ಮಡಿಕೇರಿ, ಮೇ ೨೫ : ಕೊಡವ ಭಾಷಿಕ ಜನಾಂಗದಲ್ಲೊAದಾದ ಕೋಲೆಯ ಸಮಾಜದ ಮಹಾಸಭೆ ವೀರಾಜಪೇಟೆಯ ಎ.ಟೂ.ಜೆಡ್ ಸಭಾಂಗಣದಲ್ಲಿ ನಡೆಯಿತು. ಸಮಾಜದ ಅಧ್ಯಕ್ಷ ಕೋಲೆಯಂಡ ಯು. ಗಿರೀಶ್ ಅವರು ಸಭಾಧ್ಯಕ್ಷತೆ ವಹಿಸಿ ಮಾತನಾಡುತ್ತಾ ಜನಾಂಗವು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಿದರೆ ಗುರಿ ಸಾಧಿಸಲು ಸಾಧ್ಯವಾಗುತ್ತದೆ. ಮೊದಲು ಒಗ್ಗಟ್ಟನ್ನು ಬೆಳೆಸಿಕೊಳ್ಳು ವಂತಾಗಲಿ ಎಂದು ಕರೆ ನೀಡಿದರು.
ಸಭೆಯಲ್ಲಿ ಇ.ಎನ್.ಟಿ. ತಜ್ಞ ವೈದ್ಯ ಹಾಗೂ ಮಡಿಕೇರಿ ಮೆಡಿಕಲ್ ಕಾಲೇಜು ಇ.ಎನ್.ಟಿ. ವಿಭಾಗದ ಮುಖ್ಯಸ್ಥ ಕೋಲೆಯಂಡ ಡಾ. ಮೋಹನ್ ಅಪ್ಪಾಜಿ ಹಾಗೂ ಜನಾಂಗದ ಹಿರಿಯ ನಾಟಿ ವೈದ್ಯೆ ಕೋಲೆಯಂಡ ದೇವಕ್ಕಿ ಗಣಪತಿ ಅವರನ್ನು ಸನ್ಮಾನಿಸಿ ಗೌರವಿಸ ಲಾಯಿತು. ಹಿರಿಯ ರಾಜಕೀಯ ಮುಖಂಡ ಕೆ.ಎಂ.ಬಿ. ಗಣೇಶ್ ಸೇರಿದಂತೆ ಸಮಾಜದ ಆಡಳಿತ ಮಂಡಳಿ ಪ್ರಮುಖರು ಉಪಸ್ಥಿತರಿ ದ್ದರು. ಕೋಲೆಯಂಡ ಲೀಲಾವತಿ ಪ್ರಾರ್ಥಿಸಿ, ಕಾರ್ಯದರ್ಶಿ ಅಂಬಾಡಿರ ರಾಮಯ್ಯ ಸ್ವಾಗತಿಸಿ, ಉಪಾಧ್ಯಕ್ಷ ಅಂಬಾಡಿರ ಕಾರ್ಯಪ್ಪ ವಂದಿಸಿದರು.