ಮಡಿಕೇರಿ, ಮೇ ೨೨: ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ‘ಮನೆಯಂಗಳ ದಲ್ಲಿ ಹಿರಿಯ ಪತ್ರಕರ್ತರಿಗೆ ಮನದುಂಬಿದ ನಮನ’ ಕಾರ್ಯಕ್ರಮದಡಿ ಮೂವರು ಹಿರಿಯ ಪತ್ರಕರ್ತರನ್ನು ಗುರುತಿಸಿ ಸನ್ಮಾನಿಸಲಾಯಿತು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ನಿರ್ದೇಶನ ದಂತೆ ಹಿರಿಯ ಪತ್ರಕರ್ತ ವಿ.ಪಿ. ಸುರೇಶ್ ಹಿರಿಯ ಪತ್ರಿಕೋದ್ಯಮಿ, ‘ಶಕ್ತಿ’ ಪ್ರಧಾನ ಸಂಪಾದಕರಾದ ಜಿ. ರಾಜೇಂದ್ರ ಹಾಗೂ ಇನ್ನೋರ್ವ ಹಿರಿಯ ಪತ್ರಕರ್ತ ಬೈ.ಶ್ರೀ ಪ್ರಕಾಶ್ ಅವರನ್ನು ಸನ್ಮಾನಿಸಲಾಯಿತು.

ಸುಮಾರು ೫೦ ವರ್ಷಗಳಿಗೂ ಹೆಚ್ಚು ಕಾಲ ಸ್ಥಳೀಯ ಪತ್ರಿಕೆಗಳ ವರದಿಗಾರರಾಗಿ, `ಪರಾಕ್ರಮ’ ಸಂಜೆ ದೈನಿಕದ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದ ವಿ.ಪಿ. ಸುರೇಶ್ ಅವರು ಸನ್ಮಾನಕ್ಕೂ ಮುನ್ನ ಪತ್ರಿಕೋದ್ಯಮದ ತಮ್ಮ ಅನುಭವಗಳು ಹಾಗೂ ಏಳುಬೀಳುಗಳನ್ನು ಹಂಚಿಕೊAಡರು.

`ಶಕ್ತಿ’ ಪ್ರಧಾನ ಸಂಪಾದಕರಾದ ಜಿ ರಾಜೇಂದ್ರ, ತಮ್ಮ ತಂದೆಯಿAದ ಬಳುವಳಿಯಾಗಿ ಬಂದ ಪತ್ರಿಕೋದ್ಯಮದಲ್ಲಿ ಕಳೆದ ೬೦ಕ್ಕೂ ಹೆಚ್ಚು ವರ್ಷ ಪತ್ರಿಕೆಯನ್ನು ಮುನ್ನಡೆಸಿದ ಅನುಭವವನ್ನು ಹಂಚಿ ಕೊಂಡರು. ಪತ್ರಕರ್ತನಾದವನು ಕಾರ್ಯತತ್ಪರತೆ, ಸಾಮಾಜಿಕ ಕಾಳಜಿ, ಬದ್ಧತೆಯಿಂದ ಕೆಲಸ ಮಾಡ ಬೇಕೆಂದು ಕಿವಿಮಾತು ಹೇಳಿದರು.

ಅನೇಕ ಪತ್ರಿಕೆಗಳಲ್ಲಿ ವರದಿಗಾರರಾಗಿದ್ದ ಬೈ.ಶ್ರೀ. ಪ್ರಕಾಶ್, ಮುದ್ರಣ ಯಂತ್ರ ಪರಿಚಯವಾಗುವುದಕ್ಕೂ ಮುನ್ನ, ಅಚ್ಚುಮೊಳೆಯ ಕಾಲಘಟ್ಟದಲ್ಲಿ ಹÀರಸಾಹಸದಿಂದ ಪತ್ರಿಕೆಗಳನ್ನು ಹೊರತರುತ್ತಿದ್ದ ಬಗ್ಗೆ ವಿವರಿಸಿದರು. ಹಿಂದಿಗಿAತÀ ಇಂದು ವರದಿಗಾರಿಕೆ ಸುಲಭವಾಗಿದ್ದರೂ, ಎಲ್ಲವನ್ನೂ ಪರಾಂಬರಿಸಿ ಸುದ್ದಿ ಮಾಡಬೇಕಾದ ಪ್ರಮೇಯವಿದೆ. ತಪ್ಪಿದರೆ ಕಾನೂನಿನ ತೊಡಕು ಎದರುರಾಗಬಹುದು ಎಂದು ಅವರು ಹೇಳಿದರು.

ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷೆ ಬಿ.ಆರ್. ಸವಿತಾ ರೈ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಅನು ಕಾರ್ಯಪ್ಪ, ಉಪಾಧ್ಯಕ್ಷ ಸುವರ್ಣ ಮಂಜು, ಖಜಾಂಚಿ ಆನಂದ್ ಕೊಡಗು, ಕಾರ್ಯದರ್ಶಿ ಜಿ.ಪ್ರೇಮ್ ಕುಮಾರ್, ರಾಷ್ಟಿçÃಯ ಸಮಿತಿ ಸದಸ್ಯ ಸುನಿಲ್ ಪೊನ್ನೇಟಿ, ಕಾರ್ಯಕ್ರಮದ ಸಂಚಾಲಕರುಗಳಾದ ವಿಷ್ಮಾ ಪೆಮ್ಮಯ್ಯ, ಬೊಳ್ಳಜಿರ ಅಯ್ಯಪ್ಪ, ನಿರ್ದೇಶಕರಾದ ನÀವೀನ್ ಸುವರ್ಣ, ಸ್ಟಾö್ಯನ್ಲಿ ಡೇವಿಡ್, ಮಲ್ಲಿಕಾರ್ಜುನ್, ಪ್ರಭುದೇವ್, ರಿಜ್ವಾನ್ ಹುಸೇನ್, ಸದಸ್ಯ ಸಂತೋಷ್ ರೈ, ವಿನೋದ್, ಶಕ್ತಿ ಸಂಪಾದಕ ಜಿ. ಚಿದ್ವಿಲಾಸ್, ಅಬ್ದುಲ್ ಕಲಾಂ ಬಡಾವಣೆ ಅಭಿವೃದ್ಧಿ ಸಮಿತಿ ಪ್ರಧಾನ ಕಾರ್ಯದರ್ಶಿ ಕೌಸರ್, ಮತ್ತಿತರರು ಹಾಜರಿದ್ದರು.