- ಅನಿಲ್ ಎಚ್ ಟಿ

ಕರ್ನಾಟಕ ವಿಧಾನಸಭೆಯ ಮೂರು ಸ್ಥಾನಗಳಿಗೆ ನಡೆದ ಉಪಚುನಾವಣೆಯಲ್ಲಿ ನಿರೀಕ್ಷೆಗೂ ಮೀರಿ ಕಾಂಗ್ರೆಸ್ ಭರ್ಜರಿ ಜಯಭೇರಿ ಬಾರಿಸಿದೆ. ಆ ಮೂಲಕ ಮತಗಟ್ಟೆಗಳ ಸಮೀಕ್ಷೆ ಸುಳ್ಳಾಗಬಹುದು ಎಂಬುದು ಮತ್ತೊಮ್ಮೆ ನಿರೂಪಿತವಾಗಿದೆ.

ಗೊಂಬೆ ನಾಡು ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ. ಯೋಗೇಶ್ವರ್ ಕೂಡ ಸ್ವತಃ ಊಹಿಸದ ರೀತಿಯಲ್ಲಿ ಜೆಡಿಎಸ್‌ನ ನಿಖಿಲ್ ಕುಮಾರಸ್ವಾಮಿ ವಿರುದ್ದ ಭಾರೀ ಅಂತರಗಳ ಮತಗಳಿಸಿ ಗೆಲವು ಸಾಧಿಸಿದ್ದಾರೆ.

ಶಿಗ್ಗಾಂವಿಯಲ್ಲಿ ಸಂಸದ ಬಸವರಾಜ ಬೊಮ್ಮಾಯಿ ಅವರ ಪುತ್ರ ಭರತ್ ಬೊಮ್ಮಾಯಿ ಕಾಂಗ್ರೆಸ್‌ನ ಯಾಸೀರ್ ಪಠಾಣ್ ಮಣಿಸಲಾಗದೇ ಊಹೆಗೂ ಮೀರಿ ಸೋಲು ಕಂಡಿದ್ದಾರೆ. ಅಂತೆಯೇ ಸಂಡೂರಿನಲ್ಲಿ ಊಹಿಸಿದಂತೆಯೇ ಕಾಂಗ್ರೆಸ್‌ನ ಅನ್ನಪೂರ್ಣ ಪ್ರತಿಸ್ಪರ್ಧಿ ಬಿಜೆಪಿಯ ಬಂಗಾರು ಹನುಮಂತು ವಿರುದ್ಧ ಗೆಲವು ಸಾಧಿಸಿದ್ದಾರೆ.

ಈ ಮೂರು ಉಪಚುನಾವಣೆಯಲ್ಲಿ ಸೋಲು ಗೆಲವು ಯಾವುದೇ ಪಕ್ಷಗಳಿಗೂ ಅಂಥ ಮಹತ್ವದ್ದೇನಲ್ಲ. ಉಪಚುನಾವಣೆ ಆಗಿರುವುದರಿಂದಾಗಿ ಇದು ಯಾರ ಅಧಿಕಾರದ ಮೇಲೂ ಭಾರೀ ಅನ್ನಬಹುದಾದ ಪರಿಣಾಮ ಬೀರಲಾರದು. ಅಧಿಕಾರದಲ್ಲಿರುವವರಿಗೇ ಮತ್ತೆ ಅಧಿಕಾರ ನೀಡಿದ್ದಾರೆ ಎಂದು ಹೇಳಬಹುದಾದರೂ ಬೊಮ್ಮಾಯಿ ಪುತ್ರ ಭರತ್, ಕುಮಾರ್‌ಸ್ವಾಮಿ ಪುತ್ರ ನಿಖಿಲ್‌ರನ್ನು ಸೋಲಿಸುವ ಮೂಲಕ ಅಪ್ಪನಂತೆ ಮಕ್ಕಳೂ ಸುಲಭವಾಗಿ ರಾಜಕೀಯ ರಣರಂಗ ಪ್ರವೇಶಿಸಲು ಸಾಧ್ಯವಿಲ್ಲ ಎಂದು ಮತದಾರ ಎಚ್ಚರಿಕೆ ನೀಡಿದ್ದಾನೆ.

ಆದರೆ ರಾಜ್ಯದಲ್ಲಿ ಅಧಿಕಾರದಲ್ಲಿ ರುವ ಕಾಂಗ್ರೆಸ್ ಮೂರು ಕ್ಷೇತ್ರದಲ್ಲಿ ಗೆಲುವು ಸಾಧಿಸಲೇಬೇಕಾಗಿತ್ತು. ಅತ್ಯಂತ ವ್ಯವಸ್ಥಿತವಾಗಿ ಕಾಂಗ್ರೆಸ್ ಮೂರೂ ಕ್ಷೇತ್ರಗಳನ್ನು ಈ ಚುನಾವಣೆಯಲ್ಲಿ ತನ್ನದಾಗಿ ಸಿಕೊಂಡು ಬೀಗಿದೆ.

ಕಾಂಗ್ರೆಸ್ ಯಾವ ಪರಿಸ್ಥಿತಿಯಲ್ಲಿ ಗೆಲವು ಸಾಧಿಸಿದೆ ಎಂಬುದನ್ನು ಗಮನಿಸಿದಾಗ, ರಾಜ್ಯದಲ್ಲಿ ಕಳೆದ ೨ ತಿಂಗಳಿನಿAದ ಮುಖ್ಯಮಂತ್ರಿ ವಿರುದ್ದವೇ ಮುಡಾ ಹಗರಣ ಪ್ರಬಲವಾಗಿತ್ತು. ಮತದಾನ ನಡೆಯುವ ದಿನಗಳಲ್ಲಿ ವಕ್ಫ್ ವಿವಾದವೂ ವ್ಯಾಪಕವಾಯಿತು. ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪವೂ ಕೇಳಿಬಂತು. ಇಂಥಹ ದಿನಗಳಲ್ಲಿಯೇ ಮತ್ತೆ ಕಾಂಗ್ರೆಸ್ ಗೆಲುವಿನ ನಗೆ ಬೀರುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಕಾಂಗ್ರೆಸ್ ರಾಜ್ಯದಲ್ಲಿ ಅತ್ಯಂತ ವ್ಯವಸ್ಥಿತವಾಗಿ ಮುಂದಡಿ ಇಡುತ್ತಿರುವುದು ಸ್ಪಷ್ಟವಾಗಿದೆ. ಮಾತ್ರವಲ್ಲ, ರಾಜ್ಯವ್ಯಾಪಿ ಅಲ್ಪಸಂಖ್ಯಾತ ಮತ್ತು ಹಿಂದುಳಿದ ವರ್ಗಗಳ ಮತಗಳನ್ನು ಸಲೀಸಾಗಿ ತನ್ನ ಮತ ಬ್ಯಾಂಕ್‌ಗೆ ಹಾಕಿಕೊಳ್ಳುವಲ್ಲಿ ಯಶಸ್ವಿಯಾಗಿದ್ದೇವೆ ಎಂಬುದನ್ನು ಕೈ ಪಡೆ ಸಾಬೀತು ಮಾಡಿದೆ.

ಚನ್ನಪಟ್ಟಣದಲ್ಲಿ ಕಾಂಗ್ರೆಸ್ ನಾಗಾಲೋಟ

ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಜೋಡೆತ್ತಿನಂತೆ ಈ ಬಾರಿ ಮೂರೂ ಕ್ಷೇತ್ರಗಳ ಗೆಲುವಿಗಾಗಿ ರಣತಂತ್ರ ರೂಪಿಸಿದ್ದು, ಕೊನೆಗೂ ಸಫಲವಾಗಿದೆ. ಅದರಲ್ಲಿಯೂ ಕುಮಾರಸ್ವಾಮಿ ಅವರಿಗೆ ಪ್ರತಿಷ್ಠೆಯಾಗಿದ್ದ ಚನ್ನಪಟ್ಟಣ ಕ್ಷೇತ್ರದಲ್ಲಿ ಕೊನೇ ಕ್ಷಣದಲ್ಲಿ ಬಿಜೆಪಿ ಪಾಳಯದಿಂದ ಕೈ ತೆಕ್ಕೆಗೆ ಬಂದ ಸಿ.ಪಿ. ಯೋಗೇಶ್ವರ್ ಅವರನ್ನು ಗೆಲ್ಲಿಸಿ ಬಿಜೆಪಿ - ಜೆಡಿಎಸ್ ಮೈತ್ರಿಗೆ ಬಲವಾದ ಹೊಡೆತ ನೀಡಿದ್ದು ಖಂಡಿತವಾಗಿಯೂ ರಾಜಕೀಯ ರಣತಂತ್ರವೇ ಹೌದು.

ಇಲ್ಲಿ ಕಾಂಗ್ರೆಸ್ ಸಚಿವ ಜಮೀರ್ ಅಹಮ್ಮದ್ ಸಂಸದ ಕುಮಾರಸ್ವಾಮಿ ವಿರುದ್ಧ ‘ಕರಿಯ’ ಎಂಬ ಪದಪ್ರಯೋಗ ಮಾಡಿದ್ದು ಒಕ್ಕಲಿಗರ ಆಕ್ರೋಷಕ್ಕೆ ಕಾರಣವಾಗಿದೆ. ಹೀಗಾಗಿ ಒಕ್ಕಲಿಗರು ಯೋಗೇಶ್ವರ್‌ಗೆ ಮತನೀಡುವುದಿಲ್ಲ ಎಂಬ ಭಾವನೆ ಸುಳ್ಳಾಗಿದೆ. ಗೆಲುವು ಕಷ್ಟವಾಗಬಹುದು. ಗೆದ್ದರೂ ಅಲ್ಪಮತಗಳ ಅಂತರದಿAದ ಎಂದು ನಿರಾಶೆಯ ಧ್ವನಿಯಲ್ಲಿ ಹೇಳಿಕೊಂಡಿದ್ದ ಯೋಗೇಶ್ವರ್‌ಗೆ ಅಚ್ಚರಿಯಾಗುವ ರೀತಿಯಲ್ಲಿ ೨೫ ಸಾವಿರದ ಭಾರೀ ಅಂತರದ ಮತಗಳಿಸಿ ಭರ್ಜರಿ ಜಯಸಾಧಿಸಿದ್ದು ಕಡಿಮೆ ಸಾಧನೆಯೇನಲ್ಲ. ಚನ್ನಪಟ್ಟಣದ ನಗರ ಪ್ರದೇಶದಲ್ಲಿ ಮುಸ್ಲಿಂ ಮತಗಳು (ಸುಮಾರು ೨೨ ಸಾವಿರ) ಅತೀ ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್‌ಗೆ ಚಲಾವಣೆಯಾಗಿದ್ದು ಯೋಗೇಶ್ವರ್ ಅವರ ಸುಲಭದ ಗೆಲುವಿಗೆ ಮುಖ್ಯ ಕಾರಣವಾಯಿತು. ಅಂತೆಯೇ ಈ ಮೊದಲಿನ ಎರಡೂ ಚುನಾವಣೆಗಳಲ್ಲಿ ಯೋಗೇಶ್ವರ್ ಸೋತಿದ್ದ ಅನುಕಂಪ ಕೂಡ ಈ ಬಾರಿ ಯೋಗೇಶ್ವರ್ ಅವರನ್ನೇ ಗೆಲ್ಲಿಸಲು ಮತದಾರ ನಿರ್ಧರಿಸಿದಂತಿತ್ತು. ಮನೆಮನೆ ಪ್ರಚಾರ ಕೈಗೊಂಡ ಕಾಂಗ್ರೆಸ್ ಯೋಗೇಶ್ವರ್ ಚನ್ನಪಟ್ಟಣದ ಮನೆ ಮಗ, ನಿಖಿಲ್ ಹಾಸನದವನು ಎಂದು ಪ್ರಚಾರ ಕೈಗೊಂಡದ್ದು ಕೂಡ ನಿಖಿಲ್ ಸೋಲಿಗೆ ಕಾರಣವಾಯಿತು. ಕಳೆದ ಸಂಸತ್ ಚುನಾವಣೆಯಲ್ಲಿ ಸೋತಿದ್ದ ಡಿ.ಕೆ. ಸುರೇಶ್ ಕೂಡ ಈ ಬಾರಿ ಚನ್ನಪಟ್ಟಣ ಕ್ಷೇತ್ರದ ಗೆಲುವಿನ ಮೂಲಕ ಕ್ಷೇತ್ರದಲ್ಲಿ ಕಾಂಗ್ರೆಸ್ ಹಿಡಿತ ಸಾಧಿಸಲು ಪಣ ತೊಟ್ಟಿದ್ದು ಇದೀಗ ಯಶಸ್ಸು ಕಂಡಿದೆ.

ಹೆಚ್ಚಿನ ಪ್ರಮಾಣದಲ್ಲಿ ಒಕ್ಕಲಿಗರೂ ಕೂಡ ನಿಖಿಲ್ ಬದಲಿಗೆ ಯೋಗೇಶ್ವರ್ ಕೈ ಹಿಡಿದಿರುವುದು ಫಲಿತಾಂಶದಿAದ ಸ್ಪಷ್ಟವಾಗಿದೆ. ಬಿಜೆಪಿಯಲ್ಲಿ ಇದ್ದಾಗ ಪಕ್ಷಕ್ಕಾಗಿ ಅವಿರತ ಶ್ರಮಿಸುತ್ತಿದ್ದ ಯೋಗೀಶ್ವರ್‌ಗೆ ಸ್ಪರ್ಧೆಗೆ ಅವಕಾಶ ನೀಡದೇ ಕೊನೇ ಕ್ಷಣದವರೆಗೂ ಕಾಯುವಂತೆ ಮಾಡಿ, ಯೋಗೇಶ್ವರ್ ಬೆಂಬಲಿಗರ ಅಸಹನೆಗೆ ಕಾರಣವಾದ ಬಿಜೆಪಿ ಮುಖಂಡರ ನಿರ್ಧಾರಕ್ಕೆ ಈಗ ಜೆಡಿಎಸ್‌ನ ನಿಖಿಲ್ ಬೆಲೆ ತೆತ್ತಿದ್ದಾರೆ. ಹೈಕಮಾಂಡ್ ಹೆಸರಿನಲ್ಲಿ ಮಹಾ ನಾಟಕಗಳೆಲ್ಲಾ ಇನ್ನು ನಡೆಯುವುದಿಲ್ಲ ಎಂದು ಗೊಂಬೆನಾಡಿನ ಮತದಾರ ಸ್ಪಷ್ಟವಾಗಿ ಹೇಳಿದ್ದಾನೆ.

ಚಕ್ರವ್ಯೂಹ ಬೇಧಿಸದ ನಿಖಿಲ್ ಭವಿಷ್ಯ ಮಂಕು?

ನಿಖಿಲ್ ಕುಮಾರಸ್ವಾಮಿ ತನ್ನ ಮೂರು ಬಾರಿ ಸೋಲಿನ ಮೂಲಕ ಮುಂದೇನು ಎಂಬ ಪ್ರಶ್ನೆ ಹುಟ್ಟುಹಾಕಿದ್ದಾರೆ. ಇಲ್ಲಿ ಗೆದ್ದಿದ್ದರೆ ಜೆಡಿಎಸ್ ರಾಜ್ಯಾಧ್ಯಕ್ಷ ಪಟ್ಟ ನಿಖಿಲ್ ಪಾಲಾಗುತ್ತಿತ್ತು. ಆದರೆ ಮೂರು ಬಾರಿಯೂ ಸೋತಿರುವ ನಿಖಿಲ್‌ಗೆ ಪಕ್ಷದಲ್ಲಿ ಪ್ರಮುಖ ಹುದ್ದೆ ಕಷ್ಟಸಾಧ್ಯವಾಗಲಿದೆ. ಹೀಗಿದ್ದರೂ ಜೆಡಿಎಸ್‌ನಲ್ಲಿ ಪ್ರಮುಖ ನಾಯಕರೇ ಇಲ್ಲದ ಕಾರಣ ನಿಖಿಲ್‌ಗೆ ರಾಜಕೀಯ ಮರುಜನ್ಮವಾಗಿ ಯಾವುದಾದರು ಮುಖ್ಯ ಹುದ್ದೆ ನೀಡುವ ಸಾಧ್ಯತೆಯೂ ಇಲ್ಲದಿಲ್ಲ. ತನ್ನ ತಾತ ಮಾಜಿ ಪ್ರಧಾನಿ ದೇವೇಗೌಡರನ್ನು ಅವರ ಇಳಿವಯಸ್ಸಿನಲ್ಲಿಯೂ ಪ್ರಚಾರಕ್ಕೆ ಕರೆತಂದದ್ದು, ತಂದೆ ಕೇಂದ್ರ ಸಚಿವ ಕುಮಾರಸ್ವಾಮಿ ಕ್ಷೇತ್ರದಲ್ಲಿಯೇ ಠಿಕಾಣಿ ಹೂಡಿ ಮತದಾರರ ಮನವೊಲಿಸಿದ್ದು, ಇದೊಂದು ಬಾರಿ ಗೆಲ್ಲಿಸಿ ಕೊಡಿ ಎಂದು ಕಣ್ಣೀರಿನ ಮೂಲಕ ಮತಕೇಳಿದ್ದು, ಬಿಜೆಪಿ ಜತೆ ಮೈತ್ರಿಮಾಡಿಕೊಂಡದ್ದು ಇವು ಯಾವುವೂ ನಿಖಿಲ್ ಪಾಲಿಗೆ ಗೆಲುವಿನ ದಾರಿ ತೋರಲಿಲ್ಲ, ಮತ್ತೊಮ್ಮೆ ಡಿ.ಕೆ. ಶಿವಕುಮಾರ್ ಈ ಕ್ಷೇತ್ರದಲ್ಲಿ ತಾನು ಪ್ರಭಾವೀ ಎಂದು ನಿರೂಪಿಸುವಲ್ಲಿ ಯೋಗೇಶ್ವರ್ ಜಯಭೇರಿ ಕಾರಣವಾಗಿದೆ,

ಬಿಸಿಲ ನಾಡಿನ ಮೊದಲ ಶಾಸಕಿ ಅನ್ನಪೂರ್ಣ

ಸಂಡೂರಿನAಥ ಬಿಸಿಲ ನಾಡಿನಲ್ಲಿ ಕೂಡ ಕಮಲ ಅರಳಲಿಲ್ಲ. ಸಂಸದ ತುಕಾರಾಂ ತನ್ನ ಪತ್ನಿ ಅನ್ನಪೂರ್ಣ ಅವರನ್ನು ಶಾಸಕಿಯಾಗಿಸುವ ನಿಟ್ಟಿನಲ್ಲಿ ಹೆಣೆದ ತಂತ್ರಗಾರಿಕೆ ಫಲ ನೀಡಿದೆ. ಬಿಜೆಪಿಗೆ ಮತ್ತೆ ಪ್ರವೇಶಿಸಿದ ಜನಾರ್ಧನ ರೆಡ್ಡಿ ಮತ್ತು ಶ್ರೀರಾಮುಲು ಕೂಡ ಮತದಾರರ ಮೇಲೆ ಮೊದಲಿನಂತೆ ತಮ್ಮ ಪ್ರಭಾವ ಬೀರುವಲ್ಲಿ ವಿಫಲರಾಗಿದ್ದಾರೆ. ಬಿಜೆಪಿಯ ಬಂಗಾರು ಹನುಮಂತು ಎಷ್ಟೇ ಪ್ರಯತ್ನ ಮಾಡಿದರೂ ಗೆಲುವನ್ನು ದಕ್ಕಿಸಿಕೊಳ್ಳಲಾಗಲಿಲ್ಲ. ೯,೬೪೫ ಮತಗಳ ಅಂತರದ ಮತಗಳ ಗೆಲುವಿನ ಮೂಲಕ ಸಂಡೂರು ವಿಧಾನಸಭಾ ಕ್ಷೇತ್ರದ ಮೊದಲ ಮಹಿಳಾ ಶಾಸಕಿ ಎಂಬ ಹಿರಿಮೆಗೆ ಅನ್ನಪೂರ್ಣ ತುಕಾರಾಂ ಕಾರಣರಾಗಿದ್ದಾರೆ.

ಬೊಮ್ಮಾಯಿಗೆ ಆಘಾತ ನೀಡಿದ ಭರತ್ ಸೋಲು

ಯಾರೂ ನಿರೀಕ್ಷೆಯೇ ಮಾಡದ ರೀತಿಯಲ್ಲಿ ಶಿಗ್ಗಾಂವಿ ಕ್ಷೇತ್ರದಲ್ಲಿ ಸಂಸದ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪುತ್ರ ಸೋಲು ಕಂಡಿದ್ದಾರೆ. ಇದು ಬೊಮ್ಮಾಯಿಗೆ ಅತ್ಯಂತ ಪ್ರತಿಷ್ಠೆಯಾಗಿತ್ತು. ತನ್ನ ಪುತ್ರನನ್ನು ಶಾಸಕನನ್ನಾಗಿಸಿ ರಾಜಕೀಯವಾಗಿ ಪ್ರಬಲವಾಗಬೇಕೆಂಬ ಬೊಮ್ಮಾಯಿ ಕನಸು ನನಸಾಗಲಿಲ್ಲ. ಮುಸ್ಲಿಂ ಮತದಾರರನ್ನೂ ಓಲೈಸುವ ನಿಟ್ಟಿನಲ್ಲಿ ಕ್ಷೇತ್ರದ ಹೊರಗಡೆಯಿಂದ ಯಾವುದೇ ನಾಯಕರು ಬಂದು ಮುಸ್ಲಿಂ ವಿರೋಧಿ ಹೇಳಿಕೆ ನೀಡದಂತೆ ಜಾಗೃತಿ ವಹಿಸಿ ಚುನಾವಣೆಯ ಎಲ್ಲಾ ಹೊಣೆಯನ್ನೂ ತಾನೋರ್ವನೇ ತೆಗೆದುಕೊಂಡಿದ್ದ ಬೊಮ್ಮಾಯಿಗೆ ಆಘಾತವಾಗುವಂತೆ ೧೩,೪೪೮ ಮತಗಳ ಅಂತರದ ಸೋಲಿನ ಫಲಿತಾಂಶ ದೊರಕಿದೆ.

ಕಾಂಗ್ರೆಸ್‌ನ ಯಾಸೀರ್ ಪಠಾಣ್ ಗೆಲುವಿನ ಬಗ್ಗೆ ಹೆಚ್ಚೇನು ನಿರೀಕ್ಷೆ ಇರಲಿಲ್ಲ, ಹೀಗಿದ್ದರೂ ಮುಸ್ಲಿಂ ಮತ್ತು ಹಿಂದುಳಿದ ಮತಗಳ ಕ್ರೋಢೀಕರಣ ಮತ್ತೆ ಕಾಂಗ್ರೆಸ್ ಗೆಲುವಿಗೆ ಸಲೀಸಾಗಿದೆ.

ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳ ಪರಿಣಾಮ ಕೂಡ ಉಪಚುನಾವಣೆಯ ಮೇಲೆ ಉಂಟಾಗಿದೆ. ಬಡ ಮತ್ತು ಮಧ್ಯಮ ವರ್ಗದವರು ಕಾಂಗ್ರೆಸ್ ಯೋಜನೆಗಳನ್ನು ಒಪ್ಪಿಕೊಂಡಿದ್ದಾರೆ ಎಂಬುದಕ್ಕೆ ಮತಗಳಿಕೆಯ ಪ್ರಮಾಣವೇ ಸಾಕ್ಷಿ. ಮೂರೂ ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್ ಅಲ್ಪ ಮತಗಳ ಅಂತರದ ಬದಲಿಗೆ ಭಾರೀ ಮತಗಳ ಅಂತರದ ಗೆಲುವನ್ನೇ ಕಂಡಿದೆ. ಚನ್ನಪಟ್ಟಣದಲ್ಲಿ ಕುಮಾರಸ್ವಾಮಿಗೆ ‘ಕರಿಯ’ ಎಂದು ಕರೆಯುವ ಮೂಲಕ ವಿವಾದ ಸೃಷ್ಟಿಸಿದ್ದ ಸಚಿವ ಜಮೀರ್ ಅಹಮ್ಮದ್ ಪಾಲಿಗೆ ಪಕ್ಷದ ಗೆಲವು ಬಹಳ ಸಂತೋಷ ತಂದಿದೆ. ಇಲ್ಲಿ ಯೋಗೇಶ್ವರ್ ಸೋತಿದ್ದರೆ ಅದರ ಹೊಣೆ ಜಮೀರ್ ತಲೆಮೇಲೆ ಬಿದ್ದು ಸಚಿವ ಸ್ಥಾನಕ್ಕೂ ಕುತ್ತಾಗುವ ಸಾಧ್ಯತೆ ಹೆಚ್ಚಾಗಿತ್ತು. ಇದೀಗ ಜಮೀರ್ ಕೂಡ ಸಂಭ್ರಮದ ನಗು ಬೀರುವಂತಾಗಿದೆ.

ಚೈತನ್ಯ ಪಡೆದ ಸಿದ್ದು - ಬಿಜೆಪಿಗೆ ಸೋಲಿನ ಗುದ್ದು - ಜೆಡಿಎಸ್‌ಗೆ ಎಲ್ಲಿದೆ ಮದ್ದು?

ಮೂಡಾ ಹಗರಣದ ನೋವಿನಲ್ಲಿದ್ದ ಸಿದ್ದರಾಮಯ್ಯ ಮತ್ತೆ ಚೈತನ್ಯದಿಂದ ರಾಜಕೀಯದಲ್ಲಿ ಪುಟಿದೇಳಲು ಮೂರು ಕ್ಷೇತ್ರಗಳ ಭರ್ಜರಿ ಗೆಲವು ಕಾರಣವಾಗಲಿದೆ. ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮತ್ತೊಮ್ಮೆ ತಮ್ಮ ಪಕ್ಷಗಳ ಸಂಘಟನೆಗೆ ಮುಂದಿನ ದಿನಗಳಲ್ಲಿ ಮುಂದಾಗಲೇ ಬೇಕಾದ ಅನಿವಾರ್ಯತೆಯನ್ನು ಈ ಫಲಿತಾಂಶ ಸ್ಪಷ್ಟವಾಗಿಸಿದೆ. ಕಳೆದ ವಿಧಾನಸಭಾ ಚುನಾವಣೆಯ ಮಹಾಸೋಲಿನ ಬಳಿಕ ಚೈತನ್ಯ ಕಳೆದು ಕೊಂಡAತಿರುವ ಬಿಜೆಪಿ ನಾಯಕರು ಮತ್ತೆ ಪುಟಿದೆದ್ದು ಪಕ್ಷ ಸಂಘಟನೆಗೆ ತೊಡಗಿಸಿಕೊಳ್ಳಬೇಕಾಗಿದೆ. ಕಾಂಗ್ರೆಸ್ ಪಾಲಿಗೆ ನಿಜವಾದ ಟೀಕಾಕಾರನಾಗಿ, ಪ್ರತಿಪಕ್ಷ ನಾಯಕನಂತಿರುವ ಹೆಚ್.ಡಿ. ಕುಮಾರಸ್ವಾಮಿ ಪಾಲಿಗೆ ಈ ಹಿಂದಿನAತೆ ಸಾಂಪ್ರದಾಯಿಕ ಮುಸ್ಲಿಮರ ಮತಗಳು ಮುಂದಿನ ದಿನಗಳಲ್ಲಿ ದೊರಕದೇ ಇರಲು ಬಿಜೆಪಿ ಜತೆಗಿನ ಅವರ ಮೈತ್ರಿ ಕಾರಣವಾಗಿರುವುದು ಸ್ಪಷ್ಟ, ಹೀಗಾಗಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಪಾಲಿಗೆ ಮುಂದಿನ ದಿನಗಳು ನಿಜವಾದ ಅಗ್ನಿಪರೀಕ್ಷೆಯಾಗಿದೆ. ಅಂಥ ಪರೀಕ್ಷೆಗೆ ಸಿದ್ದರಾಗಿ ಎಂದು ಈ ಮೂರೂ ಕ್ಷೇತ್ರಗಳ ಚುನಾವಣಾ ಫಲಿತಾಂಶ ಎಚ್ಚರಿಸಿದೆ. ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್ ಮುಂದಿನ ದಿನಗಳಲ್ಲಿ ಈವರೆಗೂ ನಂಬಿದ್ದ ಸಾಂಪ್ರದಾಯಿಕವಾದ ಅಲ್ಪಸಂಖ್ಯಾತರ ಮತಗಳನ್ನು ನಂಬುವAತೆ ಇಲ್ಲ ಹೀಗಾಗಿ ಜೆಡಿಎಸ್ ಪುನಶ್ಚೇತನಕ್ಕೆ ರಾಜಕೀಯವಾಗಿ ಮದ್ದು ಹುಡುಕುವ ಅನಿವಾರ್ಯತೆಯಲ್ಲಿ ಸಿಲುಕಿದೆ. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಕೂಡ ಈಗÀ ಪಕ್ಷದೊಳಗಿನ ಭಿನ್ನರಿಂದ ಮತ್ತಷ್ಟು ಟೀಕೆಗಳನ್ನು ಎದುರಿಸುವ ಸಂದರ್ಭ ತಂದುಕೊAಡಿದ್ದಾರೆ. ಹೈಕಮಾಂಡ್ ಕೂಡ ವಿಜಯೇಂದ್ರ ಮತ್ತು ತಂಡದ ಮೇಲೆ ಮೊದಲಿನಂತೆ ಅತೀ ವಿಶ್ವಾಸ ಇರಿಸಿಕೊಳ್ಳುವುದು ಸಂಶಯವೇ.

ಕಾAಗ್ರೆಸ್ ಪಾಲಿಗೆ ಈ ಗೆಲವು ಮತ್ತಷ್ಟು ಸಾಧನೆಗೆ ಸ್ಪೂರ್ತಿಯಾಗಬೇಕಾಗಿದೆ. ಮೂರು ಕ್ಷೇತ್ರಗಳ ಗೆಲುವು ರಾಜ್ಯವ್ಯಾಪಿಯ ಮತದಾರರ ಒಟ್ಟಾಭಿಪ್ರಾಯ ಅಲ್ಲ ಎಂಬುದೂ ಕೈ ಪಾಳಯಕ್ಕೆ ಮನವರಿಕೆಯಾದರೆ ಮುಂದಿನ ಗೆಲುವಿನ ಹಾದಿ ಸುಗಮವಾಗಲಿದೆ.

ಒಂದೂವರೆ ವರ್ಷಗಳ ಬಳಿಕವೂ ಕರ್ನಾಟಕದಲ್ಲಿ ಕಾಂಗ್ರೆಸ್ ಕೈ ಮೇಲಾಗಿ ಕೈ ಕಮಾಲು ಮುಂದುವರೆದಿದ್ದರೆ ದೇಶದ ಮುಖ್ಯ ರಾಜ್ಯವಾದ ಮಹಾರಾಷ್ಟçದಲ್ಲಿ ಕೇಸರಿ ಧ್ವಜ ರಾರಾಜಿಸುವುದನ್ನು ಮುಂದುವರೆಸಿದೆ.

ಮಹಾರಾಷ್ಟçದಲ್ಲಿ ಮತ್ತೆ

ಮಹಾಮೈತ್ರಿ,, ಆದರೆ,,,

ಇಡೀ ದೇಶವೇ ಕುತೂಹಲದಿಂದ ಗಮನಿಸುತ್ತಿದ್ದ ದೇಶದ ವಾಣಿಜ್ಯ ರಾಜಧಾನಿ ಮುಂಬೈಯನ್ನು ಕೇಂದ್ರವಾಗಿ ಹೊಂದಿರುವ ಮಹಾರಾಷ್ಟçದಲ್ಲಿ ಮತ್ತೆ ಹಿಂದುತ್ವದ ಅಲೆ ಗೆಲವು ಸಾಧಿಸಿದೆ. ೨೮೮ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಸರಳ ಬಹುಮತಕ್ಕೆ ಅಗತ್ಯವಾದ ೧೪೫ ಸ್ಥಾನಗಳನ್ನು ಸಲೀಸಾಗಿ ಪಡೆದು ಇಡೀ ದೇಶವೇ ನೆಬ್ಬೆರಗಾಗಿ ನೋಡುವಂತೆ ೨೩೫ ಸ್ಥಾನಗಳನ್ನು ಹೊಂದಿ, ವಿಪಕ್ಷಗಳಿಗೆ ವಿಧಾನಸಭೆ ಯಲ್ಲಿ ವಿಪಕ್ಷ ಸ್ಥಾನವೇ ಸಿಕ್ಕದಷ್ಟು ಕಡಿಮೆ ಸ್ಥಾನಗಳನ್ನು ನೀಡುವ ಮೂಲಕ ಮಹಾಯುತಿ (ಬಿಜೆಪಿ - ಶಿವಸೇನೆಯ ಶಿಂಧೆ ಬಣ ಮತ್ತು ಅಜಿತ್ ಪವಾರ್ ಅವರ ಎನ್‌ಸಿಪಿ ಬಣಗಳ ಮೈತ್ರಿಕೂಟ) ಮತ್ತೆ ಭರ್ಜರಿಯಾಗಿ ಅಧಿಕಾರಕ್ಕೆ ಬಂದಿದೆ.

ಆಡಳಿತ ವಿರೋಧಿ ಅಲೆ ಇದೆ ಎಂಬ ಸುದ್ದಿಯನ್ನು ಸುಳ್ಳಾಗಿಸುವಂತೆ ಇಲ್ಲಿ ಮಹಾಯುತಿ ಗೆಲವು ಸಾಧಿಸಿದೆ.

ಕಾಂಗ್ರೆಸ್, ಉದ್ವವ್ ಠಾಕ್ರೆಯ ಶಿವಸೇನೆ ಮತ್ತು ಶರದ್ ಪವಾರ್ ಎನ್‌ಸಿಪಿ ಬಣಗಳ ಮೈತ್ರಿಯಾಗಿದ್ದ ಮಹಾ ಅಘಾಡಿ ಕೂಟವು ಪೇಲವ ಸಂಖ್ಯೆಯನ್ನು ಗೆಲುವಿನ ಯಾದಿಯಲ್ಲಿ ಪಡೆದುಕೊಂಡಿದೆ. ಹಿಂದೂ ಮತಗಳ ಕ್ರೋಢೀಕರಣ ಇಲ್ಲಿ ಮಹಾಯುತಿಗೆ ಜಯದ ಸಿಹಿ ತಿನ್ನಿಸಿದೆ. ಮಹಾಯುತಿಗೆ ಸಲೀಸಾದ ಗೆಲವು ದೊರಕಿದ್ದರೂ ಮುಂದಿನ ಹಾದಿ ಸುಲಭವೇನಲ್ಲ. ಯಾಕೆಂದರೆ, ಈಗಾಗಲೇ ಮುಖ್ಯಮಂತ್ರಿ ಪಟ್ಟಕ್ಕೆ ಪ್ರಬಲ ಪೈಪೋಟಿ ಪ್ರಾರಂಭವಾಗಿದೆ. ಹಾಲಿ ಸಿಎಂ ಶಿಂಧೆ, ಡಿಸಿಎಂಗಳಾಗಿದ್ದ ದೇವೇಂದ್ರ ಫಡ್ನವೀಸ್, ಎನ್‌ಸಿಪಿಯ ಅಜಿತ್ ಪವಾರ್ ರಾಜ್ಯದ ಸಿಎಂ ಹುದ್ದೆಯ ಮೇಲೆ ಕಣ್ಣಿಟ್ಟಿದ್ದಾರೆ. ಮೈತ್ರಿ ನಾಯಕರ ನಡುವೇ ಸಿಎಂ ಹುದ್ದೆಗಾಗಿ ಪ್ರಬಲ ಸ್ಪರ್ಧೆ ನಿರೀಕ್ಷಿತ. ಹೀಗಾಗಿ ಸಾಕಷ್ಟು ರಾಜಕೀಯ ವಿವಾದಗಳು ಮಹಾ ಸರ್ಕಾರ ರಚನೆ ಸಂದರ್ಭ ಮಹಾ ಸುನಾಮಿಯಂತೆ ಮೇಲೇಳುವ ಸೂಚನೆಗಳಿದೆ.

ಜಾರ್ಖಂಡ್‌ನಲ್ಲಿ ಮತ್ತೆ ಸೊರೇನ್

ಗುಡ್ಡಗಾಡು ರಾಜ್ಯವಾದ ಜಾರ್ಖಂಡ್‌ನಲ್ಲಿ ಐದು ವರ್ಷಗಳ ಬಳಿಕ ಮತ್ತೆ ಅಧಿಕಾರಕ್ಕೇರುವ ಬಿಜೆಪಿ ಕನಸು ಕಾಡುಪಾಲಾಗಿದೆ. ೮೧ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ೪೧ರ ಸರಳ ಬಹುಮತ ಪಡೆದು ಹೇಮಂತ್ ಸೊರೆನ್ ನೇತೃತ್ವದ ಜಾರ್ಖಂಡ್ ಮುಕ್ತಿಮೋರ್ಛಾ ೫೬ ಸ್ಥಾನಗಳೊಂದಿಗೆ ಮತ್ತೊಮ್ಮೆ ಅಧಿಕಾರಕ್ಕೇರಿದೆ. ಇಲ್ಲಿ ಬಿಜೆಪಿಯು ಆದಿವಾಸಿ ಮತಗಳನ್ನು ಹೆಚ್ಚಿಗೆ ಪಡೆದು ಗೆದ್ದು ಬಿಡುತ್ತದೆ ಎಂಬ ಭಾವನೆ ಸುಳ್ಳಾಗಿದೆ. ಜೆಎಂಎA ಜತೆಯಲ್ಲಿದ್ದ ಚಂಪ್ಪೈ ಸೊರೇನ್ ಬಿಜೆಪಿಗೆ ಹೋಗಿ ಪ್ರಚಾರ ನಡೆಸಿದ್ದು ಕೂಡ ಕಮಲ ಪಡೆಗೆ ಪ್ರಯೋಜನವಾಗಲಿಲ್ಲ. ಸಿಬಿಐ, ಇಡಿ ದಾಳಿಗೊಳಗಾಗಿ ಜೈಲುವಾಸ ಅನುಭವಿಸಿದ್ದರೂ ಹೇಮಂತ್ ಸೊರೇನ್ ನೇತೃತ್ವಕ್ಕೆ ಜನಮನ್ನಣೆ ದೊರಕಿದ್ದರಿಂದಾಗಿ ಹೇಮಂತ್ ತಾವು ಪ್ರಬಲರು ಎಂಬ ಸಂದೇಶವನ್ನು ಸಾರಿದ್ದಾರೆ. ಒಮ್ಮೆ ಅಧಿಕಾರದಲ್ಲಿದ್ದ ಸರ್ಕಾರ ಮತ್ತೊಮ್ಮೆ ಅಧಿಕಾರಕ್ಕೆ ಬರುವುದಿಲ್ಲ ಎಂಬ ಉದಾಹರ ಣೆಯೂ ಜಾರ್ಖಂಡ್‌ನಲ್ಲಿ ಸುಳ್ಳಾಗಿದೆ.