ಕೂಡಿಗೆ, ಮೇ ೨೩: ಹಾರಂಗಿ ಅಣೆಕಟ್ಟೆಗೆ ಉನ್ನತ ಮಟ್ಟದ ಅಧಿಕಾರಿಗಳ ತಂಡ ಭೇಟಿ ನೀಡಿ ಸುರಕ್ಷತಾ ಕ್ರಮಗಳ ಕುರಿತು ಪರಿಶೀಲಿಸಿ ನೀರಾವರಿ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
ನೀರಾವರಿ ಇಲಾಖೆಯ ತಜ್ಞ ಪ್ರೊ. ಗೋಸಿನ್, ನೀರಾವರಿ ಇಲಾಖೆಯ ನಿವೃತ್ತ ಪ್ರಧಾನ ವ್ಯವಸ್ಥಾಪಕ ಶಂಕರ್ ಗೌಡ ಅವರುಗಳು ಹಾರಂಗಿ ಅಣೆಕಟ್ಟೆಗೆ ಭೇಟಿ ನೀಡಿ ಅಣೆಕಟ್ಟೆಯ ನಾಲ್ಕು ಮುಖ್ಯ ಕ್ರೆಸ್ಟ್ ಗೇಟ್ಗಳ ಪರಿಶೀಲನೆ, ಅದರ ಬಗ್ಗೆ ಸಮಗ್ರವಾದ ಮಾಹಿತಿಯನ್ನು ಪಡೆದುಕೊಂಡರು.
ವರ್ಷಂಪ್ರತಿಯ ಅಣೆಕಟ್ಟೆಯ ಬಾಗಿಲುಗಳ ನಿರ್ವಹಣೆ ಸಮರ್ಪಕವಾಗಿ ನಡೆಸಲಾಗುತ್ತಿದೆ. ಗುಣಮಟ್ಟದ ಹಗ್ಗಗಳ ಜೋಡಣೆ, ಗ್ಲಿಷ್ ಹಾಕುವಿಕೆ ಸೇರಿದಂತೆ ಅಣೆಕಟ್ಟೆಯ ಸಂರಕ್ಷಣೆ ಮತ್ತು ಸುರಕ್ಷತಾ ಕ್ರಮಗಳನ್ನು ಇಲಾಖೆಯ ವತಿಯಿಂದ ಈಗಾಗಲೇ ಕೈಗೊಳ್ಳಲಾಗಿದೆ ಎಂದು ಕಾರ್ಯಪಾಲಕ ಅಭಿಯಂತರ ಐ.ಕೆ. ಪುಟ್ಟಸ್ವಾಮಿ ಮಾಹಿತಿ ಒದಗಿಸಿದರು.
ಈ ಸಂದರ್ಭ ಕಾವೇರಿ ನೀರಾವರಿ ನಿಗಮದ ಅಧೀಕ್ಷಕ ಅಭಿಯಂತರ ಕೆ.ಕೆ. ರಘುಪತಿ, ಕಾರ್ಯಪಾಲಕ ಅಭಿಯಂತರ ಐ.ಕೆ. ಪುಟ್ಟಸ್ವಾಮಿ, ಸಹಾಯಕ ಇಂಜಿನಿಯರ್ ಸೌಮ್ಯ ರಾಜ್, ಡಿ.ಡಿ. ಕಿರಣ್ ಇದ್ದರು.