ಸೋಮವಾರಪೇಟೆ, ಮಾ. ೧೭: ಇಲ್ಲಿನ ಮಹಿಳಾ ಸಹಕಾರ ಸಂಘದ ವತಿಯಿಂದ ಅಂತರರಾಷ್ಟಿçÃಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಸಮಾಜದ ಸಭಾಂಗಣದಲ್ಲಿ ನಡೆಯಿತು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ನಾವು ಪ್ರತಿಷ್ಠಾನದ ಕಾರ್ಯಕಾರಿ ನಿರ್ದೇಶಕಿ ಸುಮನ ಮ್ಯಾಥ್ಯೂ ಮಾತನಾಡಿ, ಸಾಕಷ್ಟು ಹೋರಾಟದ ಮೂಲಕ ಪಡೆದ ಮಹಿಳಾ ದಿನಾಚರಣೆ ಕೇವಲ ಸಂಭ್ರಮಾಚರಣೆಗೆ ಮಾತ್ರ ಸೀಮಿತವಾಗಬಾರದು. ನಮ್ಮ ಹಕ್ಕನ್ನು ಪಡೆಯಲು ಬೀದಿಗಿಳಿದು ಹೋರಾಡುವಂತಹ ಕಾರ್ಯಕ್ರಮವಾಗಬೇಕು. ಆ ಮೂಲಕ ಸಮಾನತೆ ಎಲ್ಲ ಮಹಿಳೆಯರಿಗೂ ಸಿಗುವಂತಾಗಬೇಕೆAದರು.
ಇAದಿಗೂ ಮಹಿಳೆಯರಿಗಿರುವ ಹಕ್ಕಿನ ಬಗ್ಗೆ ಸಾಕಷ್ಟು ಮಹಿಳೆಯರಿಗೆ ತಿಳಿದಿಲ್ಲ. ಹೆಣ್ಣು ಹೆಣ್ಣಾಗಿ ಜನ್ಮತಾಳುವುದಿಲ್ಲ. ಸಮಾಜ ಅವಳನ್ನು ಕಟ್ಟುಪಾಡಿನೊಂದಿಗೆ ಹೆಣ್ಣಾಗಿ ಮಾಡುತ್ತದೆ, ಇಂದಿಗೂ, ಹೆಚ್ಚಿನ ಮಹಿಳೆಯರು ಅದರ ನೆರಳಿನಲ್ಲಿಯೇ ಬದುಕುತ್ತಿರುವುದರಿಂದ, ನಮ್ಮ ಹಕ್ಕನ್ನು ಪಡೆಯಲು ಸಾಧ್ಯವಾಗಿಲ್ಲ. ನಮ್ಮ ಅರಿವಿಗೆ ಬಾರದಂತೆ ಹೆಣ್ಣಿನ ಶೋಷಣೆಯನ್ನು ಹೆಣ್ಣೇ ಮಾಡುವಂತಹ ಪರಿಸ್ಥಿತಿ ಸಮಾಜದಲ್ಲಿ ನಿರ್ಮಾಣವಾಗಿದೆ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಘದ ಅದ್ಯಕ್ಷೆ ವಿಜಯಲಕ್ಷಿö್ಮÃ ಸುರೇಶ್ ಮಾತನಾಡಿ, ಋಗ್ವೇದದಲ್ಲಿಯೇ ಮಹಿಳೆಯರ ಸಾಧನೆಗಳ ಬಗ್ಗೆ ಉಲ್ಲೇಖ ಇದೆ. ಇದರಿಂದ ಹಿಂದಿನಿAದಲೇ ಪುರುಷರ ಸರಿಸಮಾನರಾಗಿ ಸಾಕಷ್ಟು ಸಾಧನೆಗಳನ್ನು ಮಾಡಿರುವುದು ಇತಿಹಾಸದಿಂದ ತಿಳಿಯುತ್ತದೆ. ಶಿಕ್ಷಣ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸಾಧನೆಗೈದಿದ್ದಾರೆ. ಮಹಿಳೆಯರು ರಾಜಕೀಯವಾಗಿ, ಸಾಂಸ್ಕೃತಿಕ ಹಾಗೂ ಬೌಧಿಕ ಕ್ಷೇತ್ರಗಳಲ್ಲಿ ಸಾಧನೆಗಳನ್ನು ಮಾಡುವ ಮೂಲಕ ಭಾರತದ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಕೆಲಸವಾಗಬೇಕೆಂದರು.
ಸAಘದ ಹಿರಿಯ ಸದಸ್ಯರಾದ ಲೀಲಾ ನಿರ್ವಾಣಿ ಹಾಗೂ ಗೃಹರಕ್ಷಕ ದಳ ಸೇವೆಯಲ್ಲಿ ಪ್ರಶಸ್ತಿ ಪಡೆದ ಮಂಜುಳಾ ಅವರನ್ನು ಸನ್ಮಾನಿಸಲಾಯಿತು. ಸಂಘದ ಸದಸ್ಯರಿಗೆ ನಡೆಸಿದ ವಿವಿಧ ಕ್ರೀಡಾ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ ಹಾಗೂ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.
ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷೆ ಶೋಭಾ ಯಶವಂತ್, ನಿರ್ದೇಶಕರುಗಳಾದ ಸುಮಾ ಸುದೀಪ್, ಜಲಜಾ ಶೇಖರ್, ಗಾಯತ್ರಿ ನಾಗರಾಜ್, ಗೀತಾ ರಾಜು, ಮಾಯಾ ಗಿರೀಶ್, ಪಂಕಜ ಪ್ರಭಾಕರ್, ಉಮಾ ರುದ್ರಪ್ರಸಾದ್, ಮಂಜುಳಾ ಸುಬ್ರಮಣಿ ಹಾಗೂ ಶೈಲಾ ವಸಂತ್ ಇದ್ದರು.