ಮಡಿಕೇರಿ, ಮೇ ೨೪: ಕೊಡಗು ಮುಸ್ಲಿಂ ಜಮಾಅತ್, ಎಸ್ವೈ .ಎಸ್.ಎಸ್.ಎಸ್.ಎಫ್ ನೆಲ್ಲಿಹುದಿಕೇರಿ ಯೂನಿಟ್ ಸಂಯುಕ್ತಾಶ್ರಯದಲ್ಲಿ ಸಾಂತ್ವನ ಭವನ ಉದ್ಘಾಟನೆ ಹಾಗೂ ರಕ್ತದಾನ ಶಿಬಿರ ತಾ.೨೬ ರಂದು (ನಾಳೆ) ನಡೆಯಲಿದೆ ಎಂದು ಎಸ್ವೈಎಸ್ ನೆಲ್ಲಿಹುದಿಕೇರಿ ಯೂನಿಟ್ನ ಪ್ರಧಾನ ಕಾರ್ಯದರ್ಶಿ ಎಂ.ಎ. ಜುನೈದ್ ತಿಳಿಸಿದ್ದಾರೆ
ನಗರದ ಪತ್ರಿಕಾ ಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಎಸ್.ವೈ.ಎಸ್. ನೆಲ್ಲಿಹುದಿಕೇರಿ ಸಾಂತ್ವನ ವಿಭಾಗದಿಂದ ಹಲವು ವರ್ಷಗಳಿಂದ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ ಬರಲಾಗಿದೆ. ಪ್ರಾಕೃತಿಕ ವಿಕೋಪ ಸೇರಿದಂತೆ ಹಲವಾರು ಸಂದರ್ಭಗಳಲ್ಲಿ ಅಸಹಾಯಕರಿಗೆ ಅಭಯ ಹಸ್ತ ನೀಡಿದೆ. ನಮ್ಮಲ್ಲಿ ವಾಟರ್ ಬ್ಯಾಗ್, ಏರ್ಬ್ಯಾಗ್, ಆಕ್ಸಿಜನ್ ಕಿಟ್, ಕಮೋಡ್ ಚೇರ್, ವಾಕರ್, ವೀಲ್ಚೇರ್ ಗಳಿವೆ. ಇವುಗಳನ್ನು ಅಗತ್ಯವಿರುವವರಿಗೆ ಉಚಿತವಾಗಿ ನೀಡಲಾಗುತ್ತದೆ. ಯಾವುದೇ ಜಾತಿ ಧರ್ಮದ ಬೇಧ ಭಾವವಿಲ್ಲದೆ ಎಲ್ಲರಿಗೂ ಈ ಸೇವೆ ಸದಾ ಕಾಲ ಲಭ್ಯವಿರುತ್ತದೆ. ಅಗತ್ಯ ಉಳ್ಳವರು ೯೫೩೫೫೩೨೭೬೫, ೯೪೮೨೯೪೪೭೮೬ ದೂರವಾಣಿಯನ್ನು ಸಂಪರ್ಕಿಸಬಹುದು ಎಂದು ಜುನೈದ್ ಮಾಹಿತಿಯಿತ್ತರು. ಈ ರೀತಿಯ ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಎಸ್.ವೈ.ಎಸ್.ನೆಲ್ಲಿ ಹುದಿಕೇರಿ ಯೂನಿಟ್ನ ಕಚೇರಿ ಸಾಂತ್ವನ ಭವನದ ಉದ್ಘಾಟನೆ ತಾ.೨೬ ರಂದು (ನಾಳೆ) ಸಂಜೆ ೪ ಗಂಟೆಗೆ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಸಯ್ಯಿದ್ ಕಲ್ಲರಕ್ಕಲ್ ತಂಙಳ್, ಸಯ್ಯಿದ್ ಮಹದಿ ತಂಙಳ್, ಮಲಪ್ಪುರಂನ ಮಪ್ಲಹಿಲ್ ಉಲೂಮ್ ಅಬ್ದುಲ್ ಮಜೀದ್ ಅಹ್ಸನಿ ಉಸ್ತಾದ್, ಕೂರ್ಗ್ ಜಂಇಯ್ಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಅಶ್ರಫ್ ಅಹ್ಸನಿ ಉಸ್ತಾದ್, ದಾರುನ್ನಜಾತ್ ಖತೀಬರಾದ ಅಹ್ಮದ್ ಕುಟ್ಟಿ ಬಾಖವಿ, ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಮತ್ತಿತರ ಪ್ರಮುಖರು ಪಾಲ್ಗೊಳ್ಳಲಿದ್ದಾರೆ. ರಕ್ತದಾನ ಶಿಬಿರವು ತಾ. ೨೬ ರಂದು ಬೆಳಿಗ್ಗೆ ೧೦ ಗಂಟೆಯಿAದ ಮಧ್ಯಾಹ್ನ ೧ ಗಂಟೆಯವರೆಗೆ ನಡೆಯಲಿದೆ ಎಂದು ಜುನೈದ್ ತಿಳಿಸಿದರು.
ಗೋಷ್ಠಿಯಲ್ಲಿ ಎಸ್.ವೈ.ಎಸ್ ನೆಲ್ಲಿಹುದಿಕೇರಿ ಯೂನಿಟ್ ಅಧ್ಯಕ್ಷ ಎಂ. ರಫೀಕ್, ಸದಸ್ಯರಾದ ಕೆ.ಎಂ. ಮುಸ್ತಫ, ಸಾಂತ್ವನ ಕಾರ್ಯದರ್ಶಿ ಈ.ಹೆಚ್. ಮಹಮ್ಮದ್, ಸೋಮವಾರಪೇಟೆ ವಲಯ ಅಧ್ಯಕ್ಷ ಎಂ.ಎ. ರಶೀದ್ ಉಪಸ್ಥಿತರಿದ್ದರು.