ಮಡಿಕೇರಿ, ನ. ೨೪: ಕಾಲೇಜು ಶಿಕ್ಷಣ ಇಲಾಖೆಯ ಮಹತ್ವದ ಯೋಜನೆ “ಪ್ರೇರಣಾ” ವೇದಿಕೆಯಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವೀರಾಜಪೇಟೆಯ ಆಂತರಿಕ ಗುಣಮಟ್ಟ ಭರವಸಾ ಕೋಶ ಮತ್ತು ಪ್ರೇರಣಾ ಸಮಿತಿಯ ವತಿಯಿಂದ ವಿದ್ಯಾರ್ಥಿಗಳಿಗೆ ‘ಮೃದು ಕೌಶಲ್ಯ ಮತ್ತು ನಾಯಕತ್ವ’ ವಿಷಯದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಅಂರ‍್ರಾಷ್ಟಿçÃಯ ತರಬೇತುದಾರ ಹಾಗೂ ಭಾಷಣಕಾರ ನಾಗರಾಜ್ ಬೀಜಗನಹಳ್ಳಿ ಕಾರ್ಯಕ್ರಮಕ್ಕೆ ಆಗಮಿಸಿ ಮಾತನಾಡಿ, ಇಂದಿನ ಯುವ ಜನಾಂಗಕ್ಕೆ ಯಥೇಚ್ಛವಾದ ಸೌಲಭ್ಯಗಳು ದೊರೆಯುತ್ತಿವೆ.

ಆದರೆ ಯುವ ಜನಾಂಗವು ಆ ಸೌಲಭ್ಯಗಳನ್ನು ಬರೀ ಮನರಂಜನೆ ಗಾಗಿ ಅಷ್ಟೇ ಸೀಮಿತಗೊಳಿಸಿರುವುದು ವಿಷಾಧನೀಯ ಎಂದರು. ಯುವ ಪೀಳಿಗೆ ಖಿನ್ನತೆ, ಆತ್ಮವಿಶ್ವಾಸದ ಕೊರತೆ, ಆತ್ಮಹತ್ಯೆಯಂತಹ ಮಾನಸಿಕ ದೌರ್ಬಲ್ಯಗಳನ್ನು ಎದುರಿಸುತ್ತಿದ್ದು, ಇದರಿಂದ ಹೊರಬಂದು ಜೀವನದ ಗುರಿಯನ್ನು ಸಾಧಿಸುವಲ್ಲಿ ವಿದ್ಯಾರ್ಥಿಗಳು ಹೇಗೆ ಯೋಜನೆಗಳನ್ನು ರೂಪಿಸಿ ಕೊಳ್ಳಬೇಕೆಂಬುದರ ಕುರಿತು ಮಾರ್ಗದರ್ಶನವನ್ನು ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಐ.ಕ್ಯೂ.ಎ.ಸಿ. ಸಮಿತಿ ಸಂಚಾಲಕ ಡಾ. ಬಸವರಾಜು. ಕೆ. ಅವರು ವಹಿಸಿ ಮಾತನಾಡಿ, ಪ್ರೇರಣಾ ಎಂಬ ಇಲಾಖೆಯ ಯೋಜನೆಯು ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗಾಗಿ ರಚಿಸಿರುವ ಒಂದು ಉತ್ತಮ ಯೋಜನೆಯಾಗಿದ್ದು, ಇದರ ಸದುಪ ಯೋಗವನ್ನು ಪಡೆದುಕೊಳ್ಳಬೇಕೆಂದು ತಿಳಿಸಿದರು.

ಪ್ರೇರಣಾ ಸಮಿತಿಯ ಸಂಚಾಲಕ ರಘುರಾಜು ಆರ್. ಅವರು ಮಾತನಾಡಿ, ಕಾಲೇಜಿನಲ್ಲಿ ಪ್ರೇರಣಾ ಸಮಿತಿಯ ಚಟುವಟಿಕೆಗಳು ಪ್ರಸಕ್ತ ಸಾಲಿನಲ್ಲಿ ಪ್ರಾರಂಭವಾಗಿದ್ದು, ವಿವಿಧ ಕ್ಷೇತ್ರಗಳ ಸಾಧಕರನ್ನು ಸಂಪನ್ಮೂಲ ವ್ಯಕ್ತಿಗಳನ್ನಾಗಿ ಕಾಲೇಜಿಗೆ ಆಹ್ವಾನಿಸಿ ಅವರ ಮೂಲಕ ವಿದ್ಯಾರ್ಥಿಗಳ ಆತ್ಮಸ್ಥೆöÊರ್ಯವನ್ನು ಹೆಚ್ಚಿಸುವ ಕಾರ್ಯವನ್ನು ನಿರ್ವಹಿಸಲಿದೆ. ಇದರ ಮೂಲಕ ಪದವಿ ನಂತರದ ವಿವಿಧ ಕ್ಷೇತ್ರಗಳ ಉದ್ಯೋಗಾವಕಾಶಗಳು, ಇನ್ನಿತರ ಮಾಹಿತಿಯನ್ನೊಳಗೊಂಡ ಕಾರ್ಯ ಚಟುವಟಿಕೆಗಳನ್ನು ಕಾಲೇಜಿನಲ್ಲಿ ನಡೆಸಲು ಯೋಜನೆ ಯನ್ನು ರೂಪಿಸಲಾಗಿದೆ ಎಂದು ವಿದ್ಯಾರ್ಥಿಗಳಿಗೆ ಮಾಹಿತಿಯಿತ್ತರು.

ಕಾರ್ಯಕ್ರಮದಲ್ಲಿ ಕಾಲೇಜಿನ ಎಲ್ಲಾ ಬೋಧಕ-ಬೋಧಕೇತರರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.