ಕಡಂಗ, ಅ. ೧೦: ಈದ್ ಮಿಲಾದ್ ಪ್ರಯುಕ್ತ ಎಸ್ಎಸ್ಎಫ್ ಗುಂಡಿಕೆರೆ ಯೂನಿಟ್ ವತಿಯಿಂದ ನಡೆಸಿದ ಪ್ರಬಂಧ ಸ್ಪರ್ಧೆಯ ವಿಜೇತರ ವಿವರ ಈ ಕೆಳಗಿನಂತಿವೆ.
ಪ್ರಥಮ ಬಹುಮಾನವನ್ನು ತಸ್ಮಿಯ ಇಸ್ಮಾಯಿಲ್ ಹಾಗೂ ಆಯಿಶ ತಸ್ಲೀಮ ಅವರು ಪಡೆದರೆ, ದ್ವಿತೀಯ ಬಹುಮಾನವನ್ನು ಮುಬಶ್ಶಿರ ಉಮ್ಮರ್ ಹಾಗೂ ಮಬಶ್ಶಿರ ಮೊಯಿದು ಅಹ್ಸನಿ ಅವರುಗಳು ಪಡೆದರು, ತೃತೀಯ ಬಹುಮಾನ ಶಂನ ಬಶೀರ್ ನಸೀಮ ಸೀಎ ಅಲಿ ಉಸೈದ್ ಅವರುಗಳು ಪಡೆದರು. ಶಾದುಲಿ ಮುಸ್ಲಿಯಾರ್ ಅವರ ನಿವಾಸದಲ್ಲಿ ಎಸ್ವೈಎಸ್ ಅಧ್ಯಕ್ಷ ಅಹಮದ್ ಮದನಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮಲ್ಲಿ ಎಸ್ಎಸ್ಎಫ್ ಗುಂಡಿಕೆರೆ ಯೂನಿಟಿನ ಅಧ್ಯಕ್ಷ ರಿಯಾಸ್ ಅಮ್ಮಂಡಾಣೆ ಕಾರ್ಯಕ್ರಮ ನಿರೂಪಿಸಿದರು.
ಕರ್ನಾಟಕ ಮುಸ್ಲಿಂ ಜಮಾಅತ್ನ ಸದಸ್ಯರುಗಳಾದ ಉಮ್ಮರ್ ಹಾಜಿ, ಇಸ್ಮಾಯಿಲ್ ಹಾಜಿ, ಹಂಝ ಹಾಜಿ, ಕಾದರ್ ಹಾಜಿ, ಉಮ್ಮರ್ ಎಕ್ಸ್ ಆರ್ಮಿ, ಶಾದುಲಿ ಎಂ.ಹೆಚ್. ಮುಂತಾದವರು ಭಾಗವಹಿಸಿದ್ದರು.