ಕುಶಾಲನಗರ, ಮೇ ೨೨ : ಕುಶಾಲನಗರ ಪಟ್ಟಣದ ಬೈಚನಹಳ್ಳಿ ಗ್ರಾಮದ ಸ್ಮಶಾನ ಗೊಂದಲ ಸಮರ್ಪಕವಾಗಿ ಬಗೆಹರಿಯದ ಕಾರಣ ಗೆಳೆಯರ ಬಳಗದ ನೇತೃತ್ವದಲ್ಲಿ ಗ್ರಾಮಸ್ಥರು ಸ್ಮಶಾನದಲ್ಲಿ ಗುರುವಾರದಿಂದ ಅನಿರ್ದಿಷ್ಟಾವಧಿ ಹೋರಾಟ ಆರಂಭಿಸಿದ್ದಾರೆ.
ಶವಸAಸ್ಕಾರಕ್ಕೆ ಜಾಗ ಒದಗಿಸಬೇಕು ಹಾಗೂ ಈ ಭಾಗದಲ್ಲಿ ಅತಿಕ್ರಮಿಸಿಕೊಂಡಿರುವ ಗೋಮಾಳ ಜಾಗವನ್ನು ಸಂರಕ್ಷಿಸುವAತೆ ಒತ್ತಾಯಿಸಿ ಗ್ರಾಮಸ್ಥರು ಘೋಷಣೆ ಕೂಗಿ, ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಆಗಮಿಸಿ ಸಮಸ್ಯೆ ಇತ್ಯರ್ಥಗೊಳಿಸಿವವರೆಗೆ ಧರಣಿ ಹಿಂಪಡೆಯುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.
ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಗ್ರಾಮದ ಮುಖಂಡ ಕೆ.ಎನ್. ಅಶೋಕ್ ಹಾಗೂ ಬಿಎಸ್. ಶಿವಕುಮಾರ್, ಗ್ರಾಮದ ಸರ್ವೆ ನಂ ೨/೧ ರಲ್ಲಿ ಗೋಮಾಳ ಪೈಸಾರಿಗೆ ಸೇರಿದ ಒಂದು ಭಾಗದಲ್ಲಿ ಕಳೆದ ೪ ದಶಕಗಳಿಂದ ಈ ಭಾಗದ ಗ್ರಾಮಸ್ಥರು ಶವಸಂಸ್ಕಾರ ನೆರವೇರಿಸಿಕೊಂಡು ಬರುತ್ತಿದ್ದರು. ಎಲ್ಲಾ ಧರ್ಮೀಯರು ಕೂಡ ಈ ಜಾಗ ಬಳಸುತ್ತಿದ್ದರು. ಆದರೆ ಇದೀಗ ಒಂದು ಧರ್ಮಕ್ಕೆ ಜಾಗ ಮೀಸಲು ಮಾಡಿ ದಾಖಲೆ ಸಿದ್ದಪಡಿಸಲಾಗಿದೆ. ಇದರ ವಿರುದ್ಧ ಈ ಹಿಂದೆ ಪ್ರತಿಭಟನೆ ನಡೆಸಲಾಗಿತ್ತು.
ಹಿಂದೂ ರುದ್ರಭೂಮಿಗೆ ಜಾಗ ಒದಗಿಸಬೇಕೆಂಬ ಆಗ್ರಹದಂತೆ ತಾಲೂಕು ಆಡಳಿತ ಪಕ್ಕದಲ್ಲೇ ಜಾಗವೊಂದನ್ನು ಗುರುತಿಸಿದ್ದು ಇದಕ್ಕೆ ಸ್ಥಳೀಯ ನಿವಾಸಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆದ್ದರಿಂದ ಗ್ರಾಮಸ್ಥರಿಗೆ ಉಂಟಾಗಿರುವ ಸಮಸ್ಯೆ ಸರಿಪಡಿಸಬೇಕು. ಈ ಭಾಗದಲ್ಲಿ ಅತಿಕ್ರಮಣವಾಗಿರುವ ೯.೩೮ ಎಕರೆ ಗೋಮಾಳ ಜಾಗದ ಸರ್ವೆ ನಡೆಸಿ ಅತಿಕ್ರಮಣವಾಗಿರುವ ಜಾಗದಲ್ಲಿ ನಿರ್ಮಾಣಗೊಂಡಿರುವ ಕಟ್ಟಡಗಳನ್ನು ತೆರವುಗೊಳಿಸಿ ಸಂರಕ್ಷಿಸಬೇಕಿದೆ ಎಂದು ಆಗ್ರಹಿಸಿದರು.
ಗೆಳೆಯರ ಬಳಗದ ಪ್ರಮುಖ, ಪುರಸಭೆ ಸದಸ್ಯ ಬಿ.ಎಲ್. ಜಗದೀಶ್ ಮಾತನಾಡಿ, ಸ್ಥಳೀಯ ವ್ಯಾಪ್ತಿಯ ನಾಗರಿಕರಿಗೆ ಹಿಂದೂ ರುದ್ರಭೂಮಿಯ ಅಗತ್ಯವಿದೆ. ಸ್ಮಶಾನಕ್ಕೆ ಜಾಗ ಒದಗಿಸಿಕೊಡುವ ಅಧಿಕಾರಿಗಳ ಭರವಸೆ ಇದುವರೆಗೆ ಈಡೇರಿಲ್ಲ. ಈ ಭಾಗದಲ್ಲಿ ಅತಿಕ್ರಮಣಗೊಂಡಿರುವ ಗೋಮಾಳ ಜಾಗ ತೆರವುಗೊಳಿಸುವಂತೆ ನ್ಯಾಯಾಲಯದ ಆದೇಶವಿದ್ದರೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಎರಡು ಎಕರೆ ಸ್ಮಶಾನಕ್ಕೆ ಜಾಗ ಒದಗಿಸಬೇಕು. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ನಮಗೆ ಶಾಶ್ವತ ಪರಿಹಾರ ಒದಗಿಸಬೇಕು ಎಂದರು.
ಪ್ರತಿಭಟನೆಯಲ್ಲಿ ಗೆಳೆಯರ ಬಳಗದ ಅಧ್ಯಕ್ಷ ಶ್ರೀಕಾಂತ್ ಡಿ, ಪದಾಧಿಕಾರಿಗಳಾದ ಮಣಿಕಂಠ, ಉಮೇಶ್, ಪೃಥ್ವಿ, ರವೀಂದ್ರ, ಗಿರೀಶ್, ಪುಟ್ಟ, ಮಂಜುನಾಥ್, ಕೆ.ಕೆ. ಶ್ರೀಕಾಂತ್, ಗ್ರಾಮದ ಪ್ರಮುಖರಾದ ಗೋವಿಂದ, ಗೌರಮ್ಮ, ರಾಣಿ, ಮಣಿಯಮ್ಮ, ಕಮಲಮ್ಮ ಸೇರಿದಂತೆ ಗ್ರಾಮಸ್ಥರು ಇದ್ದರು.