ಸೋಮವಾರಪೇಟೆ, ಮೇ ೨೨: ಕ್ಷೇತ್ರದಲ್ಲಿ ಕಳಪೆ ಕಾಮಗಾರಿಗೆ ಯಾವುದೇ ಕಾರಣಕ್ಕೂ ಆಸ್ಪದ ನೀಡುವುದಿಲ್ಲ ಎಂದು ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಅವರು, ಅಭಿಯಂತರರಿಗೆ ಖಡಕ್ ಎಚ್ಚರಿಕೆ ನೀಡಿದರು.

ಪ್ರಧಾನಮಂತ್ರಿ ಗ್ರಾಮ ಸಡಕ್ ಮೂಲಕ ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿ ಕಳೆದ ೨೦೧೭ರಲ್ಲಿ ಆರಂಭಗೊAಡು ೨೦೨೦ಕ್ಕೆ ಪೂರ್ಣಗೊಂಡಿರುವ ರಸ್ತೆಗೆ ಇದೀಗ ಮರು ಡಾಂಬರು ಹಾಕಲಾಗುತ್ತಿದ್ದು, ಈ ಕಾಮಗಾರಿ ಕಳಪೆಯಾಗಿರುವ ಬಗ್ಗೆ ಕೇಳಿಬಂದ ದೂರುಗಳ ಹಿನ್ನೆಲೆ ಇಂದು ಸ್ಥಳ ಪರಿಶೀಲನೆ ನಡೆಸಿದ ಶಾಸಕ ಮಂತರ್ ಗೌಡ ಅವರು, ಸಂಬAಧಿಸಿದ ಇಲಾಖಾ ಅಭಿಯಂತರ ಪ್ರಭು ಅವರಿಗೆ ಈ ಬಗ್ಗೆ ಖಡಕ್ಕಾಗಿ ಸೂಚನೆ ನೀಡಿದರು.

ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯನ್ವಯ ಕಾಮಗಾರಿ ಪೂರ್ಣಗೊಂಡು ೫ ವರ್ಷಗಳ ನಂತರ ಮರು ಡಾಂಬರೀಕರಣ ಮಾಡಿ, ನಂತರ ಜಿಲ್ಲಾ ಪಂಚಾಯಿತಿಗೆ ವಹಿಸಬೇಕಿದೆ. ಮರು ಡಾಂಬರೀಕರಣದ ನಂತರವಷ್ಟೇ ಉಳಿಕೆ ಮೊತ್ತ ಗುತ್ತಿಗೆದಾರನಿಗೆ ಸಂದಾಯವಾಗುವ ಹಿನ್ನೆಲೆ, ತರಾತುರಿಯಲ್ಲಿ ಮೊನ್ನೆ ದಿನ ಡಾಂಬರು ಹಾಕಲಾಗಿದೆ. ಡಾಂಬರು ಹಾಕಿ ಎರಡೇ ದಿನದಲ್ಲಿ ರಸ್ತೆ ಕಿತ್ತು ಬರುತ್ತಿದ್ದು, ಕಳಪೆ ಕಾಮಗಾರಿ ನಡೆದಿದೆ ಎಂದು ಸ್ಥಳೀಯರು ಆರೋಪಿಸಿದ ಹಿನ್ನೆಲೆ, ಇಂದು ಶಾಸಕ ಮಂತರ್ ಗೌಡ ಅವರು ಸ್ಥಳ ಪರಿಶೀಲನೆ ನಡೆಸಿದರು.

ಸುಮಾರು ೬೦೦ ಮೀಟರ್ ರಸ್ತೆ ಕಾಮಗಾರಿ ಸಂಪೂರ್ಣ ಕಳಪೆಯಾಗಿರುವುದು ಮೇಲ್ನೋಟಕ್ಕೆ ಕಂಡುಬAದ ಹಿನ್ನೆಲೆ ಶಾಸಕರು ಗರಂ ಆದರು. ಕಳೆದೆರಡು ವರ್ಷಗಳಲ್ಲಿ ೫೦ ಕೋಟಿಗೂ ಅಧಿಕ ಅನುದಾನದಡಿ ಕ್ಷೇತ್ರದ ವಿವಿಧ ಭಾಗಗಳಲ್ಲಿ ರಸ್ತೆ ಕಾಮಗಾರಿ ನಡೆಸಲಾಗಿದೆ. ಯಾವುದೇ ಕಾಮಗಾರಿ ಕಳಪೆಯಾಗಿಲ್ಲ. ಇದೇ ಮೊದಲ ಬಾರಿಗೆ ಕಳಪೆ ಕಾಮಗಾರಿ ನಡೆಸಲಾಗಿದೆ. ಸಂಬAಧಿಸಿದ ಗುತ್ತಿಗೆದಾರರಿಗೆ ನೋಟೀಸ್ ನೀಡಿ, ಕ್ರಮ ಕೈಗೊಳ್ಳಬೇಕು. ಕಪ್ಪುಪಟ್ಟಿಗೆ ಸೇರಿಸುವ ಬಗ್ಗೆಯೂ ಗಮನ ಹರಿಸಬೇಕೆಂದು ಸಂಬAಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ಹೊಸತೋಟ-ಗರಗಂದೂರು ರಸ್ತೆಯಲ್ಲಿ ಹಾಕಿದ ಡಾಂಬರು ಕಿತ್ತುಬರುತ್ತಿದೆ. ಹಳೆಯ ರಸ್ತೆಯ ಮೇಲೆ ತೇಪೆಹಚ್ಚುವ ಕೆಲಸ ಮಾಡಲಾಗಿದೆ. ಸರಿಯಾದ ಪ್ರಮಾಣದಲ್ಲಿ ಡಾಂಬರು ಹಾಗೂ ಗಮ್ ಬಳಸದೇ ಇರುವುದು ಕಂಡುಬAದಿದೆ. ಇದೀಗ ಹಾಕಿರುವ ಡಾಂಬರನ್ನು ಸಂಪೂರ್ಣವಾಗಿ ಕಿತ್ತು ತೆಗೆದು, ಮಳೆಗಾಲ ಮುಗಿದ ನಂತರ ಮರು ಡಾಂಬರೀಕರಣ ಮಾಡಬೇಕು. ಯಾವುದೇ ಕಾರಣಕ್ಕೂ ಗುತ್ತಿಗೆದಾರನಿಗೆ ಬಿಲ್ ಮಾಡಬಾರದು ಎಂದು ಕರ್ನಾಟಕ ಗ್ರಾಮೀಣ ರಸ್ತೆ ಅಭಿವೃದ್ಧಿ ಸಂಸ್ಥೆಯ ಯೋಜನಾ ಉಪವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಪ್ರಭು ಅವರಿಗೆ ತಾಕೀತು ಮಾಡಿದರು.

ಕಾಮಗಾರಿ ನಡೆಯುವ ಸಂದರ್ಭ ಸ್ಥಳಕ್ಕೆ ಬಾರದೇ ನಿರ್ಲಕ್ಷö್ಯ ತೋರಿದ ಅಭಿಯಂತರ ಪ್ರಭು ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಶಾಸಕರು, ‘ಸಂಪೂರ್ಣವಾಗಿ ಮರು ಡಾಂಬರೀಕರಣ ಮಾಡಿಸಬೇಕು. ಗುತ್ತಿಗೆದಾರರಿಂದ ನನಗೆ ಕರೆ ಮಾಡಿಸಿದರೆ ಸುಮ್ಮನಿರುವುದಿಲ್ಲ’ ಎಂದು ಎಚ್ಚರಿಕೆ ನೀಡಿದರು.

ಸ್ಥಳಕ್ಕೆ ಭೇಟಿ ನೀಡಿದ್ದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆನಂದ್ ಪ್ರಕಾಶ್ ಮೀನಾ ಅವರು ಮಾತನಾಡಿ, ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ಕಳೆದ ೨೦೧೬-೧೭ನೇ ಸಾಲಿನಲ್ಲಿ ಅನುಮೋದನೆಗೊಂಡು ೨೦೨೦ಕ್ಕೆ ಪೂರ್ಣಗೊಂಡಿರುವ ನಮ್ಮ ಗ್ರಾಮ ನಮ್ಮ ರಸ್ತೆಯು ಇನ್ನೂ ಜಿಲ್ಲಾ ಪಂಚಾಯಿತಿ ಅಧೀನಕ್ಕೆ ಬಂದಿಲ್ಲ. ಈ ಯೋಜನೆಯಡಿ ಗುತ್ತಿಗೆದಾರರು ೫ ವರ್ಷಗಳ ಕಾಲ ರಸ್ತೆ ನಿರ್ವಹಣೆ ಮಾಡಿ, ನಂತರ ಮರು ಡಾಂಬರೀಕರಣ ಕೈಗೊಂಡು ಜಿಲ್ಲಾ ಪಂಚಾಯತ್‌ಗೆ ಹಸ್ತಾಂತರಿಸಬೇಕಿದೆ ಎಂದರು.

ಜಿಲ್ಲಾ ಪಂಚಾಯಿತಿ ರಸ್ತೆ ಕಾಮಗಾರಿ ಕಳಪೆಯಾಗಿದೆ ಎಂದು ಕೆಲವರು ಆರೋಪ ಮಾಡಿದ್ದಾರೆ. ಆದರೆ ಈ ರಸ್ತೆ ಈವರೆಗೆ ಜಿ.ಪಂ. ಅಧೀನಕ್ಕೆ ಬಂದಿಲ್ಲ. ಕರ್ನಾಟಕ ಗ್ರಾಮೀಣ ರಸ್ತೆ ಅಭಿವೃದ್ಧಿ ಸಂಸ್ಥೆಯು ಪ್ರತ್ಯೇಕ ವಿಭಾಗವಾಗಿದ್ದು, ಜಿಲ್ಲಾ ಪಂಚಾಯಿತಿಗೂ ಆ ಸಂಸ್ಥೆಗೂ ನೇರ ಸಂಬAಧವಿಲ್ಲ. ಇದೀಗ ರಸ್ತೆ ಕಾಮಗಾರಿ ಕಳಪೆಯಾಗಿರುವುದು ಮೇಲ್ನೋಟಕ್ಕೆ ಕಂಡುಬAದಿದೆ. ಗುತ್ತಿಗೆದಾರರಿಗೆ ನೋಟೀಸ್ ನೀಡಿ, ಮರು ಡಾಂಬರೀಕರಣ ಮಾಡುವಂತೆ ಸಂಬAಧಿಸಿದ ಅಭಿಯಂತರರಿಗೆ ಜಿ.ಪಂ.ನಿAದಲೂ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು. ಈ ಸಂದರ್ಭ ಹರದೂರು ಗ್ರಾ.ಪಂ. ಉಪಾಧ್ಯಕ್ಷ ಸಲೀಂ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಬಿ. ಸತೀಶ್, ಸ್ಥಳೀಯರಾದ ಲಕ್ಷö್ಮಣ್, ರೋಹಿತ್, ಲಿಖಿತ್ ದಾಮೋದರ್, ಚನ್ನಕೇಶವ ಸೇರಿದಂತೆ ಗ್ರಾಮಸ್ಥರು ಇದ್ದರು.