ಮಡಿಕೇರಿ, ಮೇ ೨೩: ಕೊಡವ ಭಾಷಿಕ ಸಮುದಾಯಗಳ ಕೂಟದ ವತಿಯಿಂದ ತಾ. ೨೬, ೨೭, ೨೮ರಂದು ಮೂರ್ನಾಡಿನಲ್ಲಿ ನಡೆಸಲು ತೀರ್ಮಾನಿಸಿದ್ದ ೨೧ ಕೊಡವ ಭಾಷಿಕ ಜನಾಂಗತ್ರ ಒತ್ತೋರ್ಮೆರ ಆದ್ಯ ಕಳಿನಮ್ಮೆ - ೨೦೨೫ನ್ನು ಮಳೆಯ ಕಾರಣ ಮುಂದೂಡಲಾಗಿದೆ ಎಂದು ಕೂಟದ ಕಾರ್ಯದರ್ಶಿ ಕೂಡಂಡ ಸಾಬ ಸುಬ್ರಮಣಿ ತಿಳಿಸಿದ್ದಾರೆ.
ಇಂದು ಮೂರ್ನಾಡಿನಲ್ಲಿ ಕೂಟದ ಅಧ್ಯಕ್ಷ ಡಾ. ಮೇಚೀರ ಸುಭಾಷ್ ನಾಣಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ತುರ್ತು ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದ್ದು, ಮುಂದೂಡಿದ ಕಳಿ ನಮ್ಮೆಯನ್ನು ಅಕ್ಟೋಬರ್ ತಿಂಗಳಿನಲ್ಲಿ ನಡೆಸುವಂತೆ ತೀರ್ಮನಿಸಲಾಯಿತು ಎಂದು ಸಾಬ ಸುಬ್ರಮಣಿ ಮಾಹಿತಿ ನೀಡಿದ್ದಾರೆ.