ಮಡಿಕೇರಿ, ನ. ೨೪: ಮರಗೋಡು ಜನತಾ ಕಾಲೋನಿ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ, ಛÀದ್ಮವೇಷ, ಇಲಾಖೆ ಯೋಜನೆಗಳ ಬಗ್ಗೆ ಅರಿವು ಕಾರ್ಯಕ್ರಮ ಮತ್ತು ವಿಶ್ವ ಶೌಚಾಲಯ ದಿನಾಚರಣೆ ಕಾರ್ಯಕ್ರಮ ನೆರವೇರಿತು.

ಸಮಾಜ ಸೇವಕರಾದ ಭಾರ್ಗವ್ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿ, ಮಕ್ಕಳ ಹಕ್ಕುಗಳನ್ನು ಪೋಷಕರು ಮತ್ತು ಶಿಕ್ಷಕರು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಬೇಕು. ಶಿಕ್ಷಣ ದೊಂದಿಗೆ ಮಕ್ಕಳ ಆರೋಗ್ಯವನ್ನು ಉತ್ತಮಪಡಿಸುವ ನಿಟ್ಟಿನಲ್ಲಿ ಸ್ಥಳೀಯವಾಗಿ ಸಿಗುವ ಹಾಗೂ ಮನೆಯಲ್ಲಿ ಬೆಳೆಸುವ ಆಹಾರಗಳನ್ನು ಬಳಸಬೇಕು ಮತ್ತು ಪ್ರಾರಂಭಿಕ ಹಂತದಲ್ಲೇ ಸ್ವಚ್ಛತೆ, ಶುದ್ಧ ಆಹಾರ, ಸ್ವಚ್ಛ ನೀರಿನ ಬಳಕೆಯ ಬಗ್ಗೆ ಅರಿವು ಮೂಡಿಸಬೇಕು, ಇಂತಹ ಕಾರ್ಯಕ್ರಮಗಳು ಮಕ್ಕಳ ಭವಿಷ್ಯವನ್ನು ಉತ್ತಮಪಡಿಸಲು ಸಹಕಾರಿಯಾಗಿದೆ ಎಂದರು.

ಪ್ರಬಾರ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಮೇಪಾಡಂಡ ಸವಿತಾ ಕೀರ್ತನ್ ರವರು ಮಾತನಾಡಿ, ಸಮುದಾಯದ ಸಹಕಾರ ಪಡೆದು ಛದ್ಮವೇಷ ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಗಳÀನ್ನು ಉತ್ತಮವಾಗಿ ನಡೆಸಿದ ಕಾರ್ಯಕರ್ತೆ ರಮ್ಯಾ, ಸಾಜಿದ ಅವರ ಕಾರ್ಯವನ್ನು ಶ್ಲಾಘಿಸಿ ಬಾಲ ವಿಕಾಸ ಸಮಿತಿಯವರು, ಕಾರ್ಯಕರ್ತೆ ಮತ್ತು ಸಹಾಯಕಿಯರೊಂದಿಗೆ ಸೇರಿ ದಾನಿಗಳಿಂದ ಮಕ್ಕಳಿಗೆ ಸಮವಸ್ತç ಕೇಂದ್ರಕ್ಕೆ ಬೇಕಾದ ಮೂಲಭೂತ ಸೌಕರ್ಯಗಳನ್ನು ಪಡೆದು ಕೇಂದ್ರವನ್ನು ಮಾದರಿ ಅಂಗನವಾಡಿ ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಶ್ರಮಿಸಬೇಕಾಗಿ ಕರೆ ನೀಡಿದರು. ಮಕ್ಕಳ ಪೋಷಕರಿಗೆ ಮಕ್ಕಳ ಹೆಸರಿನಲ್ಲಿ ತರಕಾರಿ ಪಾಟ್ ಕೊಡುಗೆಯಾಗಿ ನೀಡಲು ತಿಳಿಸಿದರು. ಮಾತೃವಂದನ ಭಾಗ್ಯಲಕ್ಷಿö್ಮ ಯೋಜನೆ ಬಗ್ಗೆ ವಿವರವಾಗಿ ಮಾಹಿತಿ ನೀಡಿದರು. ಮರಗೋಡು ವೃತ್ತದ ಅಂಗನವಾಡಿ ಕಾರ್ಯಕರ್ತೆಯರಿಗೆ ಅಂಗನವಾಡಿ ಕೇಂದ್ರವನ್ನು ಮಾದರಿ ಅಂಗನವಾಡಿ ಕೇಂದ್ರವನ್ನಾಗಿ ಮಾಡಲು ಸಲಹೆ ಮಾರ್ಗದರ್ಶನ ನೀಡಿದರು. ವಿಶ್ವ ಶೌಚಾಲಯ ದಿನಾಚರಣೆಯ ಪ್ರಯುಕ್ತ "ನಮ್ಮ ಶೌಚಾಲಯ ನಮ್ಮ ಗೌರವ" ಎಂಬ ಶೀರ್ಷಿಕೆ ಅಡಿ "ಅಂದದ ಶೌಚಾಲಯ ಆನಂದದ ಜೀವನ" ಎಂಬ ಘೋಷವಾಕ್ಯದೊಂದಿಗೆ ಅರಿವು ಮೂಡಿಸಲಾಯಿತು. ಮಕ್ಕಳಿಗಾಗಿ ಮಕ್ಕಳ ಸ್ನೇಹಿ ಶೌಚಾಲಯವನ್ನು, ಎರಡು ಪಿಟ್‌ಗಳನ್ನು, ಮಾಡಿಸಲು ದಾನಿಗಳ ಸಹಕಾರ ಬಯಸ ಲಾಯಿತು. ಛದ್ಮವೇಷದಲ್ಲಿ ಪಾಲ್ಗೊಂಡ ಎಲ್ಲಾ ಮಕ್ಕಳಿಗೆ ಬಹುಮಾನ ವಿತರಿಸ ಲಾಯಿತು. ಮಕ್ಕಳಿಂದ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿದವು.

ನಿವೃತ್ತ ಅಂಗನವಾಡಿ ಕಾರ್ಯಕರ್ತೆ ರುಕ್ಮಿಣಿ ಅವರಿಗೆ ಪೋಷಕರು ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯವರು ಸೇರಿ ಸನ್ಮಾನ ಮಾಡಿದರು. ಭಾರ್ಗವ್, ಚಂದ್ರಶೇಖರ್ ರೈ, ಪ್ರದೀಪ್ ಅವರು ಮಕ್ಕಳಿಗೆ ಸಿಹಿ ಹಂಚಿದರು. ಕೇಂದ್ರದ ಅಲಂಕಾರಕ್ಕೆ, ಮತ್ತು ಮಕ್ಕಳಿಗೆ ಬಹುಮಾನ ವಿತರಣೆಗೆ ಸೀತಾರಾಮ ಅವರು ಸಹಕಾರ ನೀಡಿದರು. ಕಾರ್ಯಕ್ರಮ ದಲ್ಲಿ ಪ್ರಮುಖರಾದ ಪಾಂಡನ ಉತ್ತಪ್ಪ, ಮರಗೋಡು ವೃತ್ತದ ಅಂಗನವಾಡಿ ಕಾರ್ಯಕರ್ತೆಯರು, ಪೋಷಕರು ಪಾಲ್ಗೊಂಡಿದ್ದರು.