ಜಿಲ್ಲೆಯಲ್ಲಿ ಭಾನುವಾರ ಗಾಳಿ ಸಹಿತ ಧಾರಾಕಾರ ಮಳೆಯಾಗಿದ್ದು, ಹಲವೆಡೆ ಹಾನಿ ಘಟನೆಗಳು ಸಂಭವಿಸಿವೆ. ಮೂರ್ನಾಡು ಸಮೀಪದ ಬಲಮುರಿ ಸೇತುವೆ ತುಂಬಿದ್ದು, ಮಳೆ ಹೀಗೆ ಮುಂದುವರೆದರೆ, ನೀರಿನ ಪ್ರಮಾಣ ಮತ್ತಷ್ಟು ಏರಿಕೆಯಾಗುವ ಆತಂಕ ಎದುರಾಗಿದೆ.
ವೀರಾಜಪೇಟೆ ಭಾಗದಲ್ಲೂ ಮಳೆ ಅಬ್ಬರಿಸಿದ್ದು, ಹಲವು ಬಡಾವಣೆಗಳಿಗೆ ನೀರು ನುಗ್ಗಿ ನಿವಾಸಿಗಳು ತೊಂದರೆ ಎದುರಿಸಿದರು. ಹಲವು ರಸ್ತೆಗಳ ಮಧ್ಯೆ ಮರ, ವಿದ್ಯುತ್ ಕಂಬಗಳು ಧರೆಗುರುಳಿ ಸಂಚಾರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿತು.