ಚೆಯ್ಯಂಡಾಣೆ, ಮೇ ೧೮: ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟ ಕಡಂಗ ಪಟ್ಟಣದಲ್ಲಿ ಸೂಕ್ತ ವಾಹನ ನಿಲುಗಡೆ ವ್ಯವಸ್ಥೆ ಕಲ್ಪಿಸಿದರೂ ಸಹ ವಾಹನಗಳನ್ನು ಅಡ್ಡಾದಿಡ್ಡಿ ನಿಲ್ಲಿಸುವುದರಿಂದ ಟ್ರಾಫಿಕ್ ಸಮಸ್ಯೆ ಸರ್ವೇಸಾಮಾನ್ಯವಾಗಿದೆ.
ಪಟ್ಟಣದಲ್ಲಿ ಸರಕಾರಿ ಪ್ರಾಥಮಿಕ ಶಾಲೆ, ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆ, ಸರಕಾರಿ ಆಯುಷ್ ಆಸ್ಪತ್ರೆ, ಕೆನರಾ ಬ್ಯಾಂಕ್, ಕೆಡಿಸಿಸಿ ಬ್ಯಾಂಕ್, ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಬ್ಯಾಂಕ್, ನ್ಯಾಯಬೆಲೆ ಅಂಗಡಿ, ಅಂಚೆ ಕಚೇರಿ, ೨ ಅಂಗನವಾಡಿ ಕೇಂದ್ರ, ೨ ಜುಮಾ ಮಸೀದಿ, ೨ ಮದರಸ, ಮಹಾಗಣಪತಿ ದೇವಸ್ಥಾನ ಹಾಗೂ ಹಲವಾರು ವಾಣಿಜ್ಯ ಉದ್ಯಮ ಸಂಕೀರ್ಣ ಹೋಟೆಲ್, ಬಾರ್ ಮತ್ತು ರೆಸ್ಟೋರೆಂಟ್ಗಳು ಕಾರ್ಯಾಚರಿಸುತ್ತಿದ್ದು, ದಿನದಿಂದ ದಿನಕ್ಕೆ ಸಾರ್ವಜನಿಕರ ಸಂಖ್ಯೆ ಪಟ್ಟಣದಲ್ಲಿ ಹೆಚ್ಚಾಗುತ್ತಿದೆ.
ಎಡಪಾಲ, ಕರಡ, ಪೊದ್ದಮಾನಿ, ಕೆದಮೂಳ್ಳೂರು, ಕಡಂಗಮೂರೂರು, ಜೌಕಿ, ಪಾಲಂಗಾಲ, ಬೆಳ್ಳುಮಾಡು ಗ್ರಾಮಗಳಿಂದ ಗ್ರಾಹಕರು ಖರೀದಿ ಹಾಗೂ ವಹಿವಾಟಿಗಾಗಿ ಕಡಂಗ ಪಟ್ಟಣವನ್ನೇ ಅವಲಂಬಿಸಿದ್ದಾರೆ.
ಆಟೋ ನಿಲ್ದಾಣ ಮುಖ್ಯ ರಸ್ತೆಯಲ್ಲೇ ಆಟೋ ನಿಲ್ದಾಣವಿದ್ದು ೨ ಬದಿಯಲ್ಲಿ ವಾಹನ ಸಂಚರಿಸಲು ಆಟೋ ನಿಲ್ದಾಣದಿಂದ ತೊಂದರೆ ಯಾಗುತ್ತಿದೆ. ಕೆಲವರು ಆಟೋ ನಿಲ್ದಾಣದಲ್ಲಿ ದ್ವಿಚಕ್ರ ಹಾಗೂ ಮತ್ತಿತರ ವಾಹನ ನಿಲುಗಡೆಗೊಳಿಸುತ್ತಿದ್ದು, ಮತ್ತೊಂದು ಬದಿಯಲ್ಲಿ ವಾಹನ ನಿಲುಗಡೆ ಗೊಳಿಸುದರಿಂದ ಟ್ರಾಫಿಕ್ ಸಮಸ್ಯೆ ಹೆಚ್ಚಾಗಿದೆ.
ಬ್ಯಾಂಕ್ ಮುಂಭಾಗದಲ್ಲಿ ಬ್ಯಾಂಕ್ ವಹಿವಾಟಿಗೆ ಬರುವ ಗ್ರಾಹಕರು ಆತುರದಿಂದ ರಸ್ತೆಯಲ್ಲೆ ವಾಹನ ನಿಲ್ಲಿಸಿ ತೆರಳುವುದರಿಂದ ರಸ್ತೆಯಲ್ಲಿ ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿದೆ. ತಿಂಗಳಲ್ಲಿ ೧ ರಿಂದ ೧೫ ವರೆಗೆ ಒಂದು ಬದಿ ೧೬ ರಿಂದ ೩೧ ರವರೆಗೆ ಮತ್ತೊಂದು ಬದಿಯಲ್ಲಿ ವಾಹನ ನಿಲುಗಡೆಗೊಳಿಸುವಂತೆ ಗ್ರಾಮ ಪಂಚಾಯಿತಿ ವತಿಯಿಂದ ಬೋರ್ಡ್ ಆಳವಡಿಸಿದರು ಕೂಡ ಇದನ್ನು ಯಾರು ಪಾಲಿಸುತಿಲ್ಲ.
ಮುಖ್ಯರಸ್ತೆಯ ಬದಿಯಲ್ಲಿಯೇ ನ್ಯಾಯಬೆಲೆ ಅಂಗಡಿ ಇದ್ದು ರಸ್ತೆಯ ಬದಿಯಲ್ಲಿ ವಾಹನ ನಿಲುಗಡೆಗೊಳಿಸಿ ನ್ಯಾಯ ಬೆಲೆ ಅಂಗಡಿಗೆ ತೆರಳುವುದರಿಂದ ಟ್ರಾಫಿಕ್ ಸಮಸ್ಯೆ ಮತ್ತಷ್ಟು ಬಿಗಡಾಯಿಸುತ್ತಿದೆ. ನ್ಯಾಯ ಬೆಲೆ ಅಂಗಡಿಗೆ ತೆರಳುವವರು ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಮಾಡಿದ ಸ್ಥಳದಲ್ಲಿ ವಾಹನ ನಿಲುಗಡೆಗೊಳಿಸಿ ತೆರಳಿದರೆ ಸಮಸ್ಯೆ ಬಗೆಹರಿಯಲಿದೆ.
ಸ್ಥಳೀಯ ವರ್ತಕರು ಅಂಗಡಿ ಮುಂದೆ ವಾಹನ ನಿಲುಗಡೆ ಗೊಳಿಸಬಾರದು ಸ್ಥಳೀಯ ವರ್ತಕರು ತಮ್ಮ ವಾಹನಗಳನ್ನು ಅಂಗಡಿ ಮುಂದೆ ನಿಲುಗಡೆ ಗೊಳಿಸದೆ ವಾಹನ ನಿಲುಗಡೆಗೆ ನಿಯೋಜಿಸಿದ ಬದಿಯಲ್ಲಿ ವಾಹನ ನಿಲುಗಡೆ ಗೊಳಿಸಿದರೆ ಟ್ರಾಫಿಕ್ ಸಮಸ್ಯೆ ತಪ್ಪಿಸ ಬಹುದು.
ಗ್ರಾಮ ಪಂಚಾಯಿತಿ ವತಿಯಿಂದ ನಾಮಫಲಕ ಅಳವಡಿಕೆ
ಗ್ರಾಮ ಪಂಚಾಯಿತಿಯಿAದ ತಿಂಗಳಲ್ಲಿ ತಲಾ ೧೫ ದಿನ ಮುಖ್ಯರಸ್ತೆಯ ಉಭಯ ಬದಿಯಲ್ಲಿ ವಾಹನ ನಿಲುಗಡೆಗೊಳಿಸಲು ಪೂರಕ ಸೂಚನಾ ನಾಮಫಲಕ ಅಳವಡಿಸಲಾಗಿದೆ, ಆಟೋ ರಿಕ್ಷಾ ನಿಲ್ದಾಣ, ದ್ವಿಚಕ್ರ ವಾಹನ ನಿಲ್ದಾಣ ಹಾಗೂ ಮತ್ತಿತರ ವಾಹನಗಳನ್ನು ನಿಲುಗಡೆಗೊಳಿಸಲು ಸೂಕ್ತ ನಾಮಫಲಕ ಆಳವಡಿಸಲಾಗಿದೆ. ಆದರೂ ಯಾರೊಬ್ಬರೂ ಕೂಡ ಇದನ್ನು ಪಾಲಿಸುತಿಲ್ಲ.
ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು
ಪಟ್ಟಣದಲ್ಲಿ ಪೊಲೀಸರನ್ನು ನೇಮಿಸಿ ವಾಹನಗಳನ್ನು ಪಟ್ಟಣದ ರಸ್ತೆಯಲ್ಲಿ ಅಡ್ಡಾದಿಡ್ಡಿ ನಿಲುಗಡೆಗೊಳಿಸುವ, ಕಾನೂನು ಉಲ್ಲಂಘಿಸುವ ವಾಹನಕ್ಕೆ ಪೊಲೀಸ್ ಇಲಾಖೆ ದಂಡ ವಿಧಿಸಿದರೆ ಕಂಡಕAಡಲ್ಲಿ ವಾಹನಗಳ ನಿಲುಗಡೆಯನ್ನು ತಪ್ಪಿಸಬಹುದು ಹಾಗೂ ಟ್ರಾಫಿಕ್ ಸಮಸ್ಯೆ ಬಗೆಹರಿದು ಸಾರ್ವಜನಿಕರ ಹಾಗೂ ಪಾದಚಾರಿಗಳ ಮುಕ್ತ ಸಂಚಾರಕ್ಕೆ ಅನುವಾಗಲಿದೆ. - ಅಶ್ರಫ್