ವೀರಾಜಪೇಟೆ, ಮೇ ೨೧: ಅಂಬೇಡ್ಕರ್ ಭವನದ ತಡೆಗೋಡೆ ಕುಸಿತದ ಸ್ಥಳಕ್ಕೆ ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುಜಾ ಕುಶಾಲಪ್ಪÀ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಪರಿಶೀಲನೆ ಬಳಿಕ ಮಾತನಾಡಿದ ಸುಜಾ ಕುಶಾಲಪ್ಪ ಅವರು, ಎಂ.ಎಲ್.ಸಿ. ಅನುದಾನ ಮತ್ತು ಆಗ ಸಂಸದರಾಗಿದ್ದ ಸಂಸದ ಪ್ರತಾಪ್ ಸಿಂಹ ಅವರು ಅಂಬೇಡ್ಕರ್ ಭವನದ ಹೆಚ್ಚುವರಿ ಕಾಮಗಾರಿಗೆ, ಇಂಟರ್‌ಲಾಕ್ ಅಳವಡಿಸಲು ತಲಾ ಐದು ಲಕ್ಷ ರೂಪಾಯಿ ನೀಡಲಾಗಿತ್ತು.

(ಮೊದಲ ಪುಟದಿಂದ) ಆದರೆ ಆ ಹಣದಲ್ಲಿ ಕಳಪೆ ಮಟ್ಟದ ಕಾಮಗಾರಿ ನಡೆದಿದೆ. ಸಂಬAಧಿಸಿದ ಅಧಿಕಾರಿಗಳ ಜೊತೆಯಲ್ಲಿ ಚರ್ಚಿಸಿ ಗುತ್ತಿಗೆದಾರರಿಂದಲೇ ಆ ಕಾಮಗಾರಿ ಮಾಡಿಸುವಂತೆ ನಿರ್ದೇಶನ ನೀಡುತ್ತೇನೆ ಎಂದು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಸ್ಥಳೀಯ ಪುರಸಭಾ ಸದಸ್ಯ ಜೂನ ಸುನಿತಾ ಹಾಜರಿದ್ದರು.