(ಕೆ.ಎA. ಇಸ್ಮಾಯಿಲ್ ಕಂಡಕರೆ)
ಮಡಿಕೇರಿ, ಫೆ. ೨೪ : ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಗಳಲ್ಲಿ ಒಂದಾಗಿ ರೈತರ ಆರ್ಥಿಕತೆಗೆ ಒಂದಷ್ಟು ಸಹಕಾರಿಯಾಗಿರುವ ಕಾಳುಮೆಣಸು ಕೊಯ್ಲಿಗೆ ಮುನ್ನ ಬೆಳೆಗಾರರಿಗೆ ಬೆಲೆ ಇಳಿಕೆ ಶಾಕ್ ತಟ್ಟಿದೆ. ಕ್ವಿಂಟಾಲ್ಗೆ ರೂ. ೬೦ ಸಾವಿರ ಇದ್ದ ದರ ದಿಢೀರ್ ರೂ. ೫೪ ಸಾವಿರಕ್ಕೆ ಇಳಿಕೆಯಾಗಿದೆ.
ಕಳೆದ ಎರಡು ವರ್ಷಗಳಿಂದ ಕಾಳುಮೆಣಸು ದರ ಕೆಜಿಯೊಂದಕ್ಕೆ ರೂ. ೬೦೦ ಆಸುಪಾಸಿನಲ್ಲೇ ಇತ್ತು. ಆದರೆ ಇದೀಗ ಕಳೆದ ಒಂದು ವಾರದಿಂದ ಕಾಳುಮೆಣಸು ದರ ಇಳಿಕೆ ಕಂಡಿದ್ದು, ಕಾಳುಮೆಣಸು ಮಾರಾಟ ಮಾಡದೆ, ದಾಸ್ತಾನಿನಲ್ಲಿ ಸಂಗ್ರಹಿಸಿಟ್ಟಿದ್ದ ಕಾಳುಮೆಣಸು ಬೆಳೆಗಾರರಿಗೆ ಆತಂಕ ಎದುರಾಗಿವೆ. ಕಪ್ಪು ಬಂಗಾರ ಎಂದೇ ಕರೆಯಲ್ಪಡುವ ಕಾಳುಮೆಣಸು ದರ ಮಾರ್ಚ್ ತಿಂಗಳಲ್ಲಿ ಕೆ.ಜಿ. ಯೊಂದಕ್ಕೆ ರೂ. ೫೦೦ ತಲುಪುವ ಸಾಧ್ಯತೆಗಳಿವೆ ಎನ್ನಲಾಗುತ್ತಿವೆ.
ಕೊಡಗು ಜಿಲ್ಲೆಯ ಕೆಲವು ಭಾಗಗಳಲ್ಲಿ ಇದೀಗ ಕಾಳುಮೆಣಸು ಕೊಯ್ಲು ಆರಂಭಗೊAಡಿದ್ದು, ಮಾರ್ಚ್ ತಿಂಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಜಿಲ್ಲೆಯಾದ್ಯಂತ ಕರಿಮೆಣಸು ಕೊಯ್ಲು ಮಾಡಲಾಗುತ್ತದೆ. ಮಾರ್ಚ್ ತಿಂಗಳಿನಿAದ ಏಪ್ರಿಲ್ ತಿಂಗಳ ಕೊನೆಯವರೆಗೂ ಬೆಳೆಗಾರರು ಕರಿಮೆಣಸು ಕೊಯ್ಲು ಕೆಲಸದಲ್ಲಿ ತೊಡಗುವುದು ಜಿಲ್ಲೆಯಲ್ಲಿ ಸಾಮಾನ್ಯವಾಗಿವೆ.
ಬೆಳೆಗಾರರಿಗೆ ಆಸರೆಯಾಗಿದ್ದ ಕಾಳುಮೆಣಸು!
ಕಪ್ಪು ಬಂಗಾರ ಎಂದೇ ಕರೆಯಲ್ಪಡುವ ಕಾಳುಮೆಣಸು ಬೆಳೆಗಾರರಿಗೆ ಆಸರೆಯಾಗಿದೆ. ಯಾಕೆಂದರೆ ಕಳೆದ ಮೂರ್ನಾಲ್ಕು ವರ್ಷಗಳಿಂದ ನಿರಂತರವಾಗಿ ಅಕಾಲಿಕ ಮಳೆ, ಅತಿವೃಷ್ಟಿ, ಬೆಲೆ ಕುಸಿತ, ಕಾರ್ಮಿಕರ ಸಮಸ್ಯೆಯಿಂದ ಜಿಲ್ಲೆಯ ಕಾಫಿ ಬೆಳೆಗಾರರು ನಷ್ಟ ಅನುಭವಿಸುತ್ತಿದ್ದಾರೆ. ಈ ವರ್ಷ ಅಕಾಲಿಕ ಮಳೆಯಿಂದ ಜಿಲ್ಲೆಯ ಕಾಫಿ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದರು. ಕಾಫಿಯಲ್ಲಿ ಉಂಟಾದ ನಷ್ಟವನ್ನು ಕಳೆದ ವರ್ಷಗಳಿಂದ ಕಾಳುಮೆಣಸಿನಲ್ಲಿ ಸರಿದೂಗಿಸುತ್ತಿದ್ದ ಬೆಳೆಗಾರರಿಗೆ ಕಾಳುಮೆಣಸು ದರ ಇಳಿಕೆ ದೊಡ್ಡ ಹೊಡೆತ ಕೊಟ್ಟಿದೆ.
ಕಳೆದ ಎರಡು ವರ್ಷ ಕೆಜಿಯೊಂದಕ್ಕೆ ರೂ. ೬೦೦ ಇದ್ದ ಕಾಳುಮೆಣಸು ದರ ಏಕಾಏಕಿ ಇಳಿಕೆ ಕಂಡಿರುವುದು ಬೆಳೆಗಾರರಿಗೆ ಸಮಸ್ಯೆಯುಂಟಾಗಿದೆ. ಅದಲ್ಲದೇ ಇತ್ತೀಚಿನ ದಿನಗಳಲ್ಲಿ ಕಾಳುಮೆಣಸು ಬಳ್ಳಿಗಳಿಗೆ ರೋಗ ಬಾಧಿಸಿ, ಬಳ್ಳಿಗಳು ನಾಶವಾಗಿ ಹೋಗುತ್ತಿರುವ ಮಧ್ಯೆ, ಬೆಲೆ ಇಳಿಕೆಯಿಂದ ಬೆಳೆಗಾರರು ಅತಂತ್ರ ಸ್ಥಿತಿಗೆ ತಲುಪಿದ್ದಾರೆ.
(ಮೊದಲ ಪುಟದಿಂದ) ಈ ವರ್ಷ ಜಿಲ್ಲೆಯಾದ್ಯಂತ ಬಹುತೇಕ ಕಡೆಗಳಲ್ಲಿ ಕಾಳುಮೆಣಸು ಉತ್ತಮ ಫಸಲು ಕೊಟ್ಟಿದೆ. ಆದರೆ ಬೆಲೆ ಇಳಿಕೆಯಿಂದ ಸಣ್ಣ ಬೆಳಗಾರರು ಅತೀ ಹೆಚ್ಚು ತೊಂದರೆಗೀಡಾಗಿದ್ದಾರೆ.
ವಿಯೆಟ್ನಾA ಕಾಳುಮೆಣಸು ಆಮದು ಎಫೆಕ್ಟ್ !
ಭಾರತದ ಕಾಳುಮೆಣಸಿಗೆ ಒಂದು ಕಾಲದಲ್ಲಿ ಕೆ.ಜಿ.ಯೊಂದಕ್ಕೆ ರೂ. ೮೦೦ ಬೆಲೆ ಇತ್ತು. ಆದರೆ ಕಾಲಕ್ರಮೇಣವಾಗಿ ಕಾಳಸಂತೆಯ ಮೂಲ ಭಾರತಕ್ಕೆ ವಿಯೆಟ್ನಾಂ ಕಾಳುಮೆಣಸು ಆಮದಿನಿಂದ ಭಾರತದ ಕರಿಮೆಣಸಿಗೆ ಬೆಲೆ ಕುಸಿತ ಕಂಡಿತ್ತು. ೨೮೦ ರೂ. ವರಗೆ ಭಾರತ ಕಾಳುಮೆಣಸಿನ ದರ ಇಳಿಕೆಯಾಗಿತ್ತು. ಆದರೆ ಕಳೆದ ಎರಡು ವರ್ಷಗಳಿಂದ ಸ್ಥಿರವಾಗಿದ್ದ ಕಾಳುಮೆಣಸು ದರ ದಿಢೀರ್ ಕುಸಿತ ಕಾಣಲು ವಿಯೆಟ್ನಾಂ ದೇಶದಿಂದ ಭಾರತಕ್ಕೆ ಕಾಳುಮೆಣಸು ಆಮದಾಗುತ್ತಿದ್ದು ಕಾರಣ ಎನ್ನಲಾಗುತ್ತಿದೆ. ವಿಯೆಟ್ನಾಂ ದೇಶದಿಂದ ಕಾಳುಮೆಣಸು ಕ್ವಿಂಟಾಲ್ಗೆ ೪೮ ಸಾವಿರದಿಂದ ೫೨ ಸಾವಿರದವರೆಗೆ ಇವೆ. ವಿಯಟ್ನಾಂನಿAದ ಅಂದಾಜು ಭಾರತಕ್ಕೆ ೪೦೦ ಮೆಟ್ರಿಕ್ ಟನ್ ಕಾಳುಮೆಣಸು ಆಮದಾಗುತ್ತಿದೆ. ಇದರಿಂದ ದೇಶಿಯ ಕಾಳುಮೆಣಸು ದರ ಕುಸಿತ ಕಂಡಿದೆ.
ವಾರ್ಷಿಕವಾಗಿ ವಿಯೆಟ್ನಾಂನಿAದ ೫ಸಾವಿರ ಟನ್ ಹಾಗೂ ಶ್ರೀಲಂಕಾದಿAದ ೧೦ ರಿಂದ ೧೫ ಸಾವಿರ ಟನ್ ಕಾಳುಮೆಣಸು ಭಾರತಕ್ಕೆ ಆಮದಾಗುತ್ತಿವೆ. ಇದರಿಂದ ಭಾರತದ ಕಾಳುಮೆಣಸು ದರ ಇಳಿಕೆಯಾಗುತ್ತಿದೆ. ವಿಯೆಟ್ನಾಂ ಹಾಗೂ ಶ್ರೀಲಂಕಾದಿAದ ಕಾಳುಮೆಣಸು ಆಮದಾಗುತ್ತಿರುವುದರಿಂದ ಭಾರತದ ಕಾಳುಮೆಣಸಿನ ದರ ಕುಸಿತ ಕಾಣುತ್ತಿವೆ. ಕಾಳುಮೆಣಸು ಬೆಲೆ ಇಳಿಕೆಯಿಂದ ಜಿಲ್ಲೆಯ ಬೆಳೆಗಾರರು ಅತಂತ್ರ ಸ್ಥಿತಿಗೆ ಸಿಲುಕಿದ್ದಾರೆ.
ಕೊಯ್ಲಿಗೆ ಕಾರ್ಮಿಕರ ಸಮಸ್ಯೆ!
ಕಾಳುಮೆಣಸು ಕೊಯ್ಲಿಗೆ ಬೆಳೆಗಾರರಿಗೆ ಕಾರ್ಮಿಕರ ಸಮಸ್ಯೆ ಎದುರಾಗಿವೆ. ಸ್ಥಳೀಯ ಕಾರ್ಮಿಕರಿಗೆ ದಿನವೊಂದಕ್ಕೆ ಕಾಳುಮೆಣಸು ಕೊಯ್ಲಿಗೆ ರೂ. ೭೫೦ ರಿಂದ ೮೦೦ ಕೂಲಿ ನೀಡಬೇಕು. ದುಬಾರಿ ಸಂಬಳ ನೀಡುವ ಅನಿವಾರ್ಯತೆ ಎದುರಾಗಿವೆ. ಕಾಳುಮೆಣಸು ಕೊಯ್ಲು ಮಾಡುವ ಕಾರ್ಮಿಕರಿಗೆ ಬೇಡಿಕೆ ಹೆಚ್ಚಾಗಿವೆ.
ಮತ್ತೊಂದೆಡೆ ಕಾರ್ಮಿಕರೇ ಸಿಗದೆ, ಬಹುತೇಕ ಬೆಳೆಗಾರರು, ವ್ಯಾಪಾರಿಗಳು ತಮಿಳುನಾಡು, ಉತ್ತರ ಕರ್ನಾಟಕ ಭಾಗದ ಕಾರ್ಮಿಕರಿಂದ ಜಿಲ್ಲೆಯಲ್ಲಿ ಕಾಳುಮೆಣಸು ಕೊಯ್ಲು ಮಾಡುತ್ತಾರೆ. ದಿನವೊಂದಕ್ಕೆ ಹೊರ ಜಿಲ್ಲೆ ಹಾಗೂ ಹೊರ ರಾಜ್ಯದ ಕಾರ್ಮಿಕರಿಗೆ ರೂ. ೫೦೦ ರಿಂದ ೬೦೦ ಸಂಬಳ ನೀಡಿದರೆ ಸಾಕು. ಆದರೆ ಸ್ಥಳೀಯ ಕಾರ್ಮಿಕರಿಗೆ ರೂ. ೭೫೦ ರಿಂದ ೮೦೦ ಕೂಲಿ ನೀಡಬೇಕು. ಹಿಂದಿನAತೆ ಜಿಲ್ಲೆಗೆ ಹೊರ ರಾಜ್ಯ ಹಾಗೂ ಜಿಲ್ಲೆಯ ಕಾರ್ಮಿಕರು ಕಾಳುಮೆಣಸು ಕೊಯ್ಲು ಮಾಡಲು ಬಾರದೆ ಇರುವುದರಿಂದ ಬೆಳೆಗಾರರಿಗೆ ಸಂಕಷ್ಟ ಎದುರಾಗಿವೆ. ಬೆಲೆ ಕುಸಿತದ ನಡುವೆ ದುಬಾರಿ ಕೂಲಿ ನೀಡಿ, ಕಾಳುಮೆಣಸು ಕೊಯ್ಲು ಮಾಡುವ ಅನಿವಾರ್ಯತೆ ಇದೀಗ ಬೆಳೆಗಾರರ ಸಂಕಷ್ಟಕ್ಕೆ ಕಾರಣವಾಗಿದೆ.