ಕೊಡವರ ಸಾಂಪ್ರದಾಯಿಕ ಉಡುಪು, ಆಭರಣ ಪ್ರತಿಯೊಂದು ವಿಶೇಷವೇ. ಎಲ್ಲದಕ್ಕೂ ಒಂದೊAದು ಪೌರಾಣಿಕ, ಐತಿಹಾಸಿಕ ಹಿನ್ನೆಲೆಯಿದೆ. ಅದನ್ನೆಲ್ಲ ಪೂಜ್ಯತಾ ಭಾವನೆಯಿಂದ ಕೊಡವರು ತೊಡುತ್ತಾರೆ. ಕೊಡವ ಪುರುಷರ ಸಾಂಪ್ರದಾಯಿಕ ಉಡುಪು ಎಲ್ಲರಿಗೂ ತಿಳಿದಿರುವಂತೆ ಕುಪ್ಯ, ಚೇಲೆ (ರೇಷ್ಮೆಯ ವಸ್ತç), ಮಂಡೆತುಣಿ (ತಲೆಯ ಪೇಟ). ಸಾಧಾರಣವಾಗಿ ಕಪ್ಪು ಹಾಗೂ ಬಿಳಿಯ ಕುಪ್ಯವನ್ನು ಧರಿಸುವುದು ಆಚರಣೆಯಲ್ಲಿದೆ. ಹಿಂದಿನ ಕಾಲದಲ್ಲಿ ನೀಲಿ, ಕಂದು ಹೀಗೆ ಆಯಾಯ ಸಂದರ್ಭಕ್ಕೆ ಅನುಗುಣವಾಗಿ, ವಿಶೇಷತೆಗೆ ತಕ್ಕಂತೆ ಅದಕ್ಕನುಗುಣವಾದ ಬಣ್ಣದ ಕುಪ್ಯ ಧರಿಸುತ್ತಿದ್ದರು. ಆದರೆ ಕೆಂಪು ಕುಪ್ಯ ಎನ್ನುವುದು ಬಹಳ ವಿಶೇಷ. ಕೆಂಪು ಬಣ್ಣದ ಕುಪ್ಯ ಎಲ್ಲಿಯೂ ಬಳಕೆಯಲ್ಲಿಲ್ಲದ ಅಪರೂಪವಾದ ದಿರಿಸು. ಇದನ್ನು ಮಡಿಕೇರಿಯ ಕೆ.ನಿಡುಗಣೆ ಗ್ರಾಮದಲ್ಲಿರುವ ಶ್ರೀ ಭದ್ರಕಾಳಿ ಹಾಗೂ ಶ್ರೀ ಮೈತಲಪ್ಪ ದೇವರ ವಾರ್ಷಿಕ ಹಬ್ಬದಲ್ಲಿ ಕಾಣಬಹುದು.ಪ್ರತಿ ಎರಡು ವರ್ಷಗಳಿಗೊಮ್ಮೆ ನಡೆಯುವ ಈ ಹಬ್ಬದಲ್ಲಿ ದೇವರ ಪ್ರಸಾದ ರೂಪದ ಕೆಂಪು ಕುಪ್ಯವನ್ನು ಆ ಊರಿನ ಜನ ತೊಟ್ಟು ದೇವರಿಗಾಗಿ ನೃತ್ಯ ಮಾಡುತ್ತಾರೆ. ಈ ಕೆಂಪು ಬಣ್ಣದ ಕುಪ್ಯಕ್ಕೂ ಅವರ ನೃತ್ಯಕ್ಕೂ ಪೌರಾಣಿಕ ಕಥೆಯಿದೆ.
ಭದ್ರಕಾಳಿ ದೇವಿಗೆ ಕೆಂಪು ಬಲು ಇಷ್ಟದ ಬಣ್ಣ.ಆ ದೇವಿಗೆ ಕೆಂಪು ಹೂ, ಕೆಂಪು ವಸ್ತçವೆಂದರೆ ಒಲವು. ಈ ಕಾರಣದಿಂದ ಭಕ್ತಾದಿಯರು ಹರಕೆಯ ರೂಪದಲ್ಲಿ ದೇವಿಗೆ ಕೆಂಪು ವಸ್ತçವನ್ನು ಸಲ್ಲಿಸುತ್ತಾ ಬಂದರು. ಈ ವಸ್ತç ಹಾಳಾಗದಂತೆ ತಡೆಯಲು ಅಲ್ಲಿನ ತಕ್ಕ ಮುಖ್ಯಸ್ಥರು ನಾಡಿನವರಿಗೆ ಆ ಬಟ್ಟೆಯನ್ನು ನೀಡಿ ಅದನ್ನು ದೇವಿಯ ಹಬ್ಬಕ್ಕೆ ಬಳಸುವಂತೆ ಆರಂಭಿಸುತ್ತಾರೆ. ಅಲ್ಲದೆ ಆ ಕೆಂಪು ಕುಪ್ಯವನ್ನು ಮಡಿ ಮೈಲಿಗೆಯಾಗದಂತೆ ಅತ್ಯಂತ ಶುದ್ಧವಾಗಿಟ್ಟುಕೊಂಡು ಪೂಜಿಸುತ್ತಾ ಬಂದರು. ಹೀಗೆ ತಲೆ ತಲಾಂತರಗಳಿAದ ಕೆಂಪು ಕುಪ್ಯ ಈ ದೇವರ ಹಬ್ಬದಲ್ಲಿ ಕಾಣಿಸತೊಡಗಿತು.
ಕೆಂಪು ಕುಪ್ಯ ತೊಟ್ಟು ಈ ದೇವಸ್ಥಾನದಲ್ಲಿ ಮಾಡುವ ನೃತ್ಯಕ್ಕೆ ಬೇರೆಯದೇ ಹಿನ್ನೆಲೆಯಿದೆ. ಭದ್ರಕಾಳಿ ಹಾಗೂ ಮೈತಲಪ್ಪ ದೇವಾಲಯದಲ್ಲಿ ಮಾಡುವ ದೇವರ ಕುಣಿತಕ್ಕೆ ‘ಕೈತಲೆ ಆಟ್' ಎಂದೂ ಹೆಸರು. ‘ಕೈತಲೆ' ಎಂಬುದು ಕೆಂಪು ವಸ್ತçದ ತುಂಡು. ಭಸ್ಮಾಸುರ ಎಂಬ ರಾಕ್ಷಸ ಘೋರ ತಪ್ಪಸ್ಸು ಮಾಡಿ ಶಿವನಿಂದ ಒಂದು ವರ ಪಡೆದ. ಅದರಂತೆ ಭಸ್ಮಾಸುರ ತನ್ನ ಎಡ ಕೈಯಿಂದ ಯಾರ ತಲೆಯನ್ನು ಮುಟ್ಟಿದರೂ ಆತ ಅಗ್ನಿ ಆಹುತಿಯಾಗುತ್ತಿದ್ದ. ಶಿವನು ನೀಡಿದ ವರ ಫಲಿಸುತ್ತದೆಯೇ ಎಂದು ಪರೀಕ್ಷಿಸಲು ಭಸ್ಮಾಸುರನು ಸ್ವತಃ ಪರಶಿವನ ತಲೆಯನ್ನೇ ಎಡಗೈಯಿಂದ ಸ್ಪರ್ಶಿಸಲು ಮುಂದಾಗುತ್ತಾನೆ.
ಹೆದರಿದ ಶಿವನು ಓಡಿಹೋಗಿ ಮರದ ಪೊಟರೆಯೊಳಗೆ ಅಡಗಿಕೊಳ್ಳುತ್ತಾನೆ. ಈ ವಿಷಯವನ್ನರಿತ ನಾರದರು ನಡೆದ ಸಂಗತಿಯನ್ನೆಲ್ಲ ಮಹಾವಿಷ್ಣುವಿಗೆ ತಿಳಿಸಿದ. ಆ ಸಂದರ್ಭದಲ್ಲಿ ವಿಷ್ಣು ಮೋಹಿನಿ ಅವತಾರ ತಾಳಿ, ಭಸ್ಮಾಸುರನ ಎದುರು ಬಂದ. ಮೋಹಿನಿಯ ಸೌಂದರ್ಯಕ್ಕೆ ಬೆರಗಾದ ಭಸ್ಮಾಸುರ ಆಕೆಯನ್ನು ಹಿಂಬಾಲಿಸಿದ. ಆಕೆಯನ್ನು ಪಡೆಯಲು ಮುಂದಾದ. ಆಗ ಮೋಹಿನಿಯು ತಾನು ನರ್ತಿಸಿ ದಂತೆ ನೀನೂ ಚಾಚುತಪ್ಪದೇ ನರ್ತಿಸಿದರೆ ನಾನು ನಿನಗೆ ಸಿಗುವೆ ಎಂದಳು. ಅದಕ್ಕೊಪ್ಪಿದ ಭಸ್ಮಾಸುರ ತನ್ನನ್ನು ತಾನು ಮರೆತು ಮೋಹಿನಿಯಂತೆ ಕುಣಿಯ ಲಾರಂಭಿಸಿದ. ಕುಣಿಯುತ್ತಾ, ಕುಣಿಯುತ್ತಾ ಮೋಹಿನಿ ತನ್ನ ಎಡಗೈಯನ್ನು ತಲೆಯ ಮೇಲಿಟ್ಟಳು. ಭಸ್ಮಾಸುರನೂ ಅದನ್ನು ಅನುಕರಿಸಿದ. ಹೀಗೆ ತನ್ನ ಕೈಯ ಅಗ್ನಿಯಿಂದ ತಾನೇ ಭಸ್ಮವಾದ. ಆ ನಂತರ ವಿಷ್ಣು ಶಿವನನ್ನು ಮರದ ಪೊಟರೆಯಿಂದ ಹೊರ ಬರುವಂತೆ ತಿಳಿಸಿದ. ಈ ಕಥೆಯಲ್ಲಿ ಮೋಹಿನಿ ಮಾಡುವ ಏಳು ಬಗೆಯ ನೃತ್ಯವನ್ನೆ ಕೈತಲೆ (ಕೆಂಪು ವಸ್ತç) ಹಿಡಿದು ಮಾಡುವುದಾಗಿ ಈ ನಾಡಿನ ಜನರ ನಂಬಿಕೆ. ತಾವು ಕೈಯಲ್ಲಿ ಹಿಡಿದ ಕೈತಲೆ ಅಥವಾ ಕೆಂಪು ಬಟ್ಟೆ ಮೋಹಿನಿಯು ಉಟ್ಟಿದ್ದ ಸೀರೆಯ ತುಂಡು ಎಂದು ಭಾವಿಸಲಾಗುತ್ತದೆ. ಬಹಳ ಕಟ್ಟನಿಟ್ಟಾಗಿ ಆಚರಿಸುವ ಈ ಹಬ್ಬದಲ್ಲಿ ಊರಿನ ಸಮಸ್ತರು ಅತಿಯಾಗಿ ಪಾವಿತ್ರ್ಯತೆಯನ್ನು ಕಾಯ್ದುಕೊಳ್ಳುತ್ತಾರೆ. ದೇವರನ್ನು ಹಾಡಿ, ಕುಣಿದು, ಕುಪ್ಪಳಿಸಿ ಶ್ರದ್ಧಾ ಭಕ್ತಿಯಿಂದ ಪೂಜಿಸುತ್ತಾರೆ. ಹೀಗಾಗಿ ಕೆಂಪು ಕುಪ್ಯ ಕೊಡಗಿನ ಚರಿತ್ರೆಯಲ್ಲಿ ವಿಶೇಷ ಎಂದೇ ಹೇಳಬಹುದು.
- ಬೊಟ್ಟಂಗಡ ಸುಮನ್ ಸೀತಮ್ಮ, ತೆರಾಲು