ಮಡಿಕೇರಿ, ಮೆ ೧೫ : ಕೊಡಗಿನಲ್ಲಿ ಮಳೆಗಾಲ ಆರಂಭವಾಯಿತೆAದರೆ ಬರೆ ಕುಸಿತ, ರಸ್ತೆ ಸಂಪರ್ಕ ಕಡಿತ, ಮನೆಗಳು ಕುಸಿತದಂತಹ ಅವಾಂತರಗಳು ಸಂಭವಿಸುತ್ತಲೇ ಇರುತ್ತವೆ. ಈ ಸಮಸ್ಯೆಗಳೊಂದಿಗೆ ವಿದ್ಯುತ್ ಸಂಪರ್ಕ ಕಡಿತಗೊಂಡು ವಿದ್ಯುತ್ ವ್ಯತ್ಯಯ ಉಂಟಾಗುವುದು ಕೂಡ ಇಲ್ಲಿನ ಜನತೆಗೆ ಸಂಕಷ್ಟವನ್ನು ತಂದೊಡ್ಡುತ್ತದೆ. ಮಳೆ ಗಾಳಿಯ ರಭಸದ ನಡುವೆ ವಿದ್ಯುತ್ ವ್ಯವಸ್ಥೆಯನ್ನು ಸಮರ್ಪಕವಾಗಿ ನಿಭಾಯಿಸುವುದು ಸೆಸ್ಕ್ಗೆ ಒಂದು ರೀತಿಯಲ್ಲಿ ಸವಾಲಿನ ಕೆಲಸ.ಈ ಹಿನ್ನೆಲೆಯಲ್ಲಿ ಇನ್ನೇನು ಕೆಲವೇ ದಿನಗಳಲ್ಲಿ ಮಳೆಗಾಲ ಪ್ರಾರಂಭವಾಗಲಿದ್ದು, ಮಳೆಗಾಲವನ್ನು ಎದುರಿಸುವ ನಿಟ್ಟಿನಲ್ಲಿ ಸೆಸ್ಕ್ ಸಕಲ ಮುಂಜಾಗ್ರತಾ ವ್ಯವಸ್ಥೆಗಳೊಂದಿಗೆ ಸನ್ನದ್ಧವಾಗಿದೆ.
ಹೆಚ್ಚುವರಿ ಸಿಬ್ಬಂದಿ
ಪ್ರಸ್ತುತ ಜಿಲ್ಲೆಯಲ್ಲಿ ೨೩೧ ಮಂದಿ ಖಾಯಂ ಲೈನ್ಮೆನ್ಗಳಿದ್ದಾರೆ. ಆದರೆ ಮಳೆಗಾಲದ ಸಂದರ್ಭದಲ್ಲಿ ೨೩೧ ಮಂದಿಯಿAದ ಮಾತ್ರ ಕಾರ್ಯನಿರ್ವಹಿಸಲು ಸಾಧ್ಯವಾಗುವುದಿಲ್ಲ. ಅಲ್ಲಲ್ಲಿ ವಿದ್ಯುತ್ ಸಮಸ್ಯೆಗಳು ನಿರಂತರವಾಗಿ ಕಾಣಿಸಿಕೊಳ್ಳುವುದರಿಂದ ಹೆಚ್ಚುವರಿ ಸಿಬ್ಬಂದಿಯ ಅವಶ್ಯಕತೆ ಎದುರಾಗುತ್ತದೆ.ಈ ಹಿನ್ನೆಲೆಯಲ್ಲಿ ಈಗಾಗಲೇ ೭೫ ಹೆಚ್ಚುವರಿ ತಾತ್ಕಾಲಿಕ ಲೈನ್ಮೆನ್ಗಳನ್ನು ನಿಯೋಜನೆ ಮಾಡಿಕೊಳ್ಳಲಾಗಿದೆ. ಜೂನ್ನಲ್ಲಿ ಪುನಹ ೫೦ ಮಂದಿಯನ್ನು ನಿಯೋಜನೆ ಮಾಡಿಕೊಳ್ಳಲಾಗುತ್ತದೆ. ಅಲ್ಲದೇ ಬೇರೆ ಬೇರೆ ಡಿವಿಷನ್ಗಳಲ್ಲಿರುವ ಖಾಯಂ ಸಿಬ್ಬಂದಿಗಳಲ್ಲಿ ೭೫ ಮಂದಿಯನ್ನು ಕೂಡ ಕೊಡಗಿಗೆ ಮಳೆಗಾಲಕ್ಕಾಗಿ ಕರೆಸಿಕೊಳ್ಳಲಾಗುತ್ತಿದೆ.
ಸಾಮಗ್ರಿ ದಾಸ್ತಾನು
ಕಳೆದ ಬಾರಿಯ ಮಳೆಗಾಲದಲ್ಲಿ ಮೂರು ಸಾವಿರಕ್ಕೂ ಅಧಿಕ ವಿದ್ಯುತ್ ಕಂಬಗಳಿಗೆ ಹಾನಿಯಾಗಿದ್ದು, ಪುನರ್ ಅಳವಡಿಕೆ ಕಾರ್ಯ ಮಾಡಲಾಗಿದೆ. ಈ ಬಾರಿಯ ಮಳೆಗಾಲಕ್ಕೆ ಅಗತ್ಯವಿರುವಲ್ಲಿಗೆ ಈಗಾಗಲೇ ಕಂಬಗಳನ್ನು ಕೊಂಡೊಯ್ದು ದಾಸ್ತಾನು ಮಾಡಲಾಗಿದೆ. ೧೦೨ ಟಿ.ಸಿ.ಗಳನ್ನು ಇರಿಸಿಕೊಳ್ಳಲಾಗಿದೆ.
ಹೆಚ್ಚುವರಿ ವಾಹನ
ಪ್ರಸ್ತುತ ಜಿಲ್ಲೆಯಲ್ಲಿ ಸೆಸ್ಕ್ನ ೨೩ ವಿಭಾಗಗಳಿದ್ದು ಎಲ್ಲಾ ವಿಭಾಗಗಳಿಗೂ ಒಂದೊAದು ವಾಹನವಿದೆಯಾದರೂ ಮಳೆಗಾಲಕ್ಕಾಗಿ ಎಲ್ಲಾ ವಿಭಾಗಗಳಿಗೂ ಹೆಚ್ಚುವರಿಯಾಗಿ ಒಂದೊAದು ವಾಹನಗಳನ್ನು ನೀಡಲಾಗುತ್ತಿದೆ. ಐದು ಉಪ ವಿಭಾಗಗಳಿಗೂ ವಿದ್ಯುತ್ ಕಂಬಗಳ ಸಾಗಾಟಕ್ಕಾಗಿ ಹೆಚ್ಚುವರಿಯಾಗಿ ಒಂದೊAದು ಲಾರಿಯನ್ನು ಬಳಸಿಕೊಳ್ಳಲಾಗುತ್ತದೆ.
ಸುರಕ್ಷಾ ಸಾಮಗ್ರಿಗಳು
ಮಳೆಗಾಲದ ಸಂದರ್ಭ ಕರ್ತವ್ಯ ನಿರ್ವಹಿಸುವ ಲೈನ್ಮೆನ್ಗಳಿಗೆ ಹೆಲ್ಮೆಟ್, ಗ್ಲೌಸ್ ಹಾಗೂ ಟೂಲ್ ಕಿಟ್ಗಳನ್ನು ಈಗಾಗಲೇ ನೀಡಲಾಗಿದ್ದು, ಗಂಬೂಟು ಹಾಗೂ ರೈನ್ಕೋಟನ್ನು ಈ ತಿಂಗಳ ಅಂತ್ಯದೊಳಗೆ ವಿತರಿಸಲಾಗುತ್ತದೆ. ವಿದ್ಯುತ್ ಸಂಪರ್ಕಕ್ಕೆ ಅಡಚಣೆಯಾಗದಂತೆ ಕಾಡು ಕಡಿಯುವ ಕಾರ್ಯವನ್ನೂ ಸೆಸ್ಕ್ ಕೈಗೊಂಡಿದೆ
ಸಹಾಯವಾಣಿಗೆ ಚಾಲನೆ
ಮಳೆಗಾಲದ ಸಂದರ್ಭ ಯಾವುದೇ ರೀತಿಯ ವಿದ್ಯುತ್ ಸಮಸ್ಯೆಗಳು ಉಂಟಾದರೆ ಸಾರ್ವಜನಿಕರು ವಿದ್ಯುತ್ ಇಲಾಖೆಗೆ ಮಾಹಿತಿ ನೀಡಲು ಅನುಕೂಲವಾಗುವಂತೆ ಸಹಾಯವಾಣಿಗೆ ಈಗಾಗಲೇ ಚಾಲನೆ ನೀಡಲಾಗಿದೆ. ಸಾರ್ವಜನಿಕರು ಯಾವುದೇ ರೀತಿಯ ವಿದ್ಯುತ್
(ಮೊದಲ ಪುಟದಿಂದ) ಜಾಲದ ವ್ಯತ್ಯಯಗಳನ್ನು (ವಿದ್ಯುತ್ ಮಾರ್ಗದ ತಂತಿ ಹಾಗೂ ಕಂಬಗಳು ತುಂಡಾಗುವುದು) ಗಮನಿಸಿದಲ್ಲಿ, ಸ್ವತಃ ಕ್ರಮಕೈಗೊಳ್ಳದೇ (ವಿದ್ಯುತ್ ತಂತಿ ಸ್ಪರ್ಶಿಸದೇ) ತಕ್ಷಣ ಚಾ.ವಿ.ಸ.ನಿನಿ.ಯ ದೂರವಾಣಿ ಸಂಖ್ಯೆಗಳಲ್ಲಿ ತಮ್ಮ ದೂರುಗಳನ್ನು ದಾಖಲಿಸಬಹುದು. ಗ್ರಾಹಕರು ಸಂಪರ್ಕಿಸಲು ಸಾಧ್ಯವಾಗದಿದ್ದಲ್ಲಿ ಪರ್ಯಾಯವಾಗಿ ವಾಟ್ಸಾö್ಯಪ್ ಮೂಲಕ ಫೋಟೋ ಸಂದೇಶ ನೀಡಬಹುದಾಗಿದೆ.
ಕೊಡಗು ಜಿಲ್ಲೆಯ (೨೪x೭) ಸಹಾಯವಾಣಿ ಸಂಖ್ಯೆ ಸರ್ವೀಸ್ ಸೆಂಟರ್ನ ದೂರವಾಣಿ ಸಂಖ್ಯೆ ೧೯೧೨, ಗ್ರಾಹಕರ ಸೇವಾ ಕೇಂದ್ರ ಸಂಖ್ಯೆ ೯೪೪೯೫೯೮೬೬೫.
ಮಡಿಕೇರಿ ತಾಲೂಕಿನ ಮಡಿಕೇರಿ ತಾಳತ್ಮನೆ, ಮೂರ್ನಾಡು, ಸಂಪಾಜೆ, ಭಾಗಮಂಡಲ, ನಾಪೋಕ್ಲು ಹಾಗೂ ಗ್ರಾಹಕರ ಸೇವಾ ಕೇಂದ್ರಕ್ಕೆ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ವಿನಯ ಕುಮಾರ್ ೯೪೪೯೫೯೮೬೦೨, ಸಹಾಯಕ/ ಜೂನಿಯರ್ ಇಂಜಿನಿಯರ್ಗಳು ಮಡಿಕೇರಿಗೆ ಚೈತ್ರ ೯೪೪೯೫೯೮೬೦೩, ತಾಳತ್ಮನೆ ಹೇಮಂತ್ ರಾಜ್ ೯೪೪೯೫೯೮೬೦೪, ಮೂರ್ನಾಡು ಶಾಖೆಗೆ ಚೈತ್ರೇಶ್ ೯೪೪೯೫೯೮೬೦೫, ಸಂಪಾಜೆಗೆ ಅನಿಲ್ ಕುಮಾರ್ ೯೪೪೮೯೯೪೮೫೧, ಭಾಗಮಂಡಲ ಹರಿಣಾಕ್ಷಿ ೯೪೮೦೮೧೦೩೪೪, ನಾಪೋಕ್ಲು ಶಾಖೆಗೆ ಹರೀಶ್ ೯೪೪೯೫೯೮೬೦೬ ಹಾಗೂ ಗ್ರಾಹಕರ ಸೇವಾ ಕೇಂದ್ರ ದೂ.ಸಂ. ೦೮೨೭೨-೨೪೮೪೫೪ ಮತ್ತು ೯೪೪೯೫೯೮೬೬೫. ಕುಶಾಲನಗರ ತಾಲೂಕಿನ ಸುಂಟಿಕೊಪ್ಪ, ಕುಶಾಲನಗರ, ಕೂಡಿಗೆ, ಮಾದಾಪುರ, ಚೆಟ್ಟಳ್ಳಿ, ಗ್ರಾಹಕರ ಸೇವಾ ಕೇಂದ್ರಕ್ಕೆ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಮಂಜುನಾಥ ೯೪೪೯೫೯೮೫೩೮, ಸಹಾಯಕ/ಜೂನಿಯರ್ ಇಂಜಿನಿಯರ್ಗಳು ಸುಂಟಿಕೊಪ್ಪ ಶಾಖೆಗೆ ಲವಕುಮಾರ್ ಕೆ.ಎ. ೯೪೪೯೫೯೮೬೧೫, ಕುಶಾಲನಗರ ಸೋಮೇಶ್ ಕೆ.ವಿ. ೯೪೪೯೫೯೮೫೮೯, ಕೂಡಿಗೆ ಶಾಖೆಗೆ ರಾಣಿ ೯೪೪೯೫೯೮೬೧೩, ಮಾದಾಪುರ ನಿರಂಜನ್ ಎಸ್.ಜಿ. ೯೪೪೯೫೯೮೫೮೮, ಚೆಟ್ಟಳ್ಳಿ ಮಂಜುನಾಥ ಜೆ.ಆರ್. ೯೪೪೮೪೯೯೯೬೫ ಹಾಗೂ ಗ್ರಾಹಕರ ಸೇವಾ ಕೇಂದ್ರ ೦೮೨೭೬-೨೭೧೦೪೬.
ಸೋಮವಾರಪೇಟೆ ತಾಲೂಕಿನ ಸೋಮವಾರಪೇಟೆ, ಶನಿವಾರಸಂತೆ, ಕೊಡ್ಲಿಪೇಟೆ, ಆಲೂರು ಸಿದ್ದಾಪುರ, ಶಾಂತಳ್ಳಿ, ಗ್ರಾಹಕರ ಸೇವಾ ಕೇಂದ್ರ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ವಿನಯ ಕುಮಾರ್ ೯೪೪೯೫೯೮೬೧೨, ಸಹಾಯಕ/ಜೂನಿಯರ್ ಇಂಜಿನಿಯರ್ಗಳು ಸೋಮವಾರಪೇಟೆ ಶಾಖೆಗೆ ಶಿವಪ್ರಸಾದ್ ೯೪೪೯೫೯೮೬೧೪, ಶನಿವಾರಸಂತೆ ಸುದೀಪ್ ಕುಮಾರ್ ೯೪೪೯೫೯೮೬೧೬, ಕೊಡ್ಲಿಪೇಟೆ ಶಾಖೆಗೆ ಪ್ರಕಾಶ್ ೯೪೪೯೫೯೮೬೧೭, ಆಲೂರು ಸಿದ್ದಾಪುರ ಮನುಕುಮಾರ್ ೯೪೪೯೫೯೮೬೨೨, ಶಾಂತಳ್ಳಿ ಎಚ್.ಡಿ. ಲೋಕೇಶ್ (ಪ್ರಭಾರ) ೯೪೮೦೮೩೭೫೦೯, ಗ್ರಾಹಕರ ಸೇವಾ ಕೇಂದ್ರ ೯೪೪೮೨೮೩೩೯೪. ವೀರಾಜಪೇಟೆ ತಾಲೂಕಿನ ವೀರಾಜಪೇಟೆ, ಅಮ್ಮತ್ತಿ, ಸಿದ್ದಾಪುರ, ಪಾಲಿಬೆಟ್ಟ, ಗ್ರಾಹಕರ ಸೇವಾ ಕೇಂದ್ರಕ್ಕೆ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಸುರೇಶ್ ೯೪೮೦೮೩೭೫೪೫, ಸಹಾಯಕ/ಜೂನಿಯರ್ ಇಂಜಿನಿಯರ್ಗಳು ವೀರಾಜಪೇಟೆಗೆ ಅಭಿಷೇಕ್ ೯೪೪೯೫೯೮೬೧೦, ಅಮ್ಮತ್ತಿ ಮನೋಜ್ ೯೪೪೮೯೯೪೩೪೪, ಸಿದ್ದಾಪುರ ಶಾಖೆಗೆ ಸ್ವರಾಗ್ ೯೪೪೯೫೯೮೬೧೧, ಪಾಲಿಬೆಟ್ಟ ಶಿವರಾಜ ೯೪೪೮೯೯೪೩೪೧, ಗ್ರಾಹಕರ ಸೇವಾ ಕೇಂದ್ರ ೯೪೪೮೨೮೯೪೧೦. ಪೊನ್ನಂಪೇಟೆ ತಾಲೂಕಿನ ಗೋಣಿಕೊಪ್ಪಲು, ಶ್ರೀಮಂಗಲ, ಬಾಳೆಲೆ ಹಾಗೂ ಗ್ರಾಹಕರ ಸೇವಾ ಕೇಂದ್ರ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಸತೀಶ್ ೯೪೪೯೫೯೮೬೦೭, ಸಹಾಯಕ/ಜೂನಿಯರ್ ಇಂಜಿನಿಯರ್ಗಳು ಗೋಣಿಕೊಪ್ಪ ಶಾಖೆಗೆ ಹೇಮಂತ್ ಕುಮಾರ್ ೯೪೪೯೫೯೮೬೦೮, ಶ್ರೀಮಂಗಲ ನಾಗೇಂದ್ರ ಪ್ರಸಾದ್ ೯೪೪೯೫೯೮೬೦೯, ಬಾಳೆಲೆ ಶಾಖೆಗೆ ರಂಗಸ್ವಾಮಿ ೯೪೪೯೫೯೭೪೮೪, ಗ್ರಾಹಕರ ಸೇವಾ ಕೇಂದ್ರ ೯೪೪೮೨೮೩೩೯೪ ಹಾಗೂ ಕಾರ್ಯನಿರ್ವಾಹಕ ಇಂಜಿನಿಯರ್ (ವಿ) ಎಂ. ರಾಮಚಂದ್ರ ದೂ.ಸಂ. ೯೪೪೯೫೯೮೬೦೧ ನ್ನು ಸಂಪರ್ಕಿಸಬಹುದಾಗಿದೆ.
ಲೈನ್ ಮೆನ್ಗಳಿಗೆ ಇಲಾಖೆಯ ಸಿಮ್
ಸಹಾಯವಾಣಿ ವ್ಯವಸ್ಥೆಯೊಂದಿಗೆ ಲೈನ್ಮೆನ್ಗಳಿಗೆ ಸೆಸ್ಕ್ನಿಂದ ನೂತನ ಸಿಮ್ ವಿತರಿಸಲಾಗಿದ್ದು, ಲೈನ್ಮೆನ್ಗಳ ನಂಬರ್ಗಳ ಮಾಹಿತಿಯನ್ನು ಕೂಡ ಸಾರ್ವಜನಿಕರಿಗೆ ಸದ್ಯದಲ್ಲೇ ಮಾಧ್ಯಮಗಳ ಮೂಲಕ ನೀಡಿ ಆ ನಂಬರ್ಗಳ ಮೂಲಕವೂ ಸಾರ್ವಜನಿಕರು ತಮ್ಮ ವಿದ್ಯುತ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಅನುಕೂಲವಾಗುವಂತೆ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಸೆಸ್ಕ್ನ ಕಾರ್ಯಪಾಲಕ ಅಭಿಯಂತರ ಎಂ. ರಾಮಚಂದ್ರ ಮಾಹಿತಿ ನೀಡಿದ್ದಾರೆ.
- ಉಜ್ವಲ್ ರಂಜಿತ್