ಸೋಮವಾರಪೇಟೆ, ಮೇ ೧೮: ಕೊಡಗು ಪತ್ರಕರ್ತರ ಸೋಮವಾರಪೇಟೆ ಸಂಘದ ತಾಲೂಕು ಘಟಕದ ಸಭೆ ಇಲ್ಲಿನ ಪತ್ರಿಕಾಭವನದಲ್ಲಿ ಅಧ್ಯಕ್ಷ ಹೆಚ್.ಆರ್. ಹರೀಶ್ ಕುಮಾರ್ ಅಧ್ಯಕ್ಷತೆಯಲ್ಲಿ ನಡೆಯಿತು.

ಸಭೆಯಲ್ಲಿ ತಾ. ೨೫ ರಂದು ತಾಲೂಕು ಪತ್ರಕರ್ತರ ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡುವುದು ಹಾಗೂ ಕುಟುಂಬ ಸಮ್ಮಿಲನ ಕಾರ್ಯಕ್ರಮ ನಡೆಸಲು ತೀರ್ಮಾನಿಸಲಾಯಿತು. ಸದಸ್ಯರು ಅರ್ಜಿಗಳನ್ನು ಮತ್ತು ವಿದ್ಯಾರ್ಥಿಗಳ ಪ್ರಸಕ್ತ ಸಾಲಿನ ಅಂಕಪಟ್ಟಿ ಪ್ರತಿಯನ್ನು ಪತ್ರಿಕಾಭವನಕ್ಕೆ ತಲುಪಿಸಬೇಕು. ಅರ್ಜಿ ತಾ. ೨೦ ರ ಸಂಜೆ ೫ ಗಂಟೆಯೊಳಗೆೆ ತಲುಪಿಸಬೇಕು.

ಇದರೊಂದಿಗೆ ಜೂ. ೨೧ರಂದು ಶನಿವಾರಸಂತೆಯ ಭಾರತಿ ವಿದ್ಯಾಸಂಸ್ಥೆಯಲ್ಲಿ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ, ತಾಲೂಕು ಪತ್ರಕರ್ತರ ಸಂಘ, ಕಳಲೆ ಬಿ.ಜಿ.ಎಸ್. ಸೇವಾ ಸಂಸ್ಥೆ ಹಾಗೂ ಭಾರತಿ ವಿದ್ಯಾಸಂಸ್ಥೆಯ ಸಹಯೋಗದಲ್ಲಿ ಐಎಎಸ್, ಐ.ಪಿ.ಎಸ್. ಹಾಗೂ ಬ್ಯಾಂಕಿAಗ್ ಪರೀಕ್ಷೆ ಎದುರಿಸುವುದು ಹಾಗೂ ಸಿದ್ಧತೆ ಬಗ್ಗೆ ಕಾಲೇಜು ವಿದ್ಯಾರ್ಥಿಗಳಿಗೆ ಒಂದು ದಿನದ ತರಬೇತಿ ಕಾರ್ಯಾಗಾರ ನಡೆಸಲು ಸಭೆ ತೀರ್ಮಾನಿಸಿತು. ಐ.ಎ.ಎಸ್., ಐ.ಪಿ.ಎಸ್. ಅಧಿಕಾರಿಗಳು ಹಾಗೂ ಬೆಂಗಳೂರಿನ ಫೌಂಡರ್ ಆಂಡ್ ಸಿ.ಇ.ಒ. ಇಂಡಿಯಾ ಅಕಾಡೆಮಿ ತರಬೇತಿ ಕಾರ್ಯಾಗಾರ ನಡೆಸಿಕೊಡುವುದಾಗಿ ಹೆಚ್.ಆರ್. ಹರೀಶ್ ಕುಮಾರ್ ಸಭೆಗೆ ತಿಳಿಸಿದರು.

ಇದೇ ಸಂದರ್ಭ ತಾಲೂಕು ಘಟಕದಲ್ಲಿ ತೆರವಾಗಿದ್ದ ಉಪಾಧ್ಯಕ್ಷÀ ಸ್ಥಾನಕ್ಕೆ ಎಸ್.ಎ. ಮುರಳೀಧರ್ ಅವರನ್ನು ಸಭೆ ಆಯ್ಕೆ ಮಾಡಿತು.

ಸಭೆಯಲ್ಲಿ ಕೊಡಗು ಪತ್ರಕರ್ತರ ಸಂಘದ ಜಿಲ್ಲಾ ಉಪಾಧ್ಯಕ್ಷ ಕವನ್ ಕಾರ್ಯಪ್ಪ, ತಾಲೂಕು ಉಪಾಧ್ಯಕ್ಷ ಎಸ್.ಎ. ಮುರಳೀಧರ್, ಪ್ರಧಾನ ಕಾರ್ಯದರ್ಶಿ ಡಿ.ಪಿ. ಲೋಕೇಶ್, ಖಜಾಂಚಿ ದುಷ್ಯಂತ್‌ಕುಮಾರ್, ನಿರ್ದೇಶಕರುಗಳಾದ, ಕೆ.ಎನ್. ತೋಮಸ್, ಹೊಮೇಶ್ ಮಣಗಲಿ ಹಾಗೂ ಕಳಲೆ ಬಿ.ಜಿ.ಎಸ್. ಸೇವಾಸಂಸ್ಥೆಯ ಉಪಾಧ್ಯಕ್ಷ ಕಳಲೆ ಕೃಷ್ಣೇಗೌಡ ಉಪಸ್ಥಿತರಿದ್ದರು.