ವೀರಾಜಪೇಟೆ, ಮಾ. ೧೭: ಇಲ್ಲಿನ ನೆಹರು ನಗರದ ಬೆಟ್ಟದಲ್ಲಿ ಸೋಮವಾರ ಮಧ್ಯಾಹ್ನ ೧೨ ಗಂಟೆಗೆ ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿದೆ.
ಸ್ಥಳೀಯರ ಮುನ್ನೆಚ್ಚರಿಕೆಯಿಂದ ನೀರು ಮತ್ತು ಸೊಪುö್ಪಗಳಿಂದ ಬೆಂಕಿ ನಂದಿಸುವ ಪ್ರಯತ್ನ ಮಾಡಿದ್ದಾರೆ. ಇಲ್ಲದಿದ್ದಲ್ಲಿ ಅಕ್ಕ ಪಕ್ಕದ ಮನೆಗಳಿಗೆ ಬೆಂಕಿ ವ್ಯಾಪಿಸಿ ಹಾನಿ ಸಂಭವಿಸುವ ಸಾಧ್ಯತೆ ಇತ್ತು.
ಸ್ಥಳೀಯರು, ಪುರಸಭೆ ಹಾಗೂ ಅರಣ್ಯ ಇಲಾಖೆ, ಕಂದಾಯ ಇಲಾಖೆ, ಪೊಲೀಸ್ ಇಲಾಖೆ, ಮತ್ತು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದು, ಕೂಡಲೇ ಅಗ್ನಿಶಾಮಕ ದಳದ ವಾಹನ ನೆಹರು ನಗರ ಬೆಟ್ಟಕ್ಕೆ ತೆರಳಿ ಬೆಂಕಿ ನಂದಿಸುವ ಮೂಲಕ ಬೆಂಕಿಯಿAದ ಆಗುತ್ತಿದ್ದ ಭಾರಿ ಅನಾಹುತ ತಪ್ಪಿಸಲು ಯಶಸ್ವಿಯಾದರು.
ಈ ಸಂಧರ್ಭ ಪುರಸಭೆ ಅಧ್ಯಕ್ಷೆ ದೇಚಮ್ಮಕಾಳಪ್ಪ, ಮುಖ್ಯಾಧಿಕಾರಿ ನಾಚಪ್ಪ. ಪರಿಸರ ಅಭಿಯಂತರರಾದ ರೀತ್ ಸಿಂಗ್, ನಗರ ಪೊಲೀಸ್ ಠಾಣಾಧಿಕಾರಿ ಪ್ರವೀಣ್, ಪುರಸಭೆ ಸದಸ್ಯರಾದ ಆಗಸ್ಟಿನ್ ಬೆನ್ನಿ, ಅನಿತಾ ಕುಮಾರ್, ಮಾಜಿ ಸದಸ್ಯರಾದ ಕುಮಾರ್, ಕಂದಾಯ ಇಲಾಖೆ ಪರಿವೀಕ್ಷಕ ಹರೀಶ್, ಅರಣ್ಯ ಇಲಾಖೆಯ ಅಧಿಕಾರಿಗಳು ಉಪ ಅರಣ್ಯಾಧಿಕಾರಿ ಆನಂದ್ ಹಾಗೂ ಸಿಬ್ಬಂದಿಗಳು ಮತ್ತು ಆನೆ ಕಾರ್ಯಾಚರಣೆ ಪಡೆ ಸಿಬ್ಬಂದಿಗಳು, ಅಗ್ನಿಶಾಮಕ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು, ಪುರಸಭೆ ಸಿಬ್ಬಂದಿಗಳು ಹಾಗೂ ಸ್ಥಳೀಯರು ಹಾಜರಿದ್ದರು.