ಮಡಿಕೇರಿ, ನ. ೨೪: ಕೊಡಗು "ಜಿಲ್ಲಾಮಟ್ಟದ ಯುವಜನೋತ್ಸವ' ಕಾರ್ಯಕ್ರಮವು ತಾ.೩೦ ರಂದು ಮಡಿಕೇರಿಯಲ್ಲಿ ನಡೆಯಲಿದೆ ಎಂದು ಕೊಡಗು ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷ ಪಿ.ಪಿ.ಸುಕುಮಾರ್ ತಿಳಿಸಿದ್ದಾರೆ.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ನೆಹರು ಯುವ ಕೇಂದ್ರ, ಕೊಡಗು ಜಿಲ್ಲಾ ಯುವ ಒಕ್ಕೂಟ, ತಾಲೂಕು ಯುವ ಒಕ್ಕೂಟ, ಮಡಿಕೇರಿ, ಸೋಮವಾರಪೇಟೆ ಮತ್ತು ವೀರಾಜಪೇಟೆ, ಫೀಲ್ಡ್ ಮಾರ್ಷಲ್ ಕೆಂ.ಎA. ಕಾರ್ಯಪ್ಪ ಕಾಲೇಜು ಸಹಯೋಗದೊಂದಿಗೆ ನಗರದ ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಕಾಲೇಜಿನಲ್ಲಿ ಸ್ಪರ್ಧೆ ನಡೆಯಲಿದ್ದು, ಆಸಕ್ತರು ತಾ. ೨೮ ರಂದು ಸಂಜೆ ೫ ಗಂಟೆಯ ಒಳಗೆ ಹೆಸರು ನೋಂದಾಯಿಸಿಕೊಳ್ಳುವAತೆ ಮನವಿ ಮಾಡಿದ್ದಾರೆ.

ವಿಷಯಾಧಾರಿತ ಸ್ಪರ್ಧೆ: ವಿಜ್ಞಾನ ಮೇಳ ಗುಂಪು ಸ್ಪರ್ಧೆ-ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಆಧುನಿಕತೆ ವಿಷಯದ ಬಗ್ಗೆ ಪ್ರದರ್ಶನವಿರಬೇಕು. ಇದರಲ್ಲಿ ನಾವಿನ್ಯತೆಗೆ ಪ್ರಾತಿನಿಧ್ಯ ನೀಡಲಾಗುವುದು. ಸಕ್ರಿಯ ಮಾದರಿ ತಯಾರಿಕೆಯ ಪ್ರದರ್ಶನವಿರಬೇಕು. (ವಿಶೇಷ ಸೂಚನೆ: ನಿಷ್ಕಿçಯ ಮಾದರಿ ತಯಾರಿಕೆಗೆ ಅವಕಾಶವಿಲ್ಲ ಉದಾಹರಣೆ: ಡ್ಯಾಂ, ಸೋಲಾರ್ ಮಾದರಿ ಸಿಸ್ಟಮ್) ಸ್ಪರ್ಧೆಯ ವಿಜೇತರಿಗೆ ಪ್ರಥಮ ರೂ. ೭ ಸಾವಿರ, ದ್ವಿತೀಯ ರೂ. ೫ ಸಾವಿರ, ತೃತೀಯ ರೂ. ೩ ಸಾವಿರ. ವೈಯಕ್ತಿಕ ಸ್ಪರ್ಧೆ ಪ್ರತ್ಯೇಕವಾಗಿದೆ. ಪ್ರಥಮ ರೂ. ೩ ಸಾವಿರ, ದ್ವಿತೀಯ ರೂ.೨ ಸಾವಿರ, ತೃತೀಯ ರೂ. ೧,೫೦೦ ಆಗಿರುತ್ತದೆ. ಈ ವಿಷಯವು ವಿಜ್ಞಾನ ಮತ್ತು ತಂತ್ರ ಜ್ಞಾನದಲ್ಲಿ ನಾವಿನ್ಯತೆ ಇರಬೇಕು.

ಗುಂಪು ಸ್ಪರ್ಧೆ: ಜನಪದ ನೃತ್ಯ (ತಂಡ) ಸಾಂಸ್ಕೃತಿಕ ಉತ್ಸವ: ೧೦ ಜನ ಇರಬೇಕು. ೧೫ ನಿಮಿಷ, ಯಾವುದೇ ರೀತಿಯ ರೀಮಿಕ್ಸ್ ಅಥವಾ ಮೂಲ ಹಾಡಿನ ಬದಲಾವಣೆಗೆ ಅವಕಾಶ ಇರುವುದಿಲ್ಲ. ಮೂಲ ಜಾನಪದ ಗೀತೆಯನ್ನು ಮಾತ್ರ ಪರಿಗಣಿಸತಕ್ಕದು. ಕನ್ನಡ/ಆಂಗ್ಲ/ಹಿAದಿ ಭಾಷೆಯಲ್ಲಿ ಮಾತ್ರ ಇರಬೇಕು. ಪ್ರಥಮ ರೂ. ೭ ಸಾವಿರ, ದ್ವಿತೀಯ ರೂ. ೫ ಸಾವಿರ ಮತ್ತು ತೃತೀಯ ರೂ. ೩ ಸಾವಿರ ಬಹುಮಾನ ನೀಡಲಾಗುತ್ತದೆ.

ಜನಪದ ಗೀತೆ(ತಂಡ) ಸಾಂಸ್ಕೃತಿಕ ಉತ್ಸವ : ೧೦ ಜನ ಇರಬೇಕು. ೭ ನಿಮಿಷ. ಯಾವುದೇ ರೀತಿಯ ರೀಮಿಕ್ಸ್ ಅಥವಾ ಮೂಲ ಹಾಡಿನ ಬದಲಾವಣೆಗೆ ಅವಕಾಶ ಇರುವುದಿಲ್ಲ ಮೂಲ ಜಾನಪದ ಗೀತೆಯನ್ನು ಮಾತ್ರ ಪರಿಗಣಿಸತಕ್ಕದು. ಕನ್ನಡ/ ಆಂಗ್ಲ/ ಹಿಂದಿ ಭಾಷೆಯಲ್ಲಿ ಮಾತ್ರ ಇರಬೇಕು. ಪ್ರಥಮ ರೂ. ೫ ಸಾವಿರ, ದ್ವಿತೀಯ ರೂ. ೩ ಸಾವಿರ ಮತ್ತು ತೃತೀಯ ರೂ. ೧ ಸಾವಿರ ಆಗಿರುತ್ತದೆ.

ವೈಯಕ್ತಿಕ ಸ್ಪರ್ಧೆಗಳು: ಜನಪದ ನೃತ್ಯ(ವೈಯಕ್ತಿಕ) ಸಾಂಸ್ಕೃತಿಕ ಉತ್ಸವ(ಒಬ್ಬರು) ೧೫ ನಿಮಿಷ ಮತ್ತು ಜನಪದ ಗೀತೆ (ವೈಯಕ್ತಿಕ) ಸಾಂಸ್ಕೃತಿಕ ಉತ್ಸವ ಯಾವುದೇ ರೀತಿಯ ರೀಮಿಕ್ಸ್ ಅಥವಾ ಮೂಲ ಹಾಡಿನ ಬದಲಾವಣೆಗೆ ಅವಕಾಶ ಇರುವುದಿಲ್ಲ. ಮೂಲ ಜಾನಪದ ಗೀತೆಯನ್ನು ಮಾತ್ರ ಪರಿಗಣಿಸಬೇಕು. ಕನ್ನಡ/ಆಂಗ್ಲ/ಹಿAದಿ ಭಾಷೆಯಲ್ಲಿ ಮಾತ್ರ ಇರಬೇಕು. ಪ್ರಥಮ ರೂ. ೨ ಸಾವಿರ, ದ್ವಿತೀಯ ರೂ. ೧,೫೦೦ ಮತ್ತು ತೃತೀಯ ರೂ. ೧ ಸಾವಿರ ಆಗಿರುತ್ತದೆ.

ಕಥೆ ಬರೆಯುವುದು ಯುವ ಬರಹಗಾರರ ಸ್ಪರ್ಧೆ ಮತ್ತು ಕವಿತೆ ಬರೆಯುವುದು ಯುವ ಬರಹಗಾರರ ಸ್ಪರ್ಧೆ : (ವೈಯಕ್ತಿಕ) ೬೦ ನಿಮಿಷ ಪ್ರಥಮ ರೂ.೨,೫೦೦, ದ್ವಿತೀಯ ರೂ.೧,೫೦೦ ಮತ್ತು ತೃತೀಯ ರೂ.೧ ಸಾವಿರ, ಆಂಗ್ಲ/ ಹಿಂದಿ ಭಾಷೆಯಲ್ಲಿ ಮಾತ್ರ ಇರಬೇಕು. ವಿಷಯವು ಆಕ್ರಮಣಕಾರಿಯಾಗಿರಬಾರದು ಈಗಾಲೇ ಪ್ರಕಟವಾಗಿರಬಾರದು. ಅಕ್ಷರಗಳು ಸ್ಪಸ್ಟವಾಗಿರಬೇಕು. ಯಾವುದೇ ಜಾತಿ/ಪಂಥ/ಧರ್ಮ ಜನಾಂಗವನ್ನು ಹಾಗೂ ಸೂಕ್ತವಲ್ಲದ ವಿಷಯ ಒಳಗೊಂಡಿರಬಾರದು (೧೦೦೦ ಪದಗಳಿಗೆ ಮೀರಬಾರದು). ಪೋಸ್ಟರ್ ಮೇಕಿಂಗ್ ಯುವ ಕಲಾವಿದ ಸ್ಪರ್ಧೆ (ಚಿತ್ರಕಲೆ) ವೈಯಕ್ತಿಕ ೯೦ ನಿಮಿಷ, ಪ್ರಥಮ ರೂ. ೨೫೦೦, ದ್ವಿತೀಯ ರೂ. ೧,೫೦೦ ಮತ್ತು ತೃತೀಯ ರೂ. ೧ ಸಾವಿರ ಆಂಗ್ಲ/ಹಿAದಿ ಭಾಷೆಯಲ್ಲಿ ಮಾತ್ರ ಇರಬೇಕು ಬಿತ್ತ ಪತ್ರವು ಯಾವುದೇ ಸಂಸ್ಥೆ ಅಥಾವ ಬ್ರಾಂಡ್ ಹೆಸರು ಇರಬಾರದು. ತಾವು ಸಲ್ಲಿಸುವ ಬಿತ್ತ ಪತ್ರದ ಕೆಳಗೆ ೨೦-೩೦ ಪದಗಳೊಳಗೆ ಇರುವ ಶೀರ್ಷಿಕೆಯನ್ನು ಒಳಗೊಂಡಿರಬೇಕು ಬಿತ್ತ ಪತ್ರವನ್ನು ಸ್ಥಳದಲ್ಲೆ ತಯಾರಿಸತಕ್ಕದು. (ಪೊಸ್ಟರ್ ಎ೩ Size ಆಡಿಚಿತಿiಟಿg Sheeಣ) (ಘೋಷಣೆ)

ಭಾಷಣ ಸ್ಪರ್ಧೆ : ವೈಯಕ್ತಿಕ ೩ ನಿಮಿಷ. ಆಂಗ್ಲ/ ಹಿಂದಿ ಭಾಷೆಯಲ್ಲಿ ಇರಬೇಕು. "ಅಭಿವೃದ್ಧಿ ಹೊಂದಿದ ಭಾರತದ ಗುರಿ ಗುಲಾಮಗಿರಿ ಅಥವಾ ಹೊಸಹತು ಸಾಹಿ, ಮನಸ್ಥಿತಿಯ ಯಾವುದೇ ಕುರುಹುಗಳನ್ನು ತೆಗೆದು ಹಾಕಲು ನಮ್ಮ ಪರಂಪರೆ, ಏಕತೆ ಮತ್ತು ಒಗ್ಗಟ್ಟು ಹಾಗೂ ನಾಗರೀಕರಲ್ಲಿ ಕರ್ತವ್ಯ ಪ್ರಜ್ಞೆ, ಪಂಚಪ್ರಾಣ (ಐದು ಪರಿಹಾರಗಳು) ಈ ಕುರಿತಂತೆ ಆಯ್ದ ಒಂದು ವಿಷಯಗಳ ಬಗ್ಗೆ ಭಾಷಣ ಮಾಡಬೇಕು.

ತಿರ್ಮಾನವು ಭಾಷಣದ ನಿಖರತೆ, ಹರಿವು, ವಿಷಯಕ್ಕೆ ಸಂಬAಧಿಸಿದAತೆ ಮಂಡಿಸುವ ಅಂಶಗಳು, ಶಬ್ಧ/ ಪದಗಳು ಪುನರಾವರ್ತನೆ ಆಗದಿರುವುದು. ವಿಷಯದ ಬಗ್ಗೆ ಅರಿವು ಮತ್ತು ಆತ್ಮ ವಿಶ್ವಾಸ ಹೊಂದಿರುವುದರ ಮೇಲೆ ಅವಲಂಬಿಸಿರುತ್ತದೆ. ಪ್ರಥಮ ರೂ. ೫ ಸಾವಿರ, ದ್ವಿತೀಯ ರೂ. ೨,೫೦೦ ಮತ್ತು ತೃತೀಯ ರೂ. ೧,೫೦೦ ಆಗಿರುತ್ತದೆ. ಯುವ ಕೃತಿ ಗುಡಿ ಕೈಗಾರಿಕೆ, ನೇಕಾರಿಕೆ, ಜವಳಿ, ಕೃಷಿ ಉತ್ಪನ್ನಗಳು ಪ್ರದರ್ಶನ ಮತ್ತು ಮಾರಾಟ ಉತ್ತಮವಾದ ಮಳಿಗೆ ತಂಡವನ್ನು ರಾಜ್ಯಮಟ್ಟಕ್ಕೆ ಕಳುಹಿಸಿ ಕೊಡಲಾಗುವುದು.

ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲೆಯ ಯುವಕ, ಯುವತಿಯರು, ಶಾಲಾ-ಕಾಲೇಜಿನ ವಿದ್ಯಾರ್ಥಿಗಳು ಮಾತ್ರ ಭಾಗವಹಿಸಬಹುದಾಗಿದೆ. ಯುವಜನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸುವವರ ವಯೋಮಿತಿಯು ೧೫ ರಿಂದ ೨೯ ವರ್ಷಗಳಾಗಿರಬೇಕು. ಹಾಗೂ ವಯೋಮಿತಿಯ ಬಗ್ಗೆ ಯಾವುದಾದರು ದಾಖಲೆ ಅಥವಾ ಆಧಾರ್ ಕಾರ್ಡ್ ದೃಢೀಕರಣ ಪ್ರತಿ ಮತ್ತು ಎಸ್‌ಎಸ್‌ಎಲ್‌ಸಿ ಅಂಕ ಪಟ್ಟಿಯನ್ನು ಕಡ್ಡಾಯವಾಗಿ ತರುವುದು. ಇಲ್ಲವಾದಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶವಿರುವುದಿಲ್ಲ.

ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಹತೆ: ವೈಯಕ್ತಿಕ ಮತ್ತು ತಂಡದ ವಿಭಾಗಗಳಲ್ಲಿ ಪ್ರಥಮ ಸ್ಥಾನ ಪಡೆದವರು ಮಾತ್ರ ರಾಜ್ಯ ಮಟ್ಟದ ಯುವಜನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ಅರ್ಹತೆಯನ್ನು ಪಡೆಯುತ್ತಾರೆ. ಎಲ್ಲಾ ಸ್ಪರ್ಧೆಗಳು ಯುವಕ ಯುವತಿಯಗೆ ಒಟ್ಟಾಗಿ ನಡೆಯಲಿದೆ.

ಭಾಗವಹಿಸುವ ತಂಡಗಳಿಗೆ ಸಾಮಾನ್ಯದರದ ಪ್ರಯಾಣ ಭತ್ಯೆಯನ್ನು ನೀಡಲಾಗುವುದು. ಹೆಚ್ಚಿನ ವಿವರಗಳಿಗೆ ಪಿ.ಪಿ. ಸುಕುಮಾರ್, ಅಧ್ಯಕ್ಷರು, ಜಿಲ್ಲಾ ಯುವ ಒಕ್ಕೂಟ, ಕೊಡಗು ಮೊ. ೯೪೮೧೨೧೩೯೨೦, ೯೫೯೧೧೩೭೨೭೫. ದಿಲೀಪ್‌ಕುಮಾರ್, ಅಧ್ಯಕ್ಷರು, ತಾಲೂಕು ಯುವ ಒಕ್ಕೂಟ, ಮಡಿಕೇರಿ-೮೬೧೮೫೬೮೧೭೩ ಹಾಗೂ ಸಾಬಾ ಸುಬ್ರಮಣಿ, ಕಾರ್ಯಧ್ಯಕ್ಷರು, ಜಿಲ್ಲಾ ಯುವ ಒಕ್ಕೂಟ, ಕೊಡಗು-೯೮೪೫೫೭ ೧೨೯೦ನ್ನು ಸಂಪರ್ಕಿಸಬಹುದು ಎಂದು ಸುಕುಮಾರ್ ತಿಳಿಸಿದ್ದಾರೆ.