ಸೋಮವಾರಪೇಟೆ, ಫೆ. ೨೩: ಬೆಳೆಗಾರರು ಗುಣಮಟ್ಟದ ಕಾಫಿ ಉತ್ಪಾದನೆಗೆ ಒತ್ತು ನೀಡಬೇಕು. ಆ ಮೂಲಕ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಗಳಿಸಬೇಕೆಂದು ಕಾಫಿ ಮಂಡಳಿ ಉಪನಿರ್ದೇಶಕ ಡಾ. ಚಂದ್ರಶೇಖರ್ ಕರೆ ನೀಡಿದರು.
ಕಾಫಿ ಮಂಡಳಿ ವತಿಯಿಂದ ನಾಕೂರು-ಶಿರಂಗಾಲ ಮೂಲೆಮನೆ ಎಸ್ಟೇಟ್ನಲ್ಲಿ ನಡೆದ ಕಾಫಿ ತೋಟದಲ್ಲಿ ಮಣ್ಣಿನ ಪೋಷಕಾಂಶ ನಿರ್ವಹಣೆ ಹಾಗೂ ಕಾಫಿ ತಳಿ ಅಭಿವೃದ್ಧಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು. ಕೊಳ್ಳುವವರು ಗುಣಮಟ್ಟದ ಕಾಫಿಯನ್ನು ಮಾತ್ರ ಆಯ್ಕೆ ಮಾಡಿಕೊಳ್ಳುತ್ತಾರೆ. ಅವರ ರುಚಿಗೆ ಅನುಗುಣವಾಗಿ ಕಾಫಿಯನ್ನು ಕೊಟ್ಟಾಗ ಮಾತ್ರ ಬೇಡಿಕೆ ಹೆಚ್ಚಾಗಿ ಉತ್ತಮ ಬೆಲೆಯನ್ನು ನಿರೀಕ್ಷೆ ಮಾಡಬಹುದು ಎಂದು ಹೇಳಿದರು.
ವರ್ಲ್ಡ್ ಕಾಫಿ ಕಾನ್ಫರೆನ್ಸ್ ನಡೆದ ಮೇಲೆ ಭಾರತದ ಕಾಫಿ ಗುಣಮಟ್ಟದಿಂದ ಕೂಡಿದೆ ಎಂಬ ಅಭಿಪ್ರಾಯ ಅಂರ್ರಾಷ್ಟಿçÃಯ ಮಟ್ಟದಲ್ಲಿ ವ್ಯಕ್ತವಾಗಿದೆ. ಈ ಕಾರಣದಿಂದ ಪ್ರತಿಯೊಬ್ಬ ಬೆಳೆಗಾರನೂ ಕಾಫಿ ಗುಣಮಟ್ಟ ಕಾಯ್ದುಕೊಳ್ಳುವುದಕ್ಕೆ ಪ್ರಯತ್ನ ಮುಂದುವರಿಸಬೇಕು ಎಂದು ಕಿವಿಮಾತು ಹೇಳಿದರು.
ಮೂಲೆಮನೆ ಎಸ್ಟೇಟ್ ಹಾಗೂ ಸೌತ್ ಇಂಡಿಯ ಕಾಫಿ ಕಂಪೆನಿಯ ಮಾಲೀಕ ಅಕ್ಷಯ್ ದಶರಥ್ ಅವರು, ಸ್ಪೆಷಾಲಿಟಿ ಕಾಫಿ ಉತ್ಪಾದನೆ, ಗುಣಮಟ್ಟ ಕಾಯ್ದುಕೊಳ್ಳುವುದು, ರುಚಿ ಹಾಗೂ ಮಣ್ಣಿನ ಗುಣಕ್ಕೆ ತಕ್ಕದಾದ ತಳಿ ಆಯ್ಕೆ, ಭವಿಷ್ಯದ ಕಾಫಿ ಗಿಡದ ತಳಿಗಳ ಬಗ್ಗೆ ಮಾಹಿತಿ ನೀಡಿದರು. ತಮ್ಮ ಜಾಗದಲ್ಲಿ ನೆಟ್ಟಿರುವ ವಿವಿಧ ದೇಶಗಳ ೧೧ ತಳಿಗಳ ಬಗ್ಗೆ ಕಾಫಿ ಬೆಳೆಗಾರರಿಗೆ ಮಾಹಿತಿ ನೀಡಿದರು. ವಿದೇಶೀ ತಳಿಗಳಿಗೆ, ಸ್ಥಳೀಯ ತಳಿಗಳನ್ನು ಕಸಿ ಕಟ್ಟುವ ಬಗೆಗಿನ ಮಾಹಿತಿಯನ್ನು ಹಂಚಿಕೊAಡರು. ವಿದೇಶಕ್ಕೆ ರಪ್ತು ಮಾಡುವ ಕಾಫಿ ಬೀಜ ಸಂಸ್ಕರಣೆಯ ಬಗ್ಗೆ ತಿಳಿಸಿಕೊಟ್ಟರು.
ಮಣ್ಣು ವಿಜ್ಞಾನಿ ಡಾ. ನದಾಫ್ ಮಾತನಾಡಿ, ಮಣ್ಣಿನ ರಸಸಾರಕ್ಕೆ ಅನುಗುಣವಾಗಿ ರಾಸಾಯನಿಕ ಗೊಬ್ಬರವನ್ನು ಹಾಕಿದರೆ ಮಾತ್ರ ಉತ್ತಮ ಇಳುವರಿ ಸಾಧ್ಯ. ಮಣ್ಣಿನ ಪರೀಕ್ಷೆಯನ್ನು ಪ್ರತಿಯೊಬ್ಬ ಬೆಳೆಗಾರರು ಮಾಡಿಸಿ, ರಸಗೊಬ್ಬರ ಹಾಕಿದರೆ ಮಾತ್ರ ಉತ್ಪಾದನಾ ವೆಚ್ಚ ಕಡಿಮೆಯಾಗುತ್ತದೆ. ಮಣ್ಣು ಪರೀಕ್ಷೆ ಮಾಡದೆ ವಿಪರೀತ ರಸಗೊಬ್ಬರ ಹಾಕಿದರೆ ಮಣ್ಣಿನ ಸತ್ವ ಹಾಳಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಕಾರ್ಯಾಗಾರದಲ್ಲಿ ನಾವು ಪ್ರತಿಷ್ಠಾನದ ಸಂಸ್ಥಾಪಕ ಗೌತಮ್ ಕಿರಗಂದೂರು ಮತ್ತು ಸದಸ್ಯರು ಭಾಗವಹಿಸಿದ್ದರು. ಪ್ರಗತಿಪರ ಕೃಷಿಕರು ತಮ್ಮ ಕಾಫಿ ಕೃಷಿಯ ಅನುಭವ ಹಂಚಿಕೊAಡರು. ಕಾಫಿ ಮಂಡಳಿಯ ವಿಸ್ತರಣಾಧಿಕಾರಿಗಳಾದ ರಂಜಿತ್ ಕುಮಾರ್, ಅಮಿ ಮೇರಿ, ಕೃಷ್ಣಕುಮಾರ್, ಲಕ್ಷಿö್ಮÃಕಾಂತ್, ಸೌತ್ ಇಂಡಿಯಾ ಕಾಫಿ ಕಂಪೆನಿಯ ತೇಜ್, ಸನ್ನಿ, ರತನ್ ಇದ್ದರು.