ವೀರಾಜಪೇಟೆ, ಮಾ. ೨೨: ದೇಶಕ್ಕಾಗಿ ತಮ್ಮ ಜೀವನವನ್ನೇ ಅರ್ಪಿಸುವಂತಹ ಯುವಜನತೆ ಯನ್ನು ವಿವೇಕಾನಂದರು ಅಪೇಕ್ಷಿಸಿದ್ದರು. ಒಳ್ಳೆಯ ಉದ್ದೇಶ, ಸತ್ಯಸಂಧತೆ ಮತ್ತು ಅನಂತಪ್ರೇಮ ಇವು ಜಗತ್ತನ್ನೇ ಗೆಲ್ಲಬಲ್ಲವು. ಈ ಸದ್ಗುಣಗಳನ್ನು ಹೊಂದಿದ ಒಬ್ಬನೇ ವ್ಯಕ್ತಿ ಕೋಟ್ಯಂತರ ದುಷ್ಟರ, ದುರುಳರ ಕಪಟ ಜಾಲವನ್ನು ನಾಶಮಾಡಬಹುದು ಎಂದು ಲಕ್ಷಿ÷್ಮÃ ಎಸ್ಟೇಟ್ ಮಾಲೀಕ ಕೆ.ಪಿ. ಉತ್ತಪ್ಪ ಅಭಿಪ್ರಾಯಪಟ್ಟರು.

ವೀರಾಜಪೇಟೆ ಕಾವೇರಿ ಕಾಲೇಜಿನಲ್ಲಿ ದಿವಂಗತ ಕೂತಂಡ ಪೂವಯ್ಯ ಮತ್ತು ಪಾರ್ವತಿ ಪೂವಯ್ಯ ಸ್ಮರಣಾರ್ಥ ‘ಸ್ವಾಮಿ ವಿವೇಕಾನಂದರ ಜೀವನ ಹಾಗೂ ಸಾಧನೆ’ ಎಂಬ ವಿಷಯದ ಬಗ್ಗೆ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಭಾಷಣ ಸ್ಪರ್ಧೆಯ ಉದ್ಘಾಟನಾ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಅವರು, ವಿವೇಕಾನಂದರು ಅದ್ಭುತ ದೇಶಭಕ್ತ, ಚಿಂತಕ, ಧಾರ್ಮಿಕ ನಾಯಕ. ಮಾನವೀಯರಾಗಿ ಬದುಕುವುದನ್ನು ಕಲಿಸಿದ, ಆತ್ಮಜಾಗೃತಿ ಹೊಂದುವAತೆ ಬೋಧಿಸಿದ ಸಂತ. ಅವರ ಕೊಲಂಬೊದಿAದ ಅಲ್ಮೇರ ಪುಸ್ತಕವನ್ನು ಯುವಜನರು ಹೆಚ್ಚಾಗಿ ಓದಬೇಕು. ಇದರಿಂದ ಸ್ವಾಮಿ ವಿವೇಕಾನಂದರ ಜೀವನ ಮತ್ತು ಸಾಧನೆ, ಅವರು ನಡೆಸಿದಂತಹ ಸಮಾಜ ಸೇವೆಯ ಕಾರ್ಯಗಳು ಯುವಸಮೂಹಕ್ಕೆ ತಿಳಿಯಲು ಸಾಧ್ಯ ಎಂದರು.

ಪೊನ್ನAಪೇಟೆ ಶ್ರೀ ರಾಮಕೃಷ್ಣ ಶಾರದಾಶ್ರಮದ ಅಧ್ಯಕ್ಷ ಸ್ವಾಮಿ ಪರಹಿತಾನಂದರು ಮಾತನಾಡಿ, ಇಂತಹ ಕಾರ್ಯಕ್ರಮ ನಡೆಯುತ್ತಿರುವುದು ಸ್ವಾಗತಾರ್ಹವಾದದ್ದು. ಪೊನ್ನಂಪೇಟೆ ಶಾರದಾಆಶ್ರಮ ೯೯ ವಸಂತಗಳನ್ನು ಪೂರ್ಣಗೊಳಿಸಿದ್ದು, ಈ ಆಶ್ರಮ ನಿರಂತರವಾಗಿ ವಿವೇಕಾನಂದರ ಕನಸಿನಂತೆ ಸಮಾಜಸೇವೆ ಕಾರ್ಯವನ್ನು ಮಾಡುತ್ತಾ ಬರುತ್ತಿದೆ. ವಿವೇಕಾನಂದರ ಕನಸು ನನಸಾಗಿಸಲು ಭಾರತೀಯರು ತಮ್ಮಲ್ಲಿ ಮುಖ್ಯವಾಗಿ ಸೇವಾ ಮನೋಭಾವನೆಯನ್ನು ರೂಢಿಸಿಕೊಳ್ಳುವುದರೊಂದಿಗೆ ಇತರರ ಯಶಸನ್ನು ಕಂಡು ಹೊಟ್ಟೆಕಿಚ್ಚು ಪಡದೆ ಅವರ ಯಶಸನ್ನು ಗೌರವಿಸುವ ಮನೋಭಾವ ಬೆಳೆಸಿಕೊಳ್ಳಬೇಕು.

ಪ್ರತಿಯೊಬ್ಬರಲ್ಲೂ ದೇವರು ಇದ್ದಾನೆ. ಆದರಿಂದ ಈ ಅಧ್ಯಾತ್ಮಿಕ ಶಕ್ತಿಯನ್ನು ಅರಿತು ಸರ್ವರನ್ನು ಗೌರವಿಸುವ ಗುಣವನ್ನು ಬೆಳೆಸಿಕೊಳ್ಳಬೇಕು. ನಮ್ಮ ಬೆಳವಣಿಗೆಗೆ ಕಾರಣೀಭೂತರಾದ ಶಿಕ್ಷಕರಿಗೆ, ಶಿಕ್ಷಣ ಸಂಸ್ಥೆಗೆ, ಸಮಾಜಕ್ಕೆ ಸದಾ ಋಣಿಗಳಾಗಿರಬೇಕು ಎಂದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾವೇರಿ ಕಾಲೇಜಿನ ಪ್ರಾಂಶುಪಾಲರಾದ ಬೆನೆಡಿಕ್ಟ್ ಆರ್. ಸಾಲ್ದಾನ, ಸಮಾಜದ ಕೆಡುಕು ಸರಿಪಡಿಸುವಂತಹ ಕಾರ್ಯವನ್ನು ಹಲವಾರು ಮಹನೀಯರು ಮಾಡಿದ್ದಾರೆ. ಇಂತಹ ಮಹನೀಯರಲ್ಲಿ ಅತ್ಯಂತ ಪ್ರಮುಖರಂದರೆ ಸ್ವಾಮಿ ವಿವೇಕಾನಂದರು. ಅವರಿಲ್ಲಿ ಜನಿಸಿದ ಉದ್ದೇಶವೇ ಸಮಾಜ ವನ್ನು ಸರಿಪಡಿಸುವುದೆಂದನಿಸುತ್ತದೆ. ಅವರು ಕೇವಲ ಒಂದು ಮನುಷ್ಯರಲ್ಲ ಮನುಷ್ಯ ಕುಲ ಅವರು ತಮ್ಮ ಜೀವನದಲ್ಲಿ ಮನುಷ್ಯತ್ವದ ಬಗ್ಗೆ ಬೋಧಿಸಿದಷ್ಟೇ ಅಲ್ಲ ಅದನ್ನು ಹೇಗೆ ಅಳವಡಿಸಿಕೊಂಡು ಬಾಳಬೇಕೆಂದು ತೋರಿಸಿದಂತವರು. ಆದ್ದರಿಂದ ಇಷ್ಟು ವರ್ಷಗಳು ಬಂದರೂ ಅವರ ಜೀವನ ಬೋಧನೆ ಪ್ರಸ್ತುತವೆನಿಸುತ್ತದೆ ಎಂದರು.

ಕಾರ್ಯಕ್ರಮದಲ್ಲಿ ವೀರಾಜಪೇಟೆ ಕಾವೇರಿ ಕಾಲೇಜಿನ ಕನ್ನಡ ವಿಭಾಗದ ನಿವೃತ್ತ ಪ್ರೊ. ದಂಬೆಕೋಡಿ ಪಿ.ಎ. ಸುಶೀಲಾ ಹಾಗೂ ಸರಕಾರಿ ಪಿ.ಯು. ಕಾಲೇಜು ಪಾಲಿಬೆಟ್ಟದ ನಿವೃತ್ತ ಉಪನ್ಯಾಸಕಿ ಡಾ. ಕೆ.ಎಂ. ಭವಾನಿ ಅವರನ್ನು ಅವರ ವಿಶಿಷ್ಟ ಸೇವೆಗಾಗಿ ಸನ್ಮಾನಿಸಿ, ಅಭಿನಂದಿಸಲಾಯಿತು.

ನAತರ ನಡೆದ ಕನ್ನಡ ಹಾಗೂ ಆಂಗ್ಲ ಭಾಷೆಯಲ್ಲಿ ಸ್ಪರ್ಧಾ ಕಾರ್ಯಕ್ರಮದಲ್ಲಿ ೨೯ ಸ್ಪರ್ಧಿಗಳು ಭಾಗವಹಿಸಿದ್ದರು. ಆಂಗ್ಲ ಭಾಷಾ ವಿಭಾಗದಲ್ಲಿ ಪ್ರಥಮ ಸ್ಥಾನ ವೀರಾಜಪೇಟೆ ಕಾವೇರಿ ಪದವಿ ಕಾಲೇಜಿನ ಎನ್.ಬಿ. ಮುತ್ತಮ್ಮ, ದ್ವಿತೀಯ ಸ್ಥಾನ ಪೊನ್ನಂಪೇಟೆ ಸಿ.ಐ.ಟಿ. ಕಾಲೇಜಿನ ಕವನ ಕಾವೇರಮ್ಮ, ತೃತೀಯ ಸ್ಥಾನವನ್ನು ಸೈಂಟ್ ಆ್ಯನ್ಸ್ ಪದವಿ ಕಾಲೇಜಿನ ಅಮಾನತ್ ಹಾಗೂ ನಾಪೋಕ್ಲು ಮರ್ಕಜ್ಹ್ ಕಾಲೇಜಿನ ಮುನ್ಶೀನಾ ಪಡೆದುಕೊಂಡರು.

ಕನ್ನಡ ಭಾಷಾ ವಿಭಾಗದಲ್ಲಿ ವೀರಾಜಪೇಟೆ ಕಾವೇರಿ ಕಾಲೇಜಿನ ಬಿ.ಎಸ್. ರಕ್ಷಿತಾ ಪ್ರಥಮ ಸ್ಥಾನ, ಸೈಂಟ್ ಆ್ಯನ್ಸ್ ಪದವಿ ಕಾಲೇಜಿನ ಟಿ.ಹೆಚ್. ಧನ್ಯ ದ್ವಿತೀಯ ಸ್ಥಾನ, ಮಡಿಕೇರಿ ಎಫ್.ಎಂ.ಸಿ. ಕಾಲೇಜಿನ ಹೆಚ್.ಎನ್. ಶೃತಿ ತೃತೀಯ ಸ್ಥಾನ ಪಡೆದುಕೊಂಡರು.

ವಿಜೇತರಿಗೆ ನಗದು ಬಹುಮಾನ ನೀಡಿ ಗೌರವಿಸಲಾಯಿತು. ಸ್ಪರ್ಧೆಯ ಎಲ್ಲಾ ವಿಭಾಗದ ಚಾಂಪಿಯನ್ ಪ್ರಥಮ ಟ್ರೋಫಿಯನ್ನು ವೀರಾಜಪೇಟೆ ಕಾವೇರಿ ಕಾಲೇಜು ಪಡೆದುಕೊಂಡರೆ, ದ್ವಿತೀಯ ಸ್ಥಾನವನ್ನು ಸೆಂಟ್ ಆ್ಯನ್ಸ್ ಪದವಿ ಕಾಲೇಜು ಪಡೆದುಕೊಂಡಿತು. ತೀರ್ಪುಗಾರರಾಗಿ ಗೋಣಿಕೊಪ್ಪಲು ಕಾವೇರಿ ಕಾಲೇಜಿನ ಕನ್ನಡ ಉಪನ್ಯಾಸಕಿ ಡಾ. ರೇವತಿ ಹಾಗೂ ವೀರಾಜಪೇಟೆ ಸರಕಾರಿ ಪದವಿಪೂರ್ವ ಕಾಲೇಜಿನ ಇತಿಹಾಸ ಉಪನ್ಯಾಸಕಿ ಸುಜಾತ ಇದ್ದರು.

ಈ ಸಂದರ್ಭ ಕಾವೇರಿ ವಿದ್ಯಾಸಂಸ್ಥೆಯ ನಿರ್ದೇಶಕರಾದ ಪಿ.ಟಿ. ಸುಭಾಶ್, ಕೆ.ಪಿ. ಅಚ್ಚಯ್ಯ, ಕಾರ್ಯಕ್ರಮದ ಸಂಚಾಲಕ ಡಾ. ಮುತ್ತಮ್ಮ, ಉಪನ್ಯಾಸಕರಾದ ಡಾ. ವೀಣಾ, ಅಕ್ಷಿತಾ, ನಿರ್ಮಿತ, ಕೂತಂಡ ವಾಣಿ ಉತ್ತಪ್ಪ, ಕಾಲೇಜಿನ ವಿದ್ಯಾರ್ಥಿಗಳು ಹಾಜರಿದ್ದರು.