ಸೋಮವಾರಪೇಟೆ, ಮೇ ೨೪: ೨೦೨೪-೨೫ನೇ ಸಾಲಿನ ಪೊಲೀಸ್ ಮಹಾ ನಿರ್ದೇಶಕರು ಮತ್ತು ಮಹಾ ನಿರೀಕ್ಷಕರು ನೀಡುವ ರಾಜ್ಯ “ಪ್ರಶಂಸೆ ಪದಕ"ಕ್ಕೆ ಭಾಜನರಾಗಿ, ಪ್ರಶಸ್ತ್ತಿ ಸ್ವೀಕರಿಸಿದ ಸೋಮವಾರಪೇಟೆ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಮುದ್ದು ಮಹದೇವ ಅವರನ್ನು ಕರ್ನಾಟಕ ರಕ್ಷಣಾ ವೇದಿಕೆಯ ಕೊಡಗು ಜಿಲ್ಲಾ ಘಟಕದಿಂದ ಸನ್ಮಾನಿಸಲಾಯಿತು. ಈ ಸಂದರ್ಭ ಕರವೇ ಜಿಲ್ಲಾ ಅಧ್ಯಕ್ಷ ದೀಪಕ್, ಪ್ರಧಾನ ಕಾರ್ಯದರ್ಶಿ ಮಂಜುನಾಥ, ಯುವ ಘಟಕದ ಅಧ್ಯಕ್ಷ ವಸಂತ ಆಚಾರ್ಯ, ನಗರಾಧ್ಯಕ್ಷ ಮಂಜುನಾಥ್, ಜಿಲ್ಲಾ ಆಟೋ ಘಟಕದ ಸಂಚಾಲಕ ಅಬ್ಬಾಸ್, ಜಗನ್ನಾಥ್, ನಿತನ್ ಮಿಟ್ಟು, ವೆಂಕಟೇಶ್ ಹಾನಗಲ್, ದೀಪು, ಹರೀಶ್ ಕೆಂಚಾAಬ, ಅಂತೋಣಿ ಸೇರಿದಂತೆ ಇತರರು ಇದ್ದರು.