ಮಡಿಕೇರಿ, ಮೇ.೨೩: ಕಾಶ್ಮೀರದ ಪಹಲ್ಗಾಂನಲ್ಲಿ ಉಗ್ರರಿಂದ ನಡೆದ ದಾಳಿಯ ಬಳಿಕ ಉಗ್ರಗಾಮಿಗಳ ವಿರುದ್ಧ ಭಾರತ ನಡೆಸಿದ ಆಪರೇಶನ್ ಸಿಂಧೂರ್ ಕಾರ್ಯಾಚರಣೆ ಯಶಸ್ವಿಯಾದ ಹಿನ್ನೆಲೆಯಲ್ಲಿ ಕಾರ್ಯಾಚರಣೆಯಲ್ಲಿ ಶೌರ್ಯ ಮೆರೆದ ಸೈನಿಕರಿಗೆ ಗೌರವ ಸಲ್ಲಿಸುವ ಸಲುವಾಗಿ ಸಿಂಧೂರ್ ವಿಜಯೋತ್ಸವ ಸಮಿತಿ ವತಿಯಿಂದ ಏರ್ಪಡಿಸಲಾಗಿದ್ದ ವಿಜಯೋತ್ಸವ ಕಾರ್ಯಕ್ರಮ ಸುರಿಯುವ ಮಳೆಯ ನಡುವೆಯೂ ಯಶಸ್ವಿಯಾಯಿತು. ಮಳೆಯನ್ನೂ ಲೆಕ್ಕಿಸದೆ ಪುರುಷರು, ಮಹಿಳೆಯರು, ವಯಸ್ಕರು, ಯುವಕ-ಯುವತಿಯರು, ಮಾಜಿ ಸೈನಿಕರು, ವಿವಿಧ ಸಂಘಟನೆಗಳ ಪ್ರಮುಖರು ಮೆರವಣಿಗೆಯಲ್ಲಿ ಸಾಗಿ ಬಂದರು. ಜಿಲ್ಲೆಯ ವಿವಿಧೆಡೆಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿದ್ದ ದೇಶಭಕ್ತರು ವಿಜಯೋತ್ಸವದಲ್ಲಿ ಪಾಲ್ಗೊಂಡಿದ್ದರು.
ಬೃಹತ್ ಮೆರವಣಿಗೆ
ನಗರದ ಮಹದೇವಪೇಟೆ ಯಲ್ಲಿರುವ ಬನ್ನಿ ಮಂಟಪದ ಬಳಿ ಸಮಾವೇಶಗೊಂಡ ದೇಶಭಕ್ತರು ಅಲ್ಲಿಂದ ರಾಜಬೀದಿಯಲ್ಲಿ ಸಾಗಿದರು. ಮಾರುಕಟ್ಟೆ, ಇಂದಿರಾಗಾAಧಿ ವೃತ್ತ, ಸ್ಕಾ÷್ವ.ಲೀ.ಅಜ್ಜಮಾಡ ದೇವಯ್ಯ ವೃತ್ತ, ಮೇ. ಮಂಗೇರಿರ ಮುತ್ತಣ್ಣ ವೃತ್ತವನ್ನು ಹಾದು ಗಾಂಧಿ ಮೈದಾನದಲ್ಲಿ ಸಮಾವೇಶಗೊಂಡರು. ರಾಷ್ಟçಧ್ವಜ ದೊಂದಿಗೆ ಸಾಗಿದ ಮೆರವಣಿಗೆ ಯುದ್ದಕ್ಕೂ ಭಾರತ ದೇಶ, ದೇಶದ ವೀರ ಸೈನಿಕÀರಿಗೆ ಜಯಘೋಷ ಹಾಕಿದರೆ, ಉಗ್ರರು ಹಾಗೂ ಉಗ್ರರನ್ನು ಬೆಂಬಲಿಸುವವರ ವಿರುದ್ಧ ಧಿಕ್ಕಾರದ ಘೋಷಣೆಗಳು ಮೊಳಗಿದವು.
ಭಾರತಕ್ಕೆ ಹೆಮ್ಮೆ
ಮೆರವಣಿಗೆಯ ಬಳಿಕ ಗಾಂಧಿ ಮೈದಾನದಲ್ಲಿ ಬಹಿರಂಗ ಜನಜಾಗೃತಿ ಸಮಾವೇಶ ನಡೆಯಿತು. ಸಮಾವೇಶದಲ್ಲಿ ಪಾಲ್ಗೊಂಡಿದ್ದ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಕೊಟ್ಟುಕತ್ತೀರ ಸೋಮಣ್ಣ ಮಾತನಾಡಿ, ಪಹಲ್ಗಾಮ್ನಲ್ಲಿ ಧರ್ಮದ ಆಧಾರದಲ್ಲಿ ಅಮಾಯ ಕರನ್ನು ಹತ್ಯೆಗೈದು ಮಹಿಳೆಯರ ಸಿಂಧೂರ ಅಳಿಸಿದ ಪಾಕ್ ಪ್ರೇರಿತ ಉಗ್ರನೆಲೆಗಳನ್ನು ಹಾಗೂ ಪಾಕಿಸ್ತಾನದ ಸೇನಾನೆಲೆಗಳನ್ನು ಅವರ ದೆೆÃಶದೊಳಕ್ಕೆ ನುಗ್ಗಿ ಧ್ವಂಸಗೊಳಿಸುವ ಮೂಲಕ ಭಾರತವಿಂದು ವಿಶ್ವ ಸಮುದಾಯದ ಮುಂದೆ ತಲೆ ಎತ್ತಿ ನಿಂತಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದರು.
ಭಾರತ ದಿನದಿಂದ ದಿನಕ್ಕೆ ಅಭಿವೃದ್ಧಿಯ ಪಥದಲ್ಲಿ ಮುನ್ನಡೆ ಯುತ್ತಿದೆ. ತನ್ನ ಶಕ್ತಿ ಸಾಮರ್ಥ್ಯಗಳನ್ನು ಹೆಚ್ಚಿಸಿಕೊಳ್ಳುತ್ತಿರುವುದನ್ನು ಸಹಿಸದ ಪಾಕಿಸ್ತಾನ ೧೯೪೭-೪೮, ೧೯೬೫, ೧೯೭೧ರ ಯುದ್ಧ ಸೇರಿದಂತೆ ಕಾರ್ಗಿಲ್ ಯುದ್ಧಗಳಲ್ಲಿ ಭಾರತದೆದುರು ಹೀನಾಯ ಸೋಲನ್ನು ಕಂಡಿದೆ. ಆದರೂ ಪಾಠ ಕಲಿಯದ ಪಾಕಿಸ್ತಾನ ಕುತಂತ್ರಗಳಿAದ ಭಯೋತ್ಪಾದಕರಿಗೆ ಕುಮ್ಮಕ್ಕು ನೀಡಿ ಭಾರತದ ಅಖಂಡತೆಗೆÉ ಸವಾಲನ್ನು ಒಡ್ಡುವ ಮುಂಬೈ ದಾಳಿ, ಸಂಸತ್ತಿನ ಮೇಲಿನ ದಾಳಿಗಳನ್ನು ನಡೆಸಿತ್ತು. ಆದರೆ, ಇದೀಗ ಭಾರತ ಪಹಲ್ಗಾಮ್ ದಾಳಿಗೆ ಪ್ರತಿಯಾಗಿ ನಡೆಸಿರುವ ದಾಳಿ ಇವುಗಳಿಗೆಲ್ಲ ತಕ್ಕ ಪ್ರತ್ಯುತ್ತರ ನೀಡಿದೆ ಎಂದು ಹೇಳಿದರು.
ಪಾಕಿಸ್ತಾನದ ಭಯೋತ್ಪಾದಕ ನೆಲೆಗಳನ್ನಲ್ಲದೆ, ಆ ದೇಶದ ಸೇನಾನೆಲೆಗಳನ್ನು ಧ್ವಂಸ ಗೊಳಿಸಿರುವ ಭಾರತದತ್ತÀ ಹತ್ತು ಹಲವು ದೇಶಗಳು ಇಲ್ಲಿ ಅಭಿವೃದ್ಧಿ ಪಡಿಸಿರುವ ಶಸ್ತಾçಸ್ತçಗಳನ್ನು ಪಡೆಯಲು ಮುಂದಾಗಿರುವ ಬೆಳವಣಿಗೆಯೂ ನಡೆದಿದೆ. ಇದು ಭಾರತದ ನಿಜ ಸಾಮರ್ಥ್ಯವೆಂದು ಸಂತಸ ವ್ಯಕ್ತಪಡಿಸಿದರು.
ಪಾಕ್ಗೆ ತಕ್ಕ ಪಾಠ
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಸಂಸದ ಯದುವೀರ್ ಒಡೆಯರ್ ಮಾತನಾಡಿ, ಭಯೋತ್ಪಾದಕರಿಗೆ ಕುಮ್ಮಕ್ಕು ನೀಡಿ ಭಾರತದಲ್ಲಿ ದುಷ್ಕೃತ್ಯವೆಸಗುತ್ತಿದ್ದ ಪಾಕಿಸ್ತಾನಕ್ಕೆ ಭಾರತೀಯ ಸೇನೆ ಆಪರೇಷನ್ ಸಿಂಧೂರ್ ಮೂಲಕ ತಕ್ಕ ಪಾಠ ಕಲಿಸಿದೆ. ಆದರೂ ಪಾಕ್ನ ಮನಸ್ಥಿತಿ ಮಾತ್ರ 'ನಾಯಿ ಬಾಲ ಡೊಂಕು' ಎಂಬAತೆ ಹಾಗಯೇ ಇದೆ ಎಂದು ಕಟುವಾಗಿ ನುಡಿದರು. ದೇಶದ ಗಡಿಯನ್ನು ಸಮರ್ಥವಾಗಿ ಕಾಯುವ ಸೇನಾಪಡೆಗಳಿಂದ ನಾವು ನೆಮ್ಮದಿಯಿಂದ ಇದ್ದೇವೆ. ಯೋಧರನ್ನು ಗೌರವಿಸುವ ಮತ್ತು ಬೆಂಬಲಿಸುವುದು ನಮ್ಮೆಲ್ಲರ ಜವಾಬ್ದಾರಿ ಹಾಗೂ ಕರ್ತವ್ಯವಾಗಿದೆ ಎಂದು ಪ್ರತಿಪಾದಿಸಿದರು.
ಪಾಕ್ ಹೇಡಿ ದೇಶ
ಮುಖ್ಯ ಭಾಷಣಕಾರರಾಗಿ ಪಾಲ್ಗೊಂಡಿದ್ದ ಬೆಂಗಳೂರಿನ ವಾಗ್ಮಿ, ಅಂಕಣಕಾರ (ಮೊದಲ ಪುಟದಿಂದ) ವಿಶ್ವ ಮೋಹನ್ ಮಾತನಾಡಿ, ಪಾಕಿಸ್ತಾನ ಹೇಡಿ ದೇಶ, ನೇರವಾಗಿ ಯುದ್ಧಕ್ಕಿಳಿದು ಎದುರಿಸಲು ಸಾಧ್ಯವಾಗದೆ, ತನ್ನೊಳಗೆ ಭಯೋತ್ಪಾದಕರನ್ನು ಪೋಷಿಸಿಕೊಂಡು ಭಾರತದಲ್ಲಿ ದುಷ್ಕೃತ್ಯಗಳನ್ನು ನಿರಂತರವಾಗಿ ನಡೆಸಲು ಮುಂದಾಗುತ್ತಿರುವ ದೇಶ. ಅಂತಹ ದೇಶಕ್ಕೆ ಆಪರೇಷನ್ ಸಿಂಧೂರ್ ಮೂಲಕ ಸ್ಪಷ್ಟ ಸಂದೇಶ ರವಾನಿಸಲಾಗಿದೆ ಎಂದು ಹೇಳಿದರು.
ಆರ್ಥಿಕವಾಗಿ ಕುಸಿದು, ತಿನ್ನಲು ಆಹಾರವಿಲ್ಲದೆ ಕಂಗಾಲಾಗಿರುವ ಪಾಕಿಸ್ತಾನಿಗರ ರಕ್ತದ ಡಿಎನ್ಎಯಲ್ಲೇ ಭಯೋತ್ಪಾದನೆ ಎಂಬದು ಸೇರಿ ಹೋಗಿದೆ. ಇದಕ್ಕೆ ಪಾಕಿಸ್ತಾನದ ರೋಗಗ್ರಸ್ಥ ಮನಸ್ಥಿತಿಯೇ ಕಾರಣ. ಭಯೋತ್ಪಾದಕ ದೇಶ ಪಾಕಿಸ್ತಾನದ ಮೇಲಿನ ಕಾರ್ಯಾಚರಣೆಯ ಸಂಪೂರ್ಣ ಗೌರವ ಭಾರತೀಯ ಸೈನಿಕರಿಗೆ ಸಲ್ಲಬೇಕಿದೆ. ಕೇಂದ್ರದ 'ಆತ್ಮನಿರ್ಭರ ಭಾರತ'ದ ಪರಿಕಲ್ಪನೆಯಂತೆ ಭಾರತವು ತನ್ನ ಸ್ವಸಾಮರ್ಥ್ಯದಿಂದ ನಿರ್ಮಿಸಿರುವ ಶಸ್ತಾçಸ್ತçಗಳಿಂದ ಇಂದು ಪಾಕಿಸ್ತಾನದ ಸೇನಾ ನೆಲೆಗಳನ್ನು ಧ್ವÀಂಸಗೊಳಿಸಿದೆ. ಇದು ಹೆಮ್ಮೆಪಡಬೇಕಾದ ವಿಷಯವೆಂದು ಹೇಳಿದರು.
ವೇದಿಕೆಯಲ್ಲಿ ಸಿಂಧೂರ್ ವಿಜಯೋತ್ಸವ ಸಮಿತಿ ಸಂಚಾಲಕ ಕೆ.ಕೆ. ದಿನೇಶ್ ಕುಮಾರ್, ರಾಷ್ಟಿçÃಯ ಸ್ವಯಂ ಸೇವಕ ಸಂಘದ ಸರ ಸಂಘಚಾಲಕ್ ಚೆಕ್ಕೇರ ಮನು ಕಾವೇರಪ್ಪ ಮೊದಲಾದವರಿದ್ದರು. ಮಹೇಶ್ ಕುಶಾಲನಗರ ಅವರು ದೇಶ ಭಕ್ತಿಗೀತೆ ಹಾಡಿದರು. ಆಗೋಳಿಕಜೆ ಧನಂಜಯ ಕಾರ್ಯಕ್ರಮ ನಿರೂಪಿಸಿದರೆ, ವಿಜಯೋತ್ಸವ ಸಮಿತಿ ಸದಸ್ಯ ಕುಕ್ಕೇರ ಅಜಿತ್ ವಂದಿಸಿದರು.ವಿಜಯೋತ್ಸವ ಮೆರವಣಿಗೆಯಲ್ಲಿ ತಿರಂಗ ಯಾತ್ರೆಯೊಂದಿಗೆ ರಾಷ್ಟçಧ್ವಜಗಳು ರಾರಾಜಿಸಿದವು. ಇದರೊಂದಿಗೆ ೩೦೦ಅಡಿ ಉದ್ದದ ತ್ರಿವರ್ಣ ಧ್ವಜವು ಗಮನ ಸೆಳೆಯಿತು. ನೂರಾರು ಮಂದಿ ಮಳೆಯ ನಡುವೆ ಧ್ವಜವನ್ನು ಹೊತ್ತು ಸಾಗಿದರು.