ನಾಪೋಕ್ಲು, ನ. ೨೪: ಕೆನರಾ ಬ್ಯಾಂಕ್ ಸಂಸ್ಥಾಪಕರಾದ ಅಮ್ಮೆಂಬಳ ಸುಬ್ಬರಾವ್ ಪೈ ಅವರ ೧೧೯ ನೇ ಜನ್ಮದಿನಾಚರಣೆ (ಸಂಸ್ಥಾಪಕರ ದಿನಾಚರಣೆ) ಯನ್ನು ನಾಪೋಕ್ಲು ಶಾಖೆಯಲ್ಲಿ ಆಚರಿಸಲಾಯಿತು.
ಖಾಸಗಿ ಶಾಲೆಯ ಮುಖ್ಯ ಶಿಕ್ಷಕಿ ಮೈನ ಕುಮಾರಿ ಮತ್ತು ಶಾಖೆಯ ವ್ಯವಸ್ಥಾಪಕ ಬಿ.ಎ ಹಂಸ ಕಾರ್ಯಕ್ರಮದ ಉದ್ಘಾಟನೆಯನ್ನು ಜ್ಯೋತಿ ಬೆಳಗಿಸುವ ಮೂಲಕ ನೆರವೇರಿಸಿದರು.
ಶಾಖೆಯ ವ್ಯವಸ್ಥಾಪಕ ಬಿ.ಎ. ಹಂಸ ದಿನದ ಮಹತ್ವದ ಬಗ್ಗೆ ಮಾತನಾಡಿದರು. ಕಾರ್ಯಕ್ರಮದಲ್ಲಿ ನಾಪೋಕ್ಲು ಶಾಖೆಯ ಸಿಬ್ಬಂದಿಗಳಾದ ಪ್ರವೀಣ್, ಅಜಿತ್, ಕಣ್ಣ ಬಾಬು, ದೇವಪ್ಪ ಬಿ.ಆರ್. ಥಾಮಸ್ ಕುಟ್ಟಿ, ಅನು, ಶೈನಿ ಮತ್ತು ಸುಧಾ ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕರು ಮಕ್ಕಳು ಮತ್ತು ಗ್ರಾಹಕರು ಹಾಜರಿದ್ದು ಸಂಸ್ಥಾಪಕರಾದ ಅಮ್ಮೆಂಬಳ ಸುಬ್ಬರಾವ್ ಪೈ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.
ಈ ಸಂದರ್ಭ ಶಾಖೆಯ ನಿವೃತ ಸಿಬ್ಬಂದಿ ಪೌಲಸ್ ಅವರಿಗೆ ಸನ್ಮಾನಿಸಲಾಯಿತು.