ಕುಶಾಲನಗರ, ನ. ೨೪: ಭಾಷಾಭಿಮಾನ ಬೆಳೆಸುವಲ್ಲಿ ಸಾಹಿತ್ಯ ಪರಿಷತ್ ಗ್ರಾಮ ಘಟಕಗಳ ಪಾತ್ರ ಬಹು ಮುಖ್ಯವಾದದ್ದು ಎಂದು ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ನವೀನ್ ಕುಮಾರ್ ತಿಳಿಸಿದರು.
ಕುಶಾಲನಗರ ಸಮೀಪದ ಆವರ್ತಿ ಗ್ರಾಮ ಘಟಕದಲ್ಲಿ ಆಯೋಜಿಸಲಾಗಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದರು. ಗ್ರಾಮ ಗ್ರಾಮಗಳಲ್ಲಿ ಕನ್ನಡ ಅಭಿಮಾನವನ್ನು ಮೂಡಿಸು ವಲ್ಲಿ ರಾಜ್ಯೋತ್ಸವದಂತಹ ಕಾರ್ಯಕ್ರಮಗಳು ಹೆಚ್ಚು ಪೂರಕವಾಗಿವೆ.
ಕನ್ನಡ ನಾಡಿಗಾಗಿ ಹೋರಾಟ ಮಾಡಿದ ಮಹನೀಯರನ್ನು ಸ್ಮರಿಸುವ ಕೆಲಸ ವಿದ್ಯಾವಂತರಲ್ಲಿ ಕಡಿಮೆ ಯಾಗುತ್ತಿರುವುದು ಆತಂಕಕಾರಿ ಸಂಗತಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಇಂತಹ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಕನ್ನಡಕ್ಕೆ ಸೇವೆ ಗೈದ ಕವಿಗಳು ಮಹನೀಯರನ್ನು ಸ್ಮರಿಸುವ ಕೆಲಸವಾಗಬೇಕಿದೆ ಎಂದು ತಿಳಿಸಿದರು.
ಮುಖ್ಯ ಭಾಷಣಕಾರರಾಗಿ ಮಾತನಾಡಿದ ರಂಗಭೂಮಿ ಕಲಾವಿದ ಮುರುಗೇಶ್, ಇತರೆ ಭಾಷೆಗಳ ದಾಳಿಯಿಂದಾಗಿ ಕನ್ನಡ ತನ್ನದೇ ಸ್ವಂತ ನೆಲದಲ್ಲಿ ಸೊರಗಿ ಹೋಗುತ್ತಿದೆ. ಅಂಧಭಿಮಾನ ಇಲ್ಲದಿದ್ದರೂ ಕೂಡ ನಿರಭಿಮಾನಿಗಳಾಗಿ ಕನ್ನಡಿಗರು ಇರಬಾರದು. ಒಂದು ನೆಲದಲ್ಲಿ ನೂರಾರು ಸಂಸ್ಕೃತಿಯನ್ನು ತುಂಬಿಕೊAಡಿರುವ ಕರ್ನಾಟಕ ರಾಜ್ಯ, ನೂರಾರು ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆ ನಮ್ಮೆಲ್ಲರ ಹೆಮ್ಮೆ ಎಂಬುದು ಪ್ರತಿಯೊಬ್ಬರಿಗೂ ಅರಿವಿರಬೇಕು. ಕನ್ನಡವನ್ನೇ ಬಳಸಿ ಕನ್ನಡವನ್ನೇ ಉಳಿಸಿ ಎನ್ನುವ ಮನೋಭಾವ ಪ್ರತಿಯೊಬ್ಬ ಕನ್ನಡಿಗರಲ್ಲೂ ಮೂಡಬೇಕು ಎಂದು ತಿಳಿಸಿದರು.
ಈ ಸಂದರ್ಭ ರಾಜ್ಯೋತ್ಸ ವದ ಅಂಗವಾಗಿ ಪಿರಿಯಾಪಟ್ಟಣ ರೋಟರಿ ಮಿಡ್ ಟೌನ್ ಸಂಸ್ಥೆ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿತ್ತು. ರೋಟರಿ ಅಧ್ಯಕ್ಷ ರಾಜೇಗೌಡ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕೊಡಗು ಕಸಾಪ ಮಾಜಿ ಜಿಲ್ಲಾಧ್ಯಕ್ಷ ಲೋಕೇಶ್ ಸಾಗರ್ ತಂಡದವರಿAದ ಗೀತ ಗಾಯನ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ರಂಗೋಲಿ, ಸ್ಪರ್ಧೆ ಮಡಿಕೆ ಹೊಡೆಯುವ ಸ್ಪರ್ಧೆ ಹಾಗೂ ಹಾಸ್ಯ ಕಲಾವಿದರಿಂದ ಹರಿಕಥೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಕಸಾಪ ಹೋಬಳಿಯ ಅಧ್ಯಕ್ಷ ಆವರ್ತಿ ಮಹಾದೇವಪ್ಪ, ಗ್ರಾಮಘಟಕದ ಅಧ್ಯಕ್ಷ ಎ.ಬಿ.ಶೇಖರ್, ಯಜಮಾನರಾದ ಗುರುಮೂರ್ತಿ, ಮುಖಂಡರಾದ ಎ.ಎಂ.ಧರ್ಮ, ಶಿವರುದ್ರನಾಯಕ, ದಿಲೀಪ್ ಎ.ವೈ, ಲೇಖಕಿ ಹಾಗೂ ಕಲಾವಿದರಾದ ಮಿಲನ ಭರತ್, ಉಮೇಶ್, ಹಾಗೂ ಗ್ರಾ.ಪಂ. ಸದಸ್ಯರು, ಮತ್ತಿತರರು ಇದ್ದರು.