ಕರಿಕೆ, ಮೇ ೨೨: ಇಲ್ಲಿಗೆ ಸಮೀಪದ ಚೆತ್ತುಕಾಯ ಪಚ್ಚೆಪಿಲಾವು ಎಂಬಲ್ಲಿ ಕಾಡಾನೆ ಲಗ್ಗೆಯಿಟ್ಟು ಅಪಾರ ಪ್ರಮಾಣದ ಬೆಳೆ ನಾಶ ಮಾಡಿರುವ ಘಟನೆ ನಡೆದಿದೆ. ಕಟ್ಟಕೋಡಿ ರಾಘವ ಎಂಬವರ ತೋಟಕ್ಕೆ ತಡರಾತ್ರಿ ಬಂದ ಒಂಟಿ ಆನೆ ತೆಂಗು, ಅಡಿಕೆ ಬೆಳೆ ಹಾಗೂ ತೋಟಕ್ಕೆ ಅಳವಡಿಸಿರುವ ನೀರಿನ ಪೈಪ್‌ಗೆ ಹಾನಿ ಮಾಡಿದ್ದು, ಸಾವಿರಾರು ರೂಪಾಯಿ ನಷ್ಟ ಉಂಟಾಗಿದೆ.