ಮಡಿಕೇರಿ: ಶಿವಮೊಗ್ಗದಲ್ಲಿ ನಡೆದ ೨೦೨೫-೨೬ನೇ ಸಾಲಿನ ರಾಜ್ಯ ಸರ್ಕಾರಿ ನೌಕರರ ರಾಜ್ಯಮಟ್ಟದ ಸಾಂಸ್ಕೃತಿಕ ಸ್ಪರ್ಧೆಗಳ ಭರತನಾಟ್ಯ, ಕೂಚುಪುಡಿ ಮತ್ತು ಒಡಿಸ್ಸಿ ವಿಭಾಗದಲ್ಲಿ ಮಿಲನ ಕೆ. ಭರತ್ ಪ್ರಶಸ್ತಿ ಪಡೆದು ರಾಷ್ಟçಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಕೊಡಗು ಜಿಲ್ಲೆಯ ಮೀನುಗಾರಿಕೆ ಇಲಾಖೆಯಲ್ಲಿ ಸಹಾಯಕ ನಿರ್ದೇಶಕಿಯಾಗಿರುವ ಮಿಲನ ಗುರು ವಿದ್ವಾನ್ ರಾಜೇಶ್ ಆಚಾರ್ಯ ಅವರ ಮಾರ್ಗದರ್ಶನದಲ್ಲಿ ನೃತ್ಯ ಪ್ರದರ್ಶಿಸಿದ್ದು, ವಿದುಷಿ ಕಾವ್ಯಶ್ರೀ ಕಪಿಲ್ ನೃತ್ಯದ ವಸ್ತç ವಿನ್ಯಾಸ ಮಾಡಿದ್ದರು.

ಈಜು ಸ್ಪರ್ಧೆಯಲ್ಲಿ ಪ್ರಥಮ

ಮಡಿಕೇರಿ: ಸರ್ಕಾರಿ ನೌಕರರ ಕ್ರೀಡಾಕೂಟದಲ್ಲಿ ಮಡಿಕೇರಿ ತಾಲೂಕು ಪಂಚಾಯಿತಿಯ ಹುಸೇನ್ ಮುಲ್ಲಾ ೫೦ ಮೀಟರ್ ಬ್ಯಾಕ್ ಸ್ಟೊçÃಕ್ ಈಜು ಸ್ಪರ್ಧೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದು ರಾಷ್ಟçಮಟ್ಟಕ್ಕೆ ಆಯ್ಕೆ ಯಾಗಿದ್ದಾರೆ.

೪x೧೦೦ ಈಜು ರಿಲೇ ಸ್ಪರ್ಧೆಯಲ್ಲಿ ಮೂರನೇ ಸ್ಥಾನವನ್ನು ಮುಡಿಗೇರಿಸಿಕೊಂಡಿದ್ದಾರೆ.

ಫ್ರೀ ಸ್ಟೆöÊಲ್‌ನಲ್ಲಿ ಪ್ರಥಮ

ಮಡಿಕೇರಿ: ಕಂದಾಯ ಇಲಾಖೆಯ ಗ್ರಾಮ ಆಡಳಿತ ಅಧಿಕಾರಿ ಹರೀಶ್ ಕುಮಾರ್ ೫೦ ಮೀಟರ್ ಫ್ರೀ ಸ್ಟೆöÊಲ್ ಸ್ಪರ್ಧೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದು ರಾಷ್ಟçಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ೧೦೦ ಮೀಟರ್ ಫ್ರೀ ಸ್ಟೆöÊಲ್‌ನಲ್ಲಿ ಮೂರನೇ ಸ್ಥಾನ ೪x೧೦೦ ಈಜು ರಿಲೇ ಸ್ಪರ್ಧೆಯಲ್ಲಿ ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ.

ರಿಲೆಯಲ್ಲಿ ತೃತೀಯ