ಸೋಮವಾರಪೇಟೆ, ಮೇ ೨೨: ಇಲ್ಲಿನ ಡಾಲ್ಫೀನ್ಸ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಕಳೆದ ಒಂದು ತಿಂಗಳಿನಿAದ ಸ್ಥಳೀಯ ಸಿಂಥೆಟಿಕ್ ಟರ್ಫ್ ಮೈದಾನದಲ್ಲಿ ಆಯೋಜನೆ ಗೊಂಡಿದ್ದ ಬೇಸಿಗೆ ಹಾಕಿ ತರಬೇತಿ ಶಿಬಿರದ ಸಮಾರೋಪಗೊಂಡಿತು.

ಶಿಬಿರದಲ್ಲಿ ೬೦ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿ, ಹಾಕಿ ಕ್ರೀಡೆಯ ಬಗ್ಗೆ ತರಬೇತಿ ಪಡೆದರು. ಅಂತರಾಷ್ಟಿçÃಯ ಹಾಕಿ ಆಟಗಾರರಾದ ಎಸ್.ವಿ. ಸುನಿಲ್, ಆಭರಣ್ ಸುದೇವ್, ತರಬೇತುದಾರ ಜನಾರ್ದನ್ ಸೇರಿದಂತೆ ಹಿರಿಯ ಆಟಗಾರರು ಶಿಬಿರಕ್ಕೆ ಆಗಮಿಸಿ, ಮಕ್ಕಳಿಗೆ ಹಾಕಿ ಕ್ರೀಡೆಯ ಬಗ್ಗೆ ಮಾಹಿತಿ ಹಾಗೂ ತರಬೇತಿ ನೀಡಿದರು.

ಸಮಾರೋಪ ಸಮಾರಂಭದಲ್ಲಿ ಹಿರಿಯ ಹಾಕಿ ಆಟಗಾರ ಸಿ.ಎಲ್. ಸುಬ್ಬಯ್ಯ ಮಾಸ್ಟರ್, ಉದ್ಯಮಿ ಬಿ.ಆರ್. ವೇಣು, ಮಾಜಿ ಸೈನಿಕರಾದ ಎಂ.ಈ. ಮಹೇಶ್, ಬಿ.ಎಲ್ ಮಂಜುನಾಥ್ ಅವರುಗಳನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ಲಬ್‌ನ ಅಧ್ಯಕ್ಷ ಮಹೇಶ್ ವಹಿಸಿದ್ದರು. ಹಿರಿಯ ಹಾಕಿ ಆಟಗಾರ ಬಿ.ಎಂ. ಸುರೇಶ್, ಲಕ್ಷಿö್ಮÃಕಾಂತ್, ಬಿ.ಕೆ. ಹಾಲಪ್ಪ, ಭಾರತ ಹಾಕಿ ತಂಡದ ಆಟಗಾರ ಆಭರಣ್ ಸುದೇವ್, ಕ್ಲಬ್‌ನ ಮಾಜಿ ಅಧ್ಯಕ್ಷ ಹೆಚ್.ಎನ್. ಅಶೋಕ್, ಉಪಾಧ್ಯಕ್ಷ ಎಸ್.ಕೆ. ವಿನಿ, ಖಜಾಂಚಿ ಕೆ.ಜೆ. ಗಿರೀಶ್, ಬಿ.ಆರ್. ಮಹೇಶ್ ಸೇರಿದಂತೆ ಇತರರು ಇದ್ದರು. ಮಾಯಾ ಗಿರೀಶ್ ಕಾರ್ಯಕ್ರಮ ನಿರ್ವಹಿಸಿದರು. ಶಿಬಿರದಲ್ಲಿ ಭಾಗಿಯಾಗಿದ್ದ ಮಕ್ಕಳಿಗೆ ಜರ್ಸಿ ವಿತರಿಸಲಾಯಿತು.