ವೀರಾಜಪೇಟೆ, ನ. ೨೪ : ಕದನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಅರಮೇರಿ ಗ್ರಾಮದಲ್ಲಿ ಕಲ್ಲಿನ ಕ್ರಷರ್ ಘಟಕ ಸ್ಥಾಪನೆಗೆ ಕೆಲವು ಕಾಣದ ಕೈಗಳು ಕಾರ್ಯ ನಿರ್ವಹಿಸುತ್ತಿದೆ. ಇದರಿಂದ ಗ್ರಾಮದ ಕೆಲವು ಮನೆಗಳಿಗೆ ಸಮಸ್ಯೆ ಉಂಟಾಗುತ್ತಿದೆ ಎಂದು ಅರಮೇರಿಯ ಕೆಲವು ಗ್ರಾಮಸ್ಥರು ಮಾಡುತ್ತಿರುವ ಆರೋಪ ಸರಿಯಲ್ಲ ಎಂದು ಅರಮೇರಿ ಮೂಕೈರಿರ ಕುಟುಂಬದ ಸುಜಯ್ ಕಾರ್ಯಪ್ಪ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅರಮೇರಿ ಗ್ರಾಮದ ೧೭.೬೪ ಎಕರೆ ಖಾಸಗಿ ಜಾಗ ಮೂಕೈರಿರ ಕುಟುಂಬಕ್ಕೆ ಸೇರಿದ್ದಾಗಿದೆ. ಜಾಗವು ಸಂಪೂರ್ಣ ಕಲ್ಲು ಬಂಡೆಗಳಿAದ ಕೂಡಿದ್ದು ವ್ಯವಸಾಯ ಸೇರಿದಂತೆ ಇನ್ನಿತರ ಯಾವುದೇ ಚಟುವಟಿಕೆಗಳು ನಡೆಸಲು ಸಾಧ್ಯವಿಲ್ಲ. ಆ ಜಾಗದ ಒಂದು ಎಕರೆಯಲ್ಲಿ ಕಲ್ಲಿನ ಕ್ರಷÀರ್ ಘಟಕ ಸ್ಥಾಪನೆಯಾಗುತ್ತಿದ್ದು, ಕಾನೂನಿನ ಅನ್ವಯ ಸರ್ಕಾರ ಮತ್ತು ಗಣಿ ಮತ್ತು ಭೂವಿಜ್ಞಾನ ಇಲಾಖೆ ನಿಯಮಾನುಸಾರ ಅನುಮತಿ ಪಡೆದು ಆಧುನಿಕ ರೀತಿಯಲ್ಲಿ ಜನಸಾಮಾನ್ಯರು ಹಾಗೂ ವಸತಿ ಪ್ರದೇಶಗಳಿಗೆ ಯಾವುದೇ ತೊಂದರೆ ಬಾರದ ರೀತಿಯಲ್ಲಿ ಕ್ರಷರ್ ನಡೆಸಲು ಮುಂದಾಗಿದ್ದೇವೆ. ಆದರೆ ಗ್ರಾಮದ ಕೆಲವು ಜನರು ಗಣಿಗಾರಿಕೆ ಹಾಗೂ ಕಲ್ಲಿನ ಕ್ರಷÀರ್ ನಡೆಸಲು ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಕಡಂಗಮುರೂರು ಗ್ರಾಮಸ್ಥ ಬಲ್ಲಚಂಡ ಗೌತಮ್ ಮಾತನಾಡಿ, ಅತ್ಯಾಧುನಿಕ ರೀತಿಯಲ್ಲಿ ಕಲ್ಲು ಗಣಿಗಾರಿಕೆ ನಡೆಸುವುದರಿಂದ ಗ್ರಾಮದ ಜನರಿಗೆ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ. ನಮ್ಮ ಯಾವುದೇ ಅಭ್ಯಂತರ ಇಲ್ಲ. ನಮ್ಮ ಗ್ರಾಮದ ಕೆಲವರಲ್ಲಿ ಅಭಿವೃದ್ಧಿ ಕಾರ್ಯಗಳನ್ನು ವಿರೋಧಿಸುವ ಮನೋಭಾವನೆ ಇದೆ. ಪೆಟ್ರೋಲ್ ಬಂಕ್, ಮೊಬೈಲ್ ಟವರ್, ಕಾಫಿ ಕ್ಯೂರಿಂಗ್ ವರ್ಕ್ ಸ್ಥಾಪನೆ ಆದಾಗಲೂ ಒಂದು ವರ್ಗ ವಿರೋಧ ವ್ಯಕ್ತಪಡಿಸಿದ್ದಾರೆ. ಕೆಲವು ಪಟ್ಟಬದ್ದ ಹಿತಾಸಕ್ತಿಗಳು ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಯನ್ನು ಮುಂದಿಟ್ಟುಕೊAಡು ಗ್ರಾಮದಲ್ಲಿ ಅಶಾಂತಿ ಮೂಡಿಸುವ ನಿಟ್ಟಿನಲ್ಲಿ ಕಲ್ಲುಕೋರೆಯ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ನಡೆಸುತ್ತಿರುವುದು ಹಾಸ್ಯಾಸ್ಪದವಾಗಿದೆ. ಗಣಿಗಾರಿಕೆಯಿಂದ ಗ್ರಾಮದ ಹಲವಾರು ಕಾರ್ಮಿಕರಿಗೆ ಕೆಲಸ ಲಭ್ಯವಾಗಿ ಜೀವನ ನಿರ್ವಹಣೆ ಆಗುತ್ತದೆ ಎಂದು ಹೇಳಿದರು.

ಕಾಕೋಟುಪರಂಬು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಮಂಡೇಟಿರ ಅನಿಲ್ ಮಾತನಾಡಿ, ಇದೇ ಸ್ಥಳದಲ್ಲಿ ಕಳೆದ ೪೦ ವರ್ಷಗಳಿಂದ ಕಲ್ಲು ಗಣಿಗಾರಿಕೆ ನಡೆಸಲಾಗುತ್ತಿತ್ತು. ಆ ಸಂದರ್ಭ ಯಾವುದೇ ಸಮಸ್ಯೆಗಳು ಆಗಿಲ್ಲ. ಗ್ರಾಮದಲ್ಲಿ ಹಲವಾರು ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿರುವುದನ್ನು ಪ್ರಶ್ನಿಸದೆ ಕಾನೂನು ರೀತಿಯಲ್ಲಿ ನಡೆಸುವ ಗಣಿಗಾರಿಕೆಯ ಬಗ್ಗೆ ವಿರೋಧ ವ್ಯಕ್ತಪಡಿಸುವುದು ಸರಿಯಲ್ಲ. ಕಾನೂನು ಮೀರಿ ಗಣಿಗಾರಿಗೆ ನಡೆಸಿದರೆ ನಾವೇ ಗಣಿಗಾರಿಕೆ ವಿರುದ್ಧ ಪ್ರತಿಭಟನೆ ನಡೆಸುತ್ತೇವೆ ಎಂದು ಹೇಳಿದರು.

ಅರಮೇರಿ ಗ್ರಾಮಸ್ಥ ಕುಂಬೆಯAಡ ಗಣೇಶ್ ಮಾತನಾಡಿ, ವೀರಾಜಪೇಟೆ ಭಾಗಕ್ಕೆ ಕೇರಳ ಹಾಗೂ ಕುಶಾಲನಗರದಿಂದ ಎಂ ಸ್ಯಾಂಡ್ ಮತ್ತು ಜಲ್ಲಿ ಕಲ್ಲುಗಳು ಬರುತ್ತಿದೆ. ಒಂದು ಲೋಡಿಗೆ ೧೪ ಸಾವಿರ ರೂಗಳನ್ನು ನೀಡಬೇಕು. ನಮ್ಮ ಗ್ರಾಮದಲ್ಲಿಯೇ ಆದರೆ ೮ ಸಾವಿರಕ್ಕೆ ಲಭಿಸುತ್ತದೆ. ಜನಸಾಮಾನ್ಯರಿಗೆ ಉಪಯೋಗ ಆಗುವ ಅಭಿವೃದ್ಧಿ ಕಾರ್ಯಗಳನ್ನು ವಿರೋಧಿಸುವುದು ಸರಿಯಲ್ಲ ಎಂದು ಹೇಳಿದರು. ಗೋಷ್ಠಿಯಲ್ಲಿ ಗ್ರಾಮಸ್ಥರಾದ ಕುಂಞÂರ ಸುನು ಸುಬ್ಬಯ್ಯ, ಮೂಕೈರಿರ ಕವನ್ ದೇವಯ್ಯ, ಚಟ್ಟಕುಟ್ಟಡ ಕಾರ್ತಿಕ್ ಮೊಣ್ಣಪ್ಪ, ಬೋಡುಕುಟ್ಟಡ ಯತೀಶ್ ಹಾಗೂ ಮತಾಯಿಸ್ ಉಪಸ್ಥಿತರಿದ್ದರು.