ಸೋಮವಾರಪೇಟೆ, ಫೆ. ೨೦: ಭಾರತೀಯ ಜನತಾ ಪಾರ್ಟಿಯ ಸೋಮವಾರಪೇಟೆ ಮಂಡಲಕ್ಕೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಮಂಡಲ ಅಧ್ಯಕ್ಷ ಗೌತಮ್ ಗೌಡ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನೂತನ ಸಾಲಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.

ಮಂಡಲ ಉಪಾಧ್ಯಕ್ಷರುಗಳನ್ನಾಗಿ ಎಂ.ಡಿ. ಕೃಷ್ಣಪ್ಪ, ಎನ್.ಆರ್. ಅಜೀಶ್‌ಕುಮಾರ್, ಜಿ.ಆರ್. ಭುವನೇಂದ್ರ, ಹೆಚ್.ಪಿ. ಅರುಣಕುಮಾರಿ, ಎಂ.ಎಸ್. ಯೋಗೇಶ್, ಹೆಚ್.ಜಿ. ಪದ್ಮಾವತಿ ಅವರುಗಳನ್ನು ನೇಮಕಗೊಳಿ ಸಲಾಗಿದೆ. ಮಂಡಲ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿ ಮೋಕ್ಷಿಕ್ ರಾಜ್, ದರ್ಶನ್ ಜೋಯಪ್ಪ, ಕಾರ್ಯದರ್ಶಿಗಳನ್ನಾಗಿ ಎಂ.ಡಿ. ಲಿಖಿತ್, ಇಂದಿರಾ ಮೋಣಪ್ಪ, ನಿತ್ಯಾನಂದ, ಹರಗ ಸಂಜು, ವೇದಾವತಿ, ಜಿ.ಜೆ. ಸುಜಾತ,, ಕಾರ್ಯಾಲಯ ಕಾರ್ಯದರ್ಶಿಯನ್ನಾಗಿ ಪ್ರಜಾ ಪೂಣಚ್ಚ, ಕೋಶಾಧ್ಯಕ್ಷರಾಗಿ ಉಮಾಶಂಕರ್, ವಕ್ತಾರರಾಗಿ ಕಂಠಿ ಕಾರ್ಯಪ್ಪ ಅವರುಗಳನ್ನು ನೇಮಕ ಮಾಡಲಾಗಿದೆ ಎಂದು ಬಿಜೆಪಿ ಮಂಡಲ ಅಧ್ಯಕ್ಷ ಗೌತಮ್ ಗೌಡ ತಿಳಿಸಿದ್ದಾರೆ.