ಮಡಿಕೇರಿ, ಫೆ. ೨೬: ರಾಮಾಯಣ ಕಾಲಘಟ್ಟದಲ್ಲಿಯೇ ಆಭರಣಗಳಿಗೆ ಬಹಳ ಮಹತ್ವ ಇತ್ತು. ಇತಿಹಾಸದ ಧಾರ್ಮಿಕ ಘಟನಾವಳಿಗಳನ್ನು ಆಭರಣಗಳಲ್ಲಿ ಮೂಡಿ ಸುವ ಮೂಲಕ ಜನರ ಭಕ್ತಿಭಾವನೆಗೆ ಮತ್ತಷ್ಟು ಪ್ರೇರಣೆ ನೀಡಿದಂತಾಗುತ್ತದೆ ಎಂದು ಪತ್ರಕರ್ತ, ಅಯೋಧ್ಯೆ ಪುಸ್ತಕದ ಲೇಖಕ ಅನಿಲ್ ಹೆಚ್.ಟಿ. ಅಭಿಪ್ರಾಯಪಟ್ಟಿದ್ದಾರೆ.
ಮಡಿಕೇರಿಯಲ್ಲಿ ಮುಳಿಯ ಜ್ಯುವೆಲ್ಲರ್ಸ್ ವತಿಯಿಂದ ಕೃಷ್ಣವೇಣಿ ಮುಳಿಯ ವಿನ್ಯಾಸದಲ್ಲಿ ತಯಾರಾದ ಅಯೋಧ್ಯೆ ಶ್ರೀರಾಮಲಲ್ಲನ ಪರಿವಾರ ಚಿತ್ರವಿರುವ ಕಂಠಹಾರವನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಎಲ್ಲರಿಗೂ ಅವರದ್ದೇ ಆದ ದೇವರು, ದೇವಮಂದಿರಗಳಿದ್ದರೂ ಎಲ್ಲರಿಗೂ ಸೇರಿದ ದೈವಮಂದಿರವಾಗಿ ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ಕಂಗೊಳಿಸಿದೆ. ಭಾರತದ ರಾಷ್ಟಿçÃಯ ಮಂದಿರವಾಗಿ ಗಮನ ಸೆಳೆಯಬೇಕೆಂದು ಹಾರೈಸಿದರು.
ರಾಮಾಯಣ ಕಾಲದಲ್ಲಿಯೂ ಆಭರಣ ಮಹತ್ವದ ಪಾತ್ರ ವಹಿಸಿತ್ತು ಎಂದು ಸ್ಮರಿಸಿಕೊಂಡ ಅನಿಲ್, ಲಂಕೆಯ ಅಶೋಕ ವನದಲ್ಲಿ ಶ್ರೀರಾಮನ ನಿರೀಕ್ಷೆಯಲ್ಲಿದ್ದ ಸೀತಾಮಾತೆಯನ್ನು ಭೇಟಿಯಾದ ಹನುಮಂತನು ತಾನು ರಾಮನ ಬಂಟ ಎಂದು ಸಾಬೀತು ಪಡಿಸಲು ಸೀತೆಗೆ ರಾಮನ ವಿವಾಹದ ಉಂಗುರ ತೋರಿಸಿದ. ಹಾಗೇ ಸೀತೆಯನ್ನು ಭೇಟಿಯಾದ ಕುರುಹಿಗಾಗಿ ಹನುಮಂತನು ಆಕೆ ನೀಡಿದ್ದ ಚೂಡಾಮಣಿಯನ್ನು ಶ್ರೀರಾಮನ ಬಳಿಗೆ ತೆಗೆದುಕೊಂಡು ಹೋದ ಘಟನೆ ರಾಮಾಯಣದಲ್ಲಿ ದಾಖಲಾಗಿದೆ ಎಂದು ತಿಳಿಸಿದರು. ಆಭರಣಗಳ ತಯಾರಿಕೆಯಲ್ಲಿ ಮುಳಿಯ ಜ್ಯುವೆಲ್ಲರ್ಸ್ಗೆ ತನ್ನದೇ ಆದ ವ್ಯವಹಾರಿಕತೆ ಜೊತೆಗೆ ಧಾರ್ಮಿಕ ಮನೋಭಾವನೆಯನ್ನು ಜನರಲ್ಲಿ ಮೂಡಿಸುವ ಪ್ರಯತ್ನ ಮುಳಿಯ ಸಂಸ್ಥೆಯವರಿAದ ಆಗುತ್ತಲೇ ಇದೆ ಎಂದು ಶ್ಲಾಘಿಸಿದರು.
ಮುಳಿಯ ಜ್ಯುವೆಲ್ಲರ್ಸ್ ಸಂಸ್ಥೆಯ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ ಮಾತನಾಡಿ, ಅಯೋಧ್ಯೆಯಲ್ಲಿ ಶ್ರೀರಾಮಲಲ್ಲನಿಗೆ ತೊಡಿಸಿರುವ ಕಂಠಹಾರದAತೆಯೇ ಭಕ್ತರು ಕೊರಳಲ್ಲಿ ಧರಿಸಿ ಕಂಗೊಳಿಸುವAತೆ ಈ ಕಂಠಹಾರ ತಯಾರಿಸಲಾಗಿದೆ. ಆಭರಣ ರೂಪದಲ್ಲಿ ರಾಮಲಲ್ಲನನ್ನು ನೆನಪಿಸಿಕೊಳ್ಳುವ ಪ್ರಯತ್ನ ಇದಾಗಿದೆ. ಎಂದರಲ್ಲದೆ, ಶ್ರೀರಾಮಮಂದಿರ ಭವ್ಯವಾಗಿ ರೂಪುಗೊಂಡದ್ದನ್ನು ನೋಡುವ ಭಾಗ್ಯ ಈ ತಲೆಮಾರಿನದ್ದಾಗಿದೆ ಎಂದೂ ಹೆಮ್ಮೆ ವ್ಯಕ್ತಪಡಿಸಿದರು. ಮುಂದಿನ ಪೀಳಿಗೆಯ ಮಕ್ಕಳನ್ನು ನಾವು ಸೂಕ್ತ ಧಾರ್ಮಿಕ ಶಿಕ್ಷಣ ನೀಡುವ ಮೂಲಕ, ಭಾರತದ ವಿಶೇಷತೆಗಳ ಬಗ್ಗೆ ಮಾಹಿತಿ ನೀಡುವ ಮೂಲಕವೂ ಉತ್ತಮ ಪ್ರಜೆಗಳಾಗಿ ಮಾಡುವಂತಾಗಬೇಕೆAದು ಅಭಿಪ್ರಾಯಪಟ್ಟರು. ದಿನಕ್ಕೆ ಕನಿಷ್ಟ ೧೦ ಪುಟಗಳನ್ನಾದರೂ ಧಾರ್ಮಿಕ ಸಂಬAಧಿತ ಪುಸ್ತಕಗಳಲ್ಲಿ ಓದಿದರೆ ಪ್ರತಿಯೋರ್ವರ ಧಾರ್ಮಿಕ ಜ್ಞಾನ ಹೆಚ್ಚಳವಾಗುತ್ತದೆ ಎಂದು ಕೇಶವಪ್ರಸಾದ್ ಸಲಹೆ ನೀಡಿದರು. ಮುಳಿಯ ಜ್ಯುವೆಲ್ಲರ್ಸ್ನ ವ್ಯವಸ್ಥಾಪಕ ನಿರ್ದೇಶಕ ಕೃಷ್ಣ ನಾರಾಯಣ ಮುಳಿಯ ಮಾತನಾಡಿ, ಶ್ರೀರಾಮನ ನಡೆ ಮತ್ತು ಶ್ರೀಕೃಷ್ಣನ ನುಡಿ ಚಂದ ಎಂಬ ಮಾತಿನಂತೆ ಶ್ರೀರಾಮನ ಜೀವನ ಆದರ್ಶ ಮತ್ತು ಭಗವದ್ಗೀತೆಯ ಕೃಷ್ಣೋಪದೇಶದ ನುಡಿಗಳನ್ನು ನಮ್ಮ ಜೀವನಕ್ಕೆ ಆದರ್ಶಪ್ರಾಯವಾಗಬೇಕೆಂದು ಕರೆ ನೀಡಿದರು. ಆಧುನಿಕ ಕಾಲಘಟ್ಟದಲ್ಲಿ ಪ್ರತೀಯೋರ್ವರಿಗೂ ಧಾರ್ಮಿಕ ಶಿಕ್ಷಣ ಮಹತ್ವದ್ದಾಗಬೇಕೆಂದು ಅವರು ಹೇಳಿದರು.
ಅನೇಕ ಮಕ್ಕಳು ಶ್ರೀರಾಮ, ಸೀತೆ, ಲಕ್ಷö್ಮಣ, ಹನುಮಂತನ ಪಾತ್ರ ಧರಿಸಿ ಕಾರ್ಯಕ್ರಮಕ್ಕೆ ಬಂದಿದ್ದರು. ಮುಳಿಯ ಸಂಸ್ಥೆಯ ಮಾರುಕಟ್ಟೆ ಪ್ರಮುಖ ಸಂಜೀವ್, ಮಡಿಕೇರಿ ಶಾಖೆಯ ಮುಖ್ಯಸ್ಥ ತೀತಿಮಾಡ ಸೋಮಣ್ಣ ಹಾಜರಿದ್ದರು.