ಮಡಿಕೇರಿ, ನ. ೨೪: ಕೊಡವ ಮಕ್ಕಡ ಕೂಟ ಸಂಘಟನೆ ಜಿಲ್ಲೆಯಲ್ಲಿ ಹೊಸತೊಂದು ಸಾಧನೆಯ ಮೂಲಕ ಐತಿಹ್ಯ ಸೃಷ್ಟಿಸಿದೆ. ಈ ಸಂಘಟನೆ ಇತರ ಕಾರ್ಯಚಟುವಟಿಕೆಗಳ ನಡುವೆ ವಿಶೇಷವಾಗಿ ಹತ್ತು ಹಲವು ವಿಚಾರಧಾರೆಗಳು, ಐತಿಹ್ಯಗಳನ್ನು ಪ್ರತಿಬಿಂಬಿಸುವAತಹ ಪುಸ್ತಕಗಳನ್ನು ಪ್ರಕಟಿಸುವುದು, ಈ ಮೂಲಕ ಹೊಸ - ಹೊಸ ಲೇಖಕರನ್ನು ಸಾಹಿತ್ಯ ಲೋಕಕ್ಕೆ ಪರಿಚಯಿಸಿಕೊಂಡುಬAದಿದೆ. ನಿರಂತರವಾಗಿ ಪುಸ್ತಕಗಳು ಬಿಡುಗಡೆಗೊಳ್ಳುತ್ತಿದ್ದು, ಇದೀಗ ನೂರನೇ ಹೆಜ್ಜೆಯ ಪುಸ್ತಕವಾಗಿ ‘ನೂರನೇ ಮೊಟ್ಟ್’ ಎಂಬ ಪುಸ್ತಕ ಹಾಗೂ ಇದರೊಂದಿಗೆ ಮತ್ತೂ ನಾಲ್ಕು ಪುಸ್ತಕಗಳ ಅನಾವರಣದೊಂದಿಗೆ ಈ ಸಂಭ್ರಮವನ್ನು ಆಚರಿಸಿತು.
ನಗರದ ಪತ್ರಿಕಾಭವನದಲ್ಲಿ ಇಂದು ನಡೆದ ಸಮಾರಂಭದಲ್ಲಿ ೧೦೦ನೇ ಪುಸ್ತಕ ಬಿಡುಗಡೆಯ ಸಂತಸದೊAದಿಗೆ ಕೊಡಗಿನ ಸಾಹಿತ್ಯಲೋಕದಲ್ಲಿ ಸಂಘಟನೆಯೊAದರ ಒಬ್ಬರೇ ಅಧ್ಯಕ್ಷರ ನೇತೃತ್ವದ ಶತಕ ಸಂಭ್ರಮದ ಈ ಕಾರ್ಯಕ್ರಮ ಹೊಸ ಇತಿಹಾಸ ಸೃಷ್ಟಿಸಿತು.
ಪುತ್ತರಿರ ಕರುಣ್ ಕಾಳಯ್ಯ ಸಂಪಾದಕತ್ವದಲ್ಲಿ ‘ನೂರನೇ ಮೊಟ್ಟ್’ ಪುಸ್ತಕ ಹೊರತರಲಾಗಿದೆ. ಇದರೊಂದಿಗೆ ೪ ಮಹಿಳಾ ಸಾಹಿತಿಗಳು ಬರೆದ ಪುಸ್ತಕಗಳನ್ನು ಲೋಕಾರ್ಪಣೆ ಮಾಡಲಾಯಿತು.
ಕೊಡವ ಮಕ್ಕಡ ಕೂಟದಿಂದ ಆಯೋಜನೆಗೊಂಡಿದ್ದ ಕಾರ್ಯಕ್ರಮ ವನ್ನು ಹಿರಿಯ ಸಾಹಿತಿ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಬಾಚರಣಿಯಂಡ ಪಿ. ಅಪ್ಪಣ್ಣ ಅವರು ಉದ್ಘಾಟಿಸಿ ಮಾತನಾಡಿ, ಸಾಹಿತಿಗಳಿಗೆ ಭಾಷೆ, ಜಾತಿ, ಧರ್ಮ, ಮೇಲು-ಕೀಳು ಎಂಬ ಭಾವಗಳಿಲ್ಲ. ಅದು ಜ್ಞಾನವಷ್ಟೆಯಾಗಿರುತ್ತದೆ. ಪುಸ್ತಕ ಹೊರತರುವುದು ಒಂದು ಸಾಹಸದ ಕೆಲಸ. ಬರೆಯುವುದು ಒಂದು ಸಾಧನೆಯಾದರೆ ಅದನ್ನು ಪುಸ್ತಕ ರೂಪದಲ್ಲಿ ಓದುಗರ ಕೈಗಿಡುವುದು ಸುಲಭದ ಮಾತಲ್ಲ. ಆರ್ಥಿಕ ಸಂಕಷ್ಟ ಸೇರಿದಂತೆ ನಾನಾ ಸಮಸ್ಯೆಗಳು ಎದುರಾಗುತ್ತವೆ. ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿಯೂ ಸಾಹಿತ್ಯ ಲೋಕಕ್ಕೆ ಕೊಡವ ಮಕ್ಕಡ ಕೂಟ ತನ್ನದೇ ಆದ ಕೊಡುಗೆ ನೀಡಿ ಲೇಖಕರನ್ನು ಬೆಳೆಸುವ ಕೆಲಸ ಮಾಡಿರುವುದು ಶ್ಲಾಘನೀಯ. ಜಿಲ್ಲೆಯಲ್ಲಿ ಸಾಹಿತ್ಯ ಕ್ಷೇತ್ರದ ಶ್ರೀಮಂತಿಕೆಗೆ ಅನೇಕರು ಶ್ರಮಿಸಿದ್ದಾರೆ. ಯುವಬರಹಗಾರರನ್ನು ಬೆನ್ನುತಟ್ಟುವ ಕೆಲಸ ಸಂಘಟನೆಯಿAದಾಗುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಯಾವುದೇ ಲಾಭಾಂಶ ನಿರೀಕ್ಷಿಸದೆ ಸಾಹಿತ್ಯ ಯಜ್ಞದಂತೆ ಕೂಟದ ಅಧ್ಯಕ್ಷ ಬೊಳ್ಳಜಿರ ಅಯ್ಯಪ್ಪ ಕಾರ್ಯನಿರ್ವಹಿಸಿದ್ದಾರೆ. ಅದೆಷ್ಟೋ ಲೇಖಕರಿಗೆ ವೇದಿಕೆ ಕಲ್ಪಿಸಿ ಪುಸ್ತಕ ಹೊರತಂದಿರುವುದು ಅತ್ಯಂತ ಹೆಮ್ಮೆಯ ವಿಚಾರ. ಆದರೆ, ದಿನದಿಂದ ಓದುವ ಅಭಿರುಚಿ ಕಡಿಮೆಯಾಗುತ್ತಿರುವುದು ವಿಷಾದನೀಯ. ಕೊಡವ ಮಕ್ಕಡ ಕೂಟದ ಪ್ರಕಾಶನದ ಪುಸ್ತಕ ಉಚಿತವಾಗಿ ಓದುಗರಿಗೆ ನೀಡುತ್ತ ಬಂದಿದೆ. ನೀಡಿದ ಪುಸ್ತಕಗಳನ್ನು ಓದದಿದ್ದರೆ ೩ಏಳನೇ ಪುಟಕ್ಕೆ
(ಮೊದಲ ಪುಟದಿಂದ) ಅದು ಸಾಹಿತ್ಯ ದ್ರೋಹ ಎಂದು ಪ್ರತಿಪಾದಿಸಿದ ಅಪ್ಪಣ್ಣ ಅವರು, ದುಡುಕಿನ ಸಾಹಿತ್ಯ ರಚನೆ ಎಂದಿಗೂ ಆಗಬಾರದು. ಲೇಖಕರು ರಚನಾತ್ಮಕ ವಿಮರ್ಶೆಗೆ ಒಳಗಾಗಬೇಕು. ಪುಸ್ತಕ ಬರೆಯುವ ಸಂದರ್ಭ ನಿಂದನೆ, ಭಾವನೆಗಳಿಗೆ ಧಕ್ಕೆ ಆಗುವ ಸಾಧ್ಯತೆಗಳಿರುತ್ತವೆ. ಈ ನಿಟ್ಟಿನಲ್ಲಿ ಹಿರಿಯ ಸಾಹಿತಿಗಳ ಸಲಹೆಯನ್ನು ಪಡೆದು ತಿಳಿಯದೆ ಆದ ತಪ್ಪುಗಳಿದ್ದರೆ ಅದನ್ನು ಸರಿಪಡಿಸಿಕೊಂಡು ಉತ್ತಮ ಪುಸ್ತಕ ಹೊರತರಲು ಮುಂದಾಗಬೇಕು. ಕವಿಗಳು ಸಂವೇದನಾಶೀಲರಾಗಿ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ನೂರನೇ ಮೊಟ್ಟ್ ಪುಸ್ತಕ ಬಿಡುಗಡೆಗೊಳಿಸಿದ ಮಹಿಳಾ ಉದ್ಯಮಿ ಕುಪ್ಪಂಡ ಛಾಯಾ ನಂಜಪ್ಪ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಓದುಗರ ಸಂಖ್ಯೆ ಕ್ಷೀಣಿಸುತ್ತಿರುವುದು ಬೇಸರದ ಸಂಗತಿ. ದಿನದ ಕೆಲ ಹೊತ್ತು ಓದಿಗೆ ಸಮಯ ಮೀಸಲಿಡಬೇಕು. ಸಾಹಿತಿಗಳು ತಮ್ಮ ಬರಹದ ಮೂಲಕ ಸಾಹಿತ್ಯ ಕ್ಷೇತ್ರದ ಜೊತೆಗೆ ಕೊಡವ ಸಂಸ್ಕೃತಿಯನ್ನು ಶ್ರೀಮಂತಗೊಳಿಸುತ್ತಿರುವುದು ಗಮನಾರ್ಹ. ಕೊಡವ ಜನಾಂಗದ ಹಿನ್ನೆಲೆ, ಸಂಸ್ಕೃತಿ, ಪರಂಪರೆಯ ಕುರಿತು ಇಂಗ್ಲೀಷ್ ಭಾಷೆಯಲ್ಲಿಯೂ ಹೆಚ್ಚಿನ ಪುಸ್ತಕಗಳು ಹೊರಬರಬೇಕು ಎಂದು ಆಶಿಸಿದ ಅವರು, ಜನತೆ ಕೂಡ ಸಾಹಿತಿಗಳಿಗೆ ಉತ್ತೇಜನ ನೀಡಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ ಅಯ್ಯಪ್ಪ, ಸಂಘಟನೆ ಸದಸ್ಯರ ಶ್ರಮ ಹಾಗೂ ದಾನಿಗಳ ಸಹಕಾರದಿಂದ ಈ ಸಾಧನೆ ಸಾಧ್ಯವಾಗಿದೆ. ಪುಸ್ತಕಗಳನ್ನು ಹೊರತರುವ ಉದ್ದೇಶದಿಂದ ಕೂಟ ಸ್ಥಾಪನೆಯಾಗಿರಲಿಲ್ಲ. ಕೊಡವ ಸಂಸ್ಕೃತಿ ಪೋಷಿಸುವ ಸಲುವಾಗಿ ಜನಾಂಗದ ಯುವಕ-ಯುವತಿಯರನ್ನು ಒಟ್ಟಾಗಿಸುವ ದೃಷ್ಟಿಯಲ್ಲಿ ನಾವು ಕೆಲಸ ಮಾಡುತ್ತಿದ್ದೆವು. ಆದರೆ, ಅನಿರೀಕ್ಷಿತವಾಗಿ ಪುಸ್ತಕ ಹೊರತಂದ ನಾವು ಇಂದು ೧೦೦ನೇ ಪುಸ್ತಕ ಲೋಕಾರ್ಪಣೆಗೊಳಿಸುತ್ತಿರುವುದು ಅಚ್ಚರಿ ಮೂಡಿಸಿದೆ. ಸಾಧಕರ ಕುರಿತು ದಾಖಲೆ ರೂಪದಲ್ಲಿ ಪುಸ್ತಕ ರಚಿಸಲಾಗಿದೆ. ಯುವ ಸಾಹಿತಿಗಳನ್ನು ಗುರುತಿಸಿ ಅವರಿಂದ ಪುಸ್ತಕ ಬರೆಸಿರುವುದು ಹೆಮ್ಮೆ ತಂದಿದೆ. ನಮ್ಮ ಪ್ರಕಾಶನದ ಪುಸ್ತಕಗಳು ಇಂದು ಕೊಡವ ಸಿನಿಮಾಗಳಾಗಿವೆ. ಮುಂದೆಯೂ ಇದೇ ರೀತಿ ಸಂಘಟನೆ ಕೆಲಸ ಮುಂದುವರೆಸಲಿದ್ದೇವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಅಯ್ಯಪ್ಪ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು. ಈ ಸಂದರ್ಭ ಕೂಟದ ಕಾಯದರ್ಶಿ ಪುತ್ತರಿರ ಕರುಣ್ ಕಾಳಯ್ಯ, ಲೇಖಕರಾದ ತೆನ್ನಿರ ಟೀನಾ ಚಂಗಪ್ಪ, ಪೇರಿಯಂಡ ಯಶೋಧ, ಕರವಂಡ ಸೀಮಾ ಗಣಪತಿ, ಐಚಂಡ ರಶ್ಮಿ ಮೇದಪ್ಪ ಹಾಜರಿದ್ದರು.
ಬೊಪ್ಪಂಡ ಸರಳ ಕರುಂಬಯ್ಯ ಪ್ರಾರ್ಥಿಸಿ, ಚೋಕಿರ ಅನಿತಾ ನಿರೂಪಿಸಿ, ಉಡುವೆರ ರೇಖಾ ರಾಜು ಸ್ವಾಗತಿಸಿ, ಬೊಟ್ಟೊಳಂಡ ನಿವ್ಯ ವಂದಿಸಿದರು.