ಚೆಟ್ಟಳ್ಳಿ, ಮೇ. ೨೪: ಕೊಡಗಿನ ಕಿತ್ತಳೆ ಅಭಿವೃದ್ಧಿ ಹಾಗೂ ಕೃಷಿ ಪರಿಕರ ವಿತರಣಾ ಕಾರ್ಯಕ್ರಮ ಚೆಟ್ಟಳ್ಳಿಯ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರದಲ್ಲಿ ನಡೆಯಿತು. ಕೃಷಿ ತಂತ್ರಜ್ಞಾನ ಹಾಗೂ ಕಿತ್ತಳೆ ಪುನಶ್ಚೇತನಕ್ಕೆ ಬೇಕಾದ ಪರಿಕರಗಳ ಪ್ರದರ್ಶನ ನಡೆಯಿತು. ಕರ್ನಾಟಕ ಸರಕಾರದ ಕೃಷಿ ನಿರ್ದೇಶಕರಾದ ಡಾ. ಪುತ್ರಾ ಜಿ.ಟಿ ಹಾಗೂ ಭಾ.ಕೃ.ಅ.ಪ-ಭಾ.ತೋ.ಸಂ.ಸA. ಬೆಂಗಳೂರು, ಇದರ ನಿರ್ದೇಶಕರಾದ ಪ್ರೊ. ಟಿ. ಕೆ. ಬೆಹೆರಾ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಡಾ. ಪುತ್ರಾ ಜಿ.ಟಿ ಕೃಷಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೊಡಗಿನ ಕಿತ್ತಳೆಯ ಸ್ವಾದ ಎಲ್ಲೂ ಸಿಗಲು ಸಾಧ್ಯವಿಲ್ಲ. ಇಂತಹ ಕೃಷಿಯ ಅಭಿವೃದ್ಧಿಗೆ ಕೇಂದ್ರೀಯ ತೋಟಗಾರಿಕಾ ಸಂಸ್ಥೆ ವಿವಿಧ ಯೋಜನೆಗಳ ಮೂಲಕ ಶ್ರಮಿಸುತ್ತಿದೆ ಎಂದರು. ಪ್ರೊ. ಟಿ.ಕೆ. ಬೆಹೆರಾ ಮುಖ್ಯ ಭಾಷಣಕಾರರಾಗಿ ಮಾತನಾಡಿ, ಕೊಡಗಿನ ಮೂಲಬೆಳೆ ಕಿತ್ತಳೆಯನ್ನು ಪುನರ್ ಅಭಿವೃದ್ಧಿ ಪಡಿಸುವಂತಾಗಬೇಕೆAದರು. ನಂತರ ಹಿರಿಯ ವಿಜ್ಞಾನಿ ಡಾ. ರಾಜೇಂದಿರನ್ ಎಸ್ ಅವರ ಅಧ್ಯಕ್ಷತೆಯಲ್ಲಿ ತಾಂತ್ರಿಕ ಅಧಿವೇಶನ ನೆರವೇರಿತು. ಕೊಡಗಿನ ಕಿತ್ತಳೆ ಬೆಳೆಯಲ್ಲಿ ಕೃಷಿ ಪರಿಕರಗಳ ಪರಿಣಾಮಕಾರಿ ಬಳಕೆ ಬಗ್ಗೆ ವಿವರಿಸಿದರು. ಗೋಣಿಕೊಪ್ಪಲು ಕೆ.ವಿ.ಕೆಯ ವಿಜ್ಞಾನಿ ವೀರೇಂದ್ರ ಕುಮಾರ್ ಅವರು ಭಾಗವಹಿಸಿ ರೈತರ ಹಾಗೂ ವಿಜ್ಞಾನಿಗಳ ಸಂವಾದ ನೆರವೇರಿಸಿದರು. ಪ್ರಗತಿಪರ ಕೃಷಿಕ ಹಾಗೂ ಕಾಫಿ ಮಂಡಳಿಯ ಮಾಜಿ ಉಪಾಧ್ಯಕ್ಷರಾದ ನಡಿಕೇರಿಯಂಡ ಬೋಸ್ ಮಂದಣ್ಣ ಸೇರಿದಂತೆ ಹಲವು ಕೃಷಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಡಾ. ರಾಜೇಂದಿರನ್ ಎಸ್ ಸ್ವಾಗತಿಸಿದರು. ವಿಜ್ಞಾನಿ ಡಾ. ಮುರಳೀಧರ ಬಿ. ಎಂ ರೈತರಿಗೆ ಆಗುವ ಉಪಯೋಗಗಳ ಬಗ್ಗೆ ಅರಿವು ಮೂಡಿಸಿದರು. ವೀರಾಜಪೇಟೆಯ ಜೇನು ಕೃಷಿಕ ರಕ್ಷಿತಾ ಬಿ.ವಿ. ಹಾಗೂ ಸೋಮವಾರಪೇಟೆಯ ಜೇನುಕೃಷಿಕರಾದ ಯಶ್ವಂತ್ ಡಿ.ಕೆ ಅವರಿಗೆ ಕಾರ್ಯಕ್ರಮದ ಅಂಗವಾಗಿ ಸನ್ಮಾನಿಸಲಾಯಿತು. ವಿಜ್ಞಾನಿ ಡಾ. ನಯನ್ ದೀಪಕ್ ಜಿ. ವಂದಿಸಿದರು.

ಆರ್‌ಕೆವಿವೈ ಯೋಜನೆಯ ನೋಡಲ್ ಅಧಿಕಾರಿಯಾಗಿರುವ ಡಾ. ರವಿಶಂಕರ್ ಕೆ.ವಿ, ಕಿತ್ತಳೆ ಬೆಳೆ ಹಾಗೂ ಜೇನು ಕೃಷಿಯ ಬಗ್ಗೆ ಕೃಷಿಕರು ಹೆಚ್ಚಿನ ಮುತುವರ್ಜಿ ವಹಿಸುವ ಮೂಲಕ ಸದುಪಯೋಗ ಪಡಿಸಿಕೊಳ್ಳ ಬೇಕೆಂದರು. ಕೊಡಗಿನ ಕಿತ್ತಳೆಯ ಪುನಶ್ವೇತನ ತಂತ್ರಜ್ಞಾನ ಮತ್ತು ಜೇನು ಸಾಕಣೆ ಕುರಿತು ಹಲವು ಫಲಾನುಭವಿಗಳು ತಮ್ಮ ಅನುಭವವನ್ನು ಹಂಚಿಕೊAಡರು.