ಮಡಿಕೇರಿ, ನ. ೨೪: ಕೊಡಗು ಜಿಲ್ಲಾ ದಿವ್ಯಜ್ಯೋತಿ ಪತ್ತಿನ ಸಹಕಾರ ಸಂಘದ ಚುನಾವಣೆ ನಗರದ ಬಾಲಭವನ ಸಭಾಂಗಣದಲ್ಲಿ ಶಾಂತಿಯುತವಾಗಿ ನಡೆಯಿತು.
ಬ್ಯಾಂಕ್ ಆಡಳಿತ ಮಂಡಳಿಯ ಒಟ್ಟು ೧೪ ಸ್ಥಾನಗಳಿಗೆ ೨೪ ಮಂದಿ ಸ್ಪರ್ಧಿಸಿದ್ದರು. ಸಾಮಾನ್ಯ ಕ್ಷೇತ್ರದ ೧೧ ಸ್ಥಾನಗಳಿಗೆ ೧೮, ಮಹಿಳಾ ಕ್ಷೇತ್ರದ ೨ ಸ್ಥಾನಗಳಿಗೆ ೪, ಹಿಂದುಳಿದ ವರ್ಗ ಬಿ ಕ್ಷೇತ್ರಕ್ಕೆ ೧ ಸ್ಥಾನಕ್ಕೆ ಇಬ್ಬರು ಸ್ಪರ್ಧೆಯಲ್ಲಿದ್ದರು. ೧೦೪೮ ಮತದಾರರ ಪೈಕಿ ೬೯೧ ಮಂದಿ ಮತದಾನ ಮಾಡಿದರು.
ಸಾಮಾನ್ಯ ವರ್ಗದಿಂದ ಸ್ಪರ್ಧಿಸಿದ್ದ ಅಂಥೋಣಿ ಕ್ಲೆಮೆಂಟದ ರೆಗೋ (೪೨೧ ಮತ), ಜೋಕಿಮ್ ವಾಸ್ (೫೦೦) , ಎನ್.ಟಿ. ಜೋಸೆಫ್ (೪೦೧), ಜೋಸೆಫ್ ವಿ ವಿನ್ಸೆಂಟ್ (೩೯೯), ಎಸ್.ಎಂ. ಡಿಸಿಲ್ವ (೪೯೨), ಫ್ರಾನ್ಸಿಸ್ ಡಿಸೋಜ (೪೬೨), ಬೆನ್ ಡಿಕ್ಟ್ ರೇಮಂಡ್ ಸಲ್ಹಾನ್ಹಾ (೪೦೦), ರಿಚರ್ಡ್ ಉಲ್ಲಾಸ್ ಕುಮಾರ್ (೩೬೯), ಸಾರ್ಜೆಂಟ್ ಎಮಾನ್ಯುಯಲ್ (೩೫೨), ಸಿರಿಲ್ ಮೊರಾಸ್ (೫೬೬), ಜೆ. ಸುನಿಲ್ ಲೋಬೋ (೩೮೭) ಜಯಶಾಲಿಗಳಾದರು.
ಗಾಡ್ವಿನ್ ಪ್ರಮೋದ್ ಮಸ್ಕರನೇಸ್ (೨೦೦), ವಿ.ಜೆ. ಟೋನಿ (೧೮೦), ಕೆ.ಕೆ. ಪೌಲೋಸ್ (೧೫೫), ಮರ್ವಿನ್ ಲೋಬೋ (೧೯೫), ಎ.ಜಿ. ಯೇಸುದಾಸ್ (೧೯೬), ವಿ.ಎ. ಲಾರೆನ್ಸ್ (೧೧೫), ಜೆ. ಸ್ಯಾಮ್ಯುವೆಲ್ (೧೭೯) ಪರಾಜಯಗೊಂಡರು.
ಹಿಂದುಳಿದ ವರ್ಗ ಬಿ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಕೆ.ಜೆ. ಪೀಟರ್ ೪೦೫ ಮತಗಳನ್ನು ಪಡೆದು ಗೆಲುವು ದಾಖಲಿಸಿದರು. ಎದುರಾಳಿಯಾಗಿದ್ದ ಜಾನ್ಸನ್ ಪಿಂಟೋ ೨೩೨ ಮತಗಳನ್ನು ಪಡೆದು ಪರಾಭವಗೊಂಡರು. ಮಹಿಳಾ ಕ್ಷೇತ್ರದಲ್ಲಿ ಜುಡಿತ್ ಡಿಸೋಜ (೫೧೨), ಅನಿತಾ ತೆರೆಸಾ (೪೩೦) ಗೆಲುವು ಪಡೆದರು. ಪ್ಲವೀಯಾ ಪ್ರಮೀಳಾ ಡಿಸೋಜಾ (೧೭೪), ಕೆ.ಜೆ. ನೀತಾ (೧೩೮) ಸೋಲು ಅನುಭವಿಸಿದರು. ಚುನಾವಣಾಧಿಕಾರಿ ಯಾಗಿ ಸಿದ್ದಲಿಂಗಮೂರ್ತಿ ಕಾರ್ಯನಿರ್ವಹಿಸಿದರು.