ಇಂದು ಮೇ ೨೨ ರಂದು ವಿಶ್ವ ಜೀವ - ವೈವಿಧ್ಯ ದಿನ. ಈ ದಿನವು ವಿಶ್ವ ಜೀವ-ವೈವಿಧ್ಯ ಸಂರಕ್ಷಣೆಯ ಜಾಗತಿಕ ಜಾಗೃತಿ ದಿನವಾಗಿದೆ. ಪ್ರತಿವರ್ಷ ಮೇ ೨೨ ರಂದು ವಿಶ್ವಸಂಸ್ಥೆ ಆಶ್ರಯದಲ್ಲಿ ವಿಶ್ವ ಜೀವ- ವೈವಿಧ್ಯ ದಿನವನ್ನು ಆಚರಿಸಲಾಗುತ್ತದೆ.
ವಿಶ್ವ ಜೀವ - ವೈವಿಧ್ಯ ದಿನದ ಮುಖ್ಯ ಶೀರ್ಷಿಕೆ ‘ಪ್ರಕೃತಿಯೊಂದಿಗೆ ಸಾಮರಸ್ಯ ಮತ್ತು ಸುಸ್ಥಿರ ಅಭಿವೃದ್ಧಿ’ ಎಂಬ ವಿಷಯವಾಗಿದೆ. ಇದು ನಾವು ಪ್ರಕೃತಿಯೊಂದಿಗೆ ಹೇಗೆ ಸಾಮರಸ್ಯದಿಂದ ಬದುಕು ನಡೆಸುವ ಮೂಲಕ ಅಭಿವೃದ್ಧಿ ನೆಪದಲ್ಲಿ ಪ್ರಕೃತಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದAತೆ ಜೀವ - ಸಂಕುಲವನ್ನು ಸಂರಕ್ಷಿಸಬೇಕು ಎಂಬ ಬಗ್ಗೆ ನಾವು ಗಂಭೀರ ಚಿಂತನೆ ನಡೆಸುವ ಅಗತ್ಯವಿದೆ.
ಭೂಮಿಯ ಜೀವ ಜಗತ್ತು ಅಗಣಿತ ಜೀವ ಭಂಡಾರ. ‘ಭುವಿಯ ಭಂಡಾರ’ - ಇದು ಜೀವ- ವೈವಿಧ್ಯಗಳನ್ನು ಪರಿಚಯಿಸುವ ತಾಣ. ಭಾರತ ದೇಶದಲ್ಲಿ ಜೀವಿ ವೈವಿಧ್ಯತೆಯು ಶ್ರೀಮಂತಿಕೆಯಿAದ ಕೂಡಿದೆ. ದೇಶದ ಪಶ್ಚಿಮಘಟ್ಟ ಪ್ರದೇಶವು ಜೀವಿ ವೈವಿಧ್ಯತೆಯ ಸೂಕ್ಷö್ಮತಾಣಗಳು (ಸೂಕ್ಷö್ಮ ನೆಲೆಗಳು- ಹಾಟ್ ಸ್ಪಾಟ್ಗಳು) ಎನಿಸಿವೆ.
ಅದರಲ್ಲೂ ಕನ್ನಡ ನಾಡು ಜೀವ-ವೈವಿಧ್ಯತೆಗಳ ಬೀಡು. ಈ ನಾಡಿನ ಜೀವ ವೈವಿಧ್ಯತೆ, ಗಿರಿಕಂದರಗಳು, ನಿತ್ಯ ಹರಿದ್ವರ್ಣಗಳ ಕಾಡು, ವನ್ಯಜೀವಿಗಳ ಸೊಬಗು ಹಾಗೂ ಸೌಂದರ್ಯ ವರ್ಣಾತೀತವಾದುದು. ಮುಖ್ಯವಾಗಿ ಕರಾವಳಿ ಪ್ರದೇಶ, ಮಲೆನಾಡು, ದಕ್ಷಿಣ ಒಳನಾಡು, ಉತ್ತರ ಒಳನಾಡು ಭಾಗಗಳಾಗಿ ವಿಂಗಡಿಸಲ್ಪಟ್ಟಿರುವ ನಮ್ಮ ಕನ್ನಡ ನಾಡು ಜೀವ ವೈವಿಧ್ಯಗಳು ಮತ್ತು ಪ್ರಾಣಿ-ಸಂಕುಲಕ್ಕೆ ಜೀವನೆಲೆಯನ್ನು ಒದಗಿಸಿದೆ.
ಜೀವಿ-ವೈವಿಧ್ಯ ಎಂಬುದು ನಮ್ಮ ಮತ್ತು ಎಲ್ಲಾ ಜೀವಿಗಳು ಬದುಕುಳಿಯುವ ವಿದ್ಯ ಮಾನವಾಗಿದೆ. ಜೀವ ವೈವಿಧ್ಯ ಜಾಸ್ತಿ ಇದ್ದ ತಾಣವೆಲ್ಲ ನಿಸರ್ಗದ ದೃಷ್ಠಿಯಿಂದ ಶ್ರೀಮಂತ ತಾಣಗಳು. ಅವು ಜೀವಸಂಪತ್ತಿನ ಖಜಾನೆಗಳು. ಅವು ಅಷ್ಟೇ ಸೂಕ್ಷö್ಮವಾದ ತಾಣಗಳೂ ಹೌದು. ಅವುಗಳನ್ನು ಭವಿಷ್ಯದ ದೃಷ್ಠಿಯಿಂದ ಜೋಪಾನವಾಗಿ ಕಾಪಾಡಬೇಕು. ಮನುಷ್ಯ ಪ್ರಾಣಿ ತನ್ನ ಆಸೆಯಿಂದ ಭೂಮಿ ಮತ್ತು ಜೀವತಾಣಗಳ ಮೇಲೆ ಬಲಾಢ್ಯವಾಗಿ ದಾಳಿಯಿಟ್ಟ ಕಾರಣ ಪ್ರಪಂಚದ ಈ ಶ್ರೀಮಂತ ತಾಣಗಳು ಧ್ವಂಸ ಆಗುತ್ತಿವೆ. ಅವು ನಾಶವಾಗದಂತೆ ತಡೆಯುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ.
ಮನುಷ್ಯ ನಿಸರ್ಗದ ಒಂದು ಭಾಗ. ಇತರ ಜೀವಿಗಳಿಗೆ ನಿಸರ್ಗದ ಮೇಲೆ ಎಷ್ಟು ಹಕ್ಕು ಇದೆಯೋ ಮಾನವನಿಗೂ ಅಷ್ಟೇ ಹಕ್ಕು ಇದೆ. ಆದರೆ ಮಾನವ ನಿಸರ್ಗವನ್ನು ತನ್ನ ಆಸ್ತಿ ಮಾಡಿಕೊಳ್ಳಲು ಹೊರಟು ಭೂಮಿಯ ಹಲವು ಜೀವ ವೈವಿಧ್ಯಗಳ ನಾಶಕ್ಕೆ ಕಾರಣವಾಗುತ್ತಿದ್ದಾನೆ. ಈ ವೈವಿಧ್ಯ ನಾಶ ಆಹಾರ ಸರಪಳಿಯನ್ನು ಅವಲಂಬಿಸಿದೆ.
ಒAದು ದಿನ ಇದು ತನಗೇ ಕುತ್ತು ತರುತ್ತದೆ ಎಂಬುದನ್ನು ಮಾನವ ಅರಿತಂತಿಲ್ಲ. ಜೀವ- ವೈವಿಧ್ಯ ನಾಶದಿಂದ ಪರಿಸರದ ಮೇಲೆ ಹಾಗೂ ಮಾನವನ ಜೀವನ ಹಾಗೂ ಪ್ರಾಣಿ-ವನ್ಯ ಜೀವನದ ಮೇಲೆ ಏನೆಲ್ಲಾ ದುಷ್ಪರಿಣಾಮಗಳಾಗುತ್ತವೆ ಎಂಬ ಬಗ್ಗೆ ನಾವು ತುರ್ತು ಗಮನಹರಿಸದಿದ್ದಲ್ಲಿ ಭವಿಷ್ಯದಲ್ಲಿ ಗಂಡಾAತರ ಪರಿಸ್ಥಿತಿ ಎದುರಿಸಬೇಕಾಗುತ್ತದೆ.
ಭೂಮಿ ಎಂಬ ಪ್ರಯೋಗಶಾಲೆಯಲ್ಲಿ ಸಹಸ್ರಾರು ಸಸ್ಯ ಮತ್ತು ಪ್ರಾಣಿ ಪ್ರಭೇದಗಳು ಉಗಮಗೊಂಡು ವಿಕಾಸ ಹೊಂದಿವೆ. ಅಂತಹ ಉಚ್ಛಾçಯ ಸ್ಥಿತಿಯಲ್ಲಿರುವ ಮಾನವ ತನ್ನ ಬುದ್ಧಿಶಕ್ತಿಯ ಬಲದಿಂದ ಇಂದು ಸರ್ವತೋಮುಖ ಅಭಿವೃದ್ಧಿಯನ್ನು ಸಾಧಿಸಿದ್ದಾನೆ.
ಮಾನವ ತನ್ನ ಬುದ್ಧಿಶಕ್ತಿಯ ಬಲದಿಂದ ನಡೆಸುವ ಚಟುವಟಿಕೆಗಳ ಫಲವಾಗಿ ಇಂದು ಭೂಮಿ ಬದಲಾವಣೆಯ ಕಾಲದಲ್ಲಿದೆ. ಇಲ್ಲಿರುವ ಸಹಸ್ರಾರು ಜೀವಿಗಳೂ ಅಳಿವು ಉಳಿವಿನ ಸಂದಿಗ್ಧದಲ್ಲಿವೆ. ಬದಲಾಗುತ್ತಿರುವ ಜೈವಿಕ, ಭೌಗೋಳಿಕ ಪರಿಸರವು ನೂರಾರು ಜೀವಿಗಳನ್ನು ಅಳಿವಿನಂಚಿಗೆ ತಳ್ಳಿವೆ. ಈ ಎಲ್ಲಾ ಕಾರಣಗಳಿಂದಾಗಿ ೨೦೧೦ ನ್ನು ಅಂತರಾಷ್ಟಿçÃಯ ಜೈವಿಕ ವೈವಿಧ್ಯ ವರ್ಷವೆಂದು ಘೋಷಿಸಿ ಜೀವ ವೈವಿಧ್ಯದ ಮೇಲೆ ಉಂಟಾಗುತ್ತಿರುವ ಮಾಲಿನ್ಯ ಹಾಗೂ ದುಷ್ಪರಿಣಾಮಗಳ ಕುರಿತು ಬೆಳಕು ಚೆಲ್ಲಲಾಯಿತು.
ನೆಲ, ಜಲ, ವಾಯು ಮಾಲಿನ್ಯದಿಂದ ಭೂಮಿಯ ಮೇಲಿನ ಸಸ್ಯ ಮತ್ತು ಪ್ರಾಣಿ ವೈವಿಧ್ಯ, ಬೆಳೆ ವೈವಿಧ್ಯ, ವನ್ಯಜೀವಿಗಳು ಮತ್ತು ಜಲಚರಗಳ ವೈವಿಧ್ಯತೆ, ಔಷಧೀಯ ವೈವಿಧ್ಯತೆ, ಹೀಗೆ ಅನೇಕ ಜೀವ ಸಂಪತ್ತುಗಳು ನಶಿಸಿಹೋಗುತ್ತಿವೆ.
ಏನಿದು ಜೀವ-ವೈವಿಧ್ಯ ?
ಜೀವ-ವೈವಿಧ್ಯತೆ ಎನ್ನುವ ಪದವನ್ನು ಸರಳವಾಗಿ ಹೇಳುವುದಾದರೆ, ಇದು ಜೀವಿಗಳ ಸಂಖ್ಯೆಯನ್ನು ತಿಳಿಸುತ್ತದೆ. ಒಂದು ಪ್ರದೇಶದಲ್ಲಿ ಇರುವ ವಿವಿಧ ಜೀವಿ ಪ್ರಭೇದಗಳ ಒಟ್ಟಾರೆ ಮೊತ್ತಕ್ಕೆ ‘ಜೀವ-ವೈವಿಧ್ಯ’ ಎನ್ನುತ್ತೇವೆ. ಒಂದು ಪ್ರದೇಶದ ಜೀವ-ವೈವಿಧ್ಯದ ಶ್ರೀಮಂತಿಕೆಯನ್ನು ಅಲ್ಲಿಯ(ಸ್ಥಳೀಯ) ಪರಿಸರ ನಿರ್ಧರಿಸುತ್ತದೆ. ಜೀವಿ ವೈವಿಧ್ಯದ ರಕ್ಷಣೆಗೆ ಈಗ ಹೆಚ್ಚಿನ ಮಹತ್ವವನ್ನು ಕೊಡಲಾಗುತ್ತಿದೆ. ನಾವು ಪರಿಸರ ವೈವಿಧ್ಯವನ್ನು ನಾವೇಕೆ ರಕ್ಷಿಸಬೇಕು? ಎಂಬ ಪ್ರಶ್ನೆ ನಮ್ಮಲ್ಲಿ ಉದ್ಭವಿಸಬಹುದು. ಪರಿಸರ ವಿನಾಶದತ್ತ ಸಾಗುತ್ತಿರುವ ಈ ಸಂದರ್ಭದಲ್ಲಿ ಅದನ್ನು ನಾವು ಈಗ ಅರ್ಥೈಸಿಕೊಳ್ಳಬಹುದಾಗಿದೆ.
ಜೀವ-ವೈವಿಧ್ಯ ಎಲ್ಲ ಕಡೆ ಒಂದೇ ರೀತಿ ಇರುವುದಿಲ್ಲ. ಕೆಲವು ಕಡೆ ಜಾಸ್ತಿ ವಿಧವಾದ ಜೀವಿಗಳು ಸಿಗುತ್ತವೆ. ಸಸ್ಯ, ಕೀಟ, ಪ್ರಾಣಿ-ಪಕ್ಷಿ ಇರುತ್ತವೆ. ಇದರಲ್ಲಿ ಜೀವ ವೈವಿಧ್ಯದ ದಟ್ಟಣೆ ಇರುವ ಪ್ರದೇಶಗಳ ಅಂದರೆ ಪಶ್ಚಿಮಘಟ್ಟದ ಪರ್ವತ ಶ್ರೇಣಿಗಳು, ಕೆರೆ ಅಂಚಿನ ಜೌಗು ಭೂಮಿ, ನದಿಯ ಕೊಳ್ಳಗಳು, ನದಿ ಮತ್ತು ಸಮುದ್ರ ಸೇರುವ ಅಳಿವೆಗಳು, ಇವೆಲ್ಲ ಜೀವ ವೈವಿಧ್ಯದ ದೃಷ್ಠಿಯಲ್ಲಿ ಅತ್ಯಂತ ಸಮೃದ್ಧಿ ಎಂದು ಹೇಳುತ್ತಾರೆ.
ಪ್ರಕೃತಿ ಮೇಲೆ ಮಾನವನ ಹಸ್ತಕ್ಷೇಪದಿಂದ ಇಂದು ಜೀವ ವೈವಿಧ್ಯ ದಿನೇ ದಿನೇ ಕ್ಷೀಣಿಸುತ್ತಿದೆ. ಪ್ರಕೃತಿಯಲ್ಲಿ ನಮ್ಮೆಲ್ಲರ ಬದುಕಿಗೆ ಆಧಾರವಾಗಿರುವ ಅರಣ್ಯ, ನದಿ, ಕೆರೆ, ಸಮುದ್ರ, ಅಂತರ್ಜಲ, ಪರ್ವತ ಶ್ರೇಣಿ, ವಾಯುಮಂಡಲ ಎಲ್ಲವೂ ನಾನಾ ಕಾರಣಗಳಿಂದಾಗಿ ದುಃಸ್ಥಿತಿಗೆ ಬರುತ್ತಿವೆ. ಇಡೀ ಭೂಮಂಡಲದ ಜೀವಗೋಲ ಅಪಾಯಕ್ಕೆ ಸಿಲುಕುತ್ತಿದೆ. ಅನೇಕ ವಿಧದಲ್ಲಿ ಎದುರಾಗುತ್ತಿರುವ ಅಪಾಯಗಳನ್ನು ತಡೆಗಟ್ಟದಿದ್ದಲ್ಲಿ ಭವಿಷ್ಯದಲ್ಲಿ ಇಡೀ ಜೀವಿ- ಸಂಕುಲವೇ ನಾಶವಾಗುವ ಅಪಾಯ ತಪ್ಪಿದ್ದಲ್ಲ ಎಂಬ ಅಂಶವನ್ನು ನಾವು ಮನಗಾಣಬೇಕಿದೆ.
ನಿಸರ್ಗದಲ್ಲಿ ಜೀವಿ ಪರಿಸರ ವ್ಯವಸ್ಥೆಯ ಕೊಂಡಿಯಾದ ಜೇನುನೊಣಗಳು ನಿರ್ನಾಮವಾದರೆ ನಾವು ಆಹಾರಕ್ಕಾಗಿ ಪರದಾಡಬೇಕಾಗುತ್ತದೆ. ಹೀಗೆ ಜೀವಿಗಳ ಸಂತತಿ ನಾಶವಾದರೆ ಬರಗಾಲ ಬೆನ್ನಟ್ಟಿ ಬರುತ್ತದೆ. ಆದ್ದರಿಂದ ನಿಸರ್ಗದಲ್ಲಿ ಪ್ರತಿಯೊಂದು ಸೂಕ್ಷö್ಮಜೀವಿಗಳ ಸಂತತಿಯ ಉಳಿವು ಅತಿಮುಖ್ಯವಾದುದು.
ಸೂಕ್ಷö್ಮತೆಯ ಜೀವಿತಾಣಗಳು
ಜೀವ ವೈವಿಧ್ಯದ ಸೂಕ್ಷö್ಮ ನೆಲೆಗಳು ಎನ್ನುವುದು ಒಂದು ಪರಿಕಲ್ಪನೆ. ಇದು ಜೀವಿ ವೈವಿಧ್ಯದ ಸಂರಕ್ಷಣೆಗೆ ತುಂಬಾ ಸಹಾಯ ಮಾಡುತ್ತದೆ ಎನ್ನುವ ನಂಬಿಕೆ ಇದೆ. ಜೀವ ವೈವಿಧ್ಯದಲ್ಲಿ ಬರುವಂತಹ ಬಿಸಿ ನೆಲೆ (ಹಾಟ್ ಸ್ಪಾಟ್) ಗಳು ಜೀವ ವೈವಿಧ್ಯವನ್ನು ಸಂರಕ್ಷಿಸುವ ಒಂದು ಉಪಾಯ. ಒಂದೇ ಒಂದು ಜೀವಿಯ ನಾಶ ಇಡೀ ಜೀವಿಯ ನೆಲೆಯನ್ನೇ ಹಾಳುಗೆಡಬಹುದು.
ನಮ್ಮ ಭೂಮಿಯಲ್ಲಿ ಸುಮಾರು ಐದು ಕೋಟಿ ವಿವಿಧ ಪ್ರಭೇದಗಳ ಜೀವಿಗಳಿವೆ ಎಂದು ವಿಜ್ಞಾನಿಗಳು ಅಂದಾಜು ಮಾಡಿದ್ದಾರೆ. ಗಿಡ-ಮರ, ಕ್ರೀಮಿ-ಕೀಟ, ಪ್ರಾಣಿ-ಪಕ್ಷಿ, ಸರೀಸೃಪಗಳು ಎಲ್ಲವೂ ಭೂಮಿಯ ಇಂಚು ಇಂಚಿನಷ್ಟು ಸಹ ಜೀವಿಗಳು ಆಕ್ರಮಿಸಿವೆ.
ನಮ್ಮ ಸುತ್ತಲಿನ ಜೀವಿಗಳಲ್ಲಿ ಪ್ರತಿಯೊಂದು ಜೀವಿಯೂ ನಮ್ಮ ಉಳಿವಿಗೆ ಅಷ್ಟೇ ಅವಶ್ಯಕ. ಹಸಿವು ಮತ್ತು ರೋಗರುಜಿನಗಳ ವಿರುದ್ಧದ ನಮ್ಮ ಸಮರ ಯಶಸ್ವಿಯಾಗಬೇಕಾದರೆ ಪ್ರಕೃತಿಯಲ್ಲಿನ ಜೀವ-ವೈವಿಧ್ಯವನ್ನು ನಾವು ಸಂರಕ್ಷಿಸಲೇಬೇಕು.
ನಮ್ಮ ದೇಶದಲ್ಲಿ ಸುಮಾರು ೪೫ ಸಾವಿರ ಸಸ್ಯ ಪ್ರಭೇದಗಳಿವೆ. ಇದು ಪ್ರಪಂಚದ ಸಸ್ಯಪ್ರಬೇಧಗಳ ಶೇ.೧೨ ಭಾಗ. ನಮ್ಮ ದೇಶದಲ್ಲಿರುವ ೧೫,೦೦೦ ಹೂ ತಳೆಯುವ ಸಸ್ಯಗಳಲ್ಲಿ ೫,೦೦೦ ಪ್ರಭೇದಗಳು ಪಶ್ಚಿಮಘಟ್ಟಗಳ ಶ್ರೇಣಿಯಲ್ಲಿವೆ. ಆದುದರಿಂದ ನಾವು ಜೀವ-ವೈವಿಧ್ಯ ಸಂರಕ್ಷಣೆಗೆ ಹೆಚ್ಚಿನ ಮಹತ್ವವನ್ನು ಕೊಡಬೇಕಾಗಿದೆ.
ಭೂಮಂಡಲದ ಸಕಲ ಜೀವಿಗಳಿಗೂ ಉತ್ತಮ ವಾಯು, ಜಲ ಮತ್ತು ಉತ್ತಮ ಪರಿಸರ ಒದಗಿಸುವ ದಿಟ್ಟ ಹೆಜ್ಜೆ ಇಡಲು ಇದು ಸಕಾಲವಾಗಿದೆ.
ಈ ದಿಸೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜೀವ ವೈವಿಧ್ಯ ಸಂರಕ್ಷಣಾ ಮಂಡಳಿ ಮೂಲಕ ಪ್ರತಿಹಂತದಲ್ಲಿ ಜೀವ ವೈವಿಧ್ಯವನ್ನು ಸಂರಕ್ಷಿಸುವ ದಿಸೆಯಲ್ಲಿ ಗ್ರಾಮ, ತಾಲೂಕು, ಜಿಲ್ಲೆ ಹಾಗೂ ರಾಜ್ಯಮಟ್ಟದಲ್ಲಿ ರಚಿಸಿರುವ ಸಮಿತಿಗಳ ಮೂಲಕ ಜೀವ ವೈವಿಧ್ಯವನ್ನು ಸಂರಕ್ಷಿಸುವ ಕಾರ್ಯದಲ್ಲಿ ತೊಡಗಿದೆ.
ಈ ದಿಸೆಯಲ್ಲಿ ನಾವು ಉತ್ತಮ ಭವಿಷ್ಯತ್ತಿಗಾಗಿ ಈ ನೆಲ-ಜಲ, ಅರಣ್ಯ, ವನ್ಯಜೀವಿಗಳು ಹಾಗೂ ಜೀವ ವೈವಿಧ್ಯ ಸಂರಕ್ಷಿಸುವ ಮೂಲಕ ಪರಿಸರ ಸಂರಕ್ಷಿಸಬೇಕಿದೆ. ನಮ್ಮ ಸುತ್ತಲಿನ ಪರಿಸರದಲ್ಲಿ ಪ್ರತಿಯೊಬ್ಬರೂ ಗಿಡ-ಮರಗಳನ್ನು ಬೆಳೆಸುವ ಪ್ರಜ್ಞೆ ಬೆಳೆಸಿಕೊಂಡು ಪ್ರತಿಜ್ಞೆ ಸ್ವೀಕರಿಸಬೇಕಿದೆ.
-ಟಿ.ಜಿ. ಪ್ರೇಮಕುಮಾರ್
ಮುಖ್ಯ ಶಿಕ್ಷಕರು, ಸರ್ಕಾರಿ ಪ್ರೌಢಶಾಲೆ, ಕೂಡುಮಂಗಳೂರು,
ಮೊ. ನಂ: ೯೪೪೮೫೮೮೩೫೨