ವೀರಾಜಪೇಟೆ, ನ. ೨೪: ಎಸ್.ಎಸ್. ಆಸ್ಪತ್ರೆ ಮತ್ತು ಆರ್.ಕೆ. ಲ್ಯಾಬೋರೇಟರಿ, ಹೋಲಿಸ್ಟಿಕ್ ಹೆಲ್ತ್ಕೇರ್ ಇವರ ವತಿಯಿಂದ ಮಕ್ಕಳ ದಿನಾಚರಣೆ ಪ್ರಯುಕ್ತ ಜಿಲ್ಲಾಮಟ್ಟದ ಚಿತ್ರಕಲಾ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ವೀರಾಜಪೇಟೆ ಸಂತ ಅನ್ನಮ್ಮ ಪ್ರೌಢಶಾಲೆಯ ೧೦ನೇ ತರಗತಿ ವಿದ್ಯಾರ್ಥಿನಿ ಅಮೃತ ಟಿ.ಜೆ. ಭಾಗವಹಿಸಿ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಚಿತ್ರಕಲಾ ಶಿಕ್ಷಕರಾದ ಪ್ರದೀಪ್ ಅವರು ಅಮೃತ ಅವರಿಗೆ ಸ್ಪರ್ಧೆಯಲ್ಲಿ ಭಾಗವಹಿಸಲು ತರಬೇತಿ ನೀಡಿದ್ದಾರೆ. ಅಮೃತ ವೀರಾಜಪೇಟೆ ನಿವಾಸಿ ಜಯನ್ ಹಾಗೂ ಶೀಭಾ ದಂಪತಿಯ ಪುತ್ರಿ.