ಸಂಪಾಜೆ, ನ. ೨೪: ಸಂಪಾಜೆ ಪ್ರಾದೇಶಿಕ ವಲಯದ ವಲಯ ಅರಣ್ಯಾಧಿಕಾರಿ ಮಧುಸೂದನ್ ಎಂ.ಕೆ. ಅವರಿಗೆ ಬೀಳ್ಕೊಡುಗೆ ನೀಡಲಾಯಿತು.
ಬೀಳ್ಕೊಡುಗೆ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಸುಳ್ಯ ಪ್ರಾದೇಶಿಕ ವಲಯದ ವಲಯ ಅರಣ್ಯಾಧಿಕಾರಿ ಮಂಜುನಾಥ್ ಎನ್., ಪಂಜ ಅರಣ್ಯ ವಲಯದ ವಲಯ ಅರಣ್ಯಾಧಿಕಾರಿ ಗಿರೀಶ್, ಶನಿವಾರಸಂತೆ ವಲಯದ ವಲಯ ಅರಣ್ಯಾಧಿಕಾರಿ ಗಾನಶ್ರೀ ಉಪಸ್ಥಿತರಿದ್ದರು. ಇವರೊಂದಿಗೆ ಸರ್ಕಾರಿ ಪ್ರೌಢಶಾಲೆ ಚೆಂಬುವಿನ ಶಿಕ್ಷಕರಾದ ಡಾ. ಯೋಗೀಶ ಬಿ.ಎಸ್., ಕಲ್ಲುಗುಂಡಿಯ ಉದ್ಯಮಿ ಚಕ್ರಪಾಣಿ ಯು.ಬಿ., ಸಂಪಾಜೆ ಗ್ರಾಮ ಪಂಚಾಯಿತಿ ಸದಸ್ಯ ನವೀನ್, ಸುಳ್ಯ ವಲಯದ ಉಪವಲಯ ಅರಣ್ಯಾಧಿಕಾರಿ ಚಂದ್ರು ಬಿ.ಜಿ. ಹಾಗೂ ಕೆ.ಎಫ್.ಡಿ.ಸಿ. ಸಿಬ್ಬಂದಿ ಅಪ್ಪಣ್ಣ ಅತಿಥಿಗಳಾಗಿ ಭಾಗವಹಿಸಿದ್ದರು.
ಮುಖ್ಯ ಅತಿಥಿಗಳು ಮಧುಸೂದನ್ ಅವರ ಕಾರ್ಯವೈಖರಿ, ಸ್ನೇಹಪರತೆ, ಮೌಲ್ಯಗಳು ಮತ್ತು ಆದರ್ಶವನ್ನು ಕುರಿತು ಮಾತನಾಡಿದರು. ಕಚೇರಿ ಸಿಬ್ಬಂದಿಗಳಾದ ರತ್ನಾಕರ್, ವಲ್ಸಮ್ಮ, ಮೋಹಿನಿ, ವೆಂಕಟರಮಣ, ಉಪವಲಯ ಅರಣ್ಯಾಧಿಕಾರಿ ವಿನಯ್ ಕೃಷ್ಣ ಎಂ.ಸಿ., ಗಸ್ತು ಅರಣ್ಯಪಾಲಕರಾದ ಜಗನ್ನಾಥ್, ಜನಾರ್ಧನ್, ಚಂದ್ರಪ್ಪ ಬಣಕಾರ್, ತಿಲಕ, ಪುನೀತ್, ನಾಗರಾಜ್ ಹಾಗೂ ಸಸ್ಯ ಕ್ಷೇತ್ರ ಸಿಬ್ಬಂದಿಗಳು, ಆರ್.ಆರ್.ಟಿ. ಸಿಬ್ಬಂದಿಗಳು, ಎಂ.ಆರ್. ಸಿಬ್ಬಂದಿಗಳು ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಚಂದ್ರಪ್ಪ ಬಣಕಾರ್ ನಿರೂಪಿಸಿದರು, ಬಸವರಾಜಪ್ಪ ಸ್ವಾಗತಿಸಿದರು, ತಿಲಕ ಪ್ರಾಸ್ತಾವಿಕ ಭಾಷಣ ಮಾಡಿದರು. ವಿಜೇಂದ್ರ ವಂದಿಸಿದರು.