಾಗಿದೆ. ನಾಲ್ಕೇರಿ ನಿವಾಸಿಯಾದ ಅರೆಯಂಡ ಪಿ ಮೇದಪ್ಪ ಅವರ ಮನೆಯ ಮೇಲೆ ಮರ ಬಿದ್ದ ಪರಿಣಾಮ ಭಾಗಶಃ ಹಾನಿಯಾಗಿದೆ. ಸ್ಥಳಕ್ಕೆ ಕಂದಾಯ ಪರಿವೀಕ್ಷಕರು, ಗ್ರಾಮ ಲೆಕ್ಕಿಗರು, ಸ್ಥಳೀಯ ಗ್ರಾಮ ಪಂಚಾಯಿತಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ವೀರಾಜಪೇಟೆ : ವೀರಾಜಪೇಟೆ ತಾಲೂಕಿನಲ್ಲಿ ಎಡೆಬಿಡದೆ ಮಳೆ ಸುರಿಯುತ್ತಿದ್ದು ವಿಪರೀತ ಗಾಳಿ ಬೀಸುತ್ತಿರುವ ಪರಿಣಾಮ ಆರ್ಜಿ ಗ್ರಾಮದ ಪೆರಂಬಾಡಿಯ ಶಿವಶಂಕರ ಎಂಬುವವರ ಮನೆಯ ಮೇಲೆ ಮರ ಬಿದ್ದು ಹಾನಿಯಾಗಿದೆ.
ಸ್ಥಳಕ್ಕೆ ಆರ್ಜಿ ಗ್ರಾಮದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಸ್ಥಳೀಯ ಸದಸ್ಯರು, ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂಜಾಗೃತಾ ಕ್ರಮ ತೆಗೆದುಕೊಳ್ಳುವಂತೆ ತಿಳಿಸಿದರು.
ವೀರಾಜಪೇಟೆ: ವೀರಾಜಪೇಟೆ ಹೋಬಳಿಯ ಬಿಟ್ಟಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾಳುಗೋಡು ಗ್ರಾಮದ ನಿವಾಸಿ ಸುರಂಜನ್ ನಾಯಕ್ ಎಂಬುವರ ಮನೆಯ ಅಡುಗೆ ಮನೆಯ ಗೋಡೆಯು ವಿಪರೀತ ಮಳೆಯಿಂದಾಗಿ ಕುಸಿದಿರುತ್ತದೆ . ಆದರೆ ಯಾವುದೇ ಪ್ರಾಣ ಹಾನಿ ಆಗಿರುವುದಿಲ್ಲ. ಸ್ಥಳಕ್ಕೆ ಬಿಟ್ಟಂಗಾಲ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ವೀರಾಜಪೇಟೆ: ನಿರ್ಮ