ಮಡಿಕೇರಿ, ಅ. ೧೦ : ಶ್ರೀಮಂಗಲ ವಿದ್ಯಾಸಂಸ್ಥೆಯ ೨೦೨೩-೨೪ನೇ ಸಾಲಿನ ನೂತನ ಆಡಳಿತ ಮಂಡಳಿಗೆ ಅಧ್ಯಕ್ಷರಾಗಿ ಬೋಡಂಗಡ ಎಂ. ಅಯ್ಯಪ್ಪ ಅವರು ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಚಟ್ಟಂಗಡ ರವಿ ಸುಬ್ಬಯ್ಯ, ಕಾರ್ಯದರ್ಶಿಯಾಗಿ ಕಾಳಿಮಾಡ ಪದ್ಮ ಬೆಳ್ಳಿಯಪ್ಪ, ಖಚಾಂಚಿಯಾಗಿ ವಿನಯ್ ಎಸ್.ಎಂ. ಮತ್ತು ನಿರ್ದೇಶಕರುಗಳಾಗಿ ಅಜ್ಜಾಮಾಡ ಸಾವಿತ್ರಿ, ಚಟ್ಟಂಗಡ ಕಂಬ ಕಾರ್ಯಪ್ಪ, ಅಣ್ಣಾಳಮಾಡ ನರೇಂದ್ರ, ಅಯ್ಯಮಾಡ ಉದಯ, ಚಿಮ್ಮಂಗಡ ಗಣಪತಿ, ತಡಿಯಂಗಡ ಎಂ. ಜಯರಾಜ್ ಮತ್ತು ಬಾಚಂಗಡ ಕಾರ್ಯಪ್ಪ ಅವರು ಆಯ್ಕೆಯಾಗಿದ್ದಾರೆ.