ನವದೆಹಲಿ, ಮೇ ೮: ಭಾರತದ ತಾಳ್ಮೆಯನ್ನು ಪರೀಕ್ಷಿಸಿದರೆ ಗುಣಮಟ್ಟದ ಪ್ರತಿಕ್ರಿಯೆ ನೀಡಲು ದೇಶವು ಸಂಪೂರ್ಣವಾಗಿ ಸಿದ್ಧವಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಗುರುವಾರ ಪಾಕಿಸ್ಥಾನಕ್ಕೆ ಎಚ್ಚರಿಕೆ ನೀಡಿದ್ದಾರೆ.

ದೆಹಲಿಯಲ್ಲಿ ಮಾತನಾಡಿದ ರಾಜನಾಥ್ ಸಿಂಗ್, "ನಮ್ಮ ರಾಷ್ಟ್ರವನ್ನು ರಕ್ಷಿಸುವ ವಿಚಾರದಲ್ಲಿ ಯಾವುದೇ ಮಿತಿ ನಮ್ಮನ್ನು ತಡೆಯಲು ಸಾಧ್ಯವಿಲ್ಲ. ಯಾವುದೇ ಜವಾಬ್ದಾರಿಯುತ ಪ್ರತಿಕ್ರಿಯೆಗೆ ನಾವು ಸಂಪೂರ್ಣವಾಗಿ ಸಿದ್ಧರಿದ್ದೇವೆ. ನಮ್ಮ ವಿಸ್ತರಿಸುತ್ತಿರುವ ರಕಣಾ ಕೈಗಾರಿಕಾ ವಲಯವು ನಮಗೆ ಅಭೂತಪೂರ್ವ ಶಕ್ತಿಯನ್ನು ನೀಡುತ್ತಿದೆ" ಎಂದು ಹೇಳಿದರು.

"ನಾವು ಭಾರತೀಯ ರಕ್ಷಣಾ ಉದ್ಯಮವನ್ನು ಬಲವಾದ ಮತ್ತು ವಿಶ್ವಾಸಾರ್ಹ ಬ್ರಾಂಡ್ ಆಗಿ ಮಾಡಬೇಕಾಗಿದೆ. ಅದು ಪ್ರಬಲವಾದ ವಿಶ್ವ ನಾಯಕ ಮತ್ತು ಅತ್ಯಾಧುನಿಕ ಬ್ರಾಂಡ್ ಭಾರತವನ್ನು ನಿರ್ಮಿಸುವುದಾಗಿದೆ. ಹಲವು ದೇಶಗಳಿಗೆ ರಕಣಾ ಮಾರುಕಟ್ಟೆಯಲ್ಲಿ ಉತ್ಪನ್ನಗಳ ಬಗ್ಗೆ ಸಂದೇಹಗಳನ್ನು ಹೊಂದಿರುವಾಗ, ಅವರು ಬ್ರಾಂಡ್ ಇಂಡಿಯಾವನ್ನು ಆಯ್ಕೆ ಮಾಡುತ್ತಾರೆ. ಸಂದೇಹ ಬಂದಾಗಲೆಲ್ಲಾ ಭಾರತಕ್ಕೆ ಬರಬೇಕು. ಅದು ನಮ್ಮ ಪ್ರಮುಖ ಆದ್ಯತೆ ಆಗಿರಬೇಕು" ಎಂದರು.