ಮಡಿಕೇರಿಯ ಅಶೋಕಪುರದಲ್ಲಿ ವಿದ್ಯುತ್ ತಂತಿಯ ಮೇಲೆ ಮರಬಿದ್ದ ಘಟನೆ ನಡೆಯಿತು. ಇದರಿಂದಾಗಿ ಪಕ್ಕದಲ್ಲೇ ಇದ್ದ ಕಾರು ಕೂಡ ಜಖಂಗೊAಡಿದ್ದು, ನಗರಸಭೆ ಉಪಾಧ್ಯಕ್ಷ ಮಹೇಶ್ ಜೈನಿ, ಸದಸ್ಯರಾದ ಶಾರದಾ ನಾಗರಾಜ್, ಅರುಣ್ ಶೆಟ್ಟಿ, ಸತೀಶ್ ಭೇಟಿ ನೀಡಿ ಪರಿಶೀಲಿಸಿ ಮರ ತೆರವಿಗೆ ಕ್ರಮ ಕೈಗೊಂಡರು. ಮಡಿಕೇರಿಯ ಕೆಲವು ಬಡಾವಣೆಗಳು ಜಲಾವೃತಗೊಂಡ ಘಟನೆಯೂ ನಡೆದಿದೆ.ಸುಂಟಿಕೊಪ್ಪ : ಜಿಲ್ಲೆಯಾದ್ಯಂತ ಸುರಿಯುತ್ತಿರುವ ಭಾರಿ ಮಳೆ ಗಾಳಿಗೆ ಸುಂಟಿಕೊಪ್ಪ ಹೋಬಳಿ ನಲುಗಿ ಹೋಗಿದೆ. ಸುಂಟಿಕೊಪ್ಪ ಭಾನುವಾರ ಸಂತೆಯ ದಿನವಾಗಿದ್ದು ಮಳೆಯ ತೀವ್ರತೆಯನ್ನು ಅಂದಾಜಿಸದ ಜನರು ಮತ್ತು ವರ್ತಕರು ಹಲವು ಸಾಹಸದಿಂದ ತಮ್ಮ ಕಾರ್ಯಚಟುವಟಿಕೆಯನ್ನು ನಡೆಸಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು.
ಮಳೆಗೆ ಮಾರುಕಟ್ಟೆ ರಸ್ತೆಯಲ್ಲಿ ಮೊಣಕಾಲಿನ ತನಕ ನೀರು ನಿಂತು ವ್ಯಾಪಾರಿಗಳು ಹಾಗೂ ಗ್ರಾಹಕರು ಪರದಾಡಿದರು.
ಸುಂಟಿಕೊಪ್ಪ ಹೋಬಳಿಯಲ್ಲಿ ಶನಿವಾರ ಮತ್ತು ಭಾನುವಾರದ ಗಾಳಿ ಮಳೆಗೆ ಅಲ್ಲಲ್ಲಿ ಸಣ್ಣ ಪ್ರಮಾಣದ ಬರೆಕುಸಿತ, ಮರಗಳು ಬಿದ್ದಿರುವುದು ವಿದ್ಯುತ್ ಕಂಬಗಳು ವಾಲಿರುವುದು ವರದಿಯಾಗಿದೆ.
ರಸ್ತೆ ಸಂಪರ್ಕ ಕಡಿತಗೊಳ್ಳುವ ಭೀತಿ
ಎಮ್ಮೆಗುಂಡಿ ಭಾಗದ ನಿವಾಸಿ ಹಾಗೂ ಪಂಚಾಯಿತಿಯ ನಿವೃತ್ತ ಟ್ರ್ಯಾಕ್ಟರ್ ಚಾಲಕರ ಮನೆ ಮುಂಭಾಗದ ಕಿರು ಸೇತುವೆ ಕುಸಿಯುವ ಹಂತದಲ್ಲಿದ್ದು ಸಂಪರ್ಕ ಕಡಿತಗೊಳ್ಳುವ ಭೀತಿ ಎದುರಾಗಿದೆ. ಇದರೊಂದಿಗೆ ವಿದ್ಯುತ್ ಕಂಬಗಳು ಕೂಡ ಬೀಳುವ ಆತಂಕಕಾರಿ ಪರಿಸ್ಥಿತಿಯಲ್ಲಿದೆ. ಸೆಸ್ಕ್ ಹಾಗೂ ಸಂಬAಧಿಸಿದ ಇಲಾಖೆಯ ಅಧಿಕಾರಿಗಳು ಪರಿಶೀಲಿಸಿ ಮುಂದೆ ಸಂಭವಿಸಬಹುದಾದ ಅನಾಹುತಗಳನ್ನು ತಪ್ಪಿಸುವಲ್ಲಿ ಸಹಕರಿಸುವಂತೆ ವಾರ್ಡ್ ಸದಸ್ಯರುಗಳಾದ ಕೆ.ಕೆ. ಪ್ರಸಾದ್ ಕುಟ್ಟಪ್ಪ, ಕೆ.ಎಂ. ಅಲಿಕುಟ್ಟಿ ಹಾಗೂ ಗ್ರಾಮಸ್ಥರು ಮನವಿ ಮಾಡಿಕೊಂಡಿದ್ದಾರೆ.
ಮಾರುಕಟ್ಟೆಯ ಸಮಸ್ಯೆ ಪರಿಹಾರ ಸಂಬAಧ ರಸ್ತೆಯ ಚರಂಡಿಗಳನ್ನು ಅಗಲೀಕರಣಗೊಳಿಸುವ ಮೂಲಕ ಮೋರಿ ನಿರ್ಮಿಸಿ ಹೆದ್ದಾರಿಯಲ್ಲಿ ಹರಿಯುವ ಮಳೆಯ ನೀರನ್ನು ವಿಭಜಿಸುವ ಕಾರ್ಯವನ್ನು ಮುಂದಿನ ದಿನಗಳಲ್ಲಿ ನಿರ್ವಹಿಸಲಾಗುವುದು.
ಈಗಾಗಲೇ ಯೋಜನಾ ಪಟ್ಟಿಯನ್ನು ಸಿದ್ದಪಡಿಸಲಾಗಿದೆ ಎಂದು ಸುಂಟಿಕೊಪ್ಪ ಗ್ರೇಡ್ ೧ ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿ.ಆರ್.ಸುನಿಲ್ಕುಮಾರ್ ತಿಳಿಸಿದರು. ಮಡಿಕೇರಿ: ನಗರದ ಕೆಲ ಬಡಾವಣೆಗಳಲ್ಲಿ ಮುಳುಗಡೆ ಭೀತಿ ಸೃಷ್ಟಿಯಾಗಿದೆ. ಮಡಿಕೇರಿಯಲ್ಲಿ ಕಳೆದೆರೆಡು ದಿನಗಳಿಂದ ವ್ಯಾಪಕ ಮಳೆಯಾಗುತ್ತಿದ್ದು, ಆತಂಕದ ಛಾಯೆ ಆವರಿಸಿದೆ.
ಇಲ್ಲಿನ ಮುಳಿಯ, ಕಾವೇರಿ ಲೇಔಟ್ಗಳಲ್ಲಿ ರಸ್ತೆ, ಚರಂಡಿಗಳಲ್ಲಿ ನೀರು ತುಂಬಿ ಹರಿಯುತ್ತಿದ್ದು, ಮಳೆ ಹೀಗೆ ಮುಂದುವರೆದರೆ ಮತ್ತಷ್ಟು ಪ್ರಮಾಣದಲ್ಲಿ ನೀರು ತುಂಬಿ ಜಲಾವೃತಗೊಳ್ಳುವ ಆತಂಕ ಎದುರಾಗಿದೆ. ಇದರೊಂದಿಗೆ ಇಂದಿರಾ ನಗರ, ಚಾಮುಂಡೇಶ್ವರಿ ನಗರ, ಮಂಗಳಾದೇವಿ ನಗರ, ಉಕ್ಕುಡ ಸೇರಿದಂತೆ ವಿವಿಧೆಡೆಗಳಲ್ಲಿಯೂ ಮಳೆರಾಯನಿಂದ ಸಮಸ್ಯೆ ಸೃಷ್ಟಿಯಾಗುವ ಭೀತಿ ಆವರಿಸಿದೆ. ಭಾಗಮಂಡಲ ಮಾರ್ಗದ ಬೆಟ್ಟಗೇರಿಯಲ್ಲಿ ಗಾಳಿ ಮಳೆಗೆ ವಿದ್ಯುತ್ ಕಂಬ ಮತ್ತು ಮರ ಧರೆಗುರುಳಿದ್ದು ತೆರವುಗೊಳಿಸುವ ಕಾರ್ಯ ನಡೆಯಿತು.
ಶ್ರೀಮಂಗಲ: ದಕ್ಷಿಣ ಕೊಡಗಿನ ವ್ಯಾಪ್ತಿಯಲ್ಲಿ ಕಳೆದ ಎರಡು ದಿನದಿಂದ ಮಳೆ ಪ್ರಮಾಣ ತೀವ್ರಗೊಂಡಿದ್ದು, ಮಳೆಯೊಂದಿಗೆ ರಭಸದ ಗಾಳಿ ಮುಂದುವರೆದಿದೆ. ಇದರಿಂದ ವಿದ್ಯುತ್ ಸಂಪರ್ಕ ಕಳೆದ ಎರಡು ದಿನಗಳಿಂದ ಕಡಿತವಾಗಿದ್ದು, ಹಲವೆಡೆ ದೂರವಾಣಿ ಟವರ್ಗಳಿಗೆ ವಿದ್ಯುತ್ ಸಂಪರ್ಕ ಇಲ್ಲದೆ ಇರುವುದರಿಂದ ದೂರವಾಣಿ ಸೇವೆಯಲ್ಲಿಯೂ ವ್ಯತ್ಯಯ ಉಂಟಾಗಿದೆ.
ಹಲವಡೆ ವಿದ್ಯುತ್ ಮಾರ್ಗದೊಂದಿಗೆ ಹಾದುಹೋಗಿರುವ ಇಂಟರ್ನೆಟ್ ಕೇಬಲ್ಗಳು ಸಹ ಕಡಿತವಾಗಿದೆ. ದಕ್ಷಿಣ ಕೊಡಗಿನ ಪಶ್ಚಿಮ ಘಟ್ಟ ಪ್ರದೇಶದ ವತ್ತಿನಲ್ಲಿರುವ ಕುಟ್ಟ, ಶ್ರೀಮಂಗಲ, ಬಿರುನಾಣಿ, ಟಿ-ಶೆಟ್ಟಿಗೇರಿ, ಹುದಿಕೇರಿ ಗ್ರಾಮ ಪಂಚಾಯತಿ ವ್ಯಾಪ್ತಿಗಳಲ್ಲಿ ಮಳೆ ತೀವ್ರಗೊಂಡಿದ್ದು, ಭಾನುವಾರ ಮಧ್ಯಾಹ್ನದ ಮೇಲೆ ಮಳೆಯೊಂದಿಗೆ ಗಾಳಿ ಬೀಸುತ್ತಿರುವುದರಿಂದ ಅಲ್ಲಲ್ಲಿ ರಸ್ತೆ ನಡುವೆ ಮರಗಳು ಬಿದ್ದಿದ್ದು, ವಿದ್ಯುತ್ ಮಾರ್ಗದ ಮೇಲೆಯೂ ಸಹ ಮರ ಬಿದ್ದಿರುವ ಘಟನೆ ನಡೆದಿದೆ.
ಮರ ಬಿದ್ದ ಪರಿಣಾಮ ಟಿ. ಶೆಟ್ಟಿಗೇರಿ-ಬಿರುನಾಣಿ ರಸ್ತೆ ಸಂಪರ್ಕ ಕಡಿತವಾಗಿತ್ತು. ಟಿ. ಶೆಟ್ಟಿಗೇರಿ- ಬಿರುನಾಣಿ ರಸ್ತೆಯ ನಡುವೆ ಕೆಕೆಆರ್ ಬಿಎಸ್ಎನ್ಎಲ್ ಟವರ್ ಸಮೀಪ ರಸ್ತೆಯ ನಡುವೆ ಮರ ಬಿದ್ದು ರಸ್ತೆ ಸಂಪರ್ಕ ಕಡಿತಗೊಂಡಿದೆ. ಮರ ಬಿದ್ದ ಪರಿಣಾಮ ಶ್ರೀಮಂಗಲದಿAದ ಬಿರುನಾಣಿಗೆ ಹಾದು ಹೋಗುವ ವಿದ್ಯುತ್ ಎಕ್ಸ್ಪ್ರೆಸ್ ಮಾರ್ಗ ತಂತಿಗಳು ತುಂಡಾಗಿದ್ದು ಹಾನಿಯಾಗಿದೆ.
ಈ ವ್ಯಾಪ್ತಿಯ ಲಕ್ಷö್ಮಣ ತೀರ್ಥ, ಕಕ್ಕಟ್ಟ್ ಪೊಳೆ ನದಿಗಳ ನೀರಿನ ಮಟ್ಟದಲ್ಲಿ ಏರಿಕೆ ಕಂಡು ಬಂದಿದ್ದು, ಸಂಜೆ ವೇಳೆಗೆ ಗುಡುಗು ಸಹಿತ ಮಳೆ ಮುಂದುವರೆದಿದ್ದು, ಅವಧಿಗೆ ಮುಂಚಿತ ದಿಢೀರಾಗಿ ಎದುರಾದ ತೀವ್ರ ಮಳೆಯಿಂದ ಜನಜೀವನದ ಮೇಲೆ ಪರಿಣಾಮ ಬೀರಿದೆ. ಕುಶಾಲನಗರ: ಕುಶಾಲನಗರ ಪಟ್ಟಣ ಮತ್ತು ಸುತ್ತಮುತ್ತಲ ಗ್ರಾಮ ವ್ಯಾಪ್ತಿಗಳಲ್ಲಿ ಮುಂಜಾನೆಯಿAದಲೇ ನಿರಂತರವಾಗಿ ಮಳೆ ಸುರಿಯಿತು.
ಕಾವೇರಿ ಜಲಾನಯನ ಪ್ರದೇಶಗಳಲ್ಲಿ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಬೀಳುತ್ತಿರುವ ಮಳೆ ಕಾರಣ ಕುಶಾಲನಗರ ಮೂಲಕ ಹರಿಯುತ್ತಿರುವ ಕಾವೇರಿ ತುಂಬಿ ಹರಿಯಲಾರಂಭಿಸಿದೆ. ಕೇವಲ ೧೨ ಗಂಟೆಗಳ ಅವಧಿಯಲ್ಲಿ ನದಿಯಲ್ಲಿ ನೀರಿನ ಹರಿವಿನ ಪ್ರಮಾಣ ಸುಮಾರು ೯ ಅಡಿಗಳಷ್ಟು ಏರಿಕೆ ಕಂಡಿದೆ.
ಕುಶಾಲನಗರ ಕೊಪ್ಪ ಗಡಿಭಾಗದ ಸೇತುವೆಗಳ ಕೆಳ ಭಾಗದಲ್ಲಿ ಬೆಳಗ್ಗೆಯಿಂದ ನೀರಿನ ಪ್ರಮಾಣ ದಿಢೀರನೆ ಏರಿಕೆ ಕಂಡಿದ್ದು ನಿತ್ಯ ನದಿಯನ್ನು ಆಶ್ರಯಿಸುತ್ತಿದ್ದ ಜನರು ಸಮಸ್ಯೆಗೆ ಒಳಗಾಗಿದ್ದು ಗೋಚರಿಸಿತು. ನದಿ ತಟದ ಉದ್ದಕ್ಕೂ ತುಂಬಿದ್ದ ಭಾರಿ ಪ್ರಮಾಣದ ತ್ಯಾಜ್ಯ ಕಸಗಳು ಮರ ಮಟ್ಟುಗಳು ನೀರಿನಲ್ಲಿ ತೇಲಿಕೊಂಡು ಹೋಗುತ್ತಿದ್ದ ದೃಶ್ಯ ಎದುರಾಯಿತು. ವಾರಾಂತ್ಯದ ದಿನ ಆದ ಕಾರಣ ಪ್ರವಾಸಿ ಕೇಂದ್ರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡಿದ್ದು ಮಳೆಯಿಂದ ಓಡಾಟಕ್ಕೆ ತೊಂದರೆ ಉಂಟಾಯಿತು. ಈ ನಡುವೆ ಕುಶಾಲನಗರ ಕೊಪ್ಪ ವ್ಯಾಪ್ತಿಯಲ್ಲಿ ಪ್ರವಾಸಿಗರ ಒತ್ತಡದ ಹಿನ್ನೆಲೆಯಲ್ಲಿ ವಾಹನಗಳ ಸಂಚಾರಕ್ಕೆ ಕೂಡ ತೊಡಕು ಉಂಟಾಗಿದ್ದು ಕಂಡು ಬಂತು.
ಮಡಿಕೇರಿ: ನಗರದ ಕಾವೇರಿ ಹಾಲ್ಗೆ ಮಳೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಯಿತು.
ಸಭಾಂಗಣದಲ್ಲಿ ಮದುವೆ ಕಾರ್ಯಕ್ರಮ ನಡೆಯುತ್ತಿತ್ತು. ವಿಪರೀತ ಮಳೆಯಿಂದಾಗಿ ಕಾವೇರಿ ಹಾಲ್ ಜಲಾವೃತಗೊಂಡು ಸಭಾಂಗಣದ ತನಕ ನೀರು ತುಂಬಿದ್ದು ಬಂದಿದ್ದ ಅತಿಥಿಗಳು ಪರದಾಡುವಂತಾಯಿತು. ಚೆಯ್ಯಂಡಾಣೆ : ವೀರಾಜಪೇಟೆ-ಮಡಿಕೇರಿ ಮುಖ್ಯರಸ್ತೆ ನಡುವಿನ ಕದನೂರು ಬಳಿಯ ವೇ ಬಿಡ್ಜ್ ಸಮೀಪ ರಸ್ತೆ ಜಲಾವೃತಗೊಂಡು ಸಂಚಾರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿತು. ವಾಹನ ಸವಾರರು ಹರಸಾಹಸ ಪಡುವಂತಾಯಿತು.
ಮಾರ್ಗದಲ್ಲಿ ಸಂಚರಿಸಲು ಪ್ರಯತ್ನ ಮಾಡಿದ ೨ ಓಮ್ನಿ ವಾಹನ ನಡು ರಸ್ತೆಯಲ್ಲಿ ದುರಸ್ತಿಯಾದ ಘಟನೆಯೂ ಸಂಭವಿಸಿತ.
ಕದನೂರು ಗ್ರಾಮ ಪಂಚಾಯಿತಿಯು ರಸ್ತೆಯ ಬದಿಯ ಚರಂಡಿ ಸ್ವಚ್ಛಗೊಳಿಸದ ಕಾರಣ ರಸ್ತೆಯಲ್ಲಿ ನೀರು ಹರಿಯುತ್ತಿದೆ. ಕೂಡಲೇ ಸಂಬAಧಪಟ್ಟ ಲೋಕೋಪಯೋಗಿ ಇಲಾಖೆ ಹಾಗೂ ಗ್ರಾಮ ಪಂಚಾಯಿತಿ ಚರಂಡಿ ಸ್ವಚ್ಛಗೊಳಿಸಿ ಕ್ರಮ ಕೈಗೊಳ್ಳಬೇಕು ಎಂದು ಜೆಡಿಎಸ್ ಯುವ ಘಟಕ ತಾಲೂಕು ಅಧ್ಯಕ್ಷ ಸೈಫುದ್ದೀನ್ ಚಾಮಿಯಾಲ ಆಗ್ರಹಿಸಿದ್ದಾರೆ. ಗೋಣಿಕೊಪ್ಪಲು : ದಕ್ಷಿಣ ಕೊಡಗಿನ ಹಲವೆಡೆ ಮಳೆಯ ಆರ್ಭಟ ಮುಂದುವರಿದಿದ್ದು, ವಿದ್ಯುತ್ ಕಂಬಗಳು ಹಾಗೂ ಮರಗಳು ಧರಾಶಾಯಿಗಳಾಗಿ ಜನಜೀವನದ ಮೇಲೆ ಪರಿಣಾಮ ಬೀರಿದೆ.
ಮಳೆಯ ನಡುವೆ ಚೆೆಸ್ಕಾಂ ಇಲಾಖೆಯ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪೊನ್ನಂಪೇಟೆ ತಾಲೂಕಿನ ಗೋಣಿಕೊಪ್ಪ, ಪೊನ್ನಂಪೇಟೆ ಹಾಗೂ ಶ್ರೀಮಂಗಲ ಪಟ್ಟಣದಲ್ಲಿ ಭಾಗಶಃ ವಿದ್ಯುತ್ ಸರಬರಾಜು ಲಭ್ಯವಿದೆ. ಇನ್ನುಳಿದ ಬಹುತೇಕ ಗ್ರಾಮೀಣ ಪ್ರದೇಶಗಳಲ್ಲಿ ವಿಪರೀತ ಗಾಳಿಯಿಂದಾಗಿ ಮರಗಳು ಮಾರ್ಗದ ಮೇಲೆ ಬಿದ್ದಿವೆ. ಇದರಿಂದ ವಿದ್ಯುತ್ ಕಡಿತಗೊಂಡು ಗ್ರಾಮಗಳಲ್ಲಿ ಕತ್ತಲು ಆವರಿಸಿದೆ. ಬಿದ್ದ ಮರಗಳನ್ನು ತೆರವುಗೊಳಿಸುವ ಕಾರ್ಯದೊಂದಿಗೆ ವಿದ್ಯುತ್ ಸಂಪರ್ಕ ನೀಡುವ ಪ್ರಯತ್ನ ಸಾಗುತ್ತಿದೆ. ಶನಿವಾರ ಸುರಿದ ಮಳೆಗೆ ೨೦ ಕಂಬಗಳು, ಎರಡು ಪರಿವರ್ತಕಗಳು ಧರೆಗೆ ಉರುಳಿವೆ.
ಏಕ ಕಾಲದಲ್ಲಿ ಹಲವಾರು ಕಡೆಗಳಲ್ಲಿ ಮರಗಳು ಬಿದ್ದು ವಿದ್ಯುತ್ ತಂತಿಗಳು ತುಂಡಾಗಿರುವುದರಿAದ ಸಮಸ್ಯೆ ಇನ್ನಷ್ಟು ಬಿಗಡಾಯಿಸಿದೆ.ವೀರಾಜಪೇಟೆ: ತಾಲೂಕಿನ ಹೆಗ್ಗಳ ಗ್ರಾಮದ ಲಿಂಗಪ್ಪ ಅವರ ಮನೆಯ ಮುಂಭಾಗದ ಬರೆಯು ಕುಸಿದಿದೆ. ಮನೆಯು ಕುಸಿಯುವ ಹಂತದಲ್ಲಿದ್ದು ಮನೆಯವರಲ್ಲಿ ಆತಂಕ ಸೃಷ್ಟಿಯಾಗಿದೆ. ಈ ಬಗ್ಗೆ ವೀರಾಜಪೇಟೆ ತಾಲೂಕಿನ ಕಂದಾಯ ಪರಿವೀಕ್ಷಕ ಎಂ.ಎಲ್. ಹರೀಶ್ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಮುನ್ನೆಚ್ಚರಿಕೆ ಕ್ರಮವಾಗಿ ಅವರನ್ನು ಪಕ್ಕದ ಮನೆಗೆ ತೆರಳಲು ಸೂಚನೆ ನೀಡಲಾಯಿತು.ಸಿದ್ದಾಪುರ : ಧಾರಾಕಾರ ಮಳೆಯಿಂದಾಗಿ ಸಂತೆ ದಿನವಾದ ಭಾನುವಾರದಂದು ಸಿದ್ದಾಪುರದಲ್ಲಿ ಸಂತೆ ವ್ಯಾಪಾರಸ್ಥರು ಸಮಸ್ಯೆಗೆ ಸಿಲುಕಿದರು. ದೂರದ ಊರುಗಳಿಂದ ಆಗಮಿಸಿದ್ದ ವ್ಯಾಪಾರಸ್ಥರು ಮಳೆ ನಡುವೆ ವ್ಯಾಪಾರ ಮಾಡಲು ಪರದಾಡಿದರು.
ಸಂತೆ ಮಾರುಕಟ್ಟೆ ಒಳಗೆ ಕೆಸರುಮಯದಿಂದ ಕೂಡಿದ ಹಿನ್ನೆಲೆಯಲ್ಲಿ ಸಂತೆಗೆ ಆಗಮಿಸಿದ ಗ್ರಾಹಕರು ತರಕಾರಿ ಹಾಗೂ ಇನ್ನಿತರ ವಸ್ತುಗಳನ್ನು ಖರೀದಿಸಲು ಹರಸಾಹಸ ಪಡಬೇಕಾಯಿತು. ಮಳೆಯಿಂದಾಗಿ ಗ್ರಾಹಕರು ಸಂತೆಗೆ ಕಡಿಮೆ ಸಂಖ್ಯೆಯಲ್ಲಿ ಆಗಮಿಸಿದ ಹಿನ್ನೆಲೆಯಲ್ಲಿ ಸಂತೆ ವ್ಯಾಪಾರಸ್ಥರು ಮಧ್ಯಾಹ್ನದಲ್ಲೇ ತಮ್ಮ ಊರಿನತ್ತ ತೆರಳುವ ದೃಶ್ಯ ಕಂಡು ಬಂತು.ವೀರಾಜಪೇಟೆ: ಪುರಸಭೆ ವ್ಯಾಪ್ತಿಯ ಬೆಟ್ಟ ಪ್ರದೇಶ ನೆಹರು ನಗರದಲ್ಲಿ ಮರ ಬಿದ್ದು ವಿದ್ಯುತ್ ಸಂಪರ್ಕ ಕಡಿತಗೊಂಡಿತು. ಜೊತೆಗೆ ರಸ್ತೆ ಸಂಚಾರಕ್ಕೆ ಸಮಸ್ಯೆ ಉಂಟಾಗಿತ್ತು. ಸ್ಥಳೀಯರು ರಸ್ತೆ ಮೇಲೆ ಬಿದ್ದಿದ್ದ ಮರವನ್ನು ಕಡಿದು ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ವೀರಾಜಪೇಟೆ ತಾಲೂಕಿನ ಆರ್ಜಿ ಗ್ರಾಮದ ಕಲ್ಲುಬಾಣೆಯಲ್ಲಿ ೧೧ಕೆವಿ ವಿದ್ಯುತ್ ಸಂಪರ್ಕ ಕಲ್ಪಿಸುವ ವಿದ್ಯುತ್ ಮಾರ್ಗದ ಕಂಬಗಳು ಮುರಿದು ಬಿದ್ದಿವೆ ಮತ್ತು ವಿದ್ಯುತ್ ಸಂಪರ್ಕ ಕಲ್ಪಿಸುವ ತಂತಿಗಳು ತುಂಡಾಗಿ ಕೆಳಗೆ ರಸ್ತೆ ಬದಿ ಬಿದ್ದಿದೆ. ಇದರಿಂದ ಎರಡು ದಿನಗಳಿಂದ ಕಲ್ಲು ಬಾಣೆ ಗ್ರಾಮಸ್ಥರು ಕತ್ತಲಲ್ಲಿ ದಿನ ಕಳೆಯುವಂತೆ ಆಗಿದೆ.ಸಿದ್ದಾಪುರ : ಧಾರಾಕಾರ ಮಳೆ ಹಾಗೂ ಗಾಳಿಗೆ ಮರವೊಂದು ರಸ್ತೆಗೆ ಅಡ್ಡಲಾಗಿ ಬಿದ್ದ ಪರಿಣಾಮ ಸಂಚಾರಕ್ಕೆ ಸಮಸ್ಯೆ ಉಂಟಾಯಿತು.
ಚೆಟ್ಟಳ್ಳಿಯ ಕಂಡಕರೆ ಬಳಿ ಈ ಘಟನೆ ನಡೆದಿದ್ದು, ಗಾಳಿ ಮಳೆಯಿಂದಾಗಿ ಈ ಭಾಗದಲ್ಲಿ ಮರಗಳು ವಿದ್ಯುತ್ ತಂತಿಗಳ ಮೇಲೆ ಬಿದ್ದ ಪರಿಣಾಮ ವಿದ್ಯುತ್ ಸಮಸ್ಯೆಗಳು ಕೂಡ ಎದುರಾಗುತ್ತಿವೆ. ಸಿದ್ದಾಪುರ : ಧಾರಾಕಾರ ಮಳೆ ಹಾಗೂ ಗಾಳಿಗೆ ಮರಗಳು ರಸ್ತೆಗೆ ಅಡ್ಡಲಾಗಿ ಬಿದ್ದ ಪರಿಣಾಮ ಅಮ್ಮತ್ತಿ ಕಾವಾಡಿ ರಸ್ತೆ ಸಂಚಾರ ಸ್ಥಗಿತಗೊಂಡಿತು. ವೀರಾಜಪೇಟೆ ಸಿದ್ದಾಪುರ ತೆರಳುವ ರಸ್ತೆಯಲ್ಲಿ ಕೊಮ್ಮೆತೋಡು ಬಳಿ ಕೂಡ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಕೆಲಕಾಲ ವಾಹನಗಳು ರಸ್ತೆಯಲ್ಲಿ ಸಾಲಾಗಿ ನಿಂತು ಬಳಿಕ ಮರವನ್ನು ತೆರವುಗೊಳಿಸಿದ ನಂತರ ವಾಹನಗಳು ತೆರಳಿದವು.ಕಣಿವೆ: ರೋಹಿಣಿ ಮಳೆಯ ರುದ್ರನರ್ತನದಿಂದಾಗಿ ಕೊಡಗು ಜಿಲ್ಲಾದ್ಯಂತ ಭಾರೀ ಮಳೆ ಸುರಿಯುತ್ತಿದ್ದು, ಪ್ರವಾಸಿಗರ ನೆಚ್ಚಿನ ತಾಣ ದುಬಾರೆಯ ಕಾವೇರಿ ನದಿ ತೀರದಲ್ಲಿ ಭಾನುವಾರ ಒಂದೇ ದಿನ ಐದು ಅಡಿಗಳಷ್ಟು ನೀರಿನ ಪ್ರಮಾಣ ಹೆಚ್ಚಳವಾಗಿದೆ.
ಶನಿವಾರ ಬೆಳಿಗ್ಗೆಯಷ್ಟೇ ದುಬಾರೆಗೆ ಧಾವಿಸಿದ ಪ್ರವಾಸಿಗರು ನದಿಯೊಳಗಿನ ಕಲ್ಲು ಹಾಸಿನ ಮೇಲೆ ನಿಧಾನವಾಗಿ ನೀರಲ್ಲೇ ಹೆಜ್ಜೆ ಇಟ್ಟು ಕಾಡಾನೆ ಶಿಬಿರಕ್ಕೆ ತೆರಳುತ್ತಿದ್ದರು. ಆದರೆ, ನದಿಯ ಜಲಾನಯನ ಪ್ರದೇಶಗಳಲ್ಲಿ ಎಡಬಿಡದೇ ಮಳೆ ಸುರಿಯುತ್ತಿರುವುದರಿಂದ ಕೇವಲ ೨೪ ಗಂಟೆಗಳ ಅಂತರದಲ್ಲಿ ಕಾವೇರಿ ಐದು ಅಡಿಗಳ ಎತ್ತರದಲ್ಲಿ ಹರಿಯುತ್ತಿದ್ದುದು ಭಾನುವಾರ ಸಂಜೆ ಗೋಚರವಾಯಿತು. ನದಿಯಲ್ಲಿ ನೀರಿನ ಮಟ್ಟ ಒಂದೇ ಭಾರಿ ಏರಿಕೆ ಕಂಡ ಹಿನ್ನೆಲೆಯಲ್ಲಿ ನದಿಯಲ್ಲಿ ನೀರಿಲ್ಲದೇ ಮೂಲೆ ಸೇರಿದ್ದ ಪ್ರವಾಸಿಗರಿಗೆ ಜಲರಂಜನೆ ಹಾಗೂ ಮನರಂಜನೆ ನೀಡುವ ಸಾಹಸ ದೋಣಿಗಳು ಭಾನುವಾರದಿಂದಲೇ ನೀರಿಗಿಳಿದು ಪ್ರವಾಸಿಗರ ಬಳಕೆಗೆ ಮುಕ್ತವಾದವು.
ಕಳೆದ ವರ್ಷ ಇದೇ ಮೇ ತಿಂಗಳ ಮಾಸಾಂತ್ಯದಲ್ಲಿ ಕಾವೇರಿ ನದಿಯಲ್ಲಿ ನೀರಿನ ಪ್ರಮಾಣ ಪೂರ್ಣ ಕುಸಿತಗೊಂಡಿತ್ತು. ಜಲಚರಗಳಿಗೂ ನೀರಿಲ್ಲದಂತಹ ಹಾಹಾಕಾರ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ ಈ ಬಾರಿ ಅವಧಿಗೂ ಮುನ್ನವೇ ಕಾವೇರಿಯಲ್ಲಿ ನೀರಿನ ಪ್ರಮಾಣ ಏರಿಕೆಯಾಗುತ್ತಿರುವುದು ಸಾರ್ವಜನಿಕರು ಹಾಗೂ ಪ್ರವಾಸಿಗರಲ್ಲಿ ತುಸು ನೆಮ್ಮದಿ ತಂದಿದೆ.ಚೆಯ್ಯAಡಾಣೆ : ಕದನೂರು ಗ್ರಾಮ ಪಂಚಾಯಿತಿಗೆ ಒಳಪಟ್ಟ ಚಾಮಿಯಾಲ ದೇವಣಗೇರಿ ರಸ್ತೆಯ ಆರಮೇರಿ ಶಾಲೆಯ ಸಮೀಪವಿರುವ ಸೇತುವೆ ಸುರಿಯುತ್ತಿರುವ ಭಾರಿ ಮಳೆಯಿಂದ ನೀರಿನ ಪ್ರಮಾಣ ಹೆಚ್ಚಾಗಿ ಮುಳುಗಡೆಯಾಗುವ ಸಾಧ್ಯತೆ ಕಂಡು ಬರುತ್ತಿದೆ. ಸಿದ್ದಾಪುರ : ಮನೆ ಮೇಲೆ ಮರ ಬಿದ್ದ ಘಟನೆ ಅಮ್ಮತ್ತಿ ಕಾರ್ಮಾಡು ಗ್ರಾಮದಲ್ಲಿ ನಡೆದಿದೆ.
ಸಾರಮ್ಮ ಎಂಬವರ ಮನೆ ಮೇಲೆ ಮರ ಬಿದ್ದಿದ್ದು, ಅದೃಷ್ಟವಶಾತ್ ಮನೆಯವರು ಅಪಾಯದಿಂದ ಪಾರಾಗಿದ್ದಾರೆ. ಮನೆ ಹಾನಿಗೀಡಾಗಿದ್ದು, ಸ್ಥಳಕ್ಕೆ ಕಂದಾಯ ಪರಿವೀಕ್ಷಕ ಅನಿಲ್ ಕುಮಾರ್ ಹಾಗೂ ಗ್ರಾಮ ಆಡಳಿತ ಅಧಿಕಾರಿ ಮುತ್ತಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಲೈನ್ಮ್ಯಾನ್ಗಳ ಸಾಹಸ
ವೀರಾಜಪೇಟೆ: ತಾಲೂಕಿನ ಆರ್ಜಿ ಗ್ರಾಮದ ಪೆರುಂಬಾಡಿ ಸಮೀಪ ವಿದ್ಯುತ್ ಸಂಪರ್ಕ ಕಲ್ಪಿಸಲು ಚೆಸ್ಕಾಂ ಸಿಬ್ಬಂದಿಗಳು ಹರಸಾಹಸಪಡುತ್ತಿದ್ದಾರೆ. ಅಪಾಯದ ನಡುವೆಯೂ ವಿದ್ಯುತ್ ಒದಗಿಸಲು ಶ್ರಮಿಸುತ್ತಿದ್ದಾರೆ.
ಮಳೆ ಅವಘಡಗಳಿಂದ ಗ್ರಾಮವೇ ಸಂಪೂರ್ಣ ಕತ್ತಲಲ್ಲಿ ಮುಳುಗಿದ್ದು ವಾತಾವರಣ ಕಾರ್ಮೋಡ ಕವಿದ ರೀತಿ ಇದ್ದು ಸಿಬ್ಬಂದಿಗಳಿಗೆ ಕೆಲಸ ನಿರ್ವಹಿಸಲು ಕಷ್ಟಕರವಾಗುತ್ತಿದೆ. ಅಪಾಯ ಮಟ್ಟ ಮೀರಿ ಹರಿಯುತ್ತಿರುವ ಕೀರೆಹೊಳೆ
ಗೋಣಿಕೊಪ್ಪಲು: ಪಟ್ಟಣದ ಕೀರೆ ಹೊಳೆಯು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಭರ್ತಿಯಾಗಲು ಇನ್ನೂ ಕೆಲವೆ ಅಡಿಗಳಷ್ಟೆ ಬಾಕಿ ಉಳಿದಿದ್ದು, ಹೊಳೆ ಅಂಚಿನ ನಿವಾಸಿಗಳಲ್ಲಿ ಆತಂಕ ಸೃಷ್ಟಿಯಾಗಿದೆ.
ಕೀರೆ ಹೊಳೆ ನೀರು ಅಪಾಯಕಾರಿ ಮಟ್ಟ ತಲುಪಿದ್ದರೂ ಸೇತುವೆಯ ಮೇಲೆ ಮಕ್ಕಳು ಸೇರಿದಂತೆ ನಾಗರಿಕರು ಯಾವುದೇ ಭಯವಿಲ್ಲದೆ ನಡೆದಾಡುವುದು ಸೇತುವೆಯ ಮೇಲೆ ನಿಂತು ನೋಡುತ್ತಿರುವುದು ಕಂಡು ಬಂದಿದೆ.
ತಾಲೂಕು ಆಡಳಿತ ವತಿಯಿಂದ ಮುಂಜಾಗ್ರತಾ ಕ್ರಮವಾಗಿ ಬ್ಯಾರಿಕೇಡ್ ಅಳವಡಿಸುವುದು, ಸೇರಿದಂತೆ ಪೋಲಿಸರ ನಿಯೋಜನೆ ಮಾಡಬೇಕಾದ ಇಲಾಖೆ ಇತ್ತ ಗಮನಿಸದೆ ಇರುವುದು ಅಸಮಾಧಾನಕ್ಕೆ ಕಾರಣವಾಗಿದೆ.
ನಗರದ ಬೈಪಾಸ್ ಬಳಿಯಲ್ಲಿ ಹರಿಯುವ ಕೈತೋಡು ಕೂಡ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಬೈಪಾಸ್ ರಸ್ತೆಯ ಕೆಲವು ಭಾಗದಲ್ಲಿ ಹೊಳೆಗೆ ಹೊಂದಿಕೊAಡಿರುವ ರಸ್ತೆ ಬಿರುಕು ಬಿಟ್ಟಿದೆ ಕೀರೆ ಹೊಳೆ ಹಾಗೂ ಕೈ ತೋಡಿಗೆ ಹೆಚ್ಚಾಗಿ ತ್ಯಾಜ್ಯ ವಸ್ತುಗಳು, ಬಾಟಲಿಗಳು ತುಂಬಿ ಬಂದಿದ್ದು ನೀರು ಹರಿಯುವ ಜಾಗವನ್ನು ಆಕ್ರಮಿಸಿಕೊಂಡ ಹಿನ್ನೆಲೆಯಲ್ಲಿ ನೀರು ಸರಾಗವಾಗಿ ಹರಿಯಲು ಸಾಧ್ಯವಾಗುತ್ತಿಲ್ಲ ಎಂಬ ಆರೋಪವಿದ್ದು, ನೀರು ಕೆಲವು ಅಂಗಡಿಗಳಿಗೆ ನುಗ್ಗಿದ ಹಿನ್ನೆಲೆಯಲ್ಲಿ ನಷ್ಟ ಸಂಭವಿಸಿದೆ.
ಕೂಡಿಗೆ : ಜಿಲ್ಲೆಯಲ್ಲಿ ಮಳೆ ಹೆಚ್ಚಾಗಿರುವ ಹಿನ್ನೆಲೆ ಹಾರಂಗಿ ಅಣೆಕಟ್ಟೆಯಲ್ಲಿ ಸ್ವಲ್ಪ ಪ್ರಮಾಣದ ಒಳ ನೀರಿನ ಹರಿವು ಹೆಚ್ಚಾಗುತ್ತಿದೆ.
ಈಗಾಗಲೇ ೫೪೦ ಕ್ಯೂಸೆಕ್ಸ್ ನೀರು ಹರಿದು ಬರುತ್ತಿದೆ. ಇದರಿಂದ ಅಣೆಕಟ್ಟೆಯ ನೀರಿನ ಸಂಗ್ರಹ ಮಟ್ಟವು ಸ್ವಲ್ಪ ಮಟ್ಟಿಗೆ ಏರಿಕೆ ಅಗುತ್ತಿರುವುದು ಕಂಡುಬರುತ್ತದೆ. ಹಾರಂಗಿ ನೀರಾವರಿ ಇಲಾಖೆಯ ಅಧಿಕಾರಿ ವರ್ಗದವರು ಈಗಾಗಲೇ ಅಣೆಕಟ್ಟೆಯ ನಿರ್ವಹಣೆ ಮತ್ತು ಹೆಚ್ಚುವರಿ ಭದ್ರತೆಯಲ್ಲಿ ತೊಡಗಿಕೊಂಡಿದ್ದಾರೆ. ಸಿದ್ದಾಪುರ: ವೀರಾಜಪೇಟೆ, ಅಮ್ಮತ್ತಿ ವ್ಯಾಪ್ತಿಯಲ್ಲಿ ವಿದ್ಯುತ್ ಕಂಬಗಳ ಹಾಗೂ ವಿದ್ಯುತ್ ತಂತಿಗಳ ಮೇಲೆ ಮರಗಳು ಬಿದ್ದ ಪರಿಣಾಮ ಕಳೆದೆರಡು ದಿನಗಳಿಂದ ವಿದ್ಯುತ್ ಸಂಪರ್ಕ ಕಡಿತಗೊಂಡ ಹಿನ್ನೆಲೆಯಲ್ಲಿ ಸಿದ್ದಾಪುರ ವ್ಯಾಪ್ತಿಯ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕತ್ತಲು ಆವರಿಸಿದೆ.
ಸಿದ್ದಾಪುರ ಪಟ್ಟಣದ ವ್ಯಾಪ್ತಿಯ ಬಹುತೇಕ ಅಂಗಡಿಗಳಲ್ಲಿ ವರ್ತಕರು ವಿದ್ಯುತ್ ಇಲ್ಲದೆ ಮೇಣದ ಬತ್ತಿಯನ್ನು ಉರಿಸಿ ಅದರ ಬೆಳಕಿನ ಸಹಾಯದಿಂದ ವ್ಯಾಪಾರದಲ್ಲಿ ತೊಡಗಿಕೊಂಡಿದ್ದಾರೆ. ಇದಲ್ಲದೆ ಅಂಗಡಿ ಮುಂಗಟ್ಟುಗಳಲ್ಲಿರುವ ಡಿಜಿಟಲ್ ತಕ್ಕಡಿಗಳು ಕಾರ್ಯನಿರ್ವಹಿಸದೆ ಸ್ಥಗಿತಗೊಂಡಿವೆ.
ಕಡಂಗ: ಕಡಂಗ ಮತ್ತು ನಾಪೋಕ್ಲು ಮುಖ್ಯ ರಸ್ತೆಯಲ್ಲಿರುವ ಎಡಪಾಲ ಸೇತುವೆ ಭಾರಿ ಮಳೆಯಿಂದ ಮುಳುಗಡೆಯಾಗಿದೆ.ಕಡಂಗದಿAದ ಎಡಪಾಲಕ್ಕೆ ತೆರಳುವ ಸಾರ್ವಜನಿಕರು ಚೆಯ್ಯಂಡಾಣೆ ಮಾರ್ಗ ಆಶ್ರಯಿಸಿದ್ದಾರೆ.
ಸಿದ್ದಾಪುರ: ವೀರಾಜಪೇಟೆ ತಾಲೂಕು ವ್ಯಾಪ್ತಿಯಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ತಹಶೀಲ್ದಾರ್ ಅನಂತ್ ಶಂಕರ್ ಸೂಕ್ಷö್ಮಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ವೀರಾಜಪೇಟೆಯ ಬೇತ್ರಿ ಹಾಗೂ ಇನ್ನಿತರ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ತಾಲೂಕು ವ್ಯಾಪ್ತಿಯಲ್ಲಿ ಗಾಳಿ ಮಳೆಗೆ ಸಿಲುಕಿ ಎರಡು ಮನೆಗಳಿಗೆ ಹಾನಿಯಾಗಿದೆ. ತಾಲೂಕಿನ ಅಮ್ಮತ್ತಿ ಹಾಗೂ ಅರ್ಜಿ ಗ್ರಾಮದಲ್ಲಿ ಮನೆಗಳ ಮೇಲೆ ಮರಗಳು ಬಿದ್ದು ಹಾನಿಯಾಗಿರುವ ಬಗ್ಗೆ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದಾರೆ ಎಂದು ಮಾಹಿತಿ ನೀಡಿದರು. ವಿಪರೀತ ಮಳೆ ಆಗುತ್ತಿರುವ ಹಿನ್ನೆಲೆಯಲ್ಲಿ ತಾಲೂಕು ಆಡಳಿತದಿಂದ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಅಗತ್ಯ ಮುಂಜಾಗ್ರತ ಕ್ರಮ ಕೈಗೊಳ್ಳಲಾಗಿದೆ ಎಂದು ವಿವರಿಸಿದರು.
ವೀರಾಜಪೇಟೆ: ಮರ, ವಿದ್ಯುತ್ ಕಂಬಗಳು ಧರೆಗುರುಳಿದ ಪರಿಣಾಮ ತೋರ ಮಾರ್ಗ ಸಂಚಾರ ಬಂದ್ ಆಗಿದೆ.
ಕೆದಮುಳ್ಳೂರು ಗ್ರಾಮದ ತೋರ ವ್ಯಾಪ್ತಿಯಲ್ಲಿ ಸುರಿದ ಗಾಳಿ ಸಹಿತ ಭಾರಿ ಮಳೆಗೆ ವಿದ್ಯುತ್ ಕಂಬಗಳು ಮುರಿದು ರಸ್ತೆಗೆ ಅಡ್ಡಲಾಗಿ ಬಿದ್ದಿವೆ. ರಸ್ತೆಯುದ್ದಕ್ಕೂ ಇರುವ ಬಹಳಷ್ಟು ಕಂಬಗಳು ಮುರಿದು ಬಿದ್ದಿದ್ದು ವಿದ್ಯುತ್ ತಂತಿಗಳು ಸಂಪೂರ್ಣವಾಗಿ ತುಂಡಾಗಿ ಧರಾಶಾಯಿಯಾಗಿವೆ. ಇದರಿಂದ ಹೆಗ್ಗಳ ಮಾರ್ಗ ಹಾಗೂ ಕೆದಮುಳ್ಳೂರು ಮಾರ್ಗವಾಗಿ ತೋರ ಗ್ರಾಮಕ್ಕೆ ತೆರಳಲು ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಗ್ರಾಮವು ಕಳೆದ ಎರಡು ದಿನಗಳಿಂದ ಕತ್ತಲಲ್ಲಿ ಕಳೆಯುವಂತೆ ಆಗಿದೆ.ಚೆಯ್ಯಂಡಾಣೆ : ವೀರಾಜಪೇಟೆ-ಮಡಿಕೇರಿ ಮುಖ್ಯರಸ್ತೆ ನಡುವಿನ ಕದನೂರು ಬಳಿಯ ವೇ ಬ್ರಿಡ್ಜ್ ಸಮೀಪ ರಸ್ತೆ ಜಲಾವ