ಗೋಣಿಕೊಪ್ಪಲು, ಮೇ ೨೧: ಕಾಡಾನೆ ದಾಳಿಯಿಂದ ಕಾರ್ಮಿಕ ದುರ್ಮರಣಕ್ಕೀಡಾದ ಘಟನೆ ದೇವರಪುರದಲ್ಲಿ ನಡೆದಿದೆ.
ಗ್ರಾಮದ ದೇವರ ಕಾಡುವಿನ ಪೈಸಾರಿಯಲ್ಲಿ ವಾಸವಿರುವ ಅಣ್ಣಯ್ಯ (೪೧) ಮೃತ ದುರ್ದೈವಿ. ಗ್ರಾಮದಲ್ಲಿ ವಾರ್ಷಿಕವಾಗಿ ನಡೆಯುವ ಬೇಡು ಹಬ್ಬದ ಸಂಭ್ರಮದ ನಡುವೆ ಈ ಘಟನೆ ಸಂಭವಿಸಿದ್ದು, ಗ್ರಾಮಸ್ಥರನ್ನು ಬೆಚ್ಚಿ ಬೀಳಿಸಿದಲ್ಲದೆ, ಸೂತಕದ ಛಾಯೆ ಮೂಡಿದೆ.
ಕಾರ್ಮಿಕ ಎಂದಿನAತೆ ಮುಂಜಾನೆ ತನ್ನ ಮನೆಯಿಂದ ಹೊರಟು ಸಮೀಪದ ಕಾಫಿ ತೋಟಕ್ಕೆ ಕೆಲಸಕ್ಕಾಗಿ ಕಾಡಿನ ಮಧ್ಯೆ ಇರುವ ದುರ್ಗಮ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವ ಎದುರಾದ ಕಾಡಾನೆಯು ಅಣ್ಣಯ್ಯನ ಮೇಲೆ ದಾಳಿ ಮಾಡಿದೆ.
ಕಾಡಾನೆಯನ್ನು ಕಂಡ ಅಣ್ಣಯ್ಯ ಓಡಿ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದನಾದರು ದಾಳಿಗೆ ಸಿಲುಕಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.
(ಮೊದಲ ಪುಟದಿಂದ) ಕಾಡಾನೆ ಘೀಳು ಕೇಳಿ ಸಮೀಪದ ದೇವಾಲಯ ಬಳಿ ಇದ್ದ ಗ್ರಾಮಸ್ಥರು ಘಟನಾ ಸ್ಥಳಕ್ಕೆ ತೆರಳಿ ನೋಡಿದಾಗ ಅಣ್ಣಯ್ಯ ಮೃತದೇಹ ಕಂಡುಬAದಿದೆ.
ತಿತಿಮತಿ ವಲಯದ ಅರಣ್ಯ ಇಲಾಖೆಯ ಎಸಿಎಫ್ ಗೋಪಾಲ್, ಆರ್ಎಫ್ಓ ಗಂಗಾಧರ್ ಹಾಗೂ ಮತ್ತಿತರ ಸಿಬ್ಬಂದಿಗಳು ಘಟನಾ ಸ್ಥಳಕ್ಕೆ ತೆರಳಿ ಮೃತದೇಹವನ್ನು ಆ್ಯಂಬ್ಯುಲೆನ್ಸ್ ಮೂಲಕ ಸಾಗಿಸುವ ಪ್ರಯತ್ನ ನಡೆಸುತ್ತಿರುವಾಗಲೇ ಸಮೀಪದಲ್ಲಿದ್ದ ಕಾಡಾನೆಯು ನಾಗರಿಕರ ಮೇಲೆ ದಾಳಿ ನಡೆಸುವ ಪ್ರಯತ್ನ ನಡೆಸಿದೆ. ಮುಂಜಾಗ್ರತಾ ಕ್ರಮವಾಗಿ ಅರಣ್ಯ ಅಧಿಕಾರಿಗಳು ಹೆಚ್ಚಿನ ಸಿಬ್ಬಂದಿಗಳನ್ನು ಸ್ಥಳದಲ್ಲಿ ನಿಯೋಜಿಸಿ, ಕಾಡಾನೆಯು ಇತ್ತ ಸುಳಿಯದಂತೆ ನಿಗಾವಹಿಸಿದ್ದಾರೆ.
ದೇವರಪುರದಲ್ಲಿ ಇತಿಹಾಸ ಪ್ರಸಿದ್ಧ ಅಯ್ಯಪ್ಪ ದೇವರ ಬೇಡು ಹಬ್ಬವು ಮುಂಜಾನೆಯಿAದ ಪ್ರಾರಂಭವಾಗಿದ್ದು, ತಾ. ೨೨ರ ಸಂಜೆಯವರೆಗೂ ನಡೆಯಲಿದೆ. ಈ ಭಾಗದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರು ಸೇರುವ ಹಿನ್ನೆಲೆ ಮುಂಜಾಗ್ರತಾÀ ಕ್ರಮವಾಗಿ ಅರಣ್ಯ ಇಲಾಖೆಯ ವತಿಯಿಂದ ಹೆಚ್ಚಿನ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ. ಈ ಭಾಗದಲ್ಲಿ ಹೆಚ್ಚಿನ ಜನರು ಊರಿನ ಹಬ್ಬಕ್ಕೆ ಆಗಮಿಸುವ ಹಿನ್ನೆಲೆ ಕಾಡಾನೆಯನ್ನು ಓಡಿಸುವ ಕಾರ್ಯಾಚರಣೆಗೆ ತೊಡಕು ಉಂಟಾಗಿದೆ. ಮೃತದೇಹವನ್ನು ಅರಣ್ಯ ಇಲಾಖೆಯ ಸಿಬ್ಬಂದಿಗಳು ಹಾಗೂ ಅಧಿಕಾರಿಗಳು ಗೋಣಿಕೊಪ್ಪ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದರು. ವೀರಾಜಪೇಟೆ ಡಿಎಫ್ಒ ಜಗನ್ನಾಥ್ ಹಾಗೂ ಗೋಣಿಕೊಪ್ಪ ಠಾಣಾಧಿಕಾರಿ ದಿಲೀಪ್ ಕುಮಾರ್ ಆಸ್ಪತ್ರೆಗೆ ತೆರಳಿ ಪರಿಶೀಲನೆ ನಡೆಸಿದರು. ಎಸಿಎಫ್ ಗೋಪಾಲ್, ಆರ್ಎಫ್ಒ ಗಂಗಾಧರ್ ನಡೆದ ಘಟನೆಯ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಮಾಹಿತಿ ಒದಗಿಸಿದರು.
ಗ್ರಾಮದಲ್ಲಿ ಹಬ್ಬ ಆಚರಣೆ ಹಿನ್ನೆಲೆ ಆದಷ್ಟು ಬೇಗನೇ ಮರಣೋತ್ತರ ಪರೀಕ್ಷೆಯನ್ನು ನಡೆಸಿಕೊಡುವಂತೆ ಎಸಿಎಫ್ ಗೋಪಾಲ್ ಗೋಣಿಕೊಪ್ಪ ಆಸ್ಪತ್ರೆಯ ವೈದ್ಯರಾದ ಡಾ. ಸುರೇಶ್ ಅವರಿಗೆ ಮನವಿ ಮಾಡಿದರು. ಕಾರ್ಯಪ್ರವೃತ್ತರಾದ ಡಾ. ಸುರೇಶ್ ಅಣ್ಣಯ್ಯನ ಮೃತದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಮೃತದೇಹ ಹಸ್ತಾಂತರ ಮಾಡಿದರು. ಮೃತ ಅಣ್ಣಯ್ಯ ಪತ್ನಿಯನ್ನು ಅಗಲಿದ್ದಾರೆ. -ಹೆಚ್.ಕೆ. ಜಗದೀಶ್