ಪೊನ್ನಂಪೇಟೆ, ಮೇ ೧೮: ಪೊನ್ನಂಪೇಟೆಯ ತೊರೆಬೀದಿಯಲ್ಲಿ ಅನಾರೋಗ್ಯದಿಂದ ಬಳಲುತ್ತಾ, ಒಂಟಿ ಜೀವನ ನಡೆಸುತ್ತಿದ್ದ ದಿ. ದಾಮೋದರ ಅವರ ಪತ್ನಿ ಲಲಿತ ಎಂಬ ಮಹಿಳೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ನ ಕಾರ್ಯಕರ್ತರು ಗುರುತಿಸಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರಿಗೆ ಮಾಸಾಶನ ಮಂಜೂರು ಮಾಡಲು ಸಲ್ಲಿಸಿದ್ದ ಮನವಿಯನ್ನು ಪರಿಗಣಿಸಿ ರೂ. ೨,೦೦೦ ಮಸಾಶನ ಮಂಜೂರು ಮಾಡಿದ್ದರು. ಮಂಜೂರಾತಿ ಪತ್ರ ಹಾಗೂ ಮೊದಲ ತಿಂಗಳ ಮಾಸಾಶನ ರೂ. ೨,೦೦೦ ಹಣವನ್ನು ಪೊನ್ನಂಪೇಟೆ ಎ ಒಕ್ಕೂಟದ ಅಧ್ಯಕ್ಷೆ ಪೆಮ್ಮಂಡ ಸುಮನ್ ಉಮೇಶ್ ಲಲಿತ ಅವರಿಗೆ ವಿತರಿಸಿದರು. ಈ ಸಂದರ್ಭ ವಲಯ ಮೇಲ್ವಿಚಾರಕ ನಾಗರಾಜು ಹಾಗೂ ಸೇವಾಪ್ರತಿನಿಧಿ ಗೌರಿ, ಪೊನ್ನಂಪೇಟೆ ಪಟ್ಟಣ ಪಂಚಾಯಿತಿ ಸದಸ್ಯ ರಾಮಕೃಷ್ಣ ಇದ್ದರು.