ಚೆಯ್ಯಂಡಾಣೆ, ಆ. ೨೦: ಕಡಂಗ ಬದ್ರಿಯಾ ಮದ್ರಸದಲ್ಲಿ ಎಸ್ವೈಎಸ್ ವೀರಾಜಪೇಟೆ ಝೋನ್ ವತಿಯಿಂದ ‘‘ಗ್ಲೋರಿಯಸ್ ಇಂಡಿಯಾ’’ ಎಂಬ ವಿಷಯದ ಬಗ್ಗೆ ವಿಚಾರಗೋಷ್ಠಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ವೈಎಸ್ ವೀರಾಜಪೇಟೆ ಝೋನ್ ಅಧ್ಯಕ್ಷ ಅಬ್ದುಲ್ ಸಲಾಂ ಗೋಣಿಕೊಪ್ಪ ವಹಿಸಿ ಮಾತನಾಡಿದರು. ಕಾರ್ಯಕ್ರಮದ ಉದ್ಘಾಟನೆಯನ್ನು ಕೊಡಗು ಜಿಲ್ಲಾ ಎಸ್ವೈಎಸ್ ಪ್ರಧಾನ ಕಾರ್ಯದರ್ಶಿ ಅಹ್ಮದ್ ಮದನಿ ಗುಂಡಿಗೆರೆ ನಿರ್ವಹಿಸಿದರು.
ಕಾರ್ಯಕ್ರಮಕ್ಕೆ ಸ್ಥಳೀಯ ಬದ್ರಿಯಾ ಮಸೀದಿಯ ಖತೀಬ್ ಇಸ್ಮಾಯಿಲ್ ಲತೀಫಿ ಹಾಗೂ ಆಲಿ ಮುಸ್ಲಿಯಾರ್ ಶುಭ ಹಾರೈಸಿದರು.
ಎಸ್ವೈಎಸ್ ಕೊಡಗು ಜಿಲ್ಲಾ ಸಂಘಟನಾ ಕಾರ್ಯದರ್ಶಿ ಯಾಕೂಬ್ ಮಾಸ್ಟರ್ ಕೊಳಕೇರಿ ಸಂಪನ್ಮೂಲ ವ್ಯಕ್ತಿಯಾಗಿ ವಿಚಾರ ಗೋಷ್ಠಿಯಲ್ಲಿ ತರಗತಿಗೆ ನೇತೃತ್ವ ವಹಿಸಿ ಮಾತನಾಡಿ ಸ್ವಾತಂತ್ರೊö್ಯÃತ್ಸವಕ್ಕೆ ಹೋರಾಡಿದ ಮಹಾನ್ ವ್ಯಕ್ತಿಗಳನ್ನು ಪರಿಚಯಿಸಿ ಅವರು ಯಾವ ರೀತಿಯಲ್ಲಿ ತ್ಯಾಗವನ್ನು ನಮ್ಮ ಭಾರತ ದೇಶಕ್ಕಾಗಿ ಮಾಡಿದ್ದಾರೆ ಎಂಬವುದರ ಬಗ್ಗೆ ಸವಿಸ್ತಾರವಾಗಿ ನೆರೆದಿದ್ದವರಿಗೆ ವಿವರಿಸಿದರು. ಈ ಸಂದರ್ಭ ಬದ್ರಿಯಾ ಜಮಾಅತ್ ಅಧ್ಯಕ್ಷ ಅಬ್ದುರ್ರಹ್ಮಾನ್ ಅರಫಾ, ಎಸ್ವೆಎಸ್ ಪೊನ್ನಂಪೇಟೆ ಸರ್ಕಲ್ ಅಧ್ಯಕ್ಷ ಹನೀಫಾ ಸಖಾಫಿ ಹಳ್ಳಿಗಟ್ಟು, ಕಡಂಗ ಎಸ್ವೈಎಸ್ ಅಧ್ಯಕ್ಷ ಅಶ್ರಫ್, ಎಸ್ವೈಎಸ್ ಕಡಂಗ ಸರ್ಕಲ್ ಅಧ್ಯಕ್ಷ ಅಬ್ದುಲ್ ಖಾದರ್ ಸಅದಿ ಎಡಪಾಲ ಹಾಗೂ ಎಸ್ವೈಎಸ್, ಮುಸ್ಲಿಂ ಜಮಾಅತ್, ಎಸ್ಎಸ್ಎಫ್ ಕಾರ್ಯ ಕರ್ತರು ಉಪಸ್ಥಿತರಿದ್ದರು. ಸ್ವಾಗತ ಹಾಗೂ ವಂದನೆಯನ್ನು ವೀರಾಜ ಪೇಟೆ ಝೋನ್ ಎಸ್ವೈಎಸ್ ಪ್ರಧಾನ ಕಾರ್ಯದರ್ಶಿ ನಝೀರ್ ನಿಝಾಮಿ ಗೋಣೆಕೊಪ್ಪ ನಿರ್ವಹಿಸಿದರು.