ಕುಶಾಲನಗರ, ಜೂ. ೬: ಕುಶಾಲನಗರ ಮಿತ್ರ ವೃಂದ ವತಿ ಯಿಂದ ಉಡುಪಿ ಜನ್ಸಾಲೆ ಪ್ರತಿಷ್ಠಾನ ಹಾಗೂ ಸುಪ್ರಸಿದ್ಧ ಕಲಾವಿದರ ಸಂಗಮದೊAದಿಗೆ ಕುಶಾಲನಗರದಲ್ಲಿ ಕವಿರತ್ನ ಕಾಳಿದಾಸ - ಹರಿಭಕ್ತ ಚಂದ್ರಹಾಸ ಯಕ್ಷಗಾನ ಕಾರ್ಯಕ್ರಮ ತಾ. ೮ ರಂದು ಕುಶಾಲನಗರದಲ್ಲಿ ನಡೆಯಲಿದೆ. ಕುಶಾಲನಗ ರದ ರೈತ ಸಹಕಾರ ಭವನದಲ್ಲಿ ೯.೩೦ ರಿಂದ ಯಕ್ಷಗಾನ ನಡೆಯಲಿದ್ದು, ಗಣ್ಯರ ಉಪಸ್ಥಿತಿಯಲ್ಲಿ ಕಲಾವಿದರನ್ನು ಸನ್ಮಾನಿಸಲಾಗುವುದು ಎಂದು ಕಾರ್ಯಕ್ರಮ ವ್ಯವಸ್ಥಾಪಕರಾದ ಗಿರೀಶ್ ಭಟ್ ಮತ್ತು ಕೃಷ್ಣಮೂರ್ತಿ ಭಟ್ ತಿಳಿಸಿದ್ದಾರೆ. ಯಕ್ಷಗಾನಕ್ಕೆ ಉಚಿತ ಪ್ರವೇಶವಿದೆ.