ಚೆಯ್ಯಂಡಾಣೆ/ಕಡAಗ, ಏ. ೨೭: ಸುನ್ನಿ ಯುವಜನ ಸಂಘ (ಎಸ್ವೈಎಸ್) ಹಾಗೂ ಸಮಸ್ತ ಕೇರಳ ಸುನ್ನಿ ಸ್ಟೂಡೆಂಟ್ ಫೆಡರೇಷನ್ (ಎಸ್ ಕೆ ಎಸ್ ಎಸ್ ಎಫ್) ಕಡಂಗ ಶಾಖೆಯ ಸಂಯುಕ್ತ ಆಶ್ರಯದಲ್ಲಿ ಕಡಂಗ ಕೊಕ್ಕಂಡಬಾಣೆ ದರ್ಗಾ ಷರೀಫ್ ವಠಾರದ ಸಂಶುಲ್ ಉಲಮಾ ನಗರದಲ್ಲಿ ೫ ಬಡ ಹೆಣ್ಣುಮಕ್ಕಳ ಸಾಮೂಹಿಕ ವಿವಾಹ ಕಾರ್ಯಕ್ರಮ ಜರುಗಿತು.
ಕೊಡಗು ಜಿಲ್ಲಾ ಖಾಝಿ ಸಯ್ಯದ್ ಮುಹಮ್ಮದ್ ಕೋಯಾ ಜಮಲುಲೈಲಿ ತಂಙಳ್ ನಿಖಾ ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿ, ಸಂಘಟನೆ ಹಮ್ಮಿಕೊಂಡ ವಿವಾಹ ಕಾರ್ಯಕ್ರಮ ನಿಜಕ್ಕೂ ಶ್ಲಾಘನೀಯ. ಇಂತಹ ಕಾರ್ಯಕ್ರಮ ಇಲ್ಲದಿದ್ದರೆ ಬಡ ಮಕ್ಕಳು, ಅನಾಥರು ವಿವಾಹವಾಗಲು ಕಷ್ಟಸಾಧ್ಯ ಎಂದು ದುಆ ಆಶೀರ್ವಚನ ನೀಡಿದರು.
ಕಡಂಗ ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೋಡಿರ ಪ್ರಸನ್ನ ತಮ್ಮಯ್ಯ ಮಾತನಾಡಿ ೫ ಬಡ ಹೆಣ್ಣುಮಕ್ಕಳ ವಿವಾಹ ಇದೊಂದು ಮಹತ್ಕಾರ್ಯ ಎಂದರು. ಎಸ್ವೈಎಸ್ ಜಿಲ್ಲಾಧ್ಯಕ್ಷ ಬಶೀರ್ ಹಾಜಿ ಮಾತನಾಡಿ ಯಾವುದೇ ಜಾತಿ, ಧರ್ಮದವರು ತೊಂದರೆ ಅನುಭವಿಸುತ್ತಿದ್ದರೆ ಅವರಿಗೆ ನೇರವಾಗುವುದು ಬಹುಮುಖ್ಯ ಎಂದರು.
ಖ್ಯಾತ ವಾಗ್ಮಿ ನೌಶಾದ್ ಬಾಖವಿ ತಿರುವನಂತಪುರA ಧಾರ್ಮಿಕ ಮತ ಪ್ರವಚನ ನೀಡಿ ಮಾತನಾಡಿ, ದಾನ, ಧರ್ಮ ಬಹುಮುಖ್ಯ. ಬಡ ಹೆಣ್ಣು ಮಕ್ಕಳ ಸಂಕಷ್ಟವನ್ನು ಅರಿತು ಇಂತಹ ಕಾರ್ಯಕ್ರಮ ಹಮ್ಮಿಕೊಂಡಿರುವುದು ಹಾಗೂ ದಾನಿಗಳು ಇದಕ್ಕೆ ಪ್ರೋತ್ಸಾಹಿಸುತ್ತಿರುವುದು ಸಮಾಜಕ್ಕೆ ಮಾದರಿಯಾಗಿದೆ ಎಂದರು.
ಕೊಟ್ಟಮುಡಿ, ಸುಂಟಿಕೊಪ್ಪ, ಪಿರಿಯಾಪಟ್ಟಣ, ತ್ಯಾಗತ್ತೂರು, ತಿತಿಮತಿಯ ವಧುವನ್ನು ಆಯ್ಕೆ ಮಾಡಲಾಗಿತ್ತು. ಕಾರ್ಯಕ್ರಮದಲ್ಲಿ ವಧು, ವರರಿಗೆ ಬೇಕಾದ ಮಾಂಗಲ್ಯ ಚಿನ್ನಭರಣ, ವಸ್ತç, ಕೈ ಗಡಿಯಾರವನ್ನು ಸಂಘಟನೆ ಉದಾರವಾಗಿ ನೀಡಿತು.
ಕೊಡಗು ಜಿಲ್ಲಾ ನಾಇಬ್ ಖಾಝಿ ಹಾಗೂ ಸಮಸ್ತ ಕೇಂದ್ರ ಮುಶಾವರ ಸದಸ್ಯರಾದ ಎಂ.ಎA. ಅಬ್ದುಲ್ಲ ಫೈಝಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಕಡಂಗ ಮೊಯ್ಯದ್ದೀನ್ ಮಸೀದಿಯ ಖತೀಬ್ ರಫೀಕ್ ಲತೀಫಿ ಉದ್ಘಾಟಿಸಿದರು.
ಈ ಸಂದರ್ಭ ಕೊಡಗು ಜಿಲ್ಲಾ ವಕ್ಫ್ ಬೋರ್ಡ್ ಮಾಜಿ ಅಧ್ಯಕ್ಷ ಹಾಗೂ ಡಿಸಿಸಿ ಸದಸ್ಯರಾದ ಯಾಕೂಬ್, ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಹನೀಫ್, ನಾಪೋಕ್ಲು ಜಮಾಅತ್ ಅಧ್ಯಕ್ಷ ಅಬ್ದುಲ್ ರಹ್ಮಾನ್, ಕಡಂಗ ಬದ್ರಿಯಾ ಜಮಾಅತ್ ಅಧ್ಯಕ್ಷ ಉಸ್ಮಾನ್ ಕೆ.ಇ, ಎಡಪಾಲ ಜಮಾಅತ್ ಅಧ್ಯಕ್ಷ ಬಶೀರ್, ಮೊಯಿದ್ದಿನ್ ಮುಸ್ಲಿಯಾರ್, ವೀರಾಜಪೇಟೆ ಪಟ್ಟಣ ಪಂಚಾಯಿತಿ ಸದಸ್ಯ ಮೊಹಮ್ಮದ್ ರಾಫಿ, ಹೊದ್ದೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಎಚ್.ಎ.ಹಂಸ, ಯೂಸುಫ್ ಮುಸ್ಲಿಯಾರ್, ಉಮ್ಮರ್ ಫೈಝಿ, ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಸ್ಮಾಯಿಲ್, ಗ್ರಾಮ ಪಂಚಾಯಿತಿ ಸದಸ್ಯ ಸುಬೈರ್, ಜಮಾಅತ್ ಕಾರ್ಯದರ್ಶಿ ಅಬ್ದುಲ್ ರಹ್ಮನ್,ತಮ್ಲಿಕ್ ದಾರಿಮಿ, ಎಸ್ಕೆಎಸ್ಎಸ್ಎಫ್ ಜಿಲ್ಲಾಧ್ಯಕ್ಷ ಸುಹೈಬ್ ಫೈಝಿ, ಕಡಂಗ ಎಸ್ವೈಎಸ್ ಅಧ್ಯಕ್ಷ ಮಾಹಿನ್ ದಾರಿಮಿ, ಪ್ರಧಾನ ಕಾರ್ಯದರ್ಶಿ ಹಾರಿಸ್, ಉಪಾಧ್ಯಕ್ಷ ಯೂಸುಫ್, ಕೋಶಾಧಿಕಾರಿ ಅಬ್ದುಲ್ ರಹ್ಮಾನ್, ಎಸ್ಕೆಎಸ್ಎಸ್ಎಫ್ ಉಪಾಧ್ಯಕ್ಷ ಜುನೈದ್, ಕಾರ್ಯದರ್ಶಿ ಇಕ್ಬಾಲ್, ಕೋಶಾಧಿಕಾರಿ ಸಮದ್, ಶಾಫಿ ಎಡಪಾಲ, ಯೂಸುಫ್ ಮುಸ್ಲಿಯಾರ್, ಉಸ್ಮಾನ್ ಫೈಝಿ, ಉಮ್ಮರ್ ಫೈಝಿ, ಹನೀಫ್ ಫೈಝಿ, ಬದ್ರಿಯಾ ಮಸೀದಿಯ ಸದರ್ ಹುಸೈನಾರ್ ಸಅದಿ, ಗ್ರಾ.ಪಂ.ಸದಸ್ಯ ಮಮ್ಮದ್, ಮಾಜಿ ಸದಸ್ಯ ಪ್ರಕಾಶ್, ಪಾಲಚಂಡ ಅಜಿತ್, ಉಲ್ಲಾಸ್, ರಸಿ, ನಿವೃತ್ತ ಸೈನಿಕ ಸಲಾಂ ಹಾಗೂ ಸಂಘಟನೆಯ ಪ್ರಮುಖರು, ಕಾರ್ಯಕರ್ತರು ಮತ್ತಿತರರು ಉಪಸ್ಥಿತರಿದ್ದರು.
ಧ್ವಜಾರೋಹಣವನ್ನು ಮೊಯ್ಯದ್ದೀನ್ ಜಮಾಅತ್ ಅಧ್ಯಕ್ಷ ಕುಂಞ ಅಬ್ದುಲ್ಲ ಹಾಗೂ ಎಸ್ ಕೆ ಎಸ್ ಎಸ್ ಎಫ್ ಅಧ್ಯಕ್ಷ ಇಸಾಕ್ ಜಂಟಿಯಾಗಿ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಮೊಹಮ್ಮದಲಿ ಶಿಯಾಬ್ ತಂಙಳ್ ಅರೆಬಿಕ್ ಕಾಲೇಜು ಪ್ರಿನ್ಸಿಪಾಲ್ ಉಸ್ಮಾನ್ ಫೈಝಿ ಪ್ರಾರ್ಥಿಸಿ, ಇಬ್ರಾಹಿಂ ಬಾದುಷಾ ಕೊಡ್ಲಿಪೇಟೆ ನಿರೂಪಿಸಿ, ಸುಹೈಬ್ ಫೈಝಿ ಸ್ವಾಗತಿಸಿ, ವಂದಿಸಿದರು.