ಶನಿವಾರಸಂತೆ, ಮೇ ೨೨: ಸಮೀಪದ ಕೊಡ್ಲಿಪೇಟೆಯ ಶ್ರೀ ರಾಮಲಿಂಗ ಚೌಡೇಶ್ವರಿ ದೇವಸ್ಥಾನದ ವಾರ್ಷಿಕೋತ್ಸವ ಆರಾಧನೆ ಶ್ರದ್ಧಾಭಕ್ತಿಯಿಂದ ಜರುಗಿತು.
ಬೆಳಿಗ್ಗೆ ದೇವಿಗೆ ಮಹಾಭಿಷೇಕ, ಮಹಿಳೆಯರಿಂದ ಲಲಿತ ಸಹಸ್ರನಾಮ ಪಾರಾಯಣದ ಸಾಮೂಹಿಕ ಕುಂಕುಮಾರ್ಚನೆ, ಪಂಚದುರ್ಗಾ ಹೋಮ ನೆರವೇರಿತು. ನಂತರ ಮಂಗಳವಾದ್ಯದೊAದಿಗೆ ಮಹಾದೇವಿಯ ಪ್ರಾಂಗಣೋತ್ಸವ ನಡೆದು ಮಹಾಮಂಗಳಾರತಿಯಾಗಿ ತೀರ್ಥ - ಪ್ರಸಾದ ವಿನಿಯೋಗವಾಯಿತು. ಮಧ್ಯಾಹ್ನ ಪಾಲ್ಗೊಂಡಿದ್ದ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಸಂಜೆ ರಂಗಪೂಜೆ ನಡೆದು ತೀರ್ಥ-ಪ್ರಸಾದ ವಿನಿಯೋಗವಾಯಿತು.
ಪೂಜಾ ಕೈಂಕರ್ಯದ ನೇತೃತ್ವವನ್ನು ಪುರೋಹಿತರಾದ ಮಹಾಬಲೇಶ್ವರ ಜೋಷಿ ವಹಿಸಿದ್ದರು. ಶ್ರೀ ರಾಮಲಿಂಗ ಚೌಡೇಶ್ವರಿ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷರು, ಸದಸ್ಯರು, ಚೌಡೇಶ್ವರಿ ಮಹಿಳಾ ಬಳಗ ಹಾಗೂ ದೇವಾಂಗ ಸಮುದಾಯದ ಭಕ್ತಾದಿಗಳು ಪೂಜಾ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು.