ಸೋಮವಾರಪೇಟೆ, ಮೇ ೧೮: ಯಡೂರು ಗ್ರಾಮದಲ್ಲಿರುವ ಬಿಟಿಸಿಜಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅಂತಿಮ ಬಿ.ಎ. ವಿದ್ಯಾರ್ಥಿಗಳು ಚುನಾವಣಾ ಸುಧಾರಣೆಗಳ ಬಗ್ಗೆ ಗ್ರಾಮೀಣ ಭಾಗದಲ್ಲಿ ಜಾಗೃತಿ ಮೂಡಿಸಿ, ಮತದಾರದಿಂದಲೂ ಅಭಿಪ್ರಾಯ ಪಡೆದುಕೊಂಡರು.

ವಿದ್ಯಾರ್ಥಿಗಳಾದ ಹಂಸಿನಿ, ಶ್ರೇಯಾ, ವೇದಕುಮಾರ್, ಜೀವನ್ ಅವರುಗಳು ಕರ್ಕಳ್ಳಿ ಕುಂದಳ್ಳಿ, ಯಡೂರು, ತಾಕೇರಿ ಗ್ರಾಮದಲ್ಲಿ ಮತದಾರ ಮನೆಗೆ ಭೇಟಿ ನೀಡಿ ಸಂವಾದ ನಡೆಸಿದರು. ಸೋಮವಾರಪೇಟೆ ತಾಲೂಕು ಕಚೇರಿಯ ಚುನಾವಣಾ ಶಾಖೆಗೆ ಭೇಟಿ ನೀಡಿದ ವಿದ್ಯಾರ್ಥಿಗಳು ಶಿರಸ್ಥೇದಾರ್ ವಿ.ಎನ್. ಲೋಹಿತ್ ಅವರಿಂದ ಮತಪತ್ರ ಮತ್ತು ಮತಯಂತ್ರದ ಬಗ್ಗೆ ಮಾಹಿತಿ ಪಡೆದುಕೊಂಡರು. ವಿವಿಪ್ಯಾಟ್ ವಿನ್ಯಾಸ ಮತ್ತು ನಿರ್ವಹಣೆಯ ಬಗ್ಗೆ, ಕಡ್ಡಾಯ ಮತದಾನ, ವೋಟರ್ ಹೆಲ್ಪ್ಲೈನ್ ಆ್ಯಪ್ ಬಗ್ಗೆ ಮಾಹಿತಿ ಪಡೆದುಕೊಂಡರು.

ಲೋಹಿತ್, ಹಂಸಿನಿ, ಶ್ರೇಯಾ, ವೇದಕುಮಾರ್, ಜೀವನ್ ಇದ್ದರು.